<p><span style="font-size: 26px;"><strong>ಮಂಡ್ಯ</strong>: ನಗರಸಭೆಯ ನೂತನ ಸದಸ್ಯರ ಆಯ್ಕೆಯಾಗಿ ಮೂರು ತಿಂಗಳು ಕಳೆದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಲಕ್ವಾ ಹೊಡೆದಿದೆ.</span><br /> <br /> ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ ಬಜೆಟ್ ಮಂಡನೆಯೇ ಆಗಿಲ್ಲ. ಪರಿಣಾಮ ದಿನನಿತ್ಯದ ಸ್ವಚ್ಛತೆ, ವಿದ್ಯುತ್ ದೀಪ ಬದಲಾವಣೆ ಹೊರತು ಪಡಿಸಿದರೆ ಬೇರಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾರ್ಚ್ ಅಂತ್ಯಕ್ಕೆ ಬಜೆಟ್ ಮಂಡನೆಯಾಗಿ ಏಪ್ರಿಲ್ನಿಂದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿತ್ತು.</p>.<p>ಮೊದಲ ಮೂರು ತಿಂಗಳು ಪೂರ್ಣಗೊಂಡರೂ ಬಜೆಟ್ ಮಂಡನೆಯೇ ಆಗಿಲ್ಲ. ನಗರದ ಅಭಿವೃದ್ಧಿಗೆ ನೀಡಿರುವ 30 ಕೋಟಿ ರೂಪಾಯಿ ಸೇರಿದಂತೆ ವಿವಿಧ ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅವುಗಳಿಗೆ ಸಾಮಾನ್ಯಸಭೆ ಅಂಗೀಕಾರದ ಮುದ್ರೆ ಬೀಳಬೇಕು. ಮೀಸಲಾತಿ ನಿಗದಿ ಪಡಿಸದ್ದರಿಂದ ಅಂಗೀಕಾರದ ಮುದ್ರೆ ಬಿದ್ದಿಲ್ಲ.<br /> <br /> ಐದು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿ, ಟೆಂಡರ್ಗೆ ಅರ್ಜಿ ಆಹ್ವಾನಿಸಲು ನಗರಸಭೆಯ ಸಾಮಾನ್ಯಸಭೆ ಒಪ್ಪಿಗೆ ಬೇಕು. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದ್ದರಿಂದ ಸಭೆ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಗರದ ಅಭಿವೃದ್ಧಿಯ ಮೇಲೆ ಅದರ ಹೊಡೆತ ಬೀಳುತ್ತಿದೆ.<br /> ಮಾರ್ಚ್ 11ರಂದು ಬಹುತೇಕ ಸದಸ್ಯರು ನಗರಸಭೆ ಸದಸ್ಯರಾಗಿ ಆಯ್ಕೆಯಾದ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಆಯ್ಕೆ ಮಾಡಿ ಕಳುಹಿಸಿದ ಜನರು, ವಾರ್ಡ್ನಲ್ಲಿಯ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸದಸ್ಯರಿಗೆ ಆಗುತ್ತಿಲ್ಲ.<br /> <br /> ಚುನಾವಣೆಯಾಗಿ ಮೂರು ತಿಂಗಳು ಕಳೆದರೂ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲು ವಿಳಂಬ ನೀತಿ ಅನುಸರಿಸುತ್ತದೆ. ಇದರ ಪರಿಣಾಮ ಅಭಿವೃದ್ಧಿ ಕೆಲಸಗಳ ಮೇಲೆ ಬೀಳುತ್ತಿದೆ. ರಸ್ತೆ, ಚರಂಡಿ, ಉದ್ಯಾನ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.<br /> ತುರ್ತಾಗಿ ಆಗಬೇಕಿದ್ದ ಹಲವಾರು ಪ್ರಸ್ತಾವನೆಗಳು ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಂದೆ ಇವೆ. ಕಾರ್ಯ ಒತ್ತಡದಿಂದ ಅವುಗಳಿಗೆ ಅನುಮತಿ ನೀಡದ್ದರಿಂದ ಅವುಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.<br /> <br /> ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗದ್ದರಿಂದ ಗೆದ್ದರೂ ಪ್ರಯೋಜನವಾಗದಂತೆ ಆಗಿದೆ. ವಾರ್ಡ್ನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಸಾಮಾನ್ಯಸಭೆಯ ಅನುಮೋದನೆ ಬೇಕು. ಅಧ್ಯಕ್ಷರ ಆಯ್ಕೆಯಾಗದ ಹೊರತು ಅದು ಆಗುವುದಿಲ್ಲ ಎನ್ನುತ್ತಾರೆ ನಗರಸಭೆ ಸದಸ್ಯ ಕೆರಗೋಡು ಸೋಮಶೇಖರ್.<br /> <br /> ಸ್ವಚ್ಛತೆ, ವಿದ್ಯುತ್ ದೀಪ ಬದಲಾವಣೆಗೆ ಸೀಮಿತಗೊಂಡಿದ್ದೇವೆ. ಇವುಗಳನ್ನು ಜನಸಾಮಾನ್ಯರು ದೂರು ನೀಡಿದರೂ ಮಾಡುತ್ತಾರೆ. ಸದಸ್ಯರಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರ ದೂರಿಗೆ ಸ್ಪಂದಿಸಲು ಆಗುತ್ತಿಲ್ಲ. ಆರಂಭದಲ್ಲಿಯೇ ಹೀಗಾದರೆ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಮೀಸಲಾತಿ ಪ್ರಕಟಿಸಬೇಕು ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಮಂಡ್ಯ</strong>: ನಗರಸಭೆಯ ನೂತನ ಸದಸ್ಯರ ಆಯ್ಕೆಯಾಗಿ ಮೂರು ತಿಂಗಳು ಕಳೆದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ಲಕ್ವಾ ಹೊಡೆದಿದೆ.</span><br /> <br /> ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆದರೂ ಬಜೆಟ್ ಮಂಡನೆಯೇ ಆಗಿಲ್ಲ. ಪರಿಣಾಮ ದಿನನಿತ್ಯದ ಸ್ವಚ್ಛತೆ, ವಿದ್ಯುತ್ ದೀಪ ಬದಲಾವಣೆ ಹೊರತು ಪಡಿಸಿದರೆ ಬೇರಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾರ್ಚ್ ಅಂತ್ಯಕ್ಕೆ ಬಜೆಟ್ ಮಂಡನೆಯಾಗಿ ಏಪ್ರಿಲ್ನಿಂದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿತ್ತು.</p>.<p>ಮೊದಲ ಮೂರು ತಿಂಗಳು ಪೂರ್ಣಗೊಂಡರೂ ಬಜೆಟ್ ಮಂಡನೆಯೇ ಆಗಿಲ್ಲ. ನಗರದ ಅಭಿವೃದ್ಧಿಗೆ ನೀಡಿರುವ 30 ಕೋಟಿ ರೂಪಾಯಿ ಸೇರಿದಂತೆ ವಿವಿಧ ಯೋಜನೆಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಅವುಗಳಿಗೆ ಸಾಮಾನ್ಯಸಭೆ ಅಂಗೀಕಾರದ ಮುದ್ರೆ ಬೀಳಬೇಕು. ಮೀಸಲಾತಿ ನಿಗದಿ ಪಡಿಸದ್ದರಿಂದ ಅಂಗೀಕಾರದ ಮುದ್ರೆ ಬಿದ್ದಿಲ್ಲ.<br /> <br /> ಐದು ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಕಾಮಗಾರಿ, ಟೆಂಡರ್ಗೆ ಅರ್ಜಿ ಆಹ್ವಾನಿಸಲು ನಗರಸಭೆಯ ಸಾಮಾನ್ಯಸಭೆ ಒಪ್ಪಿಗೆ ಬೇಕು. ಆದರೆ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದ್ದರಿಂದ ಸಭೆ ನಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಗರದ ಅಭಿವೃದ್ಧಿಯ ಮೇಲೆ ಅದರ ಹೊಡೆತ ಬೀಳುತ್ತಿದೆ.<br /> ಮಾರ್ಚ್ 11ರಂದು ಬಹುತೇಕ ಸದಸ್ಯರು ನಗರಸಭೆ ಸದಸ್ಯರಾಗಿ ಆಯ್ಕೆಯಾದ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಆಯ್ಕೆ ಮಾಡಿ ಕಳುಹಿಸಿದ ಜನರು, ವಾರ್ಡ್ನಲ್ಲಿಯ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲು ಸದಸ್ಯರಿಗೆ ಆಗುತ್ತಿಲ್ಲ.<br /> <br /> ಚುನಾವಣೆಯಾಗಿ ಮೂರು ತಿಂಗಳು ಕಳೆದರೂ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲು ವಿಳಂಬ ನೀತಿ ಅನುಸರಿಸುತ್ತದೆ. ಇದರ ಪರಿಣಾಮ ಅಭಿವೃದ್ಧಿ ಕೆಲಸಗಳ ಮೇಲೆ ಬೀಳುತ್ತಿದೆ. ರಸ್ತೆ, ಚರಂಡಿ, ಉದ್ಯಾನ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.<br /> ತುರ್ತಾಗಿ ಆಗಬೇಕಿದ್ದ ಹಲವಾರು ಪ್ರಸ್ತಾವನೆಗಳು ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಂದೆ ಇವೆ. ಕಾರ್ಯ ಒತ್ತಡದಿಂದ ಅವುಗಳಿಗೆ ಅನುಮತಿ ನೀಡದ್ದರಿಂದ ಅವುಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ.<br /> <br /> ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗದ್ದರಿಂದ ಗೆದ್ದರೂ ಪ್ರಯೋಜನವಾಗದಂತೆ ಆಗಿದೆ. ವಾರ್ಡ್ನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಅದಕ್ಕೆ ಸಾಮಾನ್ಯಸಭೆಯ ಅನುಮೋದನೆ ಬೇಕು. ಅಧ್ಯಕ್ಷರ ಆಯ್ಕೆಯಾಗದ ಹೊರತು ಅದು ಆಗುವುದಿಲ್ಲ ಎನ್ನುತ್ತಾರೆ ನಗರಸಭೆ ಸದಸ್ಯ ಕೆರಗೋಡು ಸೋಮಶೇಖರ್.<br /> <br /> ಸ್ವಚ್ಛತೆ, ವಿದ್ಯುತ್ ದೀಪ ಬದಲಾವಣೆಗೆ ಸೀಮಿತಗೊಂಡಿದ್ದೇವೆ. ಇವುಗಳನ್ನು ಜನಸಾಮಾನ್ಯರು ದೂರು ನೀಡಿದರೂ ಮಾಡುತ್ತಾರೆ. ಸದಸ್ಯರಾಗಿ ಯಾವುದೇ ಪ್ರಯೋಜನವಾಗುತ್ತಿಲ್ಲ. ಜನರ ದೂರಿಗೆ ಸ್ಪಂದಿಸಲು ಆಗುತ್ತಿಲ್ಲ. ಆರಂಭದಲ್ಲಿಯೇ ಹೀಗಾದರೆ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಮೀಸಲಾತಿ ಪ್ರಕಟಿಸಬೇಕು ಎನ್ನುತ್ತಾರೆ ಅವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>