<p><strong>ನವದೆಹಲಿ (ಪಿಟಿಐ): </strong>ಬ್ರಾಂಡ್ ರಹಿತ ಆಭರಣಗಳ ಮೇಲೆ ಅಬಕಾರಿ ಸುಂಕ ವಿಧಿಸುವ ಸರ್ಕಾರದ ನಿರ್ಧಾರವನ್ನು ಹಿಂದೆ ಪಡೆಯುವಂತೆ ಆಗ್ರಹಿಸಿ 21 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಚಿನ್ನಾಭರಣ ವರ್ತಕರು ಶುಕ್ರವಾರ ಹಿಂದೆ ಪಡೆದ ಹಿನ್ನೆಲೆಯಲ್ಲಿ ಶನಿವಾರ ದೇಶದಾದ್ಯಂತ ಬಹುಪಾಲು ವರ್ತಕರು ಮಳಿಗೆಗಳನ್ನು ತೆರೆದು ವಹಿವಾಟು ನಡೆಸಿದರು.<br /> <br /> ಬೇಡಿಕೆಯನ್ನು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಚಿನ್ನಾಭರಣ ವರ್ತಕರು ಪ್ರತಿಭಟನೆಯನ್ನು ಶುಕ್ರವಾರ ಕೈ ಬಿಟ್ಟಿದ್ದರು.`ದೇಶದ ಹೆಚ್ಚಿನ ಎಲ್ಲಾ ಆಭರಣ ಮಳಿಗೆಗಳು ಶನಿವಾರ ತೆರೆದಿವೆ~ ಎಂದು ಅಖಿಲ ಭಾರತ ಸರಾಫ್ ಒಕ್ಕೂಟದ ಅಧ್ಯಕ್ಷ ಶೀಲ್ ಚಂದ್ ಜೈನ್ ಹೇಳಿದ್ದಾರೆ.<br /> <br /> ಮುಂಬೈನ ಝವೇರಿ ಬಜಾರ್ ಮತ್ತು ದೆಹಲಿಯ ಚಾಂದನಿ ಚೌಕ್ ಸೇರಿದಂತೆ ದೇಶದ ಪ್ರಮುಖ ಮಹಾ ನಗರಗಳ ಎಲ್ಲಾ ಚಿನಿವಾರ ಪೇಟೆಗಳಲ್ಲಿ ಶನಿವಾರ ಎಂದಿನಂತೆ ವಹಿವಾಟು ಆರಂಭವಾಗಿದೆ.<br /> <br /> `<strong>ಸಾಕಷ್ಟು ದಾಸ್ತಾನು ಇದೆ~<br /> </strong><br /> <strong>ಮುಂಬೈ (ಪಿಟಿಐ):</strong> ಇಪ್ಪತ್ತೊಂದು ದಿನಗಳ ಕಾಲ ಆಭರಣ ಮಳಿಗೆಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ಈಗ ಗ್ರಾಹಕರಿಂದ ಬರುವ ಬೇಡಿಕೆಯನ್ನು ಪೂರೈಸಲು ಅಗತ್ಯವಾದ ಚಿನ್ನದ ದಾಸ್ತಾನು ಇದೆ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟ ಹೇಳಿದೆ.<br /> <br /> ಬಂಗಾರದ ದಾಸ್ತಾನು ಸಾಕಷ್ಟು ಇರುವುದರಿಂದ ಚಿನ್ನದ ಆಮದು ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದೆ.`21 ದಿನಗಳ ಪ್ರತಿಭಟನೆಯ ಅವಧಿಯಲ್ಲಿ ಚಿನ್ನದ ತಯಾರಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದ್ದರಿಂದ 5-10ಟನ್ಗಳಷ್ಟು ಚಿನ್ನದ ದಾಸ್ತಾನು ಇದೆ. <br /> <br /> ಗ್ರಾಹಕರಿಂದ ಬರುವ ಬೇಡಿಕೆ ಪೂರೈಸಲು ಇದನ್ನು ಬಳಸಲಾಗುವುದು. ಹೀಗಾಗಿ ಚಿನ್ನದ ಆಮದು ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇಲ್ಲ~ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಬ್ರಾಂಡ್ ರಹಿತ ಆಭರಣಗಳ ಮೇಲೆ ಅಬಕಾರಿ ಸುಂಕ ವಿಧಿಸುವ ಸರ್ಕಾರದ ನಿರ್ಧಾರವನ್ನು ಹಿಂದೆ ಪಡೆಯುವಂತೆ ಆಗ್ರಹಿಸಿ 21 ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಚಿನ್ನಾಭರಣ ವರ್ತಕರು ಶುಕ್ರವಾರ ಹಿಂದೆ ಪಡೆದ ಹಿನ್ನೆಲೆಯಲ್ಲಿ ಶನಿವಾರ ದೇಶದಾದ್ಯಂತ ಬಹುಪಾಲು ವರ್ತಕರು ಮಳಿಗೆಗಳನ್ನು ತೆರೆದು ವಹಿವಾಟು ನಡೆಸಿದರು.<br /> <br /> ಬೇಡಿಕೆಯನ್ನು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಚಿನ್ನಾಭರಣ ವರ್ತಕರು ಪ್ರತಿಭಟನೆಯನ್ನು ಶುಕ್ರವಾರ ಕೈ ಬಿಟ್ಟಿದ್ದರು.`ದೇಶದ ಹೆಚ್ಚಿನ ಎಲ್ಲಾ ಆಭರಣ ಮಳಿಗೆಗಳು ಶನಿವಾರ ತೆರೆದಿವೆ~ ಎಂದು ಅಖಿಲ ಭಾರತ ಸರಾಫ್ ಒಕ್ಕೂಟದ ಅಧ್ಯಕ್ಷ ಶೀಲ್ ಚಂದ್ ಜೈನ್ ಹೇಳಿದ್ದಾರೆ.<br /> <br /> ಮುಂಬೈನ ಝವೇರಿ ಬಜಾರ್ ಮತ್ತು ದೆಹಲಿಯ ಚಾಂದನಿ ಚೌಕ್ ಸೇರಿದಂತೆ ದೇಶದ ಪ್ರಮುಖ ಮಹಾ ನಗರಗಳ ಎಲ್ಲಾ ಚಿನಿವಾರ ಪೇಟೆಗಳಲ್ಲಿ ಶನಿವಾರ ಎಂದಿನಂತೆ ವಹಿವಾಟು ಆರಂಭವಾಗಿದೆ.<br /> <br /> `<strong>ಸಾಕಷ್ಟು ದಾಸ್ತಾನು ಇದೆ~<br /> </strong><br /> <strong>ಮುಂಬೈ (ಪಿಟಿಐ):</strong> ಇಪ್ಪತ್ತೊಂದು ದಿನಗಳ ಕಾಲ ಆಭರಣ ಮಳಿಗೆಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ಈಗ ಗ್ರಾಹಕರಿಂದ ಬರುವ ಬೇಡಿಕೆಯನ್ನು ಪೂರೈಸಲು ಅಗತ್ಯವಾದ ಚಿನ್ನದ ದಾಸ್ತಾನು ಇದೆ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟ ಹೇಳಿದೆ.<br /> <br /> ಬಂಗಾರದ ದಾಸ್ತಾನು ಸಾಕಷ್ಟು ಇರುವುದರಿಂದ ಚಿನ್ನದ ಆಮದು ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದು ಹೇಳಿದೆ.`21 ದಿನಗಳ ಪ್ರತಿಭಟನೆಯ ಅವಧಿಯಲ್ಲಿ ಚಿನ್ನದ ತಯಾರಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಆದ್ದರಿಂದ 5-10ಟನ್ಗಳಷ್ಟು ಚಿನ್ನದ ದಾಸ್ತಾನು ಇದೆ. <br /> <br /> ಗ್ರಾಹಕರಿಂದ ಬರುವ ಬೇಡಿಕೆ ಪೂರೈಸಲು ಇದನ್ನು ಬಳಸಲಾಗುವುದು. ಹೀಗಾಗಿ ಚಿನ್ನದ ಆಮದು ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇಲ್ಲ~ ಎಂದು ಮುಂಬೈ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>