<p><strong>ಜಮಖಂಡಿ: </strong>ಒಕ್ಕಲುತನ ಮಣ್ಣಿನ ಮೇಲೆ ಅವಲಂಬಿಸಿದೆ. ಮಣ್ಣು ತಿಳಿದವನೇ ಒಕ್ಕಲಿಗ. ಒಕ್ಕಲುತನವನ್ನು ಪ್ರೀತಿಯಿಂದ ಮತ್ತು ಮನಸ್ಸಿ ನಿಂದ ಮಾಡುವುದೇ ಅಧ್ಯಾತ್ಮ. ಒಕ್ಕಲಿಗರೆಲ್ಲರೂ ಅಧ್ಯಾತ್ಮಿಗಳು ಎಂದು ಕೊಲ್ಹಾಪುರ ಕಣೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ನುಡಿದರು.<br /> <br /> ಜಮಖಂಡಿಯ ಐತಿಹಾಸಿಕ ಪೋಲೊ ಮೈದಾನದಲ್ಲಿ ನಡೆಯುತ್ತಿರುವ ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಅಧ್ಯಾತ್ಮಿಕ ಪ್ರವಚನ ನಿಮಿತ್ತ ಗುರುವಾರ ಏರ್ಪಡಿಸಿದ್ದ `ಕೃಷಿ ದರ್ಶನ~ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.<br /> <br /> ಆಧ್ಯಾತ್ಮಿಕವಾಗಿ ಕೃಷಿ ಚಟುವಟಿಕೆಗಳನ್ನು ಕೈಕೊಳ್ಳಬೇಕು. ಭೂಮಿಯಲ್ಲಿ ಬೆಳೆದು ನಿಂತ ಬೆಳೆ ಒಕ್ಕಗಲಿಗರ ಜೊತೆಗೆ ಮಾತನಾಡುವ ಭಾಷೆ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಒಕ್ಕಲಿಗರ ಅಧ್ಯಾತ್ಮ ಇರಬೇಕು. ಉದರ ನಿರ್ವಹಣೆ, ಮಕ್ಕಳ ಶಿಕ್ಷಣ, ಮನೆಮಾರು ನಡೆಸುವುದು ಒಕ್ಕಲುತನದ ಉದ್ದೇಶ ಎಂದರು.<br /> <br /> ಮಣ್ಣಿನ ಬಣ್ಣದಲ್ಲಿ ಫಲವತ್ತತೆ ಇಲ್ಲ. ರಸಾಯನಿಕ, ಜೈವಿಕ, ಭೌತಿಕ ಫಲವತ್ತತೆ ಇದ್ದರೆ ಮಣ್ಣು ಸಮೃದ್ಧವಾಗಿರುತ್ತದೆ. ಬೆಳೆಗಳಿಗೆ ಬೇಕಾಗುವ 16 ಪ್ರಕಾರದ ಪೋಷಕಾಂಶಗಳು ಮಣ್ಣಿನ ರಸಾಯನಿಕ ಫಲವತ್ತತೆಯನ್ನು ನಿರ್ಧರಿಸುತ್ತವೆ. ಜೈವಿಕ ಫಲವತ್ತತೆಯನ್ನು ಉಳಿಸಲು ಬೆಳೆಗಳನ್ನು ಕಾಲ ಕಾಲಕ್ಕೆ ಬದಲಾಯಿಸಬೇಕು ಬೇಕು ಎಂದು ಹೇಳಿದರು.<br /> <br /> ಮಣ್ಣು ಹರಿದು ಹೋಗದಂತೆ ಜಮೀನಿನಲ್ಲಿ ಬದುಗಳನ್ನು ನಿರ್ಮಿಸಿ ಬದುಗಳ ಮೇಲೆ ಗಿಡಗಳನ್ನು ನೆಡಬೇಕು. ಗಿಡಗಳು ಗಾಳಿಯನ್ನು ತಡೆಗಟ್ಟಲು ಸಹಾಯಕ. ಗಿಡಗಳನ್ನು ಎತ್ತರಕ್ಕೆ ಬೆಳೆಸುವುದರ ಜೊತೆಗೆ ಗಿಡದ ಟೊಂಗೆಗಳ ನಡುವೆ ನಿರ್ದಿಷ್ಟ ಅಂತರವನ್ನು ಕಾಪಾಡುವುದರಿಂದ ಅವು ಬೆಳೆ ಚೆನ್ನಾಗಿ ಬೆಳೆಯುತ್ತದೆ ಎಂದು ತಿಳಿಸಿದರು.<br /> <br /> ಜಮೀನಿಗೆ `ಉದರ~ ಹಸಿ ಮಾತ್ರಬೇಕು. ಅತಿಯಾಗಿ ನೀರು ನಿಲ್ಲಿಸಬಾರದು. ನೀರು ನಿಂತು ಗಾಳಿ ಇಲ್ಲದಾಗಿ ಬೆಳೆಯ ಬೇರುಗಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಮಣ್ಣಿ ನಲ್ಲಿರುವ ಅಸಂಖ್ಯಾತ ಸೂಕ್ಷ್ಮ ಜೀವಾಣುಗಳನ್ನು ಜೋಪಾನ ಮಾಡಲು, ಜೈವಿಕ ಫಲವತ್ತತೆ ಕಾಪಾಡಲು ಹಿತಮಿತವಾಗಿ ನೀರು ಉಣಿಸಬೇಕು. <br /> <br /> ದೇಶಿ ಬೀಜಗಳನ್ನು ಬಳಸಬೇಕು. ನಮ್ಮ ಜಮೀನಿನಲ್ಲಿ ಬೆಳೆದ ಬೀಜಗಳನ್ನು ಬೇರೆಯವರ ಜಮೀನಿನಲ್ಲಿ ಬೆಳೆದ ಬೀಜಗಳೊಂದಿಗೆ ಪ್ರತಿ 2-3 ವರ್ಷಕ್ಕೊಮ್ಮೆ ಬದಲಾಯಿಸಿಕೊಳ್ಳಬೇಕು. ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.<br /> <br /> ಒಕ್ಕಲುತನ ಅವಲಂಬಿತರ ಸಂಖ್ಯೆ ಕಡಿಮೆ ಮಾಡಬೇಕು. ಸಂಪೂರ್ಣ ಸಾವಯವ ಕೃಷಿ ಅಳವಡಿಸಿಕೊಂಡು ವಿಷಮುಕ್ತ ಆಹಾರಧಾನ್ಯ ಬೆಳೆಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು ಎಂದು ನುಡಿದರು.<br /> <br /> ಮಿರಜನ ಕೋಳೆಕರ ಮಠದ ರುದ್ರಪಶುಪತಿ ಶ್ರೀಗಳು ಹಾಗೂ ಜಮಖಂಡಿಯ ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು ಆಶೀರ್ವಚನ ನೀಡಿದರು. ಮೈಗೂರಿನ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಪರಿಚಯಿಸಿದರು. ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿದರು.<br /> <br /> ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆದ್ಯಕ್ಷ ಜಗದೀಶ ಗುಡಗುಂಟಿ, ಏಗಪ್ಪ ಸವದಿ ತಮ್ಮ ಅನಿಸಿಕೆ ಹಂಚಿಕೊಂಡರು. ಆಕಾಶವಾಣಿ ಕಲಾವಿದ ಶಿವಕುಮಾರ ಹಿರೇಮಠ, ಸರಸ್ವತಿ ಅಬರದ, ಚೇತನಾ ಪಾಟೀಲ `ರೈತಗೀತೆ~ ಹಾಡಿದರು. ಡಾ.ಬಿ.ಬಿ.ಶಿರಡೋಣಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ: </strong>ಒಕ್ಕಲುತನ ಮಣ್ಣಿನ ಮೇಲೆ ಅವಲಂಬಿಸಿದೆ. ಮಣ್ಣು ತಿಳಿದವನೇ ಒಕ್ಕಲಿಗ. ಒಕ್ಕಲುತನವನ್ನು ಪ್ರೀತಿಯಿಂದ ಮತ್ತು ಮನಸ್ಸಿ ನಿಂದ ಮಾಡುವುದೇ ಅಧ್ಯಾತ್ಮ. ಒಕ್ಕಲಿಗರೆಲ್ಲರೂ ಅಧ್ಯಾತ್ಮಿಗಳು ಎಂದು ಕೊಲ್ಹಾಪುರ ಕಣೇರಿಯ ಸಿದ್ಧಗಿರಿ ಸಂಸ್ಥಾನ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ನುಡಿದರು.<br /> <br /> ಜಮಖಂಡಿಯ ಐತಿಹಾಸಿಕ ಪೋಲೊ ಮೈದಾನದಲ್ಲಿ ನಡೆಯುತ್ತಿರುವ ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಅಧ್ಯಾತ್ಮಿಕ ಪ್ರವಚನ ನಿಮಿತ್ತ ಗುರುವಾರ ಏರ್ಪಡಿಸಿದ್ದ `ಕೃಷಿ ದರ್ಶನ~ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.<br /> <br /> ಆಧ್ಯಾತ್ಮಿಕವಾಗಿ ಕೃಷಿ ಚಟುವಟಿಕೆಗಳನ್ನು ಕೈಕೊಳ್ಳಬೇಕು. ಭೂಮಿಯಲ್ಲಿ ಬೆಳೆದು ನಿಂತ ಬೆಳೆ ಒಕ್ಕಗಲಿಗರ ಜೊತೆಗೆ ಮಾತನಾಡುವ ಭಾಷೆ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಒಕ್ಕಲಿಗರ ಅಧ್ಯಾತ್ಮ ಇರಬೇಕು. ಉದರ ನಿರ್ವಹಣೆ, ಮಕ್ಕಳ ಶಿಕ್ಷಣ, ಮನೆಮಾರು ನಡೆಸುವುದು ಒಕ್ಕಲುತನದ ಉದ್ದೇಶ ಎಂದರು.<br /> <br /> ಮಣ್ಣಿನ ಬಣ್ಣದಲ್ಲಿ ಫಲವತ್ತತೆ ಇಲ್ಲ. ರಸಾಯನಿಕ, ಜೈವಿಕ, ಭೌತಿಕ ಫಲವತ್ತತೆ ಇದ್ದರೆ ಮಣ್ಣು ಸಮೃದ್ಧವಾಗಿರುತ್ತದೆ. ಬೆಳೆಗಳಿಗೆ ಬೇಕಾಗುವ 16 ಪ್ರಕಾರದ ಪೋಷಕಾಂಶಗಳು ಮಣ್ಣಿನ ರಸಾಯನಿಕ ಫಲವತ್ತತೆಯನ್ನು ನಿರ್ಧರಿಸುತ್ತವೆ. ಜೈವಿಕ ಫಲವತ್ತತೆಯನ್ನು ಉಳಿಸಲು ಬೆಳೆಗಳನ್ನು ಕಾಲ ಕಾಲಕ್ಕೆ ಬದಲಾಯಿಸಬೇಕು ಬೇಕು ಎಂದು ಹೇಳಿದರು.<br /> <br /> ಮಣ್ಣು ಹರಿದು ಹೋಗದಂತೆ ಜಮೀನಿನಲ್ಲಿ ಬದುಗಳನ್ನು ನಿರ್ಮಿಸಿ ಬದುಗಳ ಮೇಲೆ ಗಿಡಗಳನ್ನು ನೆಡಬೇಕು. ಗಿಡಗಳು ಗಾಳಿಯನ್ನು ತಡೆಗಟ್ಟಲು ಸಹಾಯಕ. ಗಿಡಗಳನ್ನು ಎತ್ತರಕ್ಕೆ ಬೆಳೆಸುವುದರ ಜೊತೆಗೆ ಗಿಡದ ಟೊಂಗೆಗಳ ನಡುವೆ ನಿರ್ದಿಷ್ಟ ಅಂತರವನ್ನು ಕಾಪಾಡುವುದರಿಂದ ಅವು ಬೆಳೆ ಚೆನ್ನಾಗಿ ಬೆಳೆಯುತ್ತದೆ ಎಂದು ತಿಳಿಸಿದರು.<br /> <br /> ಜಮೀನಿಗೆ `ಉದರ~ ಹಸಿ ಮಾತ್ರಬೇಕು. ಅತಿಯಾಗಿ ನೀರು ನಿಲ್ಲಿಸಬಾರದು. ನೀರು ನಿಂತು ಗಾಳಿ ಇಲ್ಲದಾಗಿ ಬೆಳೆಯ ಬೇರುಗಳಿಗೆ ಉಸಿರಾಡಲು ಸಾಧ್ಯವಾಗುವುದಿಲ್ಲ. ಮಣ್ಣಿ ನಲ್ಲಿರುವ ಅಸಂಖ್ಯಾತ ಸೂಕ್ಷ್ಮ ಜೀವಾಣುಗಳನ್ನು ಜೋಪಾನ ಮಾಡಲು, ಜೈವಿಕ ಫಲವತ್ತತೆ ಕಾಪಾಡಲು ಹಿತಮಿತವಾಗಿ ನೀರು ಉಣಿಸಬೇಕು. <br /> <br /> ದೇಶಿ ಬೀಜಗಳನ್ನು ಬಳಸಬೇಕು. ನಮ್ಮ ಜಮೀನಿನಲ್ಲಿ ಬೆಳೆದ ಬೀಜಗಳನ್ನು ಬೇರೆಯವರ ಜಮೀನಿನಲ್ಲಿ ಬೆಳೆದ ಬೀಜಗಳೊಂದಿಗೆ ಪ್ರತಿ 2-3 ವರ್ಷಕ್ಕೊಮ್ಮೆ ಬದಲಾಯಿಸಿಕೊಳ್ಳಬೇಕು. ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.<br /> <br /> ಒಕ್ಕಲುತನ ಅವಲಂಬಿತರ ಸಂಖ್ಯೆ ಕಡಿಮೆ ಮಾಡಬೇಕು. ಸಂಪೂರ್ಣ ಸಾವಯವ ಕೃಷಿ ಅಳವಡಿಸಿಕೊಂಡು ವಿಷಮುಕ್ತ ಆಹಾರಧಾನ್ಯ ಬೆಳೆಯಬೇಕು. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು ಎಂದು ನುಡಿದರು.<br /> <br /> ಮಿರಜನ ಕೋಳೆಕರ ಮಠದ ರುದ್ರಪಶುಪತಿ ಶ್ರೀಗಳು ಹಾಗೂ ಜಮಖಂಡಿಯ ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು ಆಶೀರ್ವಚನ ನೀಡಿದರು. ಮೈಗೂರಿನ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಪರಿಚಯಿಸಿದರು. ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಮಾತನಾಡಿದರು.<br /> <br /> ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆದ್ಯಕ್ಷ ಜಗದೀಶ ಗುಡಗುಂಟಿ, ಏಗಪ್ಪ ಸವದಿ ತಮ್ಮ ಅನಿಸಿಕೆ ಹಂಚಿಕೊಂಡರು. ಆಕಾಶವಾಣಿ ಕಲಾವಿದ ಶಿವಕುಮಾರ ಹಿರೇಮಠ, ಸರಸ್ವತಿ ಅಬರದ, ಚೇತನಾ ಪಾಟೀಲ `ರೈತಗೀತೆ~ ಹಾಡಿದರು. ಡಾ.ಬಿ.ಬಿ.ಶಿರಡೋಣಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>