<p><span style="font-size: 26px;">ಹಳೇಬೀಡು: ರೈತರು ಬೆಳೆದ ತರಕಾರಿಗಳನ್ನು ಸಂರಕ್ಷಿಸಲು ಶಿವಪುರದ ಗುರು ಬಸವ ಮಹಾಮನೆಯಲ್ಲಿ ಶೈತ್ಯಾಗಾರ ಆರಂಭಿಸಲು ಚಿಂತನೆ ನಡೆದಿದೆ ಎಂದು ಧಾರವಾಡ ಮನುಗುಂಡಿ ಹಾಗೂ ಶಿವಪುರ ಗುರುಬಸವ ಮಹಮನೆಯ ಪೀಠಾಧ್ಯಕ್ಷ ಬಸವಾನಂದ ಸ್ವಾಮೀಜಿ ಹೇಳಿದರು.</span><br /> <br /> ಹಳೇಬೀಡು ಅಡಗೂರು ಮಧ್ಯದಲ್ಲಿರುವ ಶಿವಪುರದ ಗುರುಬಸವ ಮಹಾಮನೆ ವೈದ್ಯ ಸಂಗಣ್ಣ ನಿಸರ್ಗೋಪಚಾರ ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ನಡೆದ ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನಾ ಸಮಾರಂಭ, 14ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು.<br /> <br /> ಹಾಸನ ಜಿಲ್ಲೆಯಲ್ಲಿ ಮಾದಿಹಳ್ಳಿ ಹಳೇಬೀಡು ಹೋಬಳಿಗಳು ತರಕಾರಿ ಬೆಳೆಗೆ ಖ್ಯಾತಿ ಪಡೆದಿವೆ. ತರಕಾರಿಯನ್ನು ಸಂರಕ್ಷಿಸಿ ರೈತರಿಗೆ ಶ್ರಮಕ್ಕೆ ತಕ್ಷ ಪ್ರತಿಫಲ ನೀಡುವ ಕೆಲಸ ಆಗಬೇಕಾಗಿದೆ ಎಂದರು.<br /> <br /> ನೀರಿನ ಸದ್ಬಳಕೆಯ ದೃಷ್ಟಿಯಿಂದ ಧಾರವಾಡದ ಮನುಗುಂಡಿಯ ಮಹಮನೆಯಲ್ಲಿ ಮಳೆಕೊಯ್ಲು ಮಾಡಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ. ಶಿವಪುರದಲ್ಲಿ ನಿರ್ಮಿಸುವ ಶೈತ್ಯಾಗಾರದ ಕೆಳಗೆ ಮಳೆ ನೀರು ಸಂಗ್ರಹಿಸಿ ಮಹಾಮನೆಯಲ್ಲಿ ಬಳಕೆ ಮಾಡಲಾಗುವುದು ಎಂದು ಬಸವಾನಂದ ಸ್ವಾಮೀಜಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;">ಹಳೇಬೀಡು: ರೈತರು ಬೆಳೆದ ತರಕಾರಿಗಳನ್ನು ಸಂರಕ್ಷಿಸಲು ಶಿವಪುರದ ಗುರು ಬಸವ ಮಹಾಮನೆಯಲ್ಲಿ ಶೈತ್ಯಾಗಾರ ಆರಂಭಿಸಲು ಚಿಂತನೆ ನಡೆದಿದೆ ಎಂದು ಧಾರವಾಡ ಮನುಗುಂಡಿ ಹಾಗೂ ಶಿವಪುರ ಗುರುಬಸವ ಮಹಮನೆಯ ಪೀಠಾಧ್ಯಕ್ಷ ಬಸವಾನಂದ ಸ್ವಾಮೀಜಿ ಹೇಳಿದರು.</span><br /> <br /> ಹಳೇಬೀಡು ಅಡಗೂರು ಮಧ್ಯದಲ್ಲಿರುವ ಶಿವಪುರದ ಗುರುಬಸವ ಮಹಾಮನೆ ವೈದ್ಯ ಸಂಗಣ್ಣ ನಿಸರ್ಗೋಪಚಾರ ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ನಡೆದ ಅಕ್ಕಮಹಾದೇವಿ ಅನುಭವ ಮಂಟಪ ಉದ್ಘಾಟನಾ ಸಮಾರಂಭ, 14ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು.<br /> <br /> ಹಾಸನ ಜಿಲ್ಲೆಯಲ್ಲಿ ಮಾದಿಹಳ್ಳಿ ಹಳೇಬೀಡು ಹೋಬಳಿಗಳು ತರಕಾರಿ ಬೆಳೆಗೆ ಖ್ಯಾತಿ ಪಡೆದಿವೆ. ತರಕಾರಿಯನ್ನು ಸಂರಕ್ಷಿಸಿ ರೈತರಿಗೆ ಶ್ರಮಕ್ಕೆ ತಕ್ಷ ಪ್ರತಿಫಲ ನೀಡುವ ಕೆಲಸ ಆಗಬೇಕಾಗಿದೆ ಎಂದರು.<br /> <br /> ನೀರಿನ ಸದ್ಬಳಕೆಯ ದೃಷ್ಟಿಯಿಂದ ಧಾರವಾಡದ ಮನುಗುಂಡಿಯ ಮಹಮನೆಯಲ್ಲಿ ಮಳೆಕೊಯ್ಲು ಮಾಡಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ. ಶಿವಪುರದಲ್ಲಿ ನಿರ್ಮಿಸುವ ಶೈತ್ಯಾಗಾರದ ಕೆಳಗೆ ಮಳೆ ನೀರು ಸಂಗ್ರಹಿಸಿ ಮಹಾಮನೆಯಲ್ಲಿ ಬಳಕೆ ಮಾಡಲಾಗುವುದು ಎಂದು ಬಸವಾನಂದ ಸ್ವಾಮೀಜಿ ತಿಳಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>