<p>ಕೊಪ್ಪಳ: `ತನ್ನ ಭ್ರಷ್ಟಾಚಾರ ಹೊರಬೀಳುವುದನ್ನು ತಡೆಯುವ ಸಲುವಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ್ ಅಹ್ಮದ್ ಹಣಜಗೇರಿ ಜೂ. 13ರಂದು ಕರೆದಿದ್ದ ಸಭೆಗೆ ಪೊಲೀಸ್ ಬಂದೋಬಸ್ತ್ ಹಾಕಿಸಿದ್ದರು. ಸಭೆಗೆ ಪೊಲೀಸರನ್ನು ಕರೆಸಿದ ಕ್ರಮವನ್ನು ಸಭೆಯಲ್ಲಿದ್ದ ಎಲ್ಲ ಸದಸ್ಯರು ಖಂಡಿಸಿದ್ದಾರೆ~ ಎಂದು ಸಮಿತಿ ಸದಸ್ಯ ಶರೀಫ್ಸಾಬ ಕಾತರಕಿ ಹೇಳಿದ್ದಾರೆ.<br /> <br /> ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಿತಿಯ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಕುತಂತ್ರ ಮಾಡಿ ಸಭೆಗೆ ಅಡ್ಡಿಪಡಿಸುವ ಹುನ್ನಾರದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು ಎಂಬ ಸಮಿತಿ ಅಧ್ಯಕ್ಷ ಹಣಜಗೇರಿ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದಾರೆ.<br /> <br /> 13ರಂದು ನಡೆದ ಸಭೆಯಲ್ಲಿ 9 ಜನ ಹಾಜರಿದ್ದರು. ಕೋರಂ ಭರ್ತಿ ಇತ್ತು. ಆದರೂ ಹಣಜಗೇರಿ ಅವರು ಯಾವುದೇ ವಿಷಯವನ್ನು ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. <br /> <br /> ತಮ್ಮ ಸ್ವಾರ್ಥ ಹಾಗೂ ಭ್ರಷ್ಟಾಚಾರ ಬಯಲಿಗೆ ಬೀಳುತ್ತದೆ ಎಂಬ ಭಯದಿಂದ ಸಮಿತಿ ಕಚೇರಿಗೆ ಪೊಲೀಸರನ್ನು ಕರೆಸಿದ್ದರು. <br /> <br /> ಅಧ್ಯಕ್ಷರ ಈ ಕ್ರಮವನ್ನು ಖಂಡಿಸಿದ್ದಲ್ಲದೇ ಮುಂದಿನ ಸಭೆಯನ್ನು ಸಮಿತಿ ಉಪಾಧ್ಯಕ್ಷ ಪೀರಾ ಹುಸೇನ್ಹೊಸಳ್ಳಿ ಅವರ ಅಧ್ಯಕ್ಷತೆಯಲ್ಲಿ ಕರೆಯಲು ಸಹ ಸರ್ವಾನುಮತದ ಗೊತ್ತುವಳಿಯನ್ನು ಸ್ವೀಕರಿಸಲಾಯಿತು ಎಂದು ತಿಳಿಸಿದ್ದಾರೆ.<br /> <br /> ವಕ್ಫ್ ಅಧಿಕಾರಿ ಮಜರುಲ್ ಖಾನ್ ಜೊತೆ ಕೈಜೋಡಿಸಿರುವ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಮಜರುಲ್ಖಾನ್ ಅವರನ್ನು ವರ್ಗಾವಣೆ ಮಾಡುವಂತೆ ಕೋರಿ ಸಮಾಜದ ಮುಖಂಡರೊಬ್ಬರು ಮುಖ್ಯಮಂತ್ರಿ ದೂರು ನೀಡಿದ್ದರು. <br /> <br /> ಮುಖ್ಯಮಂತ್ರಿಗಳ ಕಚೇರಿ ಆದೇಶದಂತೆ ಮಜರುಲ್ಖಾನ್ ಅವರನ್ನು ವರ್ಗ ಮಾಡಲಾಗಿದ್ದು, ಇದು ನೂರ್ ಅಹ್ಮದ್ ಹಣಜಗೇರಿ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದೂ ಹೇಳಿದ್ದಾರೆ.<br /> <br /> ನೂರ್ ಅಹ್ಮದ್ ಹಣಜಗೇರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡುವಂತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವಕ್ಫ್ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: `ತನ್ನ ಭ್ರಷ್ಟಾಚಾರ ಹೊರಬೀಳುವುದನ್ನು ತಡೆಯುವ ಸಲುವಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ್ ಅಹ್ಮದ್ ಹಣಜಗೇರಿ ಜೂ. 13ರಂದು ಕರೆದಿದ್ದ ಸಭೆಗೆ ಪೊಲೀಸ್ ಬಂದೋಬಸ್ತ್ ಹಾಕಿಸಿದ್ದರು. ಸಭೆಗೆ ಪೊಲೀಸರನ್ನು ಕರೆಸಿದ ಕ್ರಮವನ್ನು ಸಭೆಯಲ್ಲಿದ್ದ ಎಲ್ಲ ಸದಸ್ಯರು ಖಂಡಿಸಿದ್ದಾರೆ~ ಎಂದು ಸಮಿತಿ ಸದಸ್ಯ ಶರೀಫ್ಸಾಬ ಕಾತರಕಿ ಹೇಳಿದ್ದಾರೆ.<br /> <br /> ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಿತಿಯ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಕುತಂತ್ರ ಮಾಡಿ ಸಭೆಗೆ ಅಡ್ಡಿಪಡಿಸುವ ಹುನ್ನಾರದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು ಎಂಬ ಸಮಿತಿ ಅಧ್ಯಕ್ಷ ಹಣಜಗೇರಿ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದಾರೆ.<br /> <br /> 13ರಂದು ನಡೆದ ಸಭೆಯಲ್ಲಿ 9 ಜನ ಹಾಜರಿದ್ದರು. ಕೋರಂ ಭರ್ತಿ ಇತ್ತು. ಆದರೂ ಹಣಜಗೇರಿ ಅವರು ಯಾವುದೇ ವಿಷಯವನ್ನು ಚರ್ಚೆ ಮಾಡಲು ಅವಕಾಶ ನೀಡಲಿಲ್ಲ. <br /> <br /> ತಮ್ಮ ಸ್ವಾರ್ಥ ಹಾಗೂ ಭ್ರಷ್ಟಾಚಾರ ಬಯಲಿಗೆ ಬೀಳುತ್ತದೆ ಎಂಬ ಭಯದಿಂದ ಸಮಿತಿ ಕಚೇರಿಗೆ ಪೊಲೀಸರನ್ನು ಕರೆಸಿದ್ದರು. <br /> <br /> ಅಧ್ಯಕ್ಷರ ಈ ಕ್ರಮವನ್ನು ಖಂಡಿಸಿದ್ದಲ್ಲದೇ ಮುಂದಿನ ಸಭೆಯನ್ನು ಸಮಿತಿ ಉಪಾಧ್ಯಕ್ಷ ಪೀರಾ ಹುಸೇನ್ಹೊಸಳ್ಳಿ ಅವರ ಅಧ್ಯಕ್ಷತೆಯಲ್ಲಿ ಕರೆಯಲು ಸಹ ಸರ್ವಾನುಮತದ ಗೊತ್ತುವಳಿಯನ್ನು ಸ್ವೀಕರಿಸಲಾಯಿತು ಎಂದು ತಿಳಿಸಿದ್ದಾರೆ.<br /> <br /> ವಕ್ಫ್ ಅಧಿಕಾರಿ ಮಜರುಲ್ ಖಾನ್ ಜೊತೆ ಕೈಜೋಡಿಸಿರುವ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಮಜರುಲ್ಖಾನ್ ಅವರನ್ನು ವರ್ಗಾವಣೆ ಮಾಡುವಂತೆ ಕೋರಿ ಸಮಾಜದ ಮುಖಂಡರೊಬ್ಬರು ಮುಖ್ಯಮಂತ್ರಿ ದೂರು ನೀಡಿದ್ದರು. <br /> <br /> ಮುಖ್ಯಮಂತ್ರಿಗಳ ಕಚೇರಿ ಆದೇಶದಂತೆ ಮಜರುಲ್ಖಾನ್ ಅವರನ್ನು ವರ್ಗ ಮಾಡಲಾಗಿದ್ದು, ಇದು ನೂರ್ ಅಹ್ಮದ್ ಹಣಜಗೇರಿ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದೂ ಹೇಳಿದ್ದಾರೆ.<br /> <br /> ನೂರ್ ಅಹ್ಮದ್ ಹಣಜಗೇರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡುವಂತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವಕ್ಫ್ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>