<p>ಇತ್ತೀಚೆಗೆ ಒಂದು ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿಯವರು ನನ್ನನ್ನು ಜೀವಂತವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ, ಮಾಟಮಂತ್ರಗಳ ಪ್ರಯೋಗ ನಡೆದಿದೆ’ ಎಂಬ ಹೇಳಿಕೆ ಕೊಟ್ಟಿದ್ದಾರೆ.<br /> <br /> ರಾಜ್ಯದ ಮುಖ್ಯಮಂತ್ರಿಯಾಗಿ ಮಾಟ- ಮಂತ್ರಗಳನ್ನು ನಂಬುತ್ತಾರೆಂದರೆ ಇಂಥ ಮುಖ್ಯಮಂತ್ರಿಯ ತಿಳುವಳಿಕೆಯ ಮಟ್ಟವನ್ನು ಪ್ರಶ್ನಿಸುವಂತಾಗಿರುವುದು ದುರದೃಷ್ಟಕರ. All God believers are barberians ಎನ್ನುವ Robert Ingersoll ನ ಮಾತನ್ನು ಅವರಿಗೆ ನೆನಪಿಸಿಕೊಡುತ್ತೇನೆ. ಈ ಜಗತ್ತಿನಲ್ಲಿ ದೇವರೂ ಇಲ್ಲ, ದೆವ್ವವೂ ಇಲ್ಲ, ಎಂಬ ಸತ್ಯವನ್ನು ಇವರು ಅರಿಯಲಿ. ಎಷ್ಟಾದರೂ ಇವರು ರಾಜಕಾರಣಿಯಲ್ಲವೇ? ಈ ಹೇಳಿಕೆಯ ಹಿಂದೆ ರಾಜಕೀಯ ಇದೆ. <br /> <br /> ಮಾಟ- ಮಂತ್ರದಿಂದ ಒಬ್ಬ ವ್ಯಕ್ತಿಯ ಜೀವ ಹರಣ ಮಾಡುವುದಾಗಿದ್ದರೆ ಈ ದೇಶದಲ್ಲಿ ಹಲವಾರು ಮಂತ್ರವಾದಿಗಳಿದ್ದಾರೆ. ಅವರೆಲ್ಲ ಈ ದೇಶದ ಸಮಸ್ಯೆಗಳನ್ನು ಮಾಟ- ಮಂತ್ರದಿಂದ ಪರಿಹರಿಸಬಹುದಾಗಿತ್ತು. ವಾಸ್ತವ ಹೀಗಿರುವಾಗ ಈ ಮುಖ್ಯಮಂತ್ರಿಗಳಿಗೇಕೆ ಈ ಮಾಟ- ಮಂತ್ರದ ಅಜ್ಞಾನ ಆವರಿಸಿದೆಯೋ ತಿಳಿಯದು.<br /> <br /> ಮಾಟ- ಮಂತ್ರಗಳನ್ನು ನಂಬುವ ಈ ದೇಶದ ಅಸಂಖ್ಯ ಮುಗ್ಧ ಜನರನ್ನು ವಂಚಿಸುವ ಹುನ್ನಾರವಿದೆಯೇ ಹೊರತು, ಮತ್ತೇನಲ್ಲ. ಇಂಥ ಹೇಳಿಕೆ ಕೊಡುವುದು ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ಇಂಥ ಹುಚ್ಚಾಟವನ್ನು ಬಿಟ್ಟು, ತಾವು ಈ ಸ್ಥಾನಕ್ಕೆ ಬರಲು ಜನರು ಮತ್ತು ಕಾರ್ಯಕರ್ತರು ಕಾರಣ ಎನ್ನುವ ಸತ್ಯವನ್ನು ಅರಿಯಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ಒಂದು ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿಯವರು ನನ್ನನ್ನು ಜೀವಂತವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ, ಮಾಟಮಂತ್ರಗಳ ಪ್ರಯೋಗ ನಡೆದಿದೆ’ ಎಂಬ ಹೇಳಿಕೆ ಕೊಟ್ಟಿದ್ದಾರೆ.<br /> <br /> ರಾಜ್ಯದ ಮುಖ್ಯಮಂತ್ರಿಯಾಗಿ ಮಾಟ- ಮಂತ್ರಗಳನ್ನು ನಂಬುತ್ತಾರೆಂದರೆ ಇಂಥ ಮುಖ್ಯಮಂತ್ರಿಯ ತಿಳುವಳಿಕೆಯ ಮಟ್ಟವನ್ನು ಪ್ರಶ್ನಿಸುವಂತಾಗಿರುವುದು ದುರದೃಷ್ಟಕರ. All God believers are barberians ಎನ್ನುವ Robert Ingersoll ನ ಮಾತನ್ನು ಅವರಿಗೆ ನೆನಪಿಸಿಕೊಡುತ್ತೇನೆ. ಈ ಜಗತ್ತಿನಲ್ಲಿ ದೇವರೂ ಇಲ್ಲ, ದೆವ್ವವೂ ಇಲ್ಲ, ಎಂಬ ಸತ್ಯವನ್ನು ಇವರು ಅರಿಯಲಿ. ಎಷ್ಟಾದರೂ ಇವರು ರಾಜಕಾರಣಿಯಲ್ಲವೇ? ಈ ಹೇಳಿಕೆಯ ಹಿಂದೆ ರಾಜಕೀಯ ಇದೆ. <br /> <br /> ಮಾಟ- ಮಂತ್ರದಿಂದ ಒಬ್ಬ ವ್ಯಕ್ತಿಯ ಜೀವ ಹರಣ ಮಾಡುವುದಾಗಿದ್ದರೆ ಈ ದೇಶದಲ್ಲಿ ಹಲವಾರು ಮಂತ್ರವಾದಿಗಳಿದ್ದಾರೆ. ಅವರೆಲ್ಲ ಈ ದೇಶದ ಸಮಸ್ಯೆಗಳನ್ನು ಮಾಟ- ಮಂತ್ರದಿಂದ ಪರಿಹರಿಸಬಹುದಾಗಿತ್ತು. ವಾಸ್ತವ ಹೀಗಿರುವಾಗ ಈ ಮುಖ್ಯಮಂತ್ರಿಗಳಿಗೇಕೆ ಈ ಮಾಟ- ಮಂತ್ರದ ಅಜ್ಞಾನ ಆವರಿಸಿದೆಯೋ ತಿಳಿಯದು.<br /> <br /> ಮಾಟ- ಮಂತ್ರಗಳನ್ನು ನಂಬುವ ಈ ದೇಶದ ಅಸಂಖ್ಯ ಮುಗ್ಧ ಜನರನ್ನು ವಂಚಿಸುವ ಹುನ್ನಾರವಿದೆಯೇ ಹೊರತು, ಮತ್ತೇನಲ್ಲ. ಇಂಥ ಹೇಳಿಕೆ ಕೊಡುವುದು ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ಇಂಥ ಹುಚ್ಚಾಟವನ್ನು ಬಿಟ್ಟು, ತಾವು ಈ ಸ್ಥಾನಕ್ಕೆ ಬರಲು ಜನರು ಮತ್ತು ಕಾರ್ಯಕರ್ತರು ಕಾರಣ ಎನ್ನುವ ಸತ್ಯವನ್ನು ಅರಿಯಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>