<p><strong>ಮಡಿಕೇರಿ:</strong> ನಗರದ ಪ್ರಮುಖ ಪ್ರವಾಸಿ ತಾಣವಾಗಿರುವ ರಾಜಾಸೀಟ್ಗೆ ಬರುವ ಪ್ರತಿಯೊಬ್ಬರು ಸಮೀಪದಲ್ಲಿರುವ ಪುಟಾಣಿ ರೈಲಿನಲ್ಲಿ ಒಂದು ಸುತ್ತು ಹಾಕಿಯೇ ಮುಂದಕ್ಕೆ ಹೋಗುವರು. ಈ ರೈಲು ಹಳಿಯ ಆ ಬದಿ `ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮಕ್ಕಳ ಉದ್ಯಾನವನ~ ಇದೆ. <br /> <br /> ಇಲ್ಲಿಗೆ ಬರುವ ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಈ ಉದ್ಯಾನವನ ಇಂದು ಶೋಚನೀಯ ಸ್ಥಿತಿಯಲ್ಲಿದೆ. <br /> <br /> ಮಕ್ಕಳ ಆಟಕ್ಕೆಂದು ಇಡಲಾಗಿದ್ದ ಕಬ್ಬಿಣದ ಜೋಕಾಲಿ ತುಕ್ಕು ಹಿಡಿದಿದೆ. ಡಬಲ್ಬಾರ್, ಜಾರುಬಂಡಿ ಸೇರಿದಂತೆ ಯಾವ ಉಪಕರಣಗಳೂ ಸುಸ್ಥಿತಿ ಯಲ್ಲಿಲ್ಲ. ಸಿಮೆಂಟ್ನ ಜಾರುಬಂಡಿ ಕೂಡ ಹದೆಗೆಟ್ಟಿದೆ. ಇದರಿಂದಾಗಿ ಈ ಕಡೆ ಮಕ್ಕಳು ತಿರುಗಿ ನೋಡಲು ಸಹ ಹಿಂಜರಿಯುತ್ತಿವೆ. <br /> <br /> 1998ರಲ್ಲಿ ಕಾಯಕಲ್ಪ: ರಾಜ್ಯದಲ್ಲಿ 1998ರಲ್ಲಿ ಜನತಾದಳ ಸರ್ಕಾರ ಇದ್ದಾಗ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸ್ಥಳೀಯವರೆ ಆದ ಎಂ.ಸಿ. ನಾಣಯ್ಯ ಅವರ ಮುತುವರ್ಜಿಯಲ್ಲಿ ಈ ಉದ್ಯಾನಕ್ಕೆ ಕಾಯಕಲ್ಪ ನೀಡ ಲಾಗಿತ್ತು. <br /> <br /> ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ನಿಮಿತ್ತ ಅಂದು ಹೊಸ ಆಟಿಕೆ ಸಲಕರಣೆಗಳನ್ನು ಅಳವಡಿಸಲಾಗಿತ್ತು. ಆಗ ರಾಜಾಸೀಟ್ಗೆ ಬರುವ ಮಕ್ಕಳಿಗೆ ಆಟವಾಡುವುದು ಸಾಧ್ಯವಾಗುತ್ತಿತ್ತು. <br /> <br /> ರಾಜಾಸೀಟ್ನಲ್ಲಿ ನಿಂತು ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯು ವುದು ಪಾಲಕರಿಗೆ ಖುಷಿ ನೀಡುತ್ತಿದ್ದರೆ, ಮಕ್ಕಳಿಗೆ ಈ ಉದ್ಯಾನವನದಲ್ಲಿ ಆಟ ವಾಡುವುದರಿಂದ ಆ ಖುಷಿ ದೊರಕು ತ್ತಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿ ದರೆ ಯಾವ ಮಕ್ಕಳೂ ಆ ಕಡೆ ತಿರುಗಿ ಕೂಡ ನೋಡದ ಪರಿಸ್ಥಿತಿ ಇದೆ. <br /> <br /> ಪುಟಾಣಿ ರೈಲು ಸ್ಟೇಷನ್ ಪಕ್ಕದಲ್ಲಿ ಕಳ್ಳೆಪುರಿ, ಪಾನಿ ಪುರಿ ಸೇರಿದಂತೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಖರೀ ದಿಸಿ, ತಿನ್ನುತ್ತ ಆ ಕಡೆಯಿಂದ ಈ ಕಡೆ ಸುತ್ತಾಡುವ ಸಾಕಷ್ಟು ಜನ ಪ್ರವಾಸಿಗರು ಕಾಗದ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ.<br /> <br /> ಇದು ಪಾಕ್ರ್ ನಲ್ಲಿ ಗಲೀಜು ಸೃಷ್ಟಿ ಸುತ್ತದೆ. ಇದ ನ್ನು ತಡೆಯಲು ಅಥವಾ ಅವರಿಗೆ ತಿಳಿ ಹೇಳುವ ಕೆಲಸ ವನ್ನು ಇಲ್ಲಿರುವ ನಗರ ಸಭೆ ಸಿಬ್ಬಂದಿ ಯವರು ಮಾಡುವುದೇ ಇಲ್ಲ. ಅವರು ಕೇವಲ ರಾಜಾಸೀಟ್ಗೆ ತೆರಳುವ ಪ್ರವಾಸಿಗರಿಂದ ಹಣ ಸಂಗ್ರಹಿಸುವುದರಲ್ಲಿಯೇ `ಬ್ಯುಸಿ~ ಆಗಿರುತ್ತಾರೆ. <br /> <br /> ಪುಟಾಣಿ ರೈಲು ಸ್ಟೇಷನ್ ಅಕ್ಕಪಕ್ಕ ಸಾಕಷ್ಟು ಗಲೀಜು ಇರುತ್ತದೆ. ಇದರ ಸ್ವಚ್ಛತೆ ಬಗ್ಗೆ ಯಾರೂ ಗಮನ ಹರಿಸಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತೊಮ್ಮೆ ಈ ಕಡೆ ಬರಲು ಮನಸ್ಸು ಮಾಡಲಾರ. ಪ್ರವಾಸಿಗರಿಂದಲೇ ಸ್ಥಳೀಯರಿಗೆ ಹೆಚ್ಚಿನ ಆದಾಯ ಬರುತ್ತಿದ್ದು, ಇದಕ್ಕೆ ಹೊಡೆತ ಬೀಳುವುದರಲ್ಲಿ ಯಾವ ಅನು ಮಾನಗಳೂ ಇಲ್ಲ.<br /> <br /> ಆದ್ದರಿಂದ ಈ ಉದ್ಯಾನದಲ್ಲಿ ಹಾಳಾಗಿರುವ ಆಟಿಕೆ ಸಲಕರಣೆಗಳನ್ನು ಬದಲಿಸಿ, ಹೊಸ ಸಲಕರಣೆಗಳನ್ನು ಅಳ ವಡಿಸಬೇಕು. ಮಕ್ಕಳಿಗೆ ಆಟವಾಡಲು ಇನ್ನಷ್ಟು ಹೊಸ ಹೊಸ ಬಗೆಯ ಸಲಕರಣೆಗಳನ್ನು ಹಾಕಬೇಕು. ಸ್ವಚ್ಛತೆ ಕಾಪಾಡಬೇಕು ಎನ್ನುವುದು ಸ್ಥಳಕ್ಕೆ ಭೇಟಿದ ಪಾಲಕರ ಅಭಿಪ್ರಾಯ.<br /> <br /> ರೈಲಿನಲ್ಲಿ ಹುಚ್ಚಾಟ: ಪುಟಾಣಿ ರೈಲಿನಲ್ಲಿ ಸಾಮಾನ್ಯವಾಗಿ ಚಿಕ್ಕಮಕ್ಕಳ ಜೊತೆ ಅವರ ಪಾಲಕರು ಸಹ ಪ್ರಯಾಣಿಸುವುದು ಸಾಮಾನ್ಯ. ಅದರಂತೆ ಕಾಲೇಜು ಯುವಕ-ಯುವತಿಯರು ಸಹ ರೈಲಿನಲ್ಲಿ ಒಂದು ರೌಂಡ್ ಹಾಕಿಕೊಂಡು ಬರುತ್ತಾರೆ.<br /> <br /> ಕೆಲವು ಪಡ್ಡೆ ಹುಡುಗರು ಚಲಿಸುತ್ತಿ ರುವ ರೈಲಿನಲ್ಲಿ ಹುಚ್ಚಾಟ ನಡೆಸುತ್ತಾರೆ. ಕೇಕೇ ಹಾಕುವುದು, ಹೊರಗೆ ಬಾಗಿ ಕೈಗೆ ಸಿಗುವ ಹೂ-ಎಲೆಗಳನ್ನು ಕಿತ್ತುಕೊಳ್ಳು ವುದು ಮಾಡುತ್ತಾರೆ. ಕಡಿವಾಣ ಹಾಕಲು ರೈಲಿನಲ್ಲಿ ಸಿಬ್ಬಂದಿ ಇರುವುದಿಲ್ಲ (ರೈಲಿನ ಚಾಲಕನನ್ನು ಬಿಟ್ಟು). <br /> <br /> ಇದಕ್ಕೆ ನಿಯಂತ್ರಣ ಹಾಕಲೇ ಬೇಕಾಗಿದೆ. ಸುರಕ್ಷತಾ ದೃಷ್ಟಿಯಿಂದ ಹಾಗೂ ಪ್ರಯಾಣಿಕರ ಹುಚ್ಚಾಟವನ್ನು ತಡೆಯಲು ರೈಲಿನಲ್ಲಿ ಒಬ್ಬ ಸಿಬ್ಬಂದಿ ಯನ್ನು ನೇಮಿಸಬೇಕು ಎಂದು ದೂರದ ಊರುಗಳಿಂದ ಬಂದ ಪ್ರವಾಸಿಗರು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ನಗರದ ಪ್ರಮುಖ ಪ್ರವಾಸಿ ತಾಣವಾಗಿರುವ ರಾಜಾಸೀಟ್ಗೆ ಬರುವ ಪ್ರತಿಯೊಬ್ಬರು ಸಮೀಪದಲ್ಲಿರುವ ಪುಟಾಣಿ ರೈಲಿನಲ್ಲಿ ಒಂದು ಸುತ್ತು ಹಾಕಿಯೇ ಮುಂದಕ್ಕೆ ಹೋಗುವರು. ಈ ರೈಲು ಹಳಿಯ ಆ ಬದಿ `ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮಕ್ಕಳ ಉದ್ಯಾನವನ~ ಇದೆ. <br /> <br /> ಇಲ್ಲಿಗೆ ಬರುವ ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಈ ಉದ್ಯಾನವನ ಇಂದು ಶೋಚನೀಯ ಸ್ಥಿತಿಯಲ್ಲಿದೆ. <br /> <br /> ಮಕ್ಕಳ ಆಟಕ್ಕೆಂದು ಇಡಲಾಗಿದ್ದ ಕಬ್ಬಿಣದ ಜೋಕಾಲಿ ತುಕ್ಕು ಹಿಡಿದಿದೆ. ಡಬಲ್ಬಾರ್, ಜಾರುಬಂಡಿ ಸೇರಿದಂತೆ ಯಾವ ಉಪಕರಣಗಳೂ ಸುಸ್ಥಿತಿ ಯಲ್ಲಿಲ್ಲ. ಸಿಮೆಂಟ್ನ ಜಾರುಬಂಡಿ ಕೂಡ ಹದೆಗೆಟ್ಟಿದೆ. ಇದರಿಂದಾಗಿ ಈ ಕಡೆ ಮಕ್ಕಳು ತಿರುಗಿ ನೋಡಲು ಸಹ ಹಿಂಜರಿಯುತ್ತಿವೆ. <br /> <br /> 1998ರಲ್ಲಿ ಕಾಯಕಲ್ಪ: ರಾಜ್ಯದಲ್ಲಿ 1998ರಲ್ಲಿ ಜನತಾದಳ ಸರ್ಕಾರ ಇದ್ದಾಗ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸ್ಥಳೀಯವರೆ ಆದ ಎಂ.ಸಿ. ನಾಣಯ್ಯ ಅವರ ಮುತುವರ್ಜಿಯಲ್ಲಿ ಈ ಉದ್ಯಾನಕ್ಕೆ ಕಾಯಕಲ್ಪ ನೀಡ ಲಾಗಿತ್ತು. <br /> <br /> ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ನಿಮಿತ್ತ ಅಂದು ಹೊಸ ಆಟಿಕೆ ಸಲಕರಣೆಗಳನ್ನು ಅಳವಡಿಸಲಾಗಿತ್ತು. ಆಗ ರಾಜಾಸೀಟ್ಗೆ ಬರುವ ಮಕ್ಕಳಿಗೆ ಆಟವಾಡುವುದು ಸಾಧ್ಯವಾಗುತ್ತಿತ್ತು. <br /> <br /> ರಾಜಾಸೀಟ್ನಲ್ಲಿ ನಿಂತು ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯು ವುದು ಪಾಲಕರಿಗೆ ಖುಷಿ ನೀಡುತ್ತಿದ್ದರೆ, ಮಕ್ಕಳಿಗೆ ಈ ಉದ್ಯಾನವನದಲ್ಲಿ ಆಟ ವಾಡುವುದರಿಂದ ಆ ಖುಷಿ ದೊರಕು ತ್ತಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿ ದರೆ ಯಾವ ಮಕ್ಕಳೂ ಆ ಕಡೆ ತಿರುಗಿ ಕೂಡ ನೋಡದ ಪರಿಸ್ಥಿತಿ ಇದೆ. <br /> <br /> ಪುಟಾಣಿ ರೈಲು ಸ್ಟೇಷನ್ ಪಕ್ಕದಲ್ಲಿ ಕಳ್ಳೆಪುರಿ, ಪಾನಿ ಪುರಿ ಸೇರಿದಂತೆ ಕುರುಕಲು ತಿಂಡಿಗಳನ್ನು ಮಾರಾಟ ಮಾಡಲಾಗುತ್ತದೆ. ಇವುಗಳನ್ನು ಖರೀ ದಿಸಿ, ತಿನ್ನುತ್ತ ಆ ಕಡೆಯಿಂದ ಈ ಕಡೆ ಸುತ್ತಾಡುವ ಸಾಕಷ್ಟು ಜನ ಪ್ರವಾಸಿಗರು ಕಾಗದ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ.<br /> <br /> ಇದು ಪಾಕ್ರ್ ನಲ್ಲಿ ಗಲೀಜು ಸೃಷ್ಟಿ ಸುತ್ತದೆ. ಇದ ನ್ನು ತಡೆಯಲು ಅಥವಾ ಅವರಿಗೆ ತಿಳಿ ಹೇಳುವ ಕೆಲಸ ವನ್ನು ಇಲ್ಲಿರುವ ನಗರ ಸಭೆ ಸಿಬ್ಬಂದಿ ಯವರು ಮಾಡುವುದೇ ಇಲ್ಲ. ಅವರು ಕೇವಲ ರಾಜಾಸೀಟ್ಗೆ ತೆರಳುವ ಪ್ರವಾಸಿಗರಿಂದ ಹಣ ಸಂಗ್ರಹಿಸುವುದರಲ್ಲಿಯೇ `ಬ್ಯುಸಿ~ ಆಗಿರುತ್ತಾರೆ. <br /> <br /> ಪುಟಾಣಿ ರೈಲು ಸ್ಟೇಷನ್ ಅಕ್ಕಪಕ್ಕ ಸಾಕಷ್ಟು ಗಲೀಜು ಇರುತ್ತದೆ. ಇದರ ಸ್ವಚ್ಛತೆ ಬಗ್ಗೆ ಯಾರೂ ಗಮನ ಹರಿಸಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತೊಮ್ಮೆ ಈ ಕಡೆ ಬರಲು ಮನಸ್ಸು ಮಾಡಲಾರ. ಪ್ರವಾಸಿಗರಿಂದಲೇ ಸ್ಥಳೀಯರಿಗೆ ಹೆಚ್ಚಿನ ಆದಾಯ ಬರುತ್ತಿದ್ದು, ಇದಕ್ಕೆ ಹೊಡೆತ ಬೀಳುವುದರಲ್ಲಿ ಯಾವ ಅನು ಮಾನಗಳೂ ಇಲ್ಲ.<br /> <br /> ಆದ್ದರಿಂದ ಈ ಉದ್ಯಾನದಲ್ಲಿ ಹಾಳಾಗಿರುವ ಆಟಿಕೆ ಸಲಕರಣೆಗಳನ್ನು ಬದಲಿಸಿ, ಹೊಸ ಸಲಕರಣೆಗಳನ್ನು ಅಳ ವಡಿಸಬೇಕು. ಮಕ್ಕಳಿಗೆ ಆಟವಾಡಲು ಇನ್ನಷ್ಟು ಹೊಸ ಹೊಸ ಬಗೆಯ ಸಲಕರಣೆಗಳನ್ನು ಹಾಕಬೇಕು. ಸ್ವಚ್ಛತೆ ಕಾಪಾಡಬೇಕು ಎನ್ನುವುದು ಸ್ಥಳಕ್ಕೆ ಭೇಟಿದ ಪಾಲಕರ ಅಭಿಪ್ರಾಯ.<br /> <br /> ರೈಲಿನಲ್ಲಿ ಹುಚ್ಚಾಟ: ಪುಟಾಣಿ ರೈಲಿನಲ್ಲಿ ಸಾಮಾನ್ಯವಾಗಿ ಚಿಕ್ಕಮಕ್ಕಳ ಜೊತೆ ಅವರ ಪಾಲಕರು ಸಹ ಪ್ರಯಾಣಿಸುವುದು ಸಾಮಾನ್ಯ. ಅದರಂತೆ ಕಾಲೇಜು ಯುವಕ-ಯುವತಿಯರು ಸಹ ರೈಲಿನಲ್ಲಿ ಒಂದು ರೌಂಡ್ ಹಾಕಿಕೊಂಡು ಬರುತ್ತಾರೆ.<br /> <br /> ಕೆಲವು ಪಡ್ಡೆ ಹುಡುಗರು ಚಲಿಸುತ್ತಿ ರುವ ರೈಲಿನಲ್ಲಿ ಹುಚ್ಚಾಟ ನಡೆಸುತ್ತಾರೆ. ಕೇಕೇ ಹಾಕುವುದು, ಹೊರಗೆ ಬಾಗಿ ಕೈಗೆ ಸಿಗುವ ಹೂ-ಎಲೆಗಳನ್ನು ಕಿತ್ತುಕೊಳ್ಳು ವುದು ಮಾಡುತ್ತಾರೆ. ಕಡಿವಾಣ ಹಾಕಲು ರೈಲಿನಲ್ಲಿ ಸಿಬ್ಬಂದಿ ಇರುವುದಿಲ್ಲ (ರೈಲಿನ ಚಾಲಕನನ್ನು ಬಿಟ್ಟು). <br /> <br /> ಇದಕ್ಕೆ ನಿಯಂತ್ರಣ ಹಾಕಲೇ ಬೇಕಾಗಿದೆ. ಸುರಕ್ಷತಾ ದೃಷ್ಟಿಯಿಂದ ಹಾಗೂ ಪ್ರಯಾಣಿಕರ ಹುಚ್ಚಾಟವನ್ನು ತಡೆಯಲು ರೈಲಿನಲ್ಲಿ ಒಬ್ಬ ಸಿಬ್ಬಂದಿ ಯನ್ನು ನೇಮಿಸಬೇಕು ಎಂದು ದೂರದ ಊರುಗಳಿಂದ ಬಂದ ಪ್ರವಾಸಿಗರು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>