<p>ಗಾಂಧೀಜಿ ಅವರ ನಿಕಟವರ್ತಿಗಳಲ್ಲಿ ಅಬ್ದುಲ್ ಗಫಾರ್ ಖಾನ್ (1890–1988) ಒಬ್ಬರು. ಗಾಂಧಿ ಪ್ರತಿಪಾದಿಸಿದ ಅಹಿಂಸಾ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಅವರು ಆ ತತ್ವವನ್ನೇ ತಮ್ಮ ಬದುಕಿನ ತಳಹದಿಯನ್ನಾಗಿಸಿಕೊಂಡವರು. ‘ಗಡಿನಾಡ ಗಾಂಧಿ’ ಎನ್ನುವುದು ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ವಿಶೇಷಣ.<br /> <br /> ಭಾರತ–ಪಾಕಿಸ್ತಾನದ ವಿಭಜನೆಯನ್ನು ವಿರೋಧಿಸಿದ್ದ ಅವರು, ಎರಡೂ ದೇಶಗಳ ನಡುವೆ ಮಾನವೀಯತೆಯ ರಾಯಭಾರಿಯಂತೆ ಕೆಲಸ ಮಾಡಿದವರು. ಇಂಥ ಗಫಾರಜ್ಜ 1969ರ ಸೆಪ್ಟೆಂಬರ್ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ ಅವರಿಗೆ ಆತ್ಮೀಯ ಸ್ವಾಗತ ದೊರಕಿತ್ತು.<br /> <br /> ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರೊಂದಿಗೆ ಗಫಾರ್ ಖಾನ್ ತೆರೆದ ಕಾರಿನಲ್ಲಿ ನಗರದಲ್ಲಿ ಸಂಚರಿಸಿದ್ದರು. ತಮ್ಮ ಬೆಂಗಳೂರು ಭೇಟಿಯ ನೆನಪಿಗಾಗಿ ಅವರು ಲಾಲ್ಬಾಗ್ನಲ್ಲಿ ಸಸಿಯೊಂದನ್ನು ನೆಡುತ್ತಿರುವ ಈ ಛಾಯಾಚಿತ್ರ, ಎಲ್ಲ ಕಾಲಕ್ಕೂ ಅಗತ್ಯವಾದ ಮನುಷ್ಯತ್ವದ ಚಿಗುರನ್ನೇ ನೆಡುತ್ತಿರುವಂತೆ ಕಾಣಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಾಂಧೀಜಿ ಅವರ ನಿಕಟವರ್ತಿಗಳಲ್ಲಿ ಅಬ್ದುಲ್ ಗಫಾರ್ ಖಾನ್ (1890–1988) ಒಬ್ಬರು. ಗಾಂಧಿ ಪ್ರತಿಪಾದಿಸಿದ ಅಹಿಂಸಾ ತತ್ವದಲ್ಲಿ ನಂಬಿಕೆ ಇಟ್ಟಿದ್ದ ಅವರು ಆ ತತ್ವವನ್ನೇ ತಮ್ಮ ಬದುಕಿನ ತಳಹದಿಯನ್ನಾಗಿಸಿಕೊಂಡವರು. ‘ಗಡಿನಾಡ ಗಾಂಧಿ’ ಎನ್ನುವುದು ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ವಿಶೇಷಣ.<br /> <br /> ಭಾರತ–ಪಾಕಿಸ್ತಾನದ ವಿಭಜನೆಯನ್ನು ವಿರೋಧಿಸಿದ್ದ ಅವರು, ಎರಡೂ ದೇಶಗಳ ನಡುವೆ ಮಾನವೀಯತೆಯ ರಾಯಭಾರಿಯಂತೆ ಕೆಲಸ ಮಾಡಿದವರು. ಇಂಥ ಗಫಾರಜ್ಜ 1969ರ ಸೆಪ್ಟೆಂಬರ್ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದಾಗ ಅವರಿಗೆ ಆತ್ಮೀಯ ಸ್ವಾಗತ ದೊರಕಿತ್ತು.<br /> <br /> ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರೊಂದಿಗೆ ಗಫಾರ್ ಖಾನ್ ತೆರೆದ ಕಾರಿನಲ್ಲಿ ನಗರದಲ್ಲಿ ಸಂಚರಿಸಿದ್ದರು. ತಮ್ಮ ಬೆಂಗಳೂರು ಭೇಟಿಯ ನೆನಪಿಗಾಗಿ ಅವರು ಲಾಲ್ಬಾಗ್ನಲ್ಲಿ ಸಸಿಯೊಂದನ್ನು ನೆಡುತ್ತಿರುವ ಈ ಛಾಯಾಚಿತ್ರ, ಎಲ್ಲ ಕಾಲಕ್ಕೂ ಅಗತ್ಯವಾದ ಮನುಷ್ಯತ್ವದ ಚಿಗುರನ್ನೇ ನೆಡುತ್ತಿರುವಂತೆ ಕಾಣಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>