<p><strong>ತಿರುವನಂತಪುರ (ಪಿಟಿಐ): </strong>ಕೇರಳದ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಆದರೆ ಲೋಕಸಭೆ ಚುನಾವಣೆ ಗೆದ್ದು ಸಂಸತ್ ಪ್ರವೇಶಿಸುವ ವಿಷಯದಲ್ಲಿ ಮಾತ್ರ ಅವರಿಗೆ ಅಂತಹ ಅದೃಷ್ಟ ಇಲ್ಲ.<br /> <br /> ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್ಡಿಎಫ್ 2009ರ ಲೋಕಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿವೆ. ಆದರೆ ಅವರು ಯಾರೂ ಗೆಲ್ಲಲಿಲ್ಲ. ಹಾಗಾಗಿ 2009ನೇ ಲೋಕಸಭೆಯಲ್ಲಿ ಕೇರಳವನ್ನು ಪ್ರತಿನಿಧಿಸುವ ಸಂಸದೆಯೇ ಇರಲಿಲ್ಲ.<br /> <br /> ಸಾಕ್ಷರತೆ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಶ್ಲಾಘನಾರ್ಹ ದಾಖಲೆ ಹೊಂದಿರುವ ಕೇರಳಕ್ಕೆ ಇದು ಶೋಭೆ ತರುವುದಿಲ್ಲ ಎಂದು ಪಕ್ಷಭೇದ ಮರೆತು ಮಹಿಳಾ ರಾಜಕಾರಣಿಗಳು ಹೇಳುತ್ತಾರೆ. 1952ರಿಂದ ಈವರೆಗೆ ಕೇರಳದಿಂದ ಲೋಕಸಭೆಗೆ ಹೋದವರು 7 ಮಹಿಳೆಯರು ಮಾತ್ರ.<br /> <br /> ಮಹಿಳೆಯರು ಪಕ್ಷಕ್ಕೆ ಎಷ್ಟೇ ಸೇವೆ ಸಲ್ಲಿಸಿದರೂ ಮುಖ್ಯವಾಹಿನಿಯ ಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಮಹಿಳೆಯರಿಗೆ ಅರ್ಹವಾಗಿ ದೊರೆಯಬೇಕಾದ ಸ್ಥಾನವನ್ನು ನೀಡಿಯೇ ಇಲ್ಲ ಎಂದು ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿಂದು ಕೃಷ್ಣ ಅತೃಪ್ತಿ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ (ಪಿಟಿಐ): </strong>ಕೇರಳದ ಮತದಾರರ ಪಟ್ಟಿಯಲ್ಲಿ ಪುರುಷರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಆದರೆ ಲೋಕಸಭೆ ಚುನಾವಣೆ ಗೆದ್ದು ಸಂಸತ್ ಪ್ರವೇಶಿಸುವ ವಿಷಯದಲ್ಲಿ ಮಾತ್ರ ಅವರಿಗೆ ಅಂತಹ ಅದೃಷ್ಟ ಇಲ್ಲ.<br /> <br /> ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸಿಪಿಎಂ ನೇತೃತ್ವದ ಎಲ್ಡಿಎಫ್ 2009ರ ಲೋಕಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿವೆ. ಆದರೆ ಅವರು ಯಾರೂ ಗೆಲ್ಲಲಿಲ್ಲ. ಹಾಗಾಗಿ 2009ನೇ ಲೋಕಸಭೆಯಲ್ಲಿ ಕೇರಳವನ್ನು ಪ್ರತಿನಿಧಿಸುವ ಸಂಸದೆಯೇ ಇರಲಿಲ್ಲ.<br /> <br /> ಸಾಕ್ಷರತೆ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಶ್ಲಾಘನಾರ್ಹ ದಾಖಲೆ ಹೊಂದಿರುವ ಕೇರಳಕ್ಕೆ ಇದು ಶೋಭೆ ತರುವುದಿಲ್ಲ ಎಂದು ಪಕ್ಷಭೇದ ಮರೆತು ಮಹಿಳಾ ರಾಜಕಾರಣಿಗಳು ಹೇಳುತ್ತಾರೆ. 1952ರಿಂದ ಈವರೆಗೆ ಕೇರಳದಿಂದ ಲೋಕಸಭೆಗೆ ಹೋದವರು 7 ಮಹಿಳೆಯರು ಮಾತ್ರ.<br /> <br /> ಮಹಿಳೆಯರು ಪಕ್ಷಕ್ಕೆ ಎಷ್ಟೇ ಸೇವೆ ಸಲ್ಲಿಸಿದರೂ ಮುಖ್ಯವಾಹಿನಿಯ ಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಮಹಿಳೆಯರಿಗೆ ಅರ್ಹವಾಗಿ ದೊರೆಯಬೇಕಾದ ಸ್ಥಾನವನ್ನು ನೀಡಿಯೇ ಇಲ್ಲ ಎಂದು ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿಂದು ಕೃಷ್ಣ ಅತೃಪ್ತಿ ವ್ಯಕ್ತಪಡಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>