<p><strong>`ಕರಿಮಾಯಿ~ ಸಿನಿಮಾ ಬಗ್ಗೆ ಛಾಯಾಗ್ರಾಹಕ ಸುಂದರನಾಥ ಸುವರ್ಣರ ನೆನಪುಗಳು...<br /> <br /> </strong>ಕನ್ನಡ ಸಿನಿಮಾಗಳ ಪ್ರತಿಭಾಶಾಲಿ ಛಾಯಾಗ್ರಾಹಕ, ದೃಶ್ಯ ಸಂಯೋಜಕ ಸುಂದರನಾಥ ಸುವರ್ಣ ತಮ್ಮ ಮಾನಸ ಗುರು, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಸಿನಿಪ್ರಯೋಗಗಳಿಗೆ ಆರಂಭದಲ್ಲಿ ಸಾಥ್ ನೀಡಿದವರು. ಇಲ್ಲಿ ಅವರು ಕಂಬಾರರ ಆರಂಭದ ಸಿನಿಪ್ರಯತ್ನಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದಾರೆ.<br /> <br /> ಸುವರ್ಣ ಅವರಿಗೆ ಕಂಬಾರರು 1976ರಲ್ಲಿ ಸಿದ್ಧವಾದ `ಉಡುಗೊರೆ~ ಸಿನಿಮಾಕ್ಕೆ ಸಂಗೀತ ನೀಡಿದಾಗಿನಿಂದಲೂ ಪರಿಚಯ. `ಕಂಬಾರರು ಅದಕ್ಕೆ ಸಂಗೀತ ನೀಡಿದ್ದಲ್ಲದೆ ಹಾಡುಗಳನ್ನೂ ಬರೆದಿದ್ದರು. <br /> <br /> ಇದರ ವಿಶೇಷ ಎಂದರೆ ನಟ ಸುರೇಶ ಹೆಬ್ಳೀಕರ ಅವರಿಂದ ಹಾಡಿಸಿದ್ದು. ಅದಕ್ಕೆ ಮಹೇಶ್ ಸ್ವಾಮಿ ನಿರ್ದೇಶನವಿತ್ತು. ಕಲ್ಯಾಣಕುಮಾರ್ ನಾಯಕರಾಗಿದ್ದರೆ, ಉದಯ ಚಂದ್ರಿಕಾ ನಾಯಕಿಯಾಗಿದ್ದರು. <br /> <br /> ನಾನು ಆ ಸಿನಿಮಾಕ್ಕೆ ಛಾಯಾಗ್ರಾಹಕನಾಗಿ ಬಂದೆ. ಬಳಿಕ ಅವರು ತಮ್ಮ ಮೊದಲ ಸಿನಿಮಾ `ಕರಿಮಾಯಿ~ಯನ್ನು ನಿರ್ದೇಶಿಸಿದ್ದರು. <br /> <br /> ಆದರೆ, ಕಪ್ಪು ಬಿಳುಪಿನ `ಕರಿಮಾಯಿ~ ಬೆಳ್ಳಿತೆರೆಗೆ ಬರಲೇ ಇಲ್ಲ. ಚಿತ್ರೀಕರಣ ಮಾತ್ರ ಆಗಿತ್ತು~ ಎಂದು ಸುವರ್ಣ ಚಿತ್ರರಂಗದಲ್ಲಿ ಕಂಬಾರರ ಮೊದಲ ಸಿನಿಪ್ರಯತ್ನದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.<br /> <br /> `ಮಜಾ ಎಂದರೆ `ಕರಿಮಾಯಿ~ ಸಿನಿಮಾ ಆದ ಮೇಲೆ ಅದು ನಾಟಕ ಆಯಿತು. ಈ ಸಿನಿಮಾದ ಚಿತ್ರೀಕರಣವನ್ನು ನಾವು ಬೆಳಗಾವಿಯ ಗೋಕಾಕ್ನ ತವಹ ಎಂಬ ಹಳ್ಳಿಯಲ್ಲಿ ಮಾಡಿದೆವು. ಅದು ಕಂಬಾರರ ಊರು ಘೋಡಗೇರಿಯ ಪಕ್ಕದ ಹಳ್ಳಿ. <br /> <br /> ಅಲ್ಲಿ ವಿದ್ಯುತ್ ಇರಲಿಲ್ಲ. ಆಗೆಲ್ಲ ಚಿತ್ರೀಕರಣಕ್ಕೆ ಬೇಕಾದ ಜನರೇಟರ್ ಅನ್ನು ಮದ್ರಾಸ್ನಿಂದ ತರಿಸಬೇಕಿತ್ತು. ಸದ್ದು ಮಾಡುವ ಜನರೇಟರ್ ತೆಗೆದುಕೊಂಡು ನಾವು ಚಿತ್ರೀಕರಣಕ್ಕಾಗಿ ಆ ಹಳ್ಳಿಗೆ ಹೋದೆವು.<br /> <br /> ಅದು ಎಂಥ ಸದ್ದು ಮಾಡುತ್ತಿತ್ತೆಂದರೆ ಅದರ ಯಮ ಸದ್ದಿಗೆ ಊರಿನಲ್ಲಿನ ಹಸುಗಳು, ಕುರಿಗಳು, ನಾಯಿಗಳು, ಕೋಳಿಗಳು ಊರನ್ನು ತೊರೆದು ಓಡಿಹೋದವು! ಜನರೇಟರ್ ಸದ್ದು ನಿಲ್ಲುವವರೆಗೆ ಅವು ಅತ್ತ ತಲೆ ಹಾಕಲಿಲ್ಲ. <br /> <br /> ಆ ಸದ್ದು ಕೇಳಿ ಜನರು `ಅದೇನು~ ಎಂದು ನೋಡಲು ಬಂದರು~ ಎನ್ನುವ ಸುವರ್ಣ, ಅದೇ ಸದ್ದಿನಲ್ಲಿ ಕಂಬಾರರು ಚಿತ್ರೀಕರಣ ನಡೆಸಿದ್ದನ್ನು ಹೇಳಿಕೊಳ್ಳುತ್ತಾರೆ.<br /> <br /> `ಕರಿಮಾಯಿ~ಗೆ ಮಾನು ನಾಯಕರಾಗಿ ನಟಿಸಿದ್ದರು. ಚಿತ್ರೀಕರಣಲ್ಲಿ ಕೂಡ ಅವರು ಕಲ್ಪಿಸಿಕೊಂಡದ್ದು ಬರಬೇಕಿತ್ತು. ಛಾಯಾಗ್ರಹಣದಲ್ಲಿ ಅವರು ನೆರಳು ಬೆಳಕಿನ ಚೆಲ್ಲಾಟವನ್ನು, ಬೆಳಕಿನ ಲಾಸ್ಯವನ್ನು ಬಯಸುತ್ತಿದ್ದರು. <br /> <br /> ದೃಶ್ಯದಲ್ಲಿ ಕೆಲವೆಡೆ ಮಬ್ಬಾಗಿದ್ದು, ಏನೋ ಇದೆ ಎಂದು ಎನಿಸಬೇಕು ಎನ್ನುವ ಬೆಳಕಿನ ಸಂಯೋಜನೆ ಬೇಕು ಎನ್ನುತ್ತಿದ್ದರು. ಹುಡುಗಿಯಬ್ಬಳ ಕೂದಲನ್ನು ಚೆಲ್ಲಿ ತಮಗೆ ಬೇಕಾದ ದೃಶ್ಯವನ್ನು ತೆಗೆದುಕೊಂಡಿದ್ದು ನನಗೆ ಈಗಲೂ ನೆನಪಿದೆ. <br /> <br /> ಅವರಿಗೆ ನೈಸರ್ಗಿಕ ಬೆಳಕಿನಲ್ಲಿ ಮೂಡುವ ದೃಶ್ಯಗಳು ಇರಬೇಕಾಗಿತ್ತು~ ಎಂದು ಕಂಬಾರರ ಸಿನಿಕಲ್ಪನೆಯನ್ನು ಸುವರ್ಣ ಮೊನ್ನೆ ನಡೆದದ್ದು ಎಂಬಂತೆ ಹೇಳುತ್ತಾರೆ.<br /> ಕಂಬಾರರು ಸ್ವತಃ ಒಳ್ಳೆಯ ಹಾಡುಗಾರರು. <br /> <br /> ಅವರು ಶಿವಮೊಗ್ಗ ಸುಬ್ಬಣ್ಣ ಅವರಿಂದ `ಕಾಡು ಕುದುರೆ ಓಡಿ ಬಂದಿತ್ತಾ...~ ಹಾಡಿಸುವ ಮೊದಲು `ಮುಂಗೋಳಿ ಕೂಗ್ಯಾವು...~ ಹಾಡಿಸಿದ್ದರು~ ಎನ್ನುವ ಸುವರ್ಣ ಮದ್ರಾಸ್ನಲ್ಲಿ ಅವರ ಸಿನಿಮಾಗಳ ಹಾಡಿನ ಧ್ವನಿ ಮುದ್ರಣ ಆಗುವಾಗಲೆಲ್ಲ ಸಾಥ್ ನೀಡಿದ್ದಾರೆ. <br /> <br /> ಅವರ ಮುಂದಿನ ಪ್ರಯತ್ನಗಳಾದ `ಸಂಗೀತಾ~, `ಕಾಡು ಕುದುರೆ~ಗಳಿಗೆ ತಮ್ಮ ಬೇರೆ ಸಿನಿಮಾಗಳ ಕೆಲಸಗಳಿಂದಾಗಿ ತೊಡಗಿಕೊಳ್ಳಲಾಗಿಲ್ಲ.ಇದಲ್ಲದೆ ಕಂಬಾರರು ನಿರ್ದೇಶಿಸಿದ ಅನೇಕ ಕಿರುಚಿತ್ರಗಳಿಗೆ, ಜಾನಪದ ವಸ್ತು ಆಧಾರಿತ ಸರಣಿಗೆ ಛಾಯಾಗ್ರಹಣ ಮಾಡಿದ್ದಾರೆ.<br /> <br /> ಸರ್ಕಾರಕ್ಕೆ ಕುಟುಂಬ ಯೋಜನೆ ಕುರಿತಾಗಿ ಮಾಡಿಕೊಟ್ಟ `ಸಾಕು ಮಾಡು ಶಿವನೆ~ ಎಂಬ ಕಿರುಚಿತ್ರ ಅದರ ವ್ಯಂಗ್ಯ, ತಮಾಷೆಯ ಹೆಸರಿನಿಂದಾಗಿ ಅವರ ಮನದಲ್ಲಿ ಉಳಿದುಕೊಂಡಿದೆ!<br /> <br /> ಕನ್ನಡದ ಲೇಖಕರಾದ ತೇಜಸ್ವಿ, ಲಂಕೇಶ್ ಅವರಿಗೆ, ಅವರ ಸಾಹಿತ್ಯಕ್ಕೆ ನಿಕಟವಾಗಿದ್ದ ಸುವರ್ಣ ಕಂಬಾರರ ಸಹವಾಸದಲ್ಲಿ ಬೆಳೆದವರು. ಜ್ಞಾನಪೀಠ ಬಂದ ಸಂದರ್ಭದಲ್ಲಿ ತಮ್ಮ ಗುರುವಿನ ಆರ್ದ್ರ ಪ್ರೀತಿಯೊಂದಿಗೆ ತಮಾಷೆ, ವ್ಯಂಗ್ಯ, ಅವರ ಸಾಹಿತ್ಯದ ದೃಶ್ಯ ವೈಭವವನ್ನೂ ನೆನಪಿಸಿಕೊಳ್ಳುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>`ಕರಿಮಾಯಿ~ ಸಿನಿಮಾ ಬಗ್ಗೆ ಛಾಯಾಗ್ರಾಹಕ ಸುಂದರನಾಥ ಸುವರ್ಣರ ನೆನಪುಗಳು...<br /> <br /> </strong>ಕನ್ನಡ ಸಿನಿಮಾಗಳ ಪ್ರತಿಭಾಶಾಲಿ ಛಾಯಾಗ್ರಾಹಕ, ದೃಶ್ಯ ಸಂಯೋಜಕ ಸುಂದರನಾಥ ಸುವರ್ಣ ತಮ್ಮ ಮಾನಸ ಗುರು, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಸಿನಿಪ್ರಯೋಗಗಳಿಗೆ ಆರಂಭದಲ್ಲಿ ಸಾಥ್ ನೀಡಿದವರು. ಇಲ್ಲಿ ಅವರು ಕಂಬಾರರ ಆರಂಭದ ಸಿನಿಪ್ರಯತ್ನಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದಾರೆ.<br /> <br /> ಸುವರ್ಣ ಅವರಿಗೆ ಕಂಬಾರರು 1976ರಲ್ಲಿ ಸಿದ್ಧವಾದ `ಉಡುಗೊರೆ~ ಸಿನಿಮಾಕ್ಕೆ ಸಂಗೀತ ನೀಡಿದಾಗಿನಿಂದಲೂ ಪರಿಚಯ. `ಕಂಬಾರರು ಅದಕ್ಕೆ ಸಂಗೀತ ನೀಡಿದ್ದಲ್ಲದೆ ಹಾಡುಗಳನ್ನೂ ಬರೆದಿದ್ದರು. <br /> <br /> ಇದರ ವಿಶೇಷ ಎಂದರೆ ನಟ ಸುರೇಶ ಹೆಬ್ಳೀಕರ ಅವರಿಂದ ಹಾಡಿಸಿದ್ದು. ಅದಕ್ಕೆ ಮಹೇಶ್ ಸ್ವಾಮಿ ನಿರ್ದೇಶನವಿತ್ತು. ಕಲ್ಯಾಣಕುಮಾರ್ ನಾಯಕರಾಗಿದ್ದರೆ, ಉದಯ ಚಂದ್ರಿಕಾ ನಾಯಕಿಯಾಗಿದ್ದರು. <br /> <br /> ನಾನು ಆ ಸಿನಿಮಾಕ್ಕೆ ಛಾಯಾಗ್ರಾಹಕನಾಗಿ ಬಂದೆ. ಬಳಿಕ ಅವರು ತಮ್ಮ ಮೊದಲ ಸಿನಿಮಾ `ಕರಿಮಾಯಿ~ಯನ್ನು ನಿರ್ದೇಶಿಸಿದ್ದರು. <br /> <br /> ಆದರೆ, ಕಪ್ಪು ಬಿಳುಪಿನ `ಕರಿಮಾಯಿ~ ಬೆಳ್ಳಿತೆರೆಗೆ ಬರಲೇ ಇಲ್ಲ. ಚಿತ್ರೀಕರಣ ಮಾತ್ರ ಆಗಿತ್ತು~ ಎಂದು ಸುವರ್ಣ ಚಿತ್ರರಂಗದಲ್ಲಿ ಕಂಬಾರರ ಮೊದಲ ಸಿನಿಪ್ರಯತ್ನದ ಬಗ್ಗೆ ನೆನಪಿಸಿಕೊಳ್ಳುತ್ತಾರೆ.<br /> <br /> `ಮಜಾ ಎಂದರೆ `ಕರಿಮಾಯಿ~ ಸಿನಿಮಾ ಆದ ಮೇಲೆ ಅದು ನಾಟಕ ಆಯಿತು. ಈ ಸಿನಿಮಾದ ಚಿತ್ರೀಕರಣವನ್ನು ನಾವು ಬೆಳಗಾವಿಯ ಗೋಕಾಕ್ನ ತವಹ ಎಂಬ ಹಳ್ಳಿಯಲ್ಲಿ ಮಾಡಿದೆವು. ಅದು ಕಂಬಾರರ ಊರು ಘೋಡಗೇರಿಯ ಪಕ್ಕದ ಹಳ್ಳಿ. <br /> <br /> ಅಲ್ಲಿ ವಿದ್ಯುತ್ ಇರಲಿಲ್ಲ. ಆಗೆಲ್ಲ ಚಿತ್ರೀಕರಣಕ್ಕೆ ಬೇಕಾದ ಜನರೇಟರ್ ಅನ್ನು ಮದ್ರಾಸ್ನಿಂದ ತರಿಸಬೇಕಿತ್ತು. ಸದ್ದು ಮಾಡುವ ಜನರೇಟರ್ ತೆಗೆದುಕೊಂಡು ನಾವು ಚಿತ್ರೀಕರಣಕ್ಕಾಗಿ ಆ ಹಳ್ಳಿಗೆ ಹೋದೆವು.<br /> <br /> ಅದು ಎಂಥ ಸದ್ದು ಮಾಡುತ್ತಿತ್ತೆಂದರೆ ಅದರ ಯಮ ಸದ್ದಿಗೆ ಊರಿನಲ್ಲಿನ ಹಸುಗಳು, ಕುರಿಗಳು, ನಾಯಿಗಳು, ಕೋಳಿಗಳು ಊರನ್ನು ತೊರೆದು ಓಡಿಹೋದವು! ಜನರೇಟರ್ ಸದ್ದು ನಿಲ್ಲುವವರೆಗೆ ಅವು ಅತ್ತ ತಲೆ ಹಾಕಲಿಲ್ಲ. <br /> <br /> ಆ ಸದ್ದು ಕೇಳಿ ಜನರು `ಅದೇನು~ ಎಂದು ನೋಡಲು ಬಂದರು~ ಎನ್ನುವ ಸುವರ್ಣ, ಅದೇ ಸದ್ದಿನಲ್ಲಿ ಕಂಬಾರರು ಚಿತ್ರೀಕರಣ ನಡೆಸಿದ್ದನ್ನು ಹೇಳಿಕೊಳ್ಳುತ್ತಾರೆ.<br /> <br /> `ಕರಿಮಾಯಿ~ಗೆ ಮಾನು ನಾಯಕರಾಗಿ ನಟಿಸಿದ್ದರು. ಚಿತ್ರೀಕರಣಲ್ಲಿ ಕೂಡ ಅವರು ಕಲ್ಪಿಸಿಕೊಂಡದ್ದು ಬರಬೇಕಿತ್ತು. ಛಾಯಾಗ್ರಹಣದಲ್ಲಿ ಅವರು ನೆರಳು ಬೆಳಕಿನ ಚೆಲ್ಲಾಟವನ್ನು, ಬೆಳಕಿನ ಲಾಸ್ಯವನ್ನು ಬಯಸುತ್ತಿದ್ದರು. <br /> <br /> ದೃಶ್ಯದಲ್ಲಿ ಕೆಲವೆಡೆ ಮಬ್ಬಾಗಿದ್ದು, ಏನೋ ಇದೆ ಎಂದು ಎನಿಸಬೇಕು ಎನ್ನುವ ಬೆಳಕಿನ ಸಂಯೋಜನೆ ಬೇಕು ಎನ್ನುತ್ತಿದ್ದರು. ಹುಡುಗಿಯಬ್ಬಳ ಕೂದಲನ್ನು ಚೆಲ್ಲಿ ತಮಗೆ ಬೇಕಾದ ದೃಶ್ಯವನ್ನು ತೆಗೆದುಕೊಂಡಿದ್ದು ನನಗೆ ಈಗಲೂ ನೆನಪಿದೆ. <br /> <br /> ಅವರಿಗೆ ನೈಸರ್ಗಿಕ ಬೆಳಕಿನಲ್ಲಿ ಮೂಡುವ ದೃಶ್ಯಗಳು ಇರಬೇಕಾಗಿತ್ತು~ ಎಂದು ಕಂಬಾರರ ಸಿನಿಕಲ್ಪನೆಯನ್ನು ಸುವರ್ಣ ಮೊನ್ನೆ ನಡೆದದ್ದು ಎಂಬಂತೆ ಹೇಳುತ್ತಾರೆ.<br /> ಕಂಬಾರರು ಸ್ವತಃ ಒಳ್ಳೆಯ ಹಾಡುಗಾರರು. <br /> <br /> ಅವರು ಶಿವಮೊಗ್ಗ ಸುಬ್ಬಣ್ಣ ಅವರಿಂದ `ಕಾಡು ಕುದುರೆ ಓಡಿ ಬಂದಿತ್ತಾ...~ ಹಾಡಿಸುವ ಮೊದಲು `ಮುಂಗೋಳಿ ಕೂಗ್ಯಾವು...~ ಹಾಡಿಸಿದ್ದರು~ ಎನ್ನುವ ಸುವರ್ಣ ಮದ್ರಾಸ್ನಲ್ಲಿ ಅವರ ಸಿನಿಮಾಗಳ ಹಾಡಿನ ಧ್ವನಿ ಮುದ್ರಣ ಆಗುವಾಗಲೆಲ್ಲ ಸಾಥ್ ನೀಡಿದ್ದಾರೆ. <br /> <br /> ಅವರ ಮುಂದಿನ ಪ್ರಯತ್ನಗಳಾದ `ಸಂಗೀತಾ~, `ಕಾಡು ಕುದುರೆ~ಗಳಿಗೆ ತಮ್ಮ ಬೇರೆ ಸಿನಿಮಾಗಳ ಕೆಲಸಗಳಿಂದಾಗಿ ತೊಡಗಿಕೊಳ್ಳಲಾಗಿಲ್ಲ.ಇದಲ್ಲದೆ ಕಂಬಾರರು ನಿರ್ದೇಶಿಸಿದ ಅನೇಕ ಕಿರುಚಿತ್ರಗಳಿಗೆ, ಜಾನಪದ ವಸ್ತು ಆಧಾರಿತ ಸರಣಿಗೆ ಛಾಯಾಗ್ರಹಣ ಮಾಡಿದ್ದಾರೆ.<br /> <br /> ಸರ್ಕಾರಕ್ಕೆ ಕುಟುಂಬ ಯೋಜನೆ ಕುರಿತಾಗಿ ಮಾಡಿಕೊಟ್ಟ `ಸಾಕು ಮಾಡು ಶಿವನೆ~ ಎಂಬ ಕಿರುಚಿತ್ರ ಅದರ ವ್ಯಂಗ್ಯ, ತಮಾಷೆಯ ಹೆಸರಿನಿಂದಾಗಿ ಅವರ ಮನದಲ್ಲಿ ಉಳಿದುಕೊಂಡಿದೆ!<br /> <br /> ಕನ್ನಡದ ಲೇಖಕರಾದ ತೇಜಸ್ವಿ, ಲಂಕೇಶ್ ಅವರಿಗೆ, ಅವರ ಸಾಹಿತ್ಯಕ್ಕೆ ನಿಕಟವಾಗಿದ್ದ ಸುವರ್ಣ ಕಂಬಾರರ ಸಹವಾಸದಲ್ಲಿ ಬೆಳೆದವರು. ಜ್ಞಾನಪೀಠ ಬಂದ ಸಂದರ್ಭದಲ್ಲಿ ತಮ್ಮ ಗುರುವಿನ ಆರ್ದ್ರ ಪ್ರೀತಿಯೊಂದಿಗೆ ತಮಾಷೆ, ವ್ಯಂಗ್ಯ, ಅವರ ಸಾಹಿತ್ಯದ ದೃಶ್ಯ ವೈಭವವನ್ನೂ ನೆನಪಿಸಿಕೊಳ್ಳುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>