<p><strong>ಬೆಂಗಳೂರು: </strong>ಮಂತ್ರಿ ಡೆವಲಪರ್ಸ್ ಅಂಗಸಂಸ್ಥೆಯಾದ ಹಮಾರಾ ಶೆಲ್ಟರ್ಸ್ ಸಂಸ್ಥೆಯು ಸಂಪಿಗೆ ರಸ್ತೆ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 2.31 ಎಕರೆ ಸರ್ಕಾರಿ ಭೂಮಿಗೆ ಅಕ್ರಮವಾಗಿ ಖಾತೆ ಪಡೆದು ಬಳಿಕ ಆ ಭೂಮಿಯನ್ನೇ ಬಿಬಿಎಂಪಿಗೆ ನೀಡಿ ವಂಚಿಸಿರುವುದು ಬಯಲಾಗಿದೆ!<br /> <br /> ಸಂಪಿಗೆ ರಸ್ತೆಯ ಸ್ಥಳೀಯರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ನಡೆಸಿದ ಜಂಟಿ ತನಿಖೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಹಮಾರಾ ಶೆಲ್ಟರ್ಸ್ ಸರ್ಕಾರಿ ಭೂಮಿಯನ್ನೇ ಪಾಲಿಕೆಗೆ ನೀಡಿ ಟಿಡಿಆರ್ ಪಡೆದಿತ್ತು ಎಂಬ ವಿಷಯವೂ ಈ ತನಿಖೆಯಲ್ಲಿ ಪತ್ತೆಯಾಗಿದೆ.<br /> <br /> ಸಿ.ಟಿ.ಎಸ್. ಸಂಖ್ಯೆ 3593 ಹಾಗೂ 3593/1ರಲ್ಲಿ ಹಿಂದಿನ ಜಕ್ಕಸಂದ್ರ ಗ್ರಾಮದ ನಕ್ಷೆ ಪ್ರಕಾರ ಸಾರ್ವಜನಿಕ ರಸ್ತೆಗೆ ಮೀಸಲಿಡಲಾದ 2.31 ಎಕರೆ ಭೂಮಿ ಇದೆ. ಕಾನೂನಿನ ಪ್ರಕಾರ ಈ ಭೂಮಿಯನ್ನು ರಸ್ತೆಗೆ ಮೀಸಲಿಡಬೇಕಾಗುತ್ತದೆ.<br /> <br /> ಏಕೆಂದರೆ ಕಂದಾಯ ಮತ್ತು ಸರ್ವೇ ಇಲಾಖೆ ಪ್ರಾಧಿಕಾರಗಳು 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ 68ನೇ ನಿಯಮ ಹಾಗೂ 1966ರ ಕರ್ನಾಟಕ ಭೂಕಂದಾಯ ನಿಯಮ 96ರ ಅನ್ವಯ ರಸ್ತೆಯನ್ನು ರದ್ದುಪಡಿಸಿರುವುದು ಕಂಡು ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.<br /> <br /> ಇಷ್ಟಾದರೂ ಸರ್ಕಾರಿ ಭೂಮಿಯನ್ನು ತನ್ನ ಜಮೀನು ಎಂದು ಸುಳ್ಳು ಮಾಹಿತಿ ನೀಡಿ ಪಾಲಿಕೆಯಿಂದ ಖಾತೆ ಪಡೆದಿರುವ ಹಮಾರಾ ಶೆಲ್ಟರ್ಸ್ ಸಂಸ್ಥೆಯು ವಾಸ್ತವದಲ್ಲಿ 28 ಗುಂಟೆ ಭೂಮಿಯನ್ನಷ್ಟೇ ನೀಡಿದ್ದರೂ 3 ಎಕರೆ ಭೂಮಿ ನೀಡಿರುವುದಾಗಿ ಹೇಳಿ ಟಿಡಿಆರ್ ಹಕ್ಕು ಪಡೆದಿದೆ. ಇದನ್ನು ಕೂಡಲೇ ರದ್ದುಪಡಿಸಬೇಕು. ಹಾಗೆಯೇ ಸುಳ್ಳು ಮಾಹಿತಿ ನೀಡಿದ ಹಮಾರಾ ಶೆಲ್ಟರ್ಸ್ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.<br /> <br /> ಹಾಗೆಯೇ ವಾಸ್ತವಾಂಶವನ್ನು ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡಿ ಪಾಲಿಕೆಯಿಂದ ಪಡೆದಿರುವ ಖಾತೆಯನ್ನು ರದ್ದುಪಡಿಸಬೇಕು. ಪಾಲಿಕೆ ವತಿಯಿಂದ ರಸ್ತೆ ನಿರ್ಮಿಸಬೇಕು ಎಂದೂ ಹೇಳಿದೆ. ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)- 1995 ಹಾಗೂ ಪರಿಷ್ಕೃತ ಮಹಾನಕ್ಷೆ- 2015ರಲ್ಲಿ ತಿಳಿಸಿರುವಂತೆ ಜಕ್ಕಸಂದ್ರ ಗ್ರಾಮ ನಕ್ಷೆಯಲ್ಲಿ 2.31 ಎಕರೆ ಭೂಮಿಯಲ್ಲಿ ಹಳೆಯ ಬೆಂಗಳೂರು- ತುಮಕೂರು ರಸ್ತೆ ಎಂದು ನಮೂದಾಗಿದೆ. <br /> <br /> ಹಾಗಿದ್ದರೂ ಇದನ್ನು ಪರಿಶೀಲಿಸದೇ ಟಿಡಿಆರ್ ನೀಡಲು ಶಿಫಾರಸು ಮಾಡಿರುವ ನಗರ ಯೋಜನಾ ಇಲಾಖೆಯ ಅಂದಿನ ಜಂಟಿ ನಿರ್ದೇಶಕರು/ ಉಪ ನಿರ್ದೇಶಕರು/ ರಸ್ತೆ ವಿಸ್ತರಣೆ ವಿಭಾದ ಎಂಜಿನಿಯರ್ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.<br /> |<br /> <strong>`ಪ್ರಭಾವಶಾಲಿಗಳಿಗೆ ಬಗ್ಗುವುದಿಲ್ಲ~<br /> ಬೆಂಗಳೂರು:</strong> `ಸರ್ಕಾರಿ ಭೂಮಿ ಕಬಳಿಕೆ ಮಾಡಿಕೊಂಡವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮಣಿಯುವ ಪ್ರಶ್ನೆಯೇ ಇಲ್ಲ. ಸಂಪಿಗೆ ರಸ್ತೆ ಸಮೀಪ ಮಂತ್ರಿ ಡೆವಲಪರ್ಸ್ ಸಂಸ್ಥೆಯು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ವಶಕ್ಕೆ ಪಡೆಯಲಾಗುವುದು~ ಎಂದು ಗೃಹ ಸಚಿವ ಆರ್. ಅಶೋಕ ಸ್ಪಷ್ಟಪಡಿಸಿದರು.<br /> <br /> ಬನಶಂಕರಿ ದೇವಸ್ಥಾನ ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.<br /> `ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾದಾಗ ಒತ್ತಡ ಹೇರುವುದನ್ನು ಸಹಿಸಲಾಗುವುದಿಲ್ಲ. ಯಾವುದೇ ರೀತಿಯ ಒತ್ತಡ ಹೇರಿ ಭೂಕಬಳಿಕೆಯಿಂದ ಪಾರಾಗಬಹುದು ಎಂಬ ಭ್ರಮೆ ಬೇಡ~ ಎಂದರು.<br /> <br /> `ಮಂತ್ರಿ ಡೆವಲಪರ್ಸ್ ಸಂಸ್ಥೆ ಅಪಾರ್ಟ್ಮೆಂಟ್ ನಿರ್ಮಿಸಿರುವ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ಅನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಈ ಪ್ರದೇಶದಲ್ಲಿರುವ ಪಾಲಿಕೆ ಭೂಮಿಯನ್ನು ವಶಕ್ಕೆ ಪಡೆಯುವಂತೆ ಪಾಲಿಕೆಗೆ ಸೂಚಿಸಲಾಗುವುದು~ ಎಂದು ಹೇಳಿದರು.<br /> <br /> ಈ ಸಂದರ್ಭದಲ್ಲಿ ನಿವಾಸಿಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಚಿವರಲ್ಲಿ ಅಳಲು ತೋಡಿಕೊಂಡರು. ಬಳಿಕ ಪ್ರತಿಕ್ರಿಯೆ ನೀಡಿದ ಅಶೋಕ, `ಈ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ನಿಯಮಿತವಾಗಿ ತ್ಯಾಜ್ಯ ವಿಲೇವಾರಿಯಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.<br /> ಪಾಲಿಕೆ ಸದಸ್ಯ ಎ.ಎಚ್. ಬಸವರಾಜು ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮಂತ್ರಿ ಡೆವಲಪರ್ಸ್ ಅಂಗಸಂಸ್ಥೆಯಾದ ಹಮಾರಾ ಶೆಲ್ಟರ್ಸ್ ಸಂಸ್ಥೆಯು ಸಂಪಿಗೆ ರಸ್ತೆ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 2.31 ಎಕರೆ ಸರ್ಕಾರಿ ಭೂಮಿಗೆ ಅಕ್ರಮವಾಗಿ ಖಾತೆ ಪಡೆದು ಬಳಿಕ ಆ ಭೂಮಿಯನ್ನೇ ಬಿಬಿಎಂಪಿಗೆ ನೀಡಿ ವಂಚಿಸಿರುವುದು ಬಯಲಾಗಿದೆ!<br /> <br /> ಸಂಪಿಗೆ ರಸ್ತೆಯ ಸ್ಥಳೀಯರು, ಶಾಸಕರು ಹಾಗೂ ಪಾಲಿಕೆ ಸದಸ್ಯರ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ನಡೆಸಿದ ಜಂಟಿ ತನಿಖೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಹಮಾರಾ ಶೆಲ್ಟರ್ಸ್ ಸರ್ಕಾರಿ ಭೂಮಿಯನ್ನೇ ಪಾಲಿಕೆಗೆ ನೀಡಿ ಟಿಡಿಆರ್ ಪಡೆದಿತ್ತು ಎಂಬ ವಿಷಯವೂ ಈ ತನಿಖೆಯಲ್ಲಿ ಪತ್ತೆಯಾಗಿದೆ.<br /> <br /> ಸಿ.ಟಿ.ಎಸ್. ಸಂಖ್ಯೆ 3593 ಹಾಗೂ 3593/1ರಲ್ಲಿ ಹಿಂದಿನ ಜಕ್ಕಸಂದ್ರ ಗ್ರಾಮದ ನಕ್ಷೆ ಪ್ರಕಾರ ಸಾರ್ವಜನಿಕ ರಸ್ತೆಗೆ ಮೀಸಲಿಡಲಾದ 2.31 ಎಕರೆ ಭೂಮಿ ಇದೆ. ಕಾನೂನಿನ ಪ್ರಕಾರ ಈ ಭೂಮಿಯನ್ನು ರಸ್ತೆಗೆ ಮೀಸಲಿಡಬೇಕಾಗುತ್ತದೆ.<br /> <br /> ಏಕೆಂದರೆ ಕಂದಾಯ ಮತ್ತು ಸರ್ವೇ ಇಲಾಖೆ ಪ್ರಾಧಿಕಾರಗಳು 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ 68ನೇ ನಿಯಮ ಹಾಗೂ 1966ರ ಕರ್ನಾಟಕ ಭೂಕಂದಾಯ ನಿಯಮ 96ರ ಅನ್ವಯ ರಸ್ತೆಯನ್ನು ರದ್ದುಪಡಿಸಿರುವುದು ಕಂಡು ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.<br /> <br /> ಇಷ್ಟಾದರೂ ಸರ್ಕಾರಿ ಭೂಮಿಯನ್ನು ತನ್ನ ಜಮೀನು ಎಂದು ಸುಳ್ಳು ಮಾಹಿತಿ ನೀಡಿ ಪಾಲಿಕೆಯಿಂದ ಖಾತೆ ಪಡೆದಿರುವ ಹಮಾರಾ ಶೆಲ್ಟರ್ಸ್ ಸಂಸ್ಥೆಯು ವಾಸ್ತವದಲ್ಲಿ 28 ಗುಂಟೆ ಭೂಮಿಯನ್ನಷ್ಟೇ ನೀಡಿದ್ದರೂ 3 ಎಕರೆ ಭೂಮಿ ನೀಡಿರುವುದಾಗಿ ಹೇಳಿ ಟಿಡಿಆರ್ ಹಕ್ಕು ಪಡೆದಿದೆ. ಇದನ್ನು ಕೂಡಲೇ ರದ್ದುಪಡಿಸಬೇಕು. ಹಾಗೆಯೇ ಸುಳ್ಳು ಮಾಹಿತಿ ನೀಡಿದ ಹಮಾರಾ ಶೆಲ್ಟರ್ಸ್ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.<br /> <br /> ಹಾಗೆಯೇ ವಾಸ್ತವಾಂಶವನ್ನು ಮುಚ್ಚಿಟ್ಟು ಸುಳ್ಳು ಮಾಹಿತಿ ನೀಡಿ ಪಾಲಿಕೆಯಿಂದ ಪಡೆದಿರುವ ಖಾತೆಯನ್ನು ರದ್ದುಪಡಿಸಬೇಕು. ಪಾಲಿಕೆ ವತಿಯಿಂದ ರಸ್ತೆ ನಿರ್ಮಿಸಬೇಕು ಎಂದೂ ಹೇಳಿದೆ. ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)- 1995 ಹಾಗೂ ಪರಿಷ್ಕೃತ ಮಹಾನಕ್ಷೆ- 2015ರಲ್ಲಿ ತಿಳಿಸಿರುವಂತೆ ಜಕ್ಕಸಂದ್ರ ಗ್ರಾಮ ನಕ್ಷೆಯಲ್ಲಿ 2.31 ಎಕರೆ ಭೂಮಿಯಲ್ಲಿ ಹಳೆಯ ಬೆಂಗಳೂರು- ತುಮಕೂರು ರಸ್ತೆ ಎಂದು ನಮೂದಾಗಿದೆ. <br /> <br /> ಹಾಗಿದ್ದರೂ ಇದನ್ನು ಪರಿಶೀಲಿಸದೇ ಟಿಡಿಆರ್ ನೀಡಲು ಶಿಫಾರಸು ಮಾಡಿರುವ ನಗರ ಯೋಜನಾ ಇಲಾಖೆಯ ಅಂದಿನ ಜಂಟಿ ನಿರ್ದೇಶಕರು/ ಉಪ ನಿರ್ದೇಶಕರು/ ರಸ್ತೆ ವಿಸ್ತರಣೆ ವಿಭಾದ ಎಂಜಿನಿಯರ್ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.<br /> |<br /> <strong>`ಪ್ರಭಾವಶಾಲಿಗಳಿಗೆ ಬಗ್ಗುವುದಿಲ್ಲ~<br /> ಬೆಂಗಳೂರು:</strong> `ಸರ್ಕಾರಿ ಭೂಮಿ ಕಬಳಿಕೆ ಮಾಡಿಕೊಂಡವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಮಣಿಯುವ ಪ್ರಶ್ನೆಯೇ ಇಲ್ಲ. ಸಂಪಿಗೆ ರಸ್ತೆ ಸಮೀಪ ಮಂತ್ರಿ ಡೆವಲಪರ್ಸ್ ಸಂಸ್ಥೆಯು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ವಶಕ್ಕೆ ಪಡೆಯಲಾಗುವುದು~ ಎಂದು ಗೃಹ ಸಚಿವ ಆರ್. ಅಶೋಕ ಸ್ಪಷ್ಟಪಡಿಸಿದರು.<br /> <br /> ಬನಶಂಕರಿ ದೇವಸ್ಥಾನ ವಾರ್ಡ್ ವ್ಯಾಪ್ತಿಯಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.<br /> `ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಮುಂದಾದಾಗ ಒತ್ತಡ ಹೇರುವುದನ್ನು ಸಹಿಸಲಾಗುವುದಿಲ್ಲ. ಯಾವುದೇ ರೀತಿಯ ಒತ್ತಡ ಹೇರಿ ಭೂಕಬಳಿಕೆಯಿಂದ ಪಾರಾಗಬಹುದು ಎಂಬ ಭ್ರಮೆ ಬೇಡ~ ಎಂದರು.<br /> <br /> `ಮಂತ್ರಿ ಡೆವಲಪರ್ಸ್ ಸಂಸ್ಥೆ ಅಪಾರ್ಟ್ಮೆಂಟ್ ನಿರ್ಮಿಸಿರುವ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್ಅನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಈ ಪ್ರದೇಶದಲ್ಲಿರುವ ಪಾಲಿಕೆ ಭೂಮಿಯನ್ನು ವಶಕ್ಕೆ ಪಡೆಯುವಂತೆ ಪಾಲಿಕೆಗೆ ಸೂಚಿಸಲಾಗುವುದು~ ಎಂದು ಹೇಳಿದರು.<br /> <br /> ಈ ಸಂದರ್ಭದಲ್ಲಿ ನಿವಾಸಿಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಚಿವರಲ್ಲಿ ಅಳಲು ತೋಡಿಕೊಂಡರು. ಬಳಿಕ ಪ್ರತಿಕ್ರಿಯೆ ನೀಡಿದ ಅಶೋಕ, `ಈ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ನಿಯಮಿತವಾಗಿ ತ್ಯಾಜ್ಯ ವಿಲೇವಾರಿಯಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.<br /> ಪಾಲಿಕೆ ಸದಸ್ಯ ಎ.ಎಚ್. ಬಸವರಾಜು ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>