<p><strong>ಬೆಂಗಳೂರು:</strong> ‘ಸೀತೆ ದೃಢತೆಯ ಸಂಕಲ್ಪ. ಅಂತಹ ದೃಢ ಮನೋಭಾವ ಎಲ್ಲ ಹೆಣ್ಣು ಮಕ್ಕಳಲ್ಲಿ ಬೆಳೆಯಬೇಕು’ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.<br /> <br /> ಜಲಮಂಡಳಿಯ ನೌಕರರ ಸಂಘದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.<br /> <br /> ‘ಹೆಣ್ಣು ಎಂಬ ಪದ ಕೇಳಿದ ಕೂಡಲೇ ನೆನಪಾಗುವುದು ಸೀತೆ ಹಾಗೂ ದ್ರೌಪದಿ. ಕೃಷ್ಣ, ಭೀಮ ಹಾಗೂ ಅರ್ಜುನನ ನೆರವಿನಿಂದ ದ್ರೌಪದಿ ತನ್ನ ಸಂಕಲ್ಪ ಈಡೇರಿಸಿಕೊಂಡಳು. ಸೀತೆಯದು ದೃಢಸಂಕಲ್ಪದ ನಿಲುವು. ಎಂತಹ ಸನ್ನಿವೇಶ ಬಂದರೂ ನಿಲುವು ಬದಲು ಮಾಡಿಕೊಳ್ಳಲಿಲ್ಲ. ವಿಚಲಿತಳಾಗಲಿಲ್ಲ’ ಎಂದರು.<br /> <br /> ‘ಹೆಣ್ಣುಮಕ್ಕಳು ಇಂದು ಉತ್ತಮ ಉದ್ಯೋಗ ಪಡೆಯುತ್ತಿದ್ದಾರೆ. ಆರ್ಥಿಕ ಸ್ಥಿತಿಯೂ ಸುಧಾರಣೆ ಆಗಿದೆ. ಆದರೆ, ಶೋಷಣೆ ಕಡಿಮೆಯಾಗಿಲ್ಲ. ಪುರುಷರ ಮನೋಭಾವ ಬದಲಾದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ’ ಎಂದರು.<br /> <br /> ಹಿರಿಯ ನಟಿ ಬಿ.ಸರೋಜಾ ದೇವಿ ಕಾರ್ಯಕ್ರಮ ಉದ್ಘಾಟಿಸಿ, ‘ಹೆಣ್ಣು ಮಕ್ಕಳನ್ನು ಈ ಹಿಂದೆ ಕಡೆಗಣಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಹೆಣ್ಣು ಪ್ರೀತಿ, ತ್ಯಾಗದ ಸಂಕೇತ. ಹೆಣ್ಣು ಯಾವುದೇ ಸ್ಥಾನಕ್ಕೆ ಹೋದರೂ ತನ್ನ ಕರ್ತವ್ಯ ಮರೆಯಬಾರದು. ಅಹಂ ಬೆಳೆಸಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.<br /> <br /> ಜಲಮಂಡಳಿಯ ಮುಖ್ಯ ಆಡಳಿತಾಧಿಕಾರಿ ಕಾಶೀನಾಥ್ ಪವಾರ್, ಮುಖ್ಯ ಎಂಜಿನಿಯರ್ ಎಸ್.ಎಂ.ಬಸವರಾಜು, ಸಂಘದ ಅಧ್ಯಕ್ಷ ರುದ್ರೇಗೌಡ, ಮಹಿಳಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಬಿ.ಎಸ್.ಜಯಲಕ್ಷ್ಮಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಸೀತೆ ದೃಢತೆಯ ಸಂಕಲ್ಪ. ಅಂತಹ ದೃಢ ಮನೋಭಾವ ಎಲ್ಲ ಹೆಣ್ಣು ಮಕ್ಕಳಲ್ಲಿ ಬೆಳೆಯಬೇಕು’ ಎಂದು ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಪಟ್ಟರು.<br /> <br /> ಜಲಮಂಡಳಿಯ ನೌಕರರ ಸಂಘದ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.<br /> <br /> ‘ಹೆಣ್ಣು ಎಂಬ ಪದ ಕೇಳಿದ ಕೂಡಲೇ ನೆನಪಾಗುವುದು ಸೀತೆ ಹಾಗೂ ದ್ರೌಪದಿ. ಕೃಷ್ಣ, ಭೀಮ ಹಾಗೂ ಅರ್ಜುನನ ನೆರವಿನಿಂದ ದ್ರೌಪದಿ ತನ್ನ ಸಂಕಲ್ಪ ಈಡೇರಿಸಿಕೊಂಡಳು. ಸೀತೆಯದು ದೃಢಸಂಕಲ್ಪದ ನಿಲುವು. ಎಂತಹ ಸನ್ನಿವೇಶ ಬಂದರೂ ನಿಲುವು ಬದಲು ಮಾಡಿಕೊಳ್ಳಲಿಲ್ಲ. ವಿಚಲಿತಳಾಗಲಿಲ್ಲ’ ಎಂದರು.<br /> <br /> ‘ಹೆಣ್ಣುಮಕ್ಕಳು ಇಂದು ಉತ್ತಮ ಉದ್ಯೋಗ ಪಡೆಯುತ್ತಿದ್ದಾರೆ. ಆರ್ಥಿಕ ಸ್ಥಿತಿಯೂ ಸುಧಾರಣೆ ಆಗಿದೆ. ಆದರೆ, ಶೋಷಣೆ ಕಡಿಮೆಯಾಗಿಲ್ಲ. ಪುರುಷರ ಮನೋಭಾವ ಬದಲಾದರೆ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ’ ಎಂದರು.<br /> <br /> ಹಿರಿಯ ನಟಿ ಬಿ.ಸರೋಜಾ ದೇವಿ ಕಾರ್ಯಕ್ರಮ ಉದ್ಘಾಟಿಸಿ, ‘ಹೆಣ್ಣು ಮಕ್ಕಳನ್ನು ಈ ಹಿಂದೆ ಕಡೆಗಣಿಸಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಹೆಣ್ಣು ಪ್ರೀತಿ, ತ್ಯಾಗದ ಸಂಕೇತ. ಹೆಣ್ಣು ಯಾವುದೇ ಸ್ಥಾನಕ್ಕೆ ಹೋದರೂ ತನ್ನ ಕರ್ತವ್ಯ ಮರೆಯಬಾರದು. ಅಹಂ ಬೆಳೆಸಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.<br /> <br /> ಜಲಮಂಡಳಿಯ ಮುಖ್ಯ ಆಡಳಿತಾಧಿಕಾರಿ ಕಾಶೀನಾಥ್ ಪವಾರ್, ಮುಖ್ಯ ಎಂಜಿನಿಯರ್ ಎಸ್.ಎಂ.ಬಸವರಾಜು, ಸಂಘದ ಅಧ್ಯಕ್ಷ ರುದ್ರೇಗೌಡ, ಮಹಿಳಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಬಿ.ಎಸ್.ಜಯಲಕ್ಷ್ಮಿ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>