<p><strong>ಚೆನ್ನೈ (ಐಎಎನ್ಎಸ್):</strong> ಭೂ ಕಬಳಿಕೆ ಆರೋಪದ ಮೇಲೆ ತಮಿಳು ನಾಡು ಪೊಲೀಸರು, ಹಿಂದಿನ ಡಿಎಂಕೆ ಪಕ್ಷದ ಆಡಳಿತವಿದ್ದಾಗ ಸಚಿವರಾಗಿದ್ದ ಎಂ.ಪಿ. ಸಾಮಿನಾಥನ್ ಅವರನ್ನು ಸೋಮವಾರ ಬಂಧಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p>ಹಿಂದಿನ ಡಿಎಂಕೆ ಸರ್ಕಾರದಲ್ಲಿ ಹೆದ್ದಾರಿ ಖಾತೆಯ ಸಚಿವರಾಗಿದ್ದ ಸಾಮಿನಾಥನ್ ಅವರನ್ನು ಇಲ್ಲಿಂದ 400 ಕಿ.ಮೀ ದೂರದ ತಿರುಪುರ್ ನಲ್ಲಿನ ಅವರ ಮನೆಯಲ್ಲಿ ಬಂಧಿಸಲಾಗಿದೆ.</p>.<p>ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವು ಕಳೆದ ಸಾಲಿನ ಮೇ ತಿಂಗಳು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭೂ ಕಬಳಿಕೆ ಆರೋಪದ ಮೇಲೆ ಡಿಎಂಕೆ ಪಕ್ಷದ ಹಲವಾರು ಹಿರಿಯ ನಾಯಕರನ್ನು ಮತ್ತು ಸಚಿವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. </p>.<p>ಮಾಜಿ ಸಚಿವರಾದ ಕೆ. ಪೊನ್ನಮುಡಿ, ಕೆ.ಎನ್.ನೆಹ್ರೂ ವೀರಪಾಂಡಿ ಆರ್ಮುಗಮ್ ಮೊದಲಾದವರು ಭೂ ಕಬಳಿಕೆ ಆರೋಪದ ಮೇಲೆ ಬಂಧಿತರಾದವರಲ್ಲಿ ಸೇರಿದ್ದಾರೆ. <br /> <br /> ಇವರಲ್ಲದೇ ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಮತ್ತು ಅವರ ಮಗ ಉದಯನಿಧಿ ಸ್ಟ್ಯಾಲಿನ್ ಅವರ ವಿರುದ್ಧವೂ ಭೂ ಕಬಳಿಕೆಯ ಆರೋಪದ ಮೇಲೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.</p>.<p>ಎಐಡಿಎಂಕೆ ಸರ್ಕಾರವು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಭೂ ಕಬಳಿಕೆ ಪ್ರಕರಣಗಳ ತನಿಖೆಗಾಗಿಯೇ ವಿಶೇಷ ತನಿಖಾ ವಿಭಾಗವನ್ನು ತೆರೆದಿದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಐಎಎನ್ಎಸ್):</strong> ಭೂ ಕಬಳಿಕೆ ಆರೋಪದ ಮೇಲೆ ತಮಿಳು ನಾಡು ಪೊಲೀಸರು, ಹಿಂದಿನ ಡಿಎಂಕೆ ಪಕ್ಷದ ಆಡಳಿತವಿದ್ದಾಗ ಸಚಿವರಾಗಿದ್ದ ಎಂ.ಪಿ. ಸಾಮಿನಾಥನ್ ಅವರನ್ನು ಸೋಮವಾರ ಬಂಧಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p>ಹಿಂದಿನ ಡಿಎಂಕೆ ಸರ್ಕಾರದಲ್ಲಿ ಹೆದ್ದಾರಿ ಖಾತೆಯ ಸಚಿವರಾಗಿದ್ದ ಸಾಮಿನಾಥನ್ ಅವರನ್ನು ಇಲ್ಲಿಂದ 400 ಕಿ.ಮೀ ದೂರದ ತಿರುಪುರ್ ನಲ್ಲಿನ ಅವರ ಮನೆಯಲ್ಲಿ ಬಂಧಿಸಲಾಗಿದೆ.</p>.<p>ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವು ಕಳೆದ ಸಾಲಿನ ಮೇ ತಿಂಗಳು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭೂ ಕಬಳಿಕೆ ಆರೋಪದ ಮೇಲೆ ಡಿಎಂಕೆ ಪಕ್ಷದ ಹಲವಾರು ಹಿರಿಯ ನಾಯಕರನ್ನು ಮತ್ತು ಸಚಿವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. </p>.<p>ಮಾಜಿ ಸಚಿವರಾದ ಕೆ. ಪೊನ್ನಮುಡಿ, ಕೆ.ಎನ್.ನೆಹ್ರೂ ವೀರಪಾಂಡಿ ಆರ್ಮುಗಮ್ ಮೊದಲಾದವರು ಭೂ ಕಬಳಿಕೆ ಆರೋಪದ ಮೇಲೆ ಬಂಧಿತರಾದವರಲ್ಲಿ ಸೇರಿದ್ದಾರೆ. <br /> <br /> ಇವರಲ್ಲದೇ ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಮತ್ತು ಅವರ ಮಗ ಉದಯನಿಧಿ ಸ್ಟ್ಯಾಲಿನ್ ಅವರ ವಿರುದ್ಧವೂ ಭೂ ಕಬಳಿಕೆಯ ಆರೋಪದ ಮೇಲೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.</p>.<p>ಎಐಡಿಎಂಕೆ ಸರ್ಕಾರವು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಭೂ ಕಬಳಿಕೆ ಪ್ರಕರಣಗಳ ತನಿಖೆಗಾಗಿಯೇ ವಿಶೇಷ ತನಿಖಾ ವಿಭಾಗವನ್ನು ತೆರೆದಿದೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>