<p><strong>ಔರಾದ್:</strong> ದೇಶದ ಉತ್ತರ ಭಾರತ ಮತ್ತು ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆ ಆರ್ಭಟ ಜಾಸ್ತಿಯಾಗಿ ಜಲ ಪ್ರಳಯವಾಗುತ್ತಿದ್ದರೆ ಇಲ್ಲಿ ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗುತ್ತಿದೆ.<br /> <br /> ಜೂನ್ ತಿಂಗಳಲ್ಲಿ ಸರಾಸರಿ 142 ಎಂ.ಎಂ. ಮಳೆಯಾಗಬೇಕು. ಆದರೆ ಜೂನ್ 19ರ ವರೆಗೆ ಕೇವಲ 54 ಎಂ.ಎಂ. ಮಾತ್ರ ಮಳೆಯಾಗಿದೆ. ಔರಾದ್-49 ಎಂ.ಎಂ, ಚಿಂತಾಕಿ-63 ಎಂ.ಎಂ, ಸಂತಪುರ-77 ಎಂ.ಎಂ, ಠಾಣಾಕುಶನೂರ-95 ಎಂ.ಎಂ, ಕಮಲನಗರ-25 ಎಂ.ಎಂ, ದಾಬಕಾ ಹೋಬಳಿಯಲ್ಲಿ 17 ಎಂ.ಎಂ. ಮಳೆಯಾಗಿದೆ.<br /> <br /> ಚಿಂತಾಕಿ, ಸಂತಪುರ ಹೊರತುಪಡಿಸಿದರೆ ಇತರೆ ಹೋಬಳಿಯಲ್ಲಿ ಶೇ 20ರಷ್ಟು ಬಿತ್ತನೆಯಾಗಿಲ್ಲ. ರೈತರು ಹೊಲ ಹದ ಮಾಡಿ ಬೀಜ ಗೊಬ್ಬರ ಸಂಗ್ರಹಿಸಿಟ್ಟುಕೊಂಡು ಮಳೆರಾಯನ ದಾರಿ ಕಾಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 80,600 ಹೆಕ್ಟೇರ್ ಬಿತ್ತನೆ ಪ್ರದೇಶವಾಗಿದೆ. ಈ ಪೈಕಿ 1,700 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತಲಾಗುತ್ತದೆ. ಈಗಾಗಲೇ ಅರ್ಧದಷ್ಟು ರೈತರು ಬೀಜ ಕೊಂಡಿದ್ದಾರೆ. ಮಳೆ ಕೊರತೆಯಿಂದ ರೈತರು ಬೀಜ ಪಡೆಯಲು ಅವಸರ ಮಾಡದೆ ನಿಧಾನವಾಗಿ ಕೊಂಡೊಯ್ಯುತ್ತಿದ್ದಾರೆ.<br /> <br /> ಉದ್ದು, ಹೆಸರು, ಸೋಯಾ ಬಿತ್ತನೆಗೆ ಈಗ ಸೂಕ್ತ ಕಾಲವಾಗಿದೆ. ಆದರೆ ಮಳೆ ಇಲ್ಲದ ಕಾರಣ ರೈತರು ಕೈಕಟ್ಟಿ ಕುಳಿತಿದ್ದಾರೆ. ಸೋಯಾ ಬಿತ್ತಲು ಇನ್ನು ಕಾಲಾವಕಾಶ ಇದ್ದರೂ ವಿಳಂಬವಾದರೆ ರೋಗ ಬರುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿಗಳ ಹೇಳಿಕೆಯಾಗಿದೆ.<br /> <br /> <strong>ಕುಡಿಯುವ ನೀರಿಗೂ ಸಮಸ್ಯೆ</strong>: ಮಳೆ ಮುಂದೆ ಹೋದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮಳೆಯಾಗದ ಕಾರಣ ಬಾವಿ, ಬೋರ್ವೆಲ್ಗಳಲ್ಲಿ ನೀರು ಬಾರದೆ ಗ್ರಾಮೀಣ ಪ್ರದೇಶದ ಜನ ತೊಂದರೆ ಎದುರಿಸಬೇಕಾಗಿದೆ. ಕಳೆದ ಎರಡು ವಾರಗಳಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಜನರ ಬದುಕು ಅಸ್ತವ್ಯಸ್ಥವಾಗಿದೆ. ಈ ಕಾರಣ ರೈತರು ಮತ್ತು ಸಾರ್ವಜನಿಕರು ಕಳೆದ 17ರಂದು ಜೆಸ್ಕಾಂ ಕಚೇರಿ ಎದುರು ಭಾರಿ ಪ್ರದರ್ಶನ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ದೇಶದ ಉತ್ತರ ಭಾರತ ಮತ್ತು ರಾಜ್ಯದ ದಕ್ಷಿಣ ಭಾಗದಲ್ಲಿ ಮಳೆ ಆರ್ಭಟ ಜಾಸ್ತಿಯಾಗಿ ಜಲ ಪ್ರಳಯವಾಗುತ್ತಿದ್ದರೆ ಇಲ್ಲಿ ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆಯಾಗುತ್ತಿದೆ.<br /> <br /> ಜೂನ್ ತಿಂಗಳಲ್ಲಿ ಸರಾಸರಿ 142 ಎಂ.ಎಂ. ಮಳೆಯಾಗಬೇಕು. ಆದರೆ ಜೂನ್ 19ರ ವರೆಗೆ ಕೇವಲ 54 ಎಂ.ಎಂ. ಮಾತ್ರ ಮಳೆಯಾಗಿದೆ. ಔರಾದ್-49 ಎಂ.ಎಂ, ಚಿಂತಾಕಿ-63 ಎಂ.ಎಂ, ಸಂತಪುರ-77 ಎಂ.ಎಂ, ಠಾಣಾಕುಶನೂರ-95 ಎಂ.ಎಂ, ಕಮಲನಗರ-25 ಎಂ.ಎಂ, ದಾಬಕಾ ಹೋಬಳಿಯಲ್ಲಿ 17 ಎಂ.ಎಂ. ಮಳೆಯಾಗಿದೆ.<br /> <br /> ಚಿಂತಾಕಿ, ಸಂತಪುರ ಹೊರತುಪಡಿಸಿದರೆ ಇತರೆ ಹೋಬಳಿಯಲ್ಲಿ ಶೇ 20ರಷ್ಟು ಬಿತ್ತನೆಯಾಗಿಲ್ಲ. ರೈತರು ಹೊಲ ಹದ ಮಾಡಿ ಬೀಜ ಗೊಬ್ಬರ ಸಂಗ್ರಹಿಸಿಟ್ಟುಕೊಂಡು ಮಳೆರಾಯನ ದಾರಿ ಕಾಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 80,600 ಹೆಕ್ಟೇರ್ ಬಿತ್ತನೆ ಪ್ರದೇಶವಾಗಿದೆ. ಈ ಪೈಕಿ 1,700 ಹೆಕ್ಟೇರ್ ಪ್ರದೇಶದಲ್ಲಿ ಸೋಯಾ ಬಿತ್ತಲಾಗುತ್ತದೆ. ಈಗಾಗಲೇ ಅರ್ಧದಷ್ಟು ರೈತರು ಬೀಜ ಕೊಂಡಿದ್ದಾರೆ. ಮಳೆ ಕೊರತೆಯಿಂದ ರೈತರು ಬೀಜ ಪಡೆಯಲು ಅವಸರ ಮಾಡದೆ ನಿಧಾನವಾಗಿ ಕೊಂಡೊಯ್ಯುತ್ತಿದ್ದಾರೆ.<br /> <br /> ಉದ್ದು, ಹೆಸರು, ಸೋಯಾ ಬಿತ್ತನೆಗೆ ಈಗ ಸೂಕ್ತ ಕಾಲವಾಗಿದೆ. ಆದರೆ ಮಳೆ ಇಲ್ಲದ ಕಾರಣ ರೈತರು ಕೈಕಟ್ಟಿ ಕುಳಿತಿದ್ದಾರೆ. ಸೋಯಾ ಬಿತ್ತಲು ಇನ್ನು ಕಾಲಾವಕಾಶ ಇದ್ದರೂ ವಿಳಂಬವಾದರೆ ರೋಗ ಬರುವ ಸಾಧ್ಯತೆ ಇದೆ ಎಂದು ಕೃಷಿ ಅಧಿಕಾರಿಗಳ ಹೇಳಿಕೆಯಾಗಿದೆ.<br /> <br /> <strong>ಕುಡಿಯುವ ನೀರಿಗೂ ಸಮಸ್ಯೆ</strong>: ಮಳೆ ಮುಂದೆ ಹೋದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮಳೆಯಾಗದ ಕಾರಣ ಬಾವಿ, ಬೋರ್ವೆಲ್ಗಳಲ್ಲಿ ನೀರು ಬಾರದೆ ಗ್ರಾಮೀಣ ಪ್ರದೇಶದ ಜನ ತೊಂದರೆ ಎದುರಿಸಬೇಕಾಗಿದೆ. ಕಳೆದ ಎರಡು ವಾರಗಳಿಂದ ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ಜನರ ಬದುಕು ಅಸ್ತವ್ಯಸ್ಥವಾಗಿದೆ. ಈ ಕಾರಣ ರೈತರು ಮತ್ತು ಸಾರ್ವಜನಿಕರು ಕಳೆದ 17ರಂದು ಜೆಸ್ಕಾಂ ಕಚೇರಿ ಎದುರು ಭಾರಿ ಪ್ರದರ್ಶನ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>