<p>ಮಂಡ್ಯ: ದೇಶದಲ್ಲಿ ಚುನಾವಣಾ ವ್ಯವಸ್ಥೆಯೇ ಭ್ರಷ್ಟಾಚಾರದ ಮೂಲವಾಗಿದ್ದು, ವ್ಯವಸ್ಥೆ ಬದಲಾಗಲು ಯುವಜನರು ಜಾಗೃತರಾಗಬೇಕಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಂಗಳವಾರ ಅಭಿಪ್ರಾಯಪಟ್ಟರು.<br /> <br /> ಸಾಮಾಜಿಕ ಜಾಗೃತಿ ನಿಟ್ಟಿನಲ್ಲಿ ಲೋಕನಾಯಕ ಜೆಪಿ ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿವೆ. ಜಯಪ್ರಕಾಶ್ ನಾರಾಯಣ ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದವರು. ಆದರೆ, ಒಬ್ಬ ನಾಯಕನಿಗೆ ಸಿಗಬೇಕಾದ ಗೌರವ ಇಂದಿಗೂ ಜೆಪಿ ಅವರಿಗೆ ದೊರೆಯುತ್ತಿಲ್ಲ ಎಂದು ಅವರು ವಿಷಾದಿಸಿದರು.<br /> <br /> ನಗರದ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ `ಜೆ.ಪಿ.ಜನ್ಮದಿನ - ಜೆ.ಪಿ.ಚಳುವಳಿಯ ಪ್ರಸ್ತುತತೆ: ಚರ್ಚೆ ಮತ್ತು ಸಂವಾದ~ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.<br /> <br /> ತುಂಬ ಜನರು ಜೆಪಿ ಅವರು ನೆಹರು ವಿರುದ್ಧ, ಕಾಂಗ್ರೆಸ್ ವಿರೋಧಿ ಭಾವನೆ ಹೊಂದಿದ್ದರು ಎಂಬ ಭಾವನೆ ಹೊಂದಿದ್ದಾರೆ. ಆದರೆ, ಅದು ತಪ್ಪು. ಅವರ ಹೋರಾಟ ಎಂದಿಗೂ ವ್ಯವಸ್ಥೆಯ ವಿರುದ್ಧವಾಗಿತ್ತು. ಇಂಥ ಮನೋಭಾವದ ನಾಯಕರನ್ನೇ ಒಗ್ಗೂಡಿಸಿ ಜನತಾ ಪಕ್ಷ ಕಟ್ಟಿದರು. ಆದರೆ, ಈ ಗುಂಪಿನ ಕೆಲವರಲ್ಲಿ ಪ್ರಧಾನಿ ಆಗುವ ಆಸೆ ಮೂಡಿದ್ದು ಉದ್ದೇಶವನ್ನೇ ಹಾಳು ಮಾಡಿತು ಎಂದರು.<br /> <br /> ಸರ್ವೋದಯ ನಾಯಕ ಸುರೇಂದ್ರ ಕೌಲಗಿ ಅವರು, ಜೆಪಿ ಅವರು ರಾಜಕಾರಣಿ, ಸಮಾಜವಾದಿ, ಸ್ವಾತಂತ್ರ್ಯ ಹೋರಾಟಗಾರ ಎಲ್ಲವೂ ಆಗಿದ್ದು, ತನ್ನ ರಚನಾತ್ಮಕ ಕಾರ್ಯಗಳಿಂದ ಯುವಜನರಲ್ಲಿ ಜಾಗೃತಿ ಮೂಡಿಸಿದರು ಎಂದು ಶ್ಲಾಘಿಸಿದರು.<br /> <br /> ಜವಹರಲಾಲ್ ನೆಹರೂ ಅವರಿಗೆ ಸರಿಸಮಾನವಾದ ವ್ಯಕ್ತಿತ್ವ ಇದ್ದ ವ್ಯಕ್ತಿ ಅವರೊಬ್ಬರೇ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಜೆಪಿ ಅವರ ವ್ಯಕ್ತಿ ಚಿತ್ರ ನೀಡಿದ ಪತ್ರಕರ್ತ ಶ್ರೀಪಾದು ಅವರನ್ನು ಗೌರವಿಸಲಾಯಿತು.<br /> <br /> ಮಾಜಿ ಸ್ಪೀಕರ್ ಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದು, ಎಸ್.ಡಿ.ಜಯರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಎಸ್.ಡಿ.ಜಯರಾಂ, ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಮಂಡ್ಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭದ್ರಾಚಲಮೂರ್ತಿ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ಧರಾಮೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ ವೇದಿಕೆಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ದೇಶದಲ್ಲಿ ಚುನಾವಣಾ ವ್ಯವಸ್ಥೆಯೇ ಭ್ರಷ್ಟಾಚಾರದ ಮೂಲವಾಗಿದ್ದು, ವ್ಯವಸ್ಥೆ ಬದಲಾಗಲು ಯುವಜನರು ಜಾಗೃತರಾಗಬೇಕಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಂಗಳವಾರ ಅಭಿಪ್ರಾಯಪಟ್ಟರು.<br /> <br /> ಸಾಮಾಜಿಕ ಜಾಗೃತಿ ನಿಟ್ಟಿನಲ್ಲಿ ಲೋಕನಾಯಕ ಜೆಪಿ ಅವರ ಚಿಂತನೆಗಳು ಹೆಚ್ಚು ಪ್ರಸ್ತುತವಾಗಿವೆ. ಜಯಪ್ರಕಾಶ್ ನಾರಾಯಣ ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದವರು. ಆದರೆ, ಒಬ್ಬ ನಾಯಕನಿಗೆ ಸಿಗಬೇಕಾದ ಗೌರವ ಇಂದಿಗೂ ಜೆಪಿ ಅವರಿಗೆ ದೊರೆಯುತ್ತಿಲ್ಲ ಎಂದು ಅವರು ವಿಷಾದಿಸಿದರು.<br /> <br /> ನಗರದ ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ `ಜೆ.ಪಿ.ಜನ್ಮದಿನ - ಜೆ.ಪಿ.ಚಳುವಳಿಯ ಪ್ರಸ್ತುತತೆ: ಚರ್ಚೆ ಮತ್ತು ಸಂವಾದ~ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.<br /> <br /> ತುಂಬ ಜನರು ಜೆಪಿ ಅವರು ನೆಹರು ವಿರುದ್ಧ, ಕಾಂಗ್ರೆಸ್ ವಿರೋಧಿ ಭಾವನೆ ಹೊಂದಿದ್ದರು ಎಂಬ ಭಾವನೆ ಹೊಂದಿದ್ದಾರೆ. ಆದರೆ, ಅದು ತಪ್ಪು. ಅವರ ಹೋರಾಟ ಎಂದಿಗೂ ವ್ಯವಸ್ಥೆಯ ವಿರುದ್ಧವಾಗಿತ್ತು. ಇಂಥ ಮನೋಭಾವದ ನಾಯಕರನ್ನೇ ಒಗ್ಗೂಡಿಸಿ ಜನತಾ ಪಕ್ಷ ಕಟ್ಟಿದರು. ಆದರೆ, ಈ ಗುಂಪಿನ ಕೆಲವರಲ್ಲಿ ಪ್ರಧಾನಿ ಆಗುವ ಆಸೆ ಮೂಡಿದ್ದು ಉದ್ದೇಶವನ್ನೇ ಹಾಳು ಮಾಡಿತು ಎಂದರು.<br /> <br /> ಸರ್ವೋದಯ ನಾಯಕ ಸುರೇಂದ್ರ ಕೌಲಗಿ ಅವರು, ಜೆಪಿ ಅವರು ರಾಜಕಾರಣಿ, ಸಮಾಜವಾದಿ, ಸ್ವಾತಂತ್ರ್ಯ ಹೋರಾಟಗಾರ ಎಲ್ಲವೂ ಆಗಿದ್ದು, ತನ್ನ ರಚನಾತ್ಮಕ ಕಾರ್ಯಗಳಿಂದ ಯುವಜನರಲ್ಲಿ ಜಾಗೃತಿ ಮೂಡಿಸಿದರು ಎಂದು ಶ್ಲಾಘಿಸಿದರು.<br /> <br /> ಜವಹರಲಾಲ್ ನೆಹರೂ ಅವರಿಗೆ ಸರಿಸಮಾನವಾದ ವ್ಯಕ್ತಿತ್ವ ಇದ್ದ ವ್ಯಕ್ತಿ ಅವರೊಬ್ಬರೇ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಜೆಪಿ ಅವರ ವ್ಯಕ್ತಿ ಚಿತ್ರ ನೀಡಿದ ಪತ್ರಕರ್ತ ಶ್ರೀಪಾದು ಅವರನ್ನು ಗೌರವಿಸಲಾಯಿತು.<br /> <br /> ಮಾಜಿ ಸ್ಪೀಕರ್ ಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದು, ಎಸ್.ಡಿ.ಜಯರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಎಸ್.ಡಿ.ಜಯರಾಂ, ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಮಂಡ್ಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭದ್ರಾಚಲಮೂರ್ತಿ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ಧರಾಮೇಗೌಡ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಕೆ.ಟಿ.ಶ್ರೀಕಂಠೇಗೌಡ ವೇದಿಕೆಯಲ್ಲಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>