<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಕಂದಗಲ್ಲ-ಪುರ, ಹೊಳಗುಂದಿ, ಬಾವಿಹಳ್ಳಿ ಮತ್ತು ಪಟ್ಟಣದ ಹೊರವಲಯದ ಕೊಯಿಲಾರಗಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ಹಳ್ಳದ ಬದಿಯಲ್ಲಿ ಹೊಲಗಳಲ್ಲಿ ಒಟ್ಟು 51ಕುರಿಗಳು ಮೃತಪಟ್ಟಿವೆ.</p>.<p>ಹೊಳಗುಂದಿ, ಬಾವಿಹಳ್ಳಿ ಗ್ರಾಮದಲ್ಲಿ 18, ಕಂದಗಲ್ಲ-ಪುರದಲ್ಲಿ 23 ಮತ್ತು ಹಡಗಲಿ ಪಟ್ಟಣದ ಹೊರವಲಯದಲ್ಲಿ 30 ಸೇರಿ 51 ಕುರಿಗಳು ಮೃತಪಟ್ಟಿವೆ. <br /> <br /> ಹೊರವಲಯದ ಕೊಯಿಲಾರಗಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳದ ಬದಿಯಲ್ಲಿನ ಹೊಲಗಳಲ್ಲಿ ಮೃತಪಟ್ಟಿರುವ ಕುರಿಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸಿರಿಗಾವ್ ಮತ್ತು ಚಿಂಚಣಗಿ ಗ್ರಾಮದ ಶಂಕ್ರಪ್ಪ, ಕಲ್ಲಪ್ಪ ಮತ್ತು ಮುರುಸಿದ್ದ ಎಂಬುವವರಿಗೆ ಸೇರಿದ್ದವು. ಹೊಲಗಳಲ್ಲಿ ಕುರಿಗಳನ್ನು ನಿಲ್ಲಸಿದಾಗ ಘಟನೆ ಸಂಭವಿಸಿದೆ. <br /> <br /> ಮಳೆಯಿಂದ ಹಳ್ಳ ತುಂಬಿ ಹರಿದು 50ಕ್ಕೂ ಹೆಚ್ಚು ಕುರಿಗಳು ಕೊಚ್ಚಿಕೊಂಡು ಹೋಗಿವೆ ಎಂದು ಕುರಿಗಳ ಮಾಲಿಕ ಶಂಕ್ರಪ್ಪ ಮನನ್ನೊಂದು ನುಡಿದಿದ್ದಾನೆ.<br /> <br /> ಪಿಎಸ್ಐ ಆಂಜಿನೇಯ ಮತ್ತು ಸಿಬ್ಬಂದಿ 3 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಕಂದಗಲ್ಲ-ಪುರ, ಹೊಳಗುಂದಿ, ಬಾವಿಹಳ್ಳಿ ಮತ್ತು ಪಟ್ಟಣದ ಹೊರವಲಯದ ಕೊಯಿಲಾರಗಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ಹಳ್ಳದ ಬದಿಯಲ್ಲಿ ಹೊಲಗಳಲ್ಲಿ ಒಟ್ಟು 51ಕುರಿಗಳು ಮೃತಪಟ್ಟಿವೆ.</p>.<p>ಹೊಳಗುಂದಿ, ಬಾವಿಹಳ್ಳಿ ಗ್ರಾಮದಲ್ಲಿ 18, ಕಂದಗಲ್ಲ-ಪುರದಲ್ಲಿ 23 ಮತ್ತು ಹಡಗಲಿ ಪಟ್ಟಣದ ಹೊರವಲಯದಲ್ಲಿ 30 ಸೇರಿ 51 ಕುರಿಗಳು ಮೃತಪಟ್ಟಿವೆ. <br /> <br /> ಹೊರವಲಯದ ಕೊಯಿಲಾರಗಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳದ ಬದಿಯಲ್ಲಿನ ಹೊಲಗಳಲ್ಲಿ ಮೃತಪಟ್ಟಿರುವ ಕುರಿಗಳು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸಿರಿಗಾವ್ ಮತ್ತು ಚಿಂಚಣಗಿ ಗ್ರಾಮದ ಶಂಕ್ರಪ್ಪ, ಕಲ್ಲಪ್ಪ ಮತ್ತು ಮುರುಸಿದ್ದ ಎಂಬುವವರಿಗೆ ಸೇರಿದ್ದವು. ಹೊಲಗಳಲ್ಲಿ ಕುರಿಗಳನ್ನು ನಿಲ್ಲಸಿದಾಗ ಘಟನೆ ಸಂಭವಿಸಿದೆ. <br /> <br /> ಮಳೆಯಿಂದ ಹಳ್ಳ ತುಂಬಿ ಹರಿದು 50ಕ್ಕೂ ಹೆಚ್ಚು ಕುರಿಗಳು ಕೊಚ್ಚಿಕೊಂಡು ಹೋಗಿವೆ ಎಂದು ಕುರಿಗಳ ಮಾಲಿಕ ಶಂಕ್ರಪ್ಪ ಮನನ್ನೊಂದು ನುಡಿದಿದ್ದಾನೆ.<br /> <br /> ಪಿಎಸ್ಐ ಆಂಜಿನೇಯ ಮತ್ತು ಸಿಬ್ಬಂದಿ 3 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>