<p>ಸೊಸೆಯ ಗರ್ಭಪಾತ ಪ್ರಯತ್ನವನ್ನು ತನ್ನ ಬುದ್ಧಿವಂತಿಕೆಯಿಂದ ತಡೆಯುವ ಅತ್ತೆ, ಮಕ್ಕಳನ್ನು ತಿದ್ದಲು ಆತ್ಮವಿಶ್ವಾಸದ ಹಾದಿ ತುಳಿಯುವ ಅಮ್ಮ, ಮನೆಯ ಒಳಿತಿಗಾಗಿ ಪತಿಯ ವಿರುದ್ಧವೇ ತಿರುಗಿ ಬೀಳುವ ಪತ್ನಿ- `ಅಧಿಕಾರ~ ಸಿನಿಮಾದ ಪ್ರಧಾನ ಪಾತ್ರಧಾರಿಣಿಯ ವಿಶೇಷಣಗಳಿವು.<br /> <br /> ತ್ಯಾಗಮಯಿ ಪಾತ್ರಗಳಿಗಿಂತ ಭಿನ್ನವಾದ ಹೆಣ್ಣುಮಗಳ ಚಿತ್ರಣ ಈ ಚಿತ್ರದಲ್ಲಿದೆಯಂತೆ. `ಅಧಿಕಾರ~ ಚಿತ್ರೀಕರಣ ಮುಗಿದು ತೆರೆಗೆ ಸಿದ್ಧವಾಗಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು.<br /> <br /> ನಿರ್ದೇಶಕ ರಾಮನಾಥ ಋಗ್ವೇದಿ ಅವರಿಗೆ ತಮ್ಮ ಸಿನಿಮಾದ್ದು ಪ್ರತಿಯೊಂದು ಮನೆಯ ಕತೆ ಎನಿಸಿದೆ. `ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳು ಕಡಿಮೆಯಾಗಿದ್ದವು. ಅವುಗಳ ಸಾಲಿಗೆ ಅಧಿಕಾರ ಸೇರುತ್ತದೆ. ಅಲ್ಲದೇ ಇದು ಕನ್ನಡಿಗರೇ ಮಾಡಿರುವ ಸ್ವಮೇಕ್ ಸಿನಿಮಾ~ ಎನ್ನುತ್ತಾ ಅವರು ಖುಷಿಯಾದರು.<br /> <br /> ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿನಯಾ ಪ್ರಸಾದ್ ಅವರಿಗೆ ಇಂದಿನ ವೇಗದ ಸಿನಿಮಾಗಳ ಕಾಲದಲ್ಲಿ ನಿರ್ಮಾಪಕರು ಇಂಥ ವಿಭಿನ್ನ ಕತೆಯ ಸಿನಿಮಾ ಮಾಡಲು ಮುಂದಾಗಿರುವುದೇ ಸಾಹಸ ಎನಿಸಿದೆ. <br /> <br /> ಇನ್ನು ಕತೆಯನ್ನು ಮನಮುಟ್ಟುವಂತೆ ಹೇಳಿರುವ ನಿರ್ದೇಶಕರ ಕೆಲಸಕ್ಕೂ ಅವರ ಮೆಚ್ಚುಗೆ ಸಂದಾಯವಾಯಿತು. `ಕುಟುಂಬವನ್ನು ಪ್ರೀತಿಯ ಬೆಸುಗೆಯಲ್ಲಿ ಕಟ್ಟಿಹಾಕಲು ಪ್ರಯತ್ನಿಸುವ ಹೆಣ್ಣುಮಗಳ ಕತೆ ಇದು. <br /> <br /> ಆತ್ಮವಿಶ್ವಾಸದಿಂದ ಕೆಲಸ ಸಾಧಿಸುವ ಆಕೆಗೆ ದೇವರ ದಯೆಯೂ ನೆರವಾಗುತ್ತದೆ. ದೇವರನ್ನು ನಂಬದವರೂ ಆತ್ಮವಿಶ್ವಾಸದಲ್ಲಿ ನಂಬಿಕೆ ಇಟ್ಟು ಇದನ್ನು ನೋಡಬಹುದು~ ಎಂಬ ಆಹ್ವಾನ ಅವರದು.<br /> <br /> ಮೂರೂವರೆ ದಶಕಗಳಿಂದ ಉದ್ಯಮದಲ್ಲಿ ಇರುವ ಕೆಸಿಎನ್ ವೇಣುಗೋಪಾಲ್ ಅವರ ನಿರ್ಮಾಣದ ಸಿನಿಮಾ ಇದು. `ಅಂತ~, `ನವಭಾರತ~, `ಇಂದಿನ ಭಾರತ~, `ಕದನ~, `ಖಡ್ಗ~ದಂಥ ಆಕ್ಷನ್ ಸಿನಿಮಾಗಳನ್ನು ನಿರ್ಮಿಸಿದ್ದ ತಮಗೆ, ಸಾಂಸಾರಿಕ ಸಿನಿಮಾ ಮಾಡುವಾಸೆ ಇದೀಗ ಈಡೇರುತ್ತಿದೆ ಎಂದು ಸಂತೋಷ ಹಂಚಿಕೊಂಡರು. <br /> <br /> `ಇವತ್ತಿನ ಟ್ರೆಂಡ್ಗೆ ಎದುರಾಗಿ ಈ ಸಿನಿಮಾ ಮಾಡಿರುವೆ. ನನಗೆ ಕತೆ ತುಂಬಾ ಇಷ್ಟವಾಯಿತು. ಕತೆಗೆ ಕೊರತೆಯಾಗದಂತೆ ಬಜೆಟ್ ಒದಗಿಸಿರುವೆ. ನನ್ನ ಇದುವರೆಗಿನ 18 ಸಿನಿಮಾಗಳಲ್ಲಿ `ಅಧಿಕಾರ~ ತುಂಬಾ ಇಷ್ಟವಾದ ಸಿನಿಮಾ~ ಎಂದು ವೇಣುಗೋಪಾಲ್ ಹೇಳಿದರು. <br /> <br /> ಅವರಿಗೆ ಪುಟ್ಟಣ್ಣ ಕಣಗಾಲ್ ಅವರಿಂದ ಸಿನಿಮಾ ಮಾಡಿಸಬೇಕು ಎನ್ನುವ ಆಸೆ ಇತ್ತಂತೆ. ಹಾಗೆಯೇ ವಿಷ್ಣುವರ್ಧನ್ ಅವರಿಗಾಗಿ `ಮೋಡದ ಮನೆ~ ಎಂಬ ಕಾದಂಬರಿಯನ್ನು ಸಿನಿಮಾ ಮಾಡುವ ಆಸೆ ಇತ್ತಂತೆ. ಎರಡೂ ಈಡೇರಲಿಲ್ಲ ಎನ್ನುವ ಕೊರಗಿಗೆ ಮುಲಾಮಿನ ರೂಪದಲ್ಲಿ `ಅಧಿಕಾರ~ ಮೂಡಿಬಂದಿದೆಯಂತೆ.<br /> <br /> ಛಾಯಾಗ್ರಾಹಕ ಎಸ್.ಮನೋಹರ್, ಆರಂಭದಲ್ಲಿ ತಮ್ಮಂದಿಗೆ ಕೆಲಸ ಮಾಡಲು ನಿರಾಕರಿಸಿದ್ದ ನಿರ್ದೇಶಕರು ನಂತರ ತಮ್ಮನ್ನು ಮೆಚ್ಚಿಕೊಂಡಿದ್ದು ಖುಷಿ ಕೊಟ್ಟಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೊಸೆಯ ಗರ್ಭಪಾತ ಪ್ರಯತ್ನವನ್ನು ತನ್ನ ಬುದ್ಧಿವಂತಿಕೆಯಿಂದ ತಡೆಯುವ ಅತ್ತೆ, ಮಕ್ಕಳನ್ನು ತಿದ್ದಲು ಆತ್ಮವಿಶ್ವಾಸದ ಹಾದಿ ತುಳಿಯುವ ಅಮ್ಮ, ಮನೆಯ ಒಳಿತಿಗಾಗಿ ಪತಿಯ ವಿರುದ್ಧವೇ ತಿರುಗಿ ಬೀಳುವ ಪತ್ನಿ- `ಅಧಿಕಾರ~ ಸಿನಿಮಾದ ಪ್ರಧಾನ ಪಾತ್ರಧಾರಿಣಿಯ ವಿಶೇಷಣಗಳಿವು.<br /> <br /> ತ್ಯಾಗಮಯಿ ಪಾತ್ರಗಳಿಗಿಂತ ಭಿನ್ನವಾದ ಹೆಣ್ಣುಮಗಳ ಚಿತ್ರಣ ಈ ಚಿತ್ರದಲ್ಲಿದೆಯಂತೆ. `ಅಧಿಕಾರ~ ಚಿತ್ರೀಕರಣ ಮುಗಿದು ತೆರೆಗೆ ಸಿದ್ಧವಾಗಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು.<br /> <br /> ನಿರ್ದೇಶಕ ರಾಮನಾಥ ಋಗ್ವೇದಿ ಅವರಿಗೆ ತಮ್ಮ ಸಿನಿಮಾದ್ದು ಪ್ರತಿಯೊಂದು ಮನೆಯ ಕತೆ ಎನಿಸಿದೆ. `ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳು ಕಡಿಮೆಯಾಗಿದ್ದವು. ಅವುಗಳ ಸಾಲಿಗೆ ಅಧಿಕಾರ ಸೇರುತ್ತದೆ. ಅಲ್ಲದೇ ಇದು ಕನ್ನಡಿಗರೇ ಮಾಡಿರುವ ಸ್ವಮೇಕ್ ಸಿನಿಮಾ~ ಎನ್ನುತ್ತಾ ಅವರು ಖುಷಿಯಾದರು.<br /> <br /> ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿನಯಾ ಪ್ರಸಾದ್ ಅವರಿಗೆ ಇಂದಿನ ವೇಗದ ಸಿನಿಮಾಗಳ ಕಾಲದಲ್ಲಿ ನಿರ್ಮಾಪಕರು ಇಂಥ ವಿಭಿನ್ನ ಕತೆಯ ಸಿನಿಮಾ ಮಾಡಲು ಮುಂದಾಗಿರುವುದೇ ಸಾಹಸ ಎನಿಸಿದೆ. <br /> <br /> ಇನ್ನು ಕತೆಯನ್ನು ಮನಮುಟ್ಟುವಂತೆ ಹೇಳಿರುವ ನಿರ್ದೇಶಕರ ಕೆಲಸಕ್ಕೂ ಅವರ ಮೆಚ್ಚುಗೆ ಸಂದಾಯವಾಯಿತು. `ಕುಟುಂಬವನ್ನು ಪ್ರೀತಿಯ ಬೆಸುಗೆಯಲ್ಲಿ ಕಟ್ಟಿಹಾಕಲು ಪ್ರಯತ್ನಿಸುವ ಹೆಣ್ಣುಮಗಳ ಕತೆ ಇದು. <br /> <br /> ಆತ್ಮವಿಶ್ವಾಸದಿಂದ ಕೆಲಸ ಸಾಧಿಸುವ ಆಕೆಗೆ ದೇವರ ದಯೆಯೂ ನೆರವಾಗುತ್ತದೆ. ದೇವರನ್ನು ನಂಬದವರೂ ಆತ್ಮವಿಶ್ವಾಸದಲ್ಲಿ ನಂಬಿಕೆ ಇಟ್ಟು ಇದನ್ನು ನೋಡಬಹುದು~ ಎಂಬ ಆಹ್ವಾನ ಅವರದು.<br /> <br /> ಮೂರೂವರೆ ದಶಕಗಳಿಂದ ಉದ್ಯಮದಲ್ಲಿ ಇರುವ ಕೆಸಿಎನ್ ವೇಣುಗೋಪಾಲ್ ಅವರ ನಿರ್ಮಾಣದ ಸಿನಿಮಾ ಇದು. `ಅಂತ~, `ನವಭಾರತ~, `ಇಂದಿನ ಭಾರತ~, `ಕದನ~, `ಖಡ್ಗ~ದಂಥ ಆಕ್ಷನ್ ಸಿನಿಮಾಗಳನ್ನು ನಿರ್ಮಿಸಿದ್ದ ತಮಗೆ, ಸಾಂಸಾರಿಕ ಸಿನಿಮಾ ಮಾಡುವಾಸೆ ಇದೀಗ ಈಡೇರುತ್ತಿದೆ ಎಂದು ಸಂತೋಷ ಹಂಚಿಕೊಂಡರು. <br /> <br /> `ಇವತ್ತಿನ ಟ್ರೆಂಡ್ಗೆ ಎದುರಾಗಿ ಈ ಸಿನಿಮಾ ಮಾಡಿರುವೆ. ನನಗೆ ಕತೆ ತುಂಬಾ ಇಷ್ಟವಾಯಿತು. ಕತೆಗೆ ಕೊರತೆಯಾಗದಂತೆ ಬಜೆಟ್ ಒದಗಿಸಿರುವೆ. ನನ್ನ ಇದುವರೆಗಿನ 18 ಸಿನಿಮಾಗಳಲ್ಲಿ `ಅಧಿಕಾರ~ ತುಂಬಾ ಇಷ್ಟವಾದ ಸಿನಿಮಾ~ ಎಂದು ವೇಣುಗೋಪಾಲ್ ಹೇಳಿದರು. <br /> <br /> ಅವರಿಗೆ ಪುಟ್ಟಣ್ಣ ಕಣಗಾಲ್ ಅವರಿಂದ ಸಿನಿಮಾ ಮಾಡಿಸಬೇಕು ಎನ್ನುವ ಆಸೆ ಇತ್ತಂತೆ. ಹಾಗೆಯೇ ವಿಷ್ಣುವರ್ಧನ್ ಅವರಿಗಾಗಿ `ಮೋಡದ ಮನೆ~ ಎಂಬ ಕಾದಂಬರಿಯನ್ನು ಸಿನಿಮಾ ಮಾಡುವ ಆಸೆ ಇತ್ತಂತೆ. ಎರಡೂ ಈಡೇರಲಿಲ್ಲ ಎನ್ನುವ ಕೊರಗಿಗೆ ಮುಲಾಮಿನ ರೂಪದಲ್ಲಿ `ಅಧಿಕಾರ~ ಮೂಡಿಬಂದಿದೆಯಂತೆ.<br /> <br /> ಛಾಯಾಗ್ರಾಹಕ ಎಸ್.ಮನೋಹರ್, ಆರಂಭದಲ್ಲಿ ತಮ್ಮಂದಿಗೆ ಕೆಲಸ ಮಾಡಲು ನಿರಾಕರಿಸಿದ್ದ ನಿರ್ದೇಶಕರು ನಂತರ ತಮ್ಮನ್ನು ಮೆಚ್ಚಿಕೊಂಡಿದ್ದು ಖುಷಿ ಕೊಟ್ಟಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>