<p>ಹೊಸದುರ್ಗ: ತಾಲ್ಲೂಕಿನ ಚಿಕ್ಕತೇಕಲವಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ಬಣವೆ ಕಳೆದುಕೊಂಡ ಮೂರು ಮಂದಿ ರೈತರಿಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ವೈಯಕ್ತಿಕವಾಗಿ ಒಟ್ಟು ` 90 ಸಾವಿರ ಪರಿಹಾರ ಧನ ನೀಡಿದರು.<br /> <br /> ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ತೆನೆ ಸಹಿತ ಒಟ್ಟಲಾದ ಬಣವೆಗೆ ಬೆಂಕಿ ಬಿದ್ದು ರೈತರು ಅಪಾರ ನಷ್ಟಕ್ಕೊಳಗಾಗಿದ್ದರು. ವಿಷಯ ತಿಳಿದ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್ ಬೆಂಕಿ ಆಕಸ್ಮಿಕದಲ್ಲಿ ನಷ್ಟಕ್ಕೊಳಗಾದ ರೈತ ಕರಿಯಪ್ಪ ಅವರಿಗೆ `52 ಸಾವಿರ ನರಸಿಂಹಪ್ಪ ಅವರಿಗೆ ` 26 ಸಾವಿರ ಹಾಗೂ ದೇವರಾಜು ಎಂಬುವರಿಗೆ ` 12 ಸಾವಿರರೂ ನಗದು ಹಣವನ್ನು ವೈಯಕ್ತಿಕವಾಗಿ ನೀಡಿ ಸಾಂತ್ವನ ಹೇಳಿದರು.<br /> <br /> ಇದೇ ಸಂದರ್ಭದಲ್ಲಿ ಗ್ರಾಮದ ಅಂಗವಿಕಲ ರಾಮಣ್ಣ ಅವರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಗೂಳಿಹಟ್ಟಿ ಶೇಖರ್ ಅಭಿಮಾನಿ ಬಳಗದ ವತಿಯಿಂದ ` 10 ಸಾವಿರ ಹಣಕಾಸು ನೆರವು ನೀಡಲಾಯಿತು.ಮಾಡದಕರೆ ಹೋಬಳಿ ದೊಡ್ಡಘಟ್ಟ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡು ನತದೃಷ್ಟ ಗೋವಿಂದಪ್ಪ ಎಂಬುವರಿಗೆ ಪುನರ್ವಸತಿಗಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ವೈಯಕ್ತಿಕವಾಗಿ ` 50 ಸಾವಿರ ನಗದು ನೆರವು ನೀಡಿದರು.ವಕೀಲ ಸುರೇಶ್, ತಿಮ್ಮಪ್ಪ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸದುರ್ಗ: ತಾಲ್ಲೂಕಿನ ಚಿಕ್ಕತೇಕಲವಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ಬಣವೆ ಕಳೆದುಕೊಂಡ ಮೂರು ಮಂದಿ ರೈತರಿಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ವೈಯಕ್ತಿಕವಾಗಿ ಒಟ್ಟು ` 90 ಸಾವಿರ ಪರಿಹಾರ ಧನ ನೀಡಿದರು.<br /> <br /> ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ರಾಗಿ ತೆನೆ ಸಹಿತ ಒಟ್ಟಲಾದ ಬಣವೆಗೆ ಬೆಂಕಿ ಬಿದ್ದು ರೈತರು ಅಪಾರ ನಷ್ಟಕ್ಕೊಳಗಾಗಿದ್ದರು. ವಿಷಯ ತಿಳಿದ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್ ಬೆಂಕಿ ಆಕಸ್ಮಿಕದಲ್ಲಿ ನಷ್ಟಕ್ಕೊಳಗಾದ ರೈತ ಕರಿಯಪ್ಪ ಅವರಿಗೆ `52 ಸಾವಿರ ನರಸಿಂಹಪ್ಪ ಅವರಿಗೆ ` 26 ಸಾವಿರ ಹಾಗೂ ದೇವರಾಜು ಎಂಬುವರಿಗೆ ` 12 ಸಾವಿರರೂ ನಗದು ಹಣವನ್ನು ವೈಯಕ್ತಿಕವಾಗಿ ನೀಡಿ ಸಾಂತ್ವನ ಹೇಳಿದರು.<br /> <br /> ಇದೇ ಸಂದರ್ಭದಲ್ಲಿ ಗ್ರಾಮದ ಅಂಗವಿಕಲ ರಾಮಣ್ಣ ಅವರಿಗೆ ಸ್ವಂತ ಉದ್ಯೋಗ ಕೈಗೊಳ್ಳಲು ಗೂಳಿಹಟ್ಟಿ ಶೇಖರ್ ಅಭಿಮಾನಿ ಬಳಗದ ವತಿಯಿಂದ ` 10 ಸಾವಿರ ಹಣಕಾಸು ನೆರವು ನೀಡಲಾಯಿತು.ಮಾಡದಕರೆ ಹೋಬಳಿ ದೊಡ್ಡಘಟ್ಟ ಗ್ರಾಮದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮನೆ ಕಳೆದುಕೊಂಡು ನತದೃಷ್ಟ ಗೋವಿಂದಪ್ಪ ಎಂಬುವರಿಗೆ ಪುನರ್ವಸತಿಗಾಗಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ವೈಯಕ್ತಿಕವಾಗಿ ` 50 ಸಾವಿರ ನಗದು ನೆರವು ನೀಡಿದರು.ವಕೀಲ ಸುರೇಶ್, ತಿಮ್ಮಪ್ಪ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>