<p><strong>ಚನ್ನಪಟ್ಟಣ:</strong> ತಾಲ್ಲೂಕಿನ ವಿರುಪಸಂದ್ರ ಗ್ರಾಮದ ಚಿಕ್ಕತಾಯಮ್ಮ, ಮಾಸ್ತಿಗೌಡ ದಂಪತಿಗಳ ಪುತ್ರರಾಗಿ 1945 ಜೂನ್ 6 ರಂದು ಜನಿಸಿದ ಎಂ. ವರದೇಗೌಡ ಅವರು 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. <br /> <br /> ಎಸ್ಎಸ್ಎಲ್ಸಿ ವರೆಗೆ ವ್ಯಾಸಂಗ ಮಾಡಿದ್ದ ಅವರು ಮೂರು ಬಾರಿ ಚನ್ನಪಟ್ಟಣದ ಶಾಸಕರಾಗಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. ಒಮ್ಮೆ ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.1985ರಲ್ಲಿ ಎದುರಾದ ಮಧ್ಯಂತರ ಚುನಾವಣೆಯಲ್ಲಿ ವರದೇಗೌಡರು ಪುನರಾಯ್ಕೆಯಾದರು. <br /> <br /> 1989ರಲ್ಲಿ ಕಾಂಗ್ರೆಸ್ನ ಸಾದತ್ ಆಲಿಖಾನ್ ವಿರುದ್ಧ ಸೋಲನುಭವಿಸಿದ್ದ ವರದೇಗೌಡ 1994ರಲ್ಲಿ ಅವರನ್ನೇ ಸೋಲಿಸಿ ಪುನಃ ವಿಧಾನಸಭೆ ಪ್ರವೇಶಿಸಿದರು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಅವರು ವರದೇಗೌಡರವನ್ನು ಮುಖ್ಯ ಸಚೇತಕರಾಗಿ ನೇಮಿಸಿದ್ದರು. ದೇವೇಗೌಡರು ಪ್ರಧಾನಿಯಾದಾಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರ ಅವಧಿಯಲ್ಲಿ ರೇಷ್ಮೆ ಸಚಿವರಾಗಿ ಸಂಪುಟ ಸೇರಿದ್ದರು.<br /> <br /> 1999ರಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಅವರು ಸೋಲು ಅನುಭವಿಸಿದರು. 2004ರಲ್ಲಿ ಜೆಡಿಎಸ್ನಿಂದ ಟಿಕೆಟ್ ದೊರೆಯದಾಗ ದೇವೇಗೌಡರ ಜತೆ ವೈಮನಸ್ಸು ಬೆಳೆಯಿತು. <br /> <br /> 2008ರ ಚುನಾವಣೆಯಲ್ಲಿಯೂ ಟಿಕೆಟ್ ದೊರೆಯದಾಗ ಅವರು ಕಾಂಗ್ರೆಸ್ಗೆ ಸೇರ್ಪಗೊಂಡು, ಅಂದಿನ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಮತಪ್ರಚಾರ ಮಾಡಿದ್ದರು. ಯೋಗೇಶ್ವರ್ ರಾಜೀನಾಮೆಯಿಂದಾಗಿ ಪುನಃ 2009ರಲ್ಲಿ ಬಂದ ಉಪಚುನಾವಣೆ ನಂತರ ಜೆಡಿಎಸ್ ಸೇರಿ ರಾಜ್ಯ ಉಪಾಧ್ಯಕ್ಷರಾದರು.<br /> <br /> ಆದರೂ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು.ಮತ್ತೆ 2011ರಲ್ಲಿ ಎಂ.ಸಿ ಅಶ್ವತ್ಥ್ ರಾಜೀನಾಮೆಯಿಂದ ಎದುರಾದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಪರ ಮತಪ್ರಚಾರ ನಡೆಸಿದ್ದರು. ಆನಂತರ ವರದೇಗೌಡ ನೇಪಥ್ಯಕ್ಕೆ ಸರಿದಿದ್ದರು.<br /> <br /> `ದೇವೇಗೌಡರ ಮಾನಸ ಪುತ್ರ~:ಎಲ್ಲಾ ಕಾಲದಲ್ಲಿಯೂ ದೇವೇಗೌಡರನ್ನೇ ಬೆಂಬಲಿಸಿದ್ದ ವರದೇಗೌಡ ಅವರು ದೇವೇಗೌಡರ `ಮಾನಸಪುತ್ರ ಎಂದೇ ಪ್ರಸಿದ್ಧರಾಗಿದ್ದವರು. ದೇವೇಗೌಡರನ್ನು ಅವರು `ಅಪ್ಪಾಜಿ ಎಂತಲೇ ಕರೆಯುತ್ತಿದರು. <br /> <br /> 2001ರಲ್ಲಿ ತಾಲ್ಲೂಕಿನಲ್ಲಿ ನಡೆದ ವಿಠಲೇನಹಳ್ಳಿ ನೀರಾ ಚಳುವಳಿ ಸಂದರ್ಭದಲ್ಲಿ ಗೋಲಿಬಾರ್ ಘಟನೆ ಖಂಡಿಸಿ ದೇವೇಗೌಡರು ನಡೆಸಿದ ವಿಠಲೇನಹಳ್ಳಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಪಟ್ಟಣ:</strong> ತಾಲ್ಲೂಕಿನ ವಿರುಪಸಂದ್ರ ಗ್ರಾಮದ ಚಿಕ್ಕತಾಯಮ್ಮ, ಮಾಸ್ತಿಗೌಡ ದಂಪತಿಗಳ ಪುತ್ರರಾಗಿ 1945 ಜೂನ್ 6 ರಂದು ಜನಿಸಿದ ಎಂ. ವರದೇಗೌಡ ಅವರು 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. <br /> <br /> ಎಸ್ಎಸ್ಎಲ್ಸಿ ವರೆಗೆ ವ್ಯಾಸಂಗ ಮಾಡಿದ್ದ ಅವರು ಮೂರು ಬಾರಿ ಚನ್ನಪಟ್ಟಣದ ಶಾಸಕರಾಗಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. ಒಮ್ಮೆ ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.1985ರಲ್ಲಿ ಎದುರಾದ ಮಧ್ಯಂತರ ಚುನಾವಣೆಯಲ್ಲಿ ವರದೇಗೌಡರು ಪುನರಾಯ್ಕೆಯಾದರು. <br /> <br /> 1989ರಲ್ಲಿ ಕಾಂಗ್ರೆಸ್ನ ಸಾದತ್ ಆಲಿಖಾನ್ ವಿರುದ್ಧ ಸೋಲನುಭವಿಸಿದ್ದ ವರದೇಗೌಡ 1994ರಲ್ಲಿ ಅವರನ್ನೇ ಸೋಲಿಸಿ ಪುನಃ ವಿಧಾನಸಭೆ ಪ್ರವೇಶಿಸಿದರು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಅವರು ವರದೇಗೌಡರವನ್ನು ಮುಖ್ಯ ಸಚೇತಕರಾಗಿ ನೇಮಿಸಿದ್ದರು. ದೇವೇಗೌಡರು ಪ್ರಧಾನಿಯಾದಾಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲರ ಅವಧಿಯಲ್ಲಿ ರೇಷ್ಮೆ ಸಚಿವರಾಗಿ ಸಂಪುಟ ಸೇರಿದ್ದರು.<br /> <br /> 1999ರಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಅವರು ಸೋಲು ಅನುಭವಿಸಿದರು. 2004ರಲ್ಲಿ ಜೆಡಿಎಸ್ನಿಂದ ಟಿಕೆಟ್ ದೊರೆಯದಾಗ ದೇವೇಗೌಡರ ಜತೆ ವೈಮನಸ್ಸು ಬೆಳೆಯಿತು. <br /> <br /> 2008ರ ಚುನಾವಣೆಯಲ್ಲಿಯೂ ಟಿಕೆಟ್ ದೊರೆಯದಾಗ ಅವರು ಕಾಂಗ್ರೆಸ್ಗೆ ಸೇರ್ಪಗೊಂಡು, ಅಂದಿನ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಮತಪ್ರಚಾರ ಮಾಡಿದ್ದರು. ಯೋಗೇಶ್ವರ್ ರಾಜೀನಾಮೆಯಿಂದಾಗಿ ಪುನಃ 2009ರಲ್ಲಿ ಬಂದ ಉಪಚುನಾವಣೆ ನಂತರ ಜೆಡಿಎಸ್ ಸೇರಿ ರಾಜ್ಯ ಉಪಾಧ್ಯಕ್ಷರಾದರು.<br /> <br /> ಆದರೂ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದರು.ಮತ್ತೆ 2011ರಲ್ಲಿ ಎಂ.ಸಿ ಅಶ್ವತ್ಥ್ ರಾಜೀನಾಮೆಯಿಂದ ಎದುರಾದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಂ.ಲಿಂ.ನಾಗರಾಜು ಪರ ಮತಪ್ರಚಾರ ನಡೆಸಿದ್ದರು. ಆನಂತರ ವರದೇಗೌಡ ನೇಪಥ್ಯಕ್ಕೆ ಸರಿದಿದ್ದರು.<br /> <br /> `ದೇವೇಗೌಡರ ಮಾನಸ ಪುತ್ರ~:ಎಲ್ಲಾ ಕಾಲದಲ್ಲಿಯೂ ದೇವೇಗೌಡರನ್ನೇ ಬೆಂಬಲಿಸಿದ್ದ ವರದೇಗೌಡ ಅವರು ದೇವೇಗೌಡರ `ಮಾನಸಪುತ್ರ ಎಂದೇ ಪ್ರಸಿದ್ಧರಾಗಿದ್ದವರು. ದೇವೇಗೌಡರನ್ನು ಅವರು `ಅಪ್ಪಾಜಿ ಎಂತಲೇ ಕರೆಯುತ್ತಿದರು. <br /> <br /> 2001ರಲ್ಲಿ ತಾಲ್ಲೂಕಿನಲ್ಲಿ ನಡೆದ ವಿಠಲೇನಹಳ್ಳಿ ನೀರಾ ಚಳುವಳಿ ಸಂದರ್ಭದಲ್ಲಿ ಗೋಲಿಬಾರ್ ಘಟನೆ ಖಂಡಿಸಿ ದೇವೇಗೌಡರು ನಡೆಸಿದ ವಿಠಲೇನಹಳ್ಳಿಯಿಂದ ಬೆಂಗಳೂರುವರೆಗಿನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>