<p><strong>ಚಿಕ್ಕಮಗಳೂರು: </strong>ಜಿಲ್ಲೆಯಾದ್ಯಂತ ಭಾನುವಾರ ನಡೆಯಲಿರುವ ಲೋಕ ಸಭಾ ಉಪ ಚುನಾವಣೆಗೆ ಸರ್ವ ಸಿದ್ಧತೆ ಮಾಡಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. <br /> <br /> <strong>ಕೊಪ್ಪ:ಮತಯಂತ್ರ ಸಾಗಣೆ<br /> ಕೊಪ್ಪ:</strong> ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಿಂದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ 217 ಮತಗಟ್ಟೆಗಳಿಗೆ ಶನಿವಾರ ಮತಯಂತ್ರ ಸಾಗಿಸಲಾಯಿತು.ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿಗೆ ಬೆಳಿಗ್ಗೆ 9 ಗಂಟೆಯಿಂದಲೆ ಮತಯಂತ್ರ ಗಳ ವಿತರಣೆ ನಡೆಯಿತು. <br /> <br /> ಸಹಾಯಕ ಚುನಾವಣಾಧಿಕಾರಿ ಜಗದೀಶ್, ತಹಶೀಲ್ದಾರ್ ಲಿಂಗಪ್ಪ ಗೌಡ ಮಾರ್ಗದರ್ಶನ ನೀಡಿದರು. ರಾಜ್ಯ ಸಾರಿಗೆ, ಸಹಕಾರ ಸಾರಿಗೆ ಹಾಗೂ ಸರ್ಕಾರಿ ವಾಹನಗಳಲ್ಲಿ ಮತ ಯಂತ್ರಗಳನ್ನು ಬಿಗಿ ಬಂದೊಬಸ್ತ್ನಲ್ಲಿ ಮತಗಟ್ಟೆಗಳಿಗೆ ಸಾಗಿಸ ಲಾಯಿತು.<br /> <br /> <strong>ಗೊಂದಲಕ್ಕೀಡಾದ ಸಿಬ್ಬಂದಿ<br /> ಮೂಡಿಗೆರೆ:</strong> ಪಟ್ಟಣದ ಡಿ.ಎಸ್.ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ಸಿದ್ಧತೆ ಮುಗಿದು ಸಿಬ್ಬಂದಿ ತಮ್ಮ ಭಾಗದ ಮತಯಂತ್ರ ತೆಗೆದುಕೊಂಡು ತೆರಳ ಬೇಕು ಎನ್ನುವಷ್ಟರಲ್ಲಿ ಮಧ್ಯಾಹ್ನ ಮತ ಯಂತ್ರ ಸಾಗಿಸಬೇಕಾದ ಬಸ್ ಅಪ ಘಾತಕ್ಕೀಡಾಗಿ ಸಿಬ್ಬಂದಿ ಗೊಂದಲ ಕ್ಕೊಳಗಾದರು. <br /> <br /> ಮೂಡಿಗೆರೆ ಘಟಕದ ಬಸ್ ವಿದ್ಯಾ ನಗರದ ಗುರುಸಿದ್ದಪ್ಪ ಮತ್ತು ರೇಣುಕಮ್ಮ ದಂಪತಿ ಬೈಕ್ಗೆ ಡಿಕ್ಕಿಹೊಡೆದ ನಂತರ ಆಕ್ರೋಶಗೊಂಡ ಸಾರ್ವ ಜನಿ ಕರು ರಸ್ತೆ ತಡೆ ನಡೆಸಿದ್ದರಿಂದ ಚುನಾ ವಣಾ ಕಾರ್ಯಕ್ಕೆ ತೆರಳಬೇಕಿದ್ದ ಸಿಬ್ಬಂದಿ 2 ಗಂಟೆ ವಿಳಂಬವಾಗಿ ತೆರಳ ಬೇಕಾಯಿತು. ಇದರಿಂದ ನೊಂದ ಸಿಬ್ಬಂದಿ ಈ ಚುನಾವಣೆ ಸಹವಾಸ ಸಾಕು ಎನ್ನುತ್ತಿದ್ದ ಮಾತುಗಳು ಕೇಳಿ ಬರುತ್ತಿದ್ದವು.<br /> <br /> <strong>ಶೃಂಗೇರಿ: 49 ಮತಗಟ್ಟೆ</strong><br /> ಶೃಂಗೇರಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ನೇಮಕ ವಾದ ಸಿಬ್ಬಂದಿ ತಾಲ್ಲೂಕು ಕಚೇರಿ ಯಲ್ಲಿ ಶನಿವಾರ ಎಲೆಕ್ಟ್ರಾನಿಕ್ ಮತ ಯಂತ್ರ ಹಾಗೂ ಅಗತ್ಯ ಸಲಕರಣೆ ಯೊಂದಿಗೆ ವಿವಿಧ ಮತಗಟ್ಟೆಗಳಿಗೆ ತೆರಳಿದರು.<br /> <br /> ತಾಲ್ಲೂಕಿನ ಒಟ್ಟು 49 ಮತಗಟ್ಟೆ ಗಳಲ್ಲಿ ತಲಾ 5 ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ. ಕಿಗ್ಗ ಮತ್ತು ಮರ್ಕಲ್ ಹೋಬಳಿಗೆ ತಲಾ ಒಂದರಂತೆ ಮೊಬೈಲ್ ಯುನಿಟ್ಗಳು ಮತ್ತು ಎಲೆಕ್ಟ್ರಾನಿಕ್ ಮತಯಂತ್ರ ದುರಸ್ತಿಗೆ ಒಂದು ವಾಹನವನ್ನು ಮೀಸಲಿಡಲಾಗಿದೆ.<br /> <br /> ತಾಲ್ಲೂಕಿನ 23 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು ತಾಲ್ಲೂಕಿನ ನಕ್ಸಲ್ಪೀಡಿತ ಮತಗಟ್ಟೆಗಳಿಗೆ ತಲಾ 20 ಕೇಂದ್ರ ಮೀಸಲು ದಳದ ಯೋಧರು ಹಾಗೂ ಐವರು ಪೊಲೀಸರನ್ನು ನೇಮಿಸಲಾಗಿದೆ.<br /> <br /> `<strong>ಮತಗಟ್ಟೆಗೆ ಜೀಪ್ ವ್ಯವಸ್ಥೆ~ <br /> ತರೀಕೆರೆ: </strong>ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಶಾಂತಯುತವಾಗಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿದೆ.<br /> ಮತದಾನದ ಸ್ಥಳಕ್ಕೆ ತೆರಳಲು 39 ಸಾರಿಗೆ ಬಸ್ಗಳು ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ವಾಹನವನ್ನು ಬಳಸಿಕೊಳ್ಳಲಾಗಿದ್ದು, ಬಸ್ ಸಂಚರಿಸದ 9 ಮತಗಟ್ಟೆಗಳಿಗೆ ಚುನಾವಣ ಸಿಬ್ಬಂದಿ ತಲುಪಿಸಲು ಜೀಪ್ ವ್ಯವಸ್ಥೆಯನ್ನು ಮಾಡಲಾಗಿದೆ. <br /> <br /> 928 ಸಿಬ್ಬಂದಿ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿದ್ದು, 180 ಜನ ಮೈಕ್ರೊ ವೀಕ್ಷಕರನ್ನು ನಿಯೋಜಿಸಲಾಗಿದೆ. ಇವೆಲ್ಲವನ್ನು ನಿಭಾಯಿಸಲು 18 ಅಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. <br /> <br /> ಪೊಲೀಸ್ ಇಲಾಖೆಯು ಡಿವೈಎಸ್ಪಿ, 7 ಜನ ಇನ್ಸ್ಪೆಕ್ಟರ್, 14 ಜನ ಸಬ್ ಇನ್ಸ್ಪೆಕ್ಟರ್, 27 ಸಹಾಯಕ ಸಬ್ ಇನ್ಸ್ಪೆಕ್ಟರ್, ಮತ್ತು 250 ಜನ ಹೋಂ ಗಾರ್ಡ್ ನಿಯೋಜಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ಜಿಲ್ಲೆಯಾದ್ಯಂತ ಭಾನುವಾರ ನಡೆಯಲಿರುವ ಲೋಕ ಸಭಾ ಉಪ ಚುನಾವಣೆಗೆ ಸರ್ವ ಸಿದ್ಧತೆ ಮಾಡಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. <br /> <br /> <strong>ಕೊಪ್ಪ:ಮತಯಂತ್ರ ಸಾಗಣೆ<br /> ಕೊಪ್ಪ:</strong> ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಿಂದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ 217 ಮತಗಟ್ಟೆಗಳಿಗೆ ಶನಿವಾರ ಮತಯಂತ್ರ ಸಾಗಿಸಲಾಯಿತು.ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿಗೆ ಬೆಳಿಗ್ಗೆ 9 ಗಂಟೆಯಿಂದಲೆ ಮತಯಂತ್ರ ಗಳ ವಿತರಣೆ ನಡೆಯಿತು. <br /> <br /> ಸಹಾಯಕ ಚುನಾವಣಾಧಿಕಾರಿ ಜಗದೀಶ್, ತಹಶೀಲ್ದಾರ್ ಲಿಂಗಪ್ಪ ಗೌಡ ಮಾರ್ಗದರ್ಶನ ನೀಡಿದರು. ರಾಜ್ಯ ಸಾರಿಗೆ, ಸಹಕಾರ ಸಾರಿಗೆ ಹಾಗೂ ಸರ್ಕಾರಿ ವಾಹನಗಳಲ್ಲಿ ಮತ ಯಂತ್ರಗಳನ್ನು ಬಿಗಿ ಬಂದೊಬಸ್ತ್ನಲ್ಲಿ ಮತಗಟ್ಟೆಗಳಿಗೆ ಸಾಗಿಸ ಲಾಯಿತು.<br /> <br /> <strong>ಗೊಂದಲಕ್ಕೀಡಾದ ಸಿಬ್ಬಂದಿ<br /> ಮೂಡಿಗೆರೆ:</strong> ಪಟ್ಟಣದ ಡಿ.ಎಸ್.ಬಿಳೀಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚುನಾವಣೆ ಸಿದ್ಧತೆ ಮುಗಿದು ಸಿಬ್ಬಂದಿ ತಮ್ಮ ಭಾಗದ ಮತಯಂತ್ರ ತೆಗೆದುಕೊಂಡು ತೆರಳ ಬೇಕು ಎನ್ನುವಷ್ಟರಲ್ಲಿ ಮಧ್ಯಾಹ್ನ ಮತ ಯಂತ್ರ ಸಾಗಿಸಬೇಕಾದ ಬಸ್ ಅಪ ಘಾತಕ್ಕೀಡಾಗಿ ಸಿಬ್ಬಂದಿ ಗೊಂದಲ ಕ್ಕೊಳಗಾದರು. <br /> <br /> ಮೂಡಿಗೆರೆ ಘಟಕದ ಬಸ್ ವಿದ್ಯಾ ನಗರದ ಗುರುಸಿದ್ದಪ್ಪ ಮತ್ತು ರೇಣುಕಮ್ಮ ದಂಪತಿ ಬೈಕ್ಗೆ ಡಿಕ್ಕಿಹೊಡೆದ ನಂತರ ಆಕ್ರೋಶಗೊಂಡ ಸಾರ್ವ ಜನಿ ಕರು ರಸ್ತೆ ತಡೆ ನಡೆಸಿದ್ದರಿಂದ ಚುನಾ ವಣಾ ಕಾರ್ಯಕ್ಕೆ ತೆರಳಬೇಕಿದ್ದ ಸಿಬ್ಬಂದಿ 2 ಗಂಟೆ ವಿಳಂಬವಾಗಿ ತೆರಳ ಬೇಕಾಯಿತು. ಇದರಿಂದ ನೊಂದ ಸಿಬ್ಬಂದಿ ಈ ಚುನಾವಣೆ ಸಹವಾಸ ಸಾಕು ಎನ್ನುತ್ತಿದ್ದ ಮಾತುಗಳು ಕೇಳಿ ಬರುತ್ತಿದ್ದವು.<br /> <br /> <strong>ಶೃಂಗೇರಿ: 49 ಮತಗಟ್ಟೆ</strong><br /> ಶೃಂಗೇರಿ: ಉಡುಪಿ -ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ನೇಮಕ ವಾದ ಸಿಬ್ಬಂದಿ ತಾಲ್ಲೂಕು ಕಚೇರಿ ಯಲ್ಲಿ ಶನಿವಾರ ಎಲೆಕ್ಟ್ರಾನಿಕ್ ಮತ ಯಂತ್ರ ಹಾಗೂ ಅಗತ್ಯ ಸಲಕರಣೆ ಯೊಂದಿಗೆ ವಿವಿಧ ಮತಗಟ್ಟೆಗಳಿಗೆ ತೆರಳಿದರು.<br /> <br /> ತಾಲ್ಲೂಕಿನ ಒಟ್ಟು 49 ಮತಗಟ್ಟೆ ಗಳಲ್ಲಿ ತಲಾ 5 ಸಿಬ್ಬಂದಿ ನಿಯುಕ್ತಿಗೊಳಿಸಲಾಗಿದೆ. ಕಿಗ್ಗ ಮತ್ತು ಮರ್ಕಲ್ ಹೋಬಳಿಗೆ ತಲಾ ಒಂದರಂತೆ ಮೊಬೈಲ್ ಯುನಿಟ್ಗಳು ಮತ್ತು ಎಲೆಕ್ಟ್ರಾನಿಕ್ ಮತಯಂತ್ರ ದುರಸ್ತಿಗೆ ಒಂದು ವಾಹನವನ್ನು ಮೀಸಲಿಡಲಾಗಿದೆ.<br /> <br /> ತಾಲ್ಲೂಕಿನ 23 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದ್ದು ತಾಲ್ಲೂಕಿನ ನಕ್ಸಲ್ಪೀಡಿತ ಮತಗಟ್ಟೆಗಳಿಗೆ ತಲಾ 20 ಕೇಂದ್ರ ಮೀಸಲು ದಳದ ಯೋಧರು ಹಾಗೂ ಐವರು ಪೊಲೀಸರನ್ನು ನೇಮಿಸಲಾಗಿದೆ.<br /> <br /> `<strong>ಮತಗಟ್ಟೆಗೆ ಜೀಪ್ ವ್ಯವಸ್ಥೆ~ <br /> ತರೀಕೆರೆ: </strong>ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಶಾಂತಯುತವಾಗಿ ನಡೆಸಲು ತಾಲ್ಲೂಕು ಆಡಳಿತ ಸಕಲ ಸಿದ್ಧತೆ ಮಾಡಿದೆ.<br /> ಮತದಾನದ ಸ್ಥಳಕ್ಕೆ ತೆರಳಲು 39 ಸಾರಿಗೆ ಬಸ್ಗಳು ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ವಾಹನವನ್ನು ಬಳಸಿಕೊಳ್ಳಲಾಗಿದ್ದು, ಬಸ್ ಸಂಚರಿಸದ 9 ಮತಗಟ್ಟೆಗಳಿಗೆ ಚುನಾವಣ ಸಿಬ್ಬಂದಿ ತಲುಪಿಸಲು ಜೀಪ್ ವ್ಯವಸ್ಥೆಯನ್ನು ಮಾಡಲಾಗಿದೆ. <br /> <br /> 928 ಸಿಬ್ಬಂದಿ ಚುನಾವಣೆ ಪ್ರಕ್ರಿಯೆಯಲ್ಲಿ ತೊಡಗಿಸಿದ್ದು, 180 ಜನ ಮೈಕ್ರೊ ವೀಕ್ಷಕರನ್ನು ನಿಯೋಜಿಸಲಾಗಿದೆ. ಇವೆಲ್ಲವನ್ನು ನಿಭಾಯಿಸಲು 18 ಅಧಿಕಾರಿಗಳನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. <br /> <br /> ಪೊಲೀಸ್ ಇಲಾಖೆಯು ಡಿವೈಎಸ್ಪಿ, 7 ಜನ ಇನ್ಸ್ಪೆಕ್ಟರ್, 14 ಜನ ಸಬ್ ಇನ್ಸ್ಪೆಕ್ಟರ್, 27 ಸಹಾಯಕ ಸಬ್ ಇನ್ಸ್ಪೆಕ್ಟರ್, ಮತ್ತು 250 ಜನ ಹೋಂ ಗಾರ್ಡ್ ನಿಯೋಜಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>