<p><span style="font-size: 26px;"><strong>ಗುಂಡ್ಲುಪೇಟೆ: </strong>ಪಟ್ಟಣವನ್ನು `ಮಾದರಿ ಪಟ್ಟಣ'ವಾಗಿ ಅಭಿವೃದ್ಧಿಪಡಿಸುವುದಾಗಿ ಸಚಿವ ಮಹದೇವಪ್ರಸಾದ್ ಭರವಸೆ ನೀಡಿದರು.</span><br /> ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಶನಿವಾರ ನಡೆದ ವಾಜಪೇಯಿ ನಗರ ನಿರ್ಗತಿಕ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ರೂ 1.20 ಲಕ್ಷ ಹಾಗೂ ಪುರಸಭೆ ವತಿಯಿಂದ 30 ಸಾವಿರ ರೂಪಾಯಿ ನೀಡಲಾಗುತ್ತಿದೆ. ಅಲ್ಲದೆ, ಬ್ಯಾಂಕ್ ಮೂಲಕ 50 ಸಾವಿರ ರೂಪಾಯಿ ಸಾಲ ನೀಡಲಾಗುತ್ತಿದ್ದು, ಇದನ್ನು ಫಲಾನುಭವಿಗಳೇ ತೀರಿಸಬೇಕು ಎಂದು ಹೇಳಿದರು.<br /> <br /> ಪಟ್ಟಣದ ಗೃಹಮಂಡಳಿ ನಿವೇಶನದ ಪಕ್ಕ 25 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ಪೈಕಿ 15 ಎಕರೆಯನ್ನು ಸರ್ಕಾರಿ ನಿವೇಶನವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು.<br /> <br /> ನಂಜನಗೂಡು ತಾಲ್ಲೂಕಿನ ದೇಬೂರು ವಿದ್ಯುತ್ ಮಾರ್ಗದಿಂದ ಪಟ್ಟಣಕ್ಕೆ 24 ತಾಸು ವಿದ್ಯುತ್ ನೀಡುವ ಯೋಜನೆಗೆ ರೂ 25 ಕೋಟಿ ಬಿಡುಗಡೆಯಾಗಿದೆ. ನಗರೋತ್ಥಾನ ಯೋಜನೆಯಡಿ ರೂ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಪಟ್ಟಣದ ಒಳಚರಂಡಿ ಮತ್ತು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.<br /> <br /> ಪುರಸಭಾ ಸದಸ್ಯರಾದ ರಮೇಶ್, ಜಿ.ಕೆ. ನಾಗೇಂದ್ರ, ವೆಂಕಟಾಚಲ, ಗೋವಿಂದ್ರಾಜನ್, ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಲೋಕೇಶ್, ಪುತ್ತನಪುರ ರಾಜಶೇಖರ್, ಪುರಸಭಾ ಮಾಜಿ ಸದಸ್ಯ ಮೋಹನ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಗುಂಡ್ಲುಪೇಟೆ: </strong>ಪಟ್ಟಣವನ್ನು `ಮಾದರಿ ಪಟ್ಟಣ'ವಾಗಿ ಅಭಿವೃದ್ಧಿಪಡಿಸುವುದಾಗಿ ಸಚಿವ ಮಹದೇವಪ್ರಸಾದ್ ಭರವಸೆ ನೀಡಿದರು.</span><br /> ಪಟ್ಟಣದ ಪುರಸಭಾ ಕಚೇರಿ ಆವರಣದಲ್ಲಿ ಶನಿವಾರ ನಡೆದ ವಾಜಪೇಯಿ ನಗರ ನಿರ್ಗತಿಕ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ರೂ 1.20 ಲಕ್ಷ ಹಾಗೂ ಪುರಸಭೆ ವತಿಯಿಂದ 30 ಸಾವಿರ ರೂಪಾಯಿ ನೀಡಲಾಗುತ್ತಿದೆ. ಅಲ್ಲದೆ, ಬ್ಯಾಂಕ್ ಮೂಲಕ 50 ಸಾವಿರ ರೂಪಾಯಿ ಸಾಲ ನೀಡಲಾಗುತ್ತಿದ್ದು, ಇದನ್ನು ಫಲಾನುಭವಿಗಳೇ ತೀರಿಸಬೇಕು ಎಂದು ಹೇಳಿದರು.<br /> <br /> ಪಟ್ಟಣದ ಗೃಹಮಂಡಳಿ ನಿವೇಶನದ ಪಕ್ಕ 25 ಎಕರೆ ಪ್ರದೇಶ ಗುರುತಿಸಲಾಗಿದೆ. ಈ ಪೈಕಿ 15 ಎಕರೆಯನ್ನು ಸರ್ಕಾರಿ ನಿವೇಶನವನ್ನಾಗಿ ಮಾರ್ಪಾಡು ಮಾಡಲಾಗುವುದು ಎಂದರು.<br /> <br /> ನಂಜನಗೂಡು ತಾಲ್ಲೂಕಿನ ದೇಬೂರು ವಿದ್ಯುತ್ ಮಾರ್ಗದಿಂದ ಪಟ್ಟಣಕ್ಕೆ 24 ತಾಸು ವಿದ್ಯುತ್ ನೀಡುವ ಯೋಜನೆಗೆ ರೂ 25 ಕೋಟಿ ಬಿಡುಗಡೆಯಾಗಿದೆ. ನಗರೋತ್ಥಾನ ಯೋಜನೆಯಡಿ ರೂ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಪಟ್ಟಣದ ಒಳಚರಂಡಿ ಮತ್ತು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.<br /> <br /> ಪುರಸಭಾ ಸದಸ್ಯರಾದ ರಮೇಶ್, ಜಿ.ಕೆ. ನಾಗೇಂದ್ರ, ವೆಂಕಟಾಚಲ, ಗೋವಿಂದ್ರಾಜನ್, ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ. ಲೋಕೇಶ್, ಪುತ್ತನಪುರ ರಾಜಶೇಖರ್, ಪುರಸಭಾ ಮಾಜಿ ಸದಸ್ಯ ಮೋಹನ್ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>