<p>ಹಳೇಬೀಡು: ವಚನ ಗಾಯನದ ತಾಳ ಲಯಕ್ಕೆ ತಕ್ಕಂತೆ ಕಲಾವಿದರು ಹೆಜ್ಜೆ ಹಾಕಿದ್ದು ನೋಡುಗರನ್ನು ಚಕಿತಗೊಳಿಸಿದರೆ, ನಾಟಕದ ಪಾತ್ರಧಾರಿಗಳ ಆಕರ್ಷಕ ಸಂಭಾಷಣೆಗಳು ಪ್ರೇಕ್ಷಕರನ್ನು 12ನೆ ಶತಮಾನದ ಅನುಭವ ಮಂಟಪಕ್ಕೆ ಕರೆದೊಯ್ದವು. ವಚನ ಸಾಹಿತ್ಯದ ಶ್ರೀಮಂತ ಸಂಸ್ಕೃತಿ ಅಲ್ಲಿ ಮೇಳೈಸಿತ್ತು. <br /> <br /> ಸಾಣೇನಹಳ್ಳಿ ಶಿವಕುಮಾರ ಕಲಾಸಂಘ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಸ್ಥಳೀಯ ವೀರಶೈವ ಸಮಾಜ , ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಆಶ್ರಯದಲ್ಲಿ ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ನಾಟಕೋತ್ಸವದಲ್ಲಿ ಬಸವ ಸಂಚಾರ ತಂಡದವರು ನಡೆಸಿಕೊಟ್ಟ ನಾಟಕ, ವಚನಗಾಯನ ನೃತ್ಯ ಪ್ರದರ್ಶನವು ಅನನ್ಯ ಅನುಭವ ನೀಡಿದವು. <br /> <br /> ಸುಯ್ಯೆಂದು ತಂಪಾಗಿ ಬೀಸುವ ಅಷಾಢದ ಗಾಳಿಯೊಂದಿಗೆ ಕಪ್ಪಾದ ಮೋಡಗಳೂ ಅಗಸದಲ್ಲಿ ದಟ್ಟೈಸಿದ್ದವು. ಮಳೆರಾಯ ಧರೆಗೆ ಸುರಿಯದಿದ್ದರೂ, ವಚನಗಾಯನ ಹಾಗೂ ನಾಟಕದ ಡೈಲಾಗ್ಗಳಿಗೆ ಮನಸೋತ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಕರತಾಡನದ ಮಳೆ ಸುರಿಸಿದರು. ಸಂಗೀತದ ಮಾಧುರ್ಯ, ಸಾಂಸ್ಕೃತಿಕ ಸವಿಯನ್ನು ಮನದುಂಬಿಕೊಂಡರು. <br /> <br /> ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿದ ಈ ನಾಟಕವನ್ನು ಮಹಾದೇವ ಹಡಪದ ನಿರ್ದೇಶಿಸಿದ್ದರು. ಮಂಜುನಾಥ ಎಚ್.ಪಿ. ಸಂಗೀತ ಸಂಯೋಜನೆ, ರಾಜು.ಬಿ. ವಸ್ತ್ರ ವಿನ್ಯಾಸ ಮಾಡಿದ್ದರು.<br /> <br /> ವಚನಗಳು ದಾರಿದೀಪ: 12ನೇ ಶತಮಾನ ಸಾಮಾಜಿಕ ಕ್ರಾಂತಿ ನಡೆದ ಯುಗ. ಅಂದು ನಡೆದ ಘಟನೆಗಳು ವಿಶ್ವದ ಗಮನ ಸೆಳೆದವು. ವಚನಗಳು ಆಧುನಿಕ ಯುಗದ ಜನತೆಯ ಬದುಕಿನ ದಾರಿ ದೀಪದಂತಿವೆ ಎಂದು ಪುಷ್ಪ ಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. <br /> <br /> ಬಸವ ಸಂಚಾರ ತಂಡ ನಾಟಕ ಕಲೆಯನ್ನು ಮಕ್ಕಳಿಗೆ ಪರಿಚಯಿಸು ವುದರೊಂದಿಗೆ ವಚನ ಸಾಹಿತ್ಯ ಹಾಗೂ ಶರಣರ ವಿಚಾರ ಧಾರೆಗಳನ್ನು ಜನರಿಗೆ ತಲುಪಿಸುತ್ತಿದೆ ಎಂದರು. <br /> <br /> ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎಂ.ಮಂಜಪ್ಪ, ಸದಸ್ಯ ಬಿ.ಎಸ್.ಸೋಮಶೇಖರ್, ಉದ್ಯಮಿ ಎಚ್.ಆರ್.ಕಾಂತರಾಜು, ನ್ಯಾಯ ವಾದಿ ರಾಜಶೇಖರ್, ಮುಖಂಡ ಎಚ್.ಎಂ.ಕುಮಾರ್ ಇದ್ದರು. ಪ್ರಾಚಾರ್ಯ ನಾಗರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಂಶುಪಾಲ ಮುಳ್ಳಯ್ಯ ನಿರೂಪಿಸಿದರು. ಉಪನ್ಯಾ ಸಕ ನಾಗರಾಜು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಳೇಬೀಡು: ವಚನ ಗಾಯನದ ತಾಳ ಲಯಕ್ಕೆ ತಕ್ಕಂತೆ ಕಲಾವಿದರು ಹೆಜ್ಜೆ ಹಾಕಿದ್ದು ನೋಡುಗರನ್ನು ಚಕಿತಗೊಳಿಸಿದರೆ, ನಾಟಕದ ಪಾತ್ರಧಾರಿಗಳ ಆಕರ್ಷಕ ಸಂಭಾಷಣೆಗಳು ಪ್ರೇಕ್ಷಕರನ್ನು 12ನೆ ಶತಮಾನದ ಅನುಭವ ಮಂಟಪಕ್ಕೆ ಕರೆದೊಯ್ದವು. ವಚನ ಸಾಹಿತ್ಯದ ಶ್ರೀಮಂತ ಸಂಸ್ಕೃತಿ ಅಲ್ಲಿ ಮೇಳೈಸಿತ್ತು. <br /> <br /> ಸಾಣೇನಹಳ್ಳಿ ಶಿವಕುಮಾರ ಕಲಾಸಂಘ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಸ್ಥಳೀಯ ವೀರಶೈವ ಸಮಾಜ , ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಆಶ್ರಯದಲ್ಲಿ ಹಳೇಬೀಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ನಡೆದ ನಾಟಕೋತ್ಸವದಲ್ಲಿ ಬಸವ ಸಂಚಾರ ತಂಡದವರು ನಡೆಸಿಕೊಟ್ಟ ನಾಟಕ, ವಚನಗಾಯನ ನೃತ್ಯ ಪ್ರದರ್ಶನವು ಅನನ್ಯ ಅನುಭವ ನೀಡಿದವು. <br /> <br /> ಸುಯ್ಯೆಂದು ತಂಪಾಗಿ ಬೀಸುವ ಅಷಾಢದ ಗಾಳಿಯೊಂದಿಗೆ ಕಪ್ಪಾದ ಮೋಡಗಳೂ ಅಗಸದಲ್ಲಿ ದಟ್ಟೈಸಿದ್ದವು. ಮಳೆರಾಯ ಧರೆಗೆ ಸುರಿಯದಿದ್ದರೂ, ವಚನಗಾಯನ ಹಾಗೂ ನಾಟಕದ ಡೈಲಾಗ್ಗಳಿಗೆ ಮನಸೋತ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರು ಕರತಾಡನದ ಮಳೆ ಸುರಿಸಿದರು. ಸಂಗೀತದ ಮಾಧುರ್ಯ, ಸಾಂಸ್ಕೃತಿಕ ಸವಿಯನ್ನು ಮನದುಂಬಿಕೊಂಡರು. <br /> <br /> ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿದ ಈ ನಾಟಕವನ್ನು ಮಹಾದೇವ ಹಡಪದ ನಿರ್ದೇಶಿಸಿದ್ದರು. ಮಂಜುನಾಥ ಎಚ್.ಪಿ. ಸಂಗೀತ ಸಂಯೋಜನೆ, ರಾಜು.ಬಿ. ವಸ್ತ್ರ ವಿನ್ಯಾಸ ಮಾಡಿದ್ದರು.<br /> <br /> ವಚನಗಳು ದಾರಿದೀಪ: 12ನೇ ಶತಮಾನ ಸಾಮಾಜಿಕ ಕ್ರಾಂತಿ ನಡೆದ ಯುಗ. ಅಂದು ನಡೆದ ಘಟನೆಗಳು ವಿಶ್ವದ ಗಮನ ಸೆಳೆದವು. ವಚನಗಳು ಆಧುನಿಕ ಯುಗದ ಜನತೆಯ ಬದುಕಿನ ದಾರಿ ದೀಪದಂತಿವೆ ಎಂದು ಪುಷ್ಪ ಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. <br /> <br /> ಬಸವ ಸಂಚಾರ ತಂಡ ನಾಟಕ ಕಲೆಯನ್ನು ಮಕ್ಕಳಿಗೆ ಪರಿಚಯಿಸು ವುದರೊಂದಿಗೆ ವಚನ ಸಾಹಿತ್ಯ ಹಾಗೂ ಶರಣರ ವಿಚಾರ ಧಾರೆಗಳನ್ನು ಜನರಿಗೆ ತಲುಪಿಸುತ್ತಿದೆ ಎಂದರು. <br /> <br /> ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಚ್.ಎಂ.ಮಂಜಪ್ಪ, ಸದಸ್ಯ ಬಿ.ಎಸ್.ಸೋಮಶೇಖರ್, ಉದ್ಯಮಿ ಎಚ್.ಆರ್.ಕಾಂತರಾಜು, ನ್ಯಾಯ ವಾದಿ ರಾಜಶೇಖರ್, ಮುಖಂಡ ಎಚ್.ಎಂ.ಕುಮಾರ್ ಇದ್ದರು. ಪ್ರಾಚಾರ್ಯ ನಾಗರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಂಶುಪಾಲ ಮುಳ್ಳಯ್ಯ ನಿರೂಪಿಸಿದರು. ಉಪನ್ಯಾ ಸಕ ನಾಗರಾಜು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>