<p><strong>ಬೆಂಗಳೂರು:</strong> `ಮಕ್ಕಳ ಬೇಸಿಗೆ ಶಿಬಿರವು ಉತ್ತಮವಾಗಿ ನಡೆಯುತ್ತಿದೆ. ಈ ಬಾರಿಯ ಬೇಸಿಗೆ ಶಿಬಿರದ ವಸ್ತು ವಿಷಯ `ಕರ್ನಾಟಕ~. ಕರ್ನಾಟಕದ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಕುರಿತಾಗಿದೆ~ ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಸುಲೋಚನ ಜಿ.ಕೆ. ಭಟ್ ಹೇಳಿದರು.</p>.<p>ಕಬ್ಬನ್ ಉದ್ಯಾನವನದ ಬಾಲಭವನದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರವನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, `ಮಕ್ಕಳ ಪ್ರತಿಭೆಗೆ ಬೆಂಬಲ ನೀಡಿ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತಾಹಿಸುವುದೇ ಬೇಸಿಗೆ ಶಿಬಿರದ ಉದ್ದೇಶವಾಗಿದೆ~ ಎಂದರು.</p>.<p>`ಇಲ್ಲಿ ಮಕ್ಕಳ ಪ್ರತಿಭೆಯನ್ನು ಕಂಡು ಮನಸ್ಸಿಗೆ ಆನಂದವಾಗಿದೆ. ಇಲ್ಲಿ ಮಕ್ಕಳ ಕನಸಿಗೆ ರೆಕ್ಕೆ ಮೂಡಿವೆ. ಅವರು ಪಠ್ಯವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಮುಗ್ಧ ಮನಸ್ಸಿನಿಂದ ಏನೆಲ್ಲ ಮಾಡಿದರೂ ಚೆನ್ನಾಗಿರುತ್ತದೆ~ ಎಂದು ಹೇಳಿದರು.</p>.<p>`ಬೇಸಿಗೆ ಶಿಬಿರವು ಏ.12 ರಿಂದ ಮೇ 20 ರವರೆಗೆ ನಡೆಯಲಿದೆ. ಆಸಕ್ತರು ಸಂಪರ್ಕಿಸಬಹುದು~ ಎಂದು ಹೇಳಿದರು. ಶಾಸಕ ಕರಡಿ ಸಂಗಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಮಕ್ಕಳ ಬೇಸಿಗೆ ಶಿಬಿರವು ಉತ್ತಮವಾಗಿ ನಡೆಯುತ್ತಿದೆ. ಈ ಬಾರಿಯ ಬೇಸಿಗೆ ಶಿಬಿರದ ವಸ್ತು ವಿಷಯ `ಕರ್ನಾಟಕ~. ಕರ್ನಾಟಕದ ಇತಿಹಾಸ ಪ್ರೇಕ್ಷಣೀಯ ಸ್ಥಳಗಳು ಕುರಿತಾಗಿದೆ~ ಎಂದು ಬಾಲಭವನ ಸೊಸೈಟಿಯ ಅಧ್ಯಕ್ಷೆ ಸುಲೋಚನ ಜಿ.ಕೆ. ಭಟ್ ಹೇಳಿದರು.</p>.<p>ಕಬ್ಬನ್ ಉದ್ಯಾನವನದ ಬಾಲಭವನದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರವನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, `ಮಕ್ಕಳ ಪ್ರತಿಭೆಗೆ ಬೆಂಬಲ ನೀಡಿ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತಾಹಿಸುವುದೇ ಬೇಸಿಗೆ ಶಿಬಿರದ ಉದ್ದೇಶವಾಗಿದೆ~ ಎಂದರು.</p>.<p>`ಇಲ್ಲಿ ಮಕ್ಕಳ ಪ್ರತಿಭೆಯನ್ನು ಕಂಡು ಮನಸ್ಸಿಗೆ ಆನಂದವಾಗಿದೆ. ಇಲ್ಲಿ ಮಕ್ಕಳ ಕನಸಿಗೆ ರೆಕ್ಕೆ ಮೂಡಿವೆ. ಅವರು ಪಠ್ಯವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಮುಗ್ಧ ಮನಸ್ಸಿನಿಂದ ಏನೆಲ್ಲ ಮಾಡಿದರೂ ಚೆನ್ನಾಗಿರುತ್ತದೆ~ ಎಂದು ಹೇಳಿದರು.</p>.<p>`ಬೇಸಿಗೆ ಶಿಬಿರವು ಏ.12 ರಿಂದ ಮೇ 20 ರವರೆಗೆ ನಡೆಯಲಿದೆ. ಆಸಕ್ತರು ಸಂಪರ್ಕಿಸಬಹುದು~ ಎಂದು ಹೇಳಿದರು. ಶಾಸಕ ಕರಡಿ ಸಂಗಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>