<p>ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2.15ರ ಹೊತ್ತಿಗೆ ಲಘು ಭೂಕಂಪ ಆದ ಅನುಭವ ಆಗಿದೆ. ಈ ಹಿನ್ನೆಲೆಯಲ್ಲಿ ಸುನಾಮಿ ಸಂಭವಿಸುವ ಅಪಾಯದ ಸೂಚನೆ ಇದ್ದು ಕಡಲ ತೀರದಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.<br /> <br /> `ನಾನು ಕುಳಿತಿದ್ದ ಕುರ್ಚಿ ಕೆಲವು ಸೆಕೆಂಡ್ಗಳ ಕಾಲ ಏಕಾಏಕಿ ಅಲ್ಲಾಡಿದೆ. ನಮ್ಮ ಕಚೇರಿಯಲ್ಲಿದ್ದ ಕೆಲವರಿಗೂ ಇದೇ ಅನುಭವ ಆಗಿದೆ~ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೀರಾ ವಿ. ಭಟ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕೂಳೂರಿನ ಗುಪ್ತ ಕೋಲ್ ಸಂಸ್ಥೆ ಕಚೇರಿ ಇರುವ ವಾಣಿಜ್ಯ ಸಂಕೀರ್ಣದಲ್ಲೂ ಭೂಕಂಪದ ಅನುಭವ ಆಗಿದೆ.<br /> `ನಾನು ಊಟ ಮುಗಿಸಿ ಬಂದು ಕುರ್ಚಿಯಲ್ಲಿ ಕುಳಿತಿದ್ದೆ. ಏಕಾಏಕಿ ಕುರ್ಚಿ ಅಲ್ಲಾಡಿದ ಅನುಭವ ಆಯಿತು. ಮೊದಲು ಆರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದುಕೊಂಡಿದ್ದೆ. ಬಳಿಕ ಇದೇ ರೀತಿಯ ಅನುಭವ ಅನೇಕರಿಗೆ ಆಗಿದ್ದು ತಿಳಿಯಿತು~ ಎಂದು ಸಂಸ್ಥೆ ಸಿಬ್ಬಂದಿ ರಾಮದಾಸ ಎಕ್ಕೂರು ತಿಳಿಸಿದರು.<br /> <br /> ಮುನ್ನೆಚ್ಚರಿಕೆ: `ಮೀನುಗಾರಿಕೆಗೆ ತೆರಳಿದವರು ಸಮುದ್ರದಿಂದ ವಾಪಾಸ್ಸಾಗುವಂತೆ ಸೂಚನೆ ನೀಡಲಾಗಿದೆ. ಕಡಲಿನ ಬೆಳವಣಿಗೆ ಬಗ್ಗೆ ನಿಗಾ ವಹಿಸಲಾಗಿದೆ. ಸುನಾಮಿ ಚೆನ್ನೈ ಸಮುದ್ರ ತೀರಕ್ಕೆ ಅಪ್ಪಳಿಸಿದರೆ ನಮಗೆ ಮಾಹಿತಿ ಬರುತ್ತದೆ. ಆ ಬೆಳವಣಿಗೆಯನ್ನು ನೋಡಿಕೊಂಡು ಇಲ್ಲಿನ ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ~ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ ತಿಳಿಸಿದರು.<br /> </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬುಧವಾರ ಮಧ್ಯಾಹ್ನ 2.15ರ ಹೊತ್ತಿಗೆ ಲಘು ಭೂಕಂಪ ಆದ ಅನುಭವ ಆಗಿದೆ. ಈ ಹಿನ್ನೆಲೆಯಲ್ಲಿ ಸುನಾಮಿ ಸಂಭವಿಸುವ ಅಪಾಯದ ಸೂಚನೆ ಇದ್ದು ಕಡಲ ತೀರದಲ್ಲಿರುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.<br /> <br /> `ನಾನು ಕುಳಿತಿದ್ದ ಕುರ್ಚಿ ಕೆಲವು ಸೆಕೆಂಡ್ಗಳ ಕಾಲ ಏಕಾಏಕಿ ಅಲ್ಲಾಡಿದೆ. ನಮ್ಮ ಕಚೇರಿಯಲ್ಲಿದ್ದ ಕೆಲವರಿಗೂ ಇದೇ ಅನುಭವ ಆಗಿದೆ~ ಎಂದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹೀರಾ ವಿ. ಭಟ್ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕೂಳೂರಿನ ಗುಪ್ತ ಕೋಲ್ ಸಂಸ್ಥೆ ಕಚೇರಿ ಇರುವ ವಾಣಿಜ್ಯ ಸಂಕೀರ್ಣದಲ್ಲೂ ಭೂಕಂಪದ ಅನುಭವ ಆಗಿದೆ.<br /> `ನಾನು ಊಟ ಮುಗಿಸಿ ಬಂದು ಕುರ್ಚಿಯಲ್ಲಿ ಕುಳಿತಿದ್ದೆ. ಏಕಾಏಕಿ ಕುರ್ಚಿ ಅಲ್ಲಾಡಿದ ಅನುಭವ ಆಯಿತು. ಮೊದಲು ಆರೋಗ್ಯ ಸಮಸ್ಯೆಯಿಂದ ಹೀಗಾಗಿರಬಹುದು ಎಂದುಕೊಂಡಿದ್ದೆ. ಬಳಿಕ ಇದೇ ರೀತಿಯ ಅನುಭವ ಅನೇಕರಿಗೆ ಆಗಿದ್ದು ತಿಳಿಯಿತು~ ಎಂದು ಸಂಸ್ಥೆ ಸಿಬ್ಬಂದಿ ರಾಮದಾಸ ಎಕ್ಕೂರು ತಿಳಿಸಿದರು.<br /> <br /> ಮುನ್ನೆಚ್ಚರಿಕೆ: `ಮೀನುಗಾರಿಕೆಗೆ ತೆರಳಿದವರು ಸಮುದ್ರದಿಂದ ವಾಪಾಸ್ಸಾಗುವಂತೆ ಸೂಚನೆ ನೀಡಲಾಗಿದೆ. ಕಡಲಿನ ಬೆಳವಣಿಗೆ ಬಗ್ಗೆ ನಿಗಾ ವಹಿಸಲಾಗಿದೆ. ಸುನಾಮಿ ಚೆನ್ನೈ ಸಮುದ್ರ ತೀರಕ್ಕೆ ಅಪ್ಪಳಿಸಿದರೆ ನಮಗೆ ಮಾಹಿತಿ ಬರುತ್ತದೆ. ಆ ಬೆಳವಣಿಗೆಯನ್ನು ನೋಡಿಕೊಂಡು ಇಲ್ಲಿನ ಸಮುದ್ರ ತೀರದ ಜನರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ~ ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ `ಪ್ರಜಾವಾಣಿ~ ತಿಳಿಸಿದರು.<br /> </p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>