<p><strong>ಬಾಗಲಕೋಟೆ:</strong> ಪ್ರತಿಯೊಬ್ಬರು ಮಾನವೀಯ ಮೌಲ್ಯ ಅಳವಡಿಸಿಕೊಂಡು ವಿಶ್ವದಲ್ಲಿ ಶಾಂತಿ ನೆಲಸಲು ಅನುವು ಮಾಡಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. ವಿದ್ಯಾಗಿರಿಯ ಗೌರಿಶಂಕರ ಮಂಗಳ ಕಾರ್ಯಾಲಯದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಮತ್ತು ವರದಾನಿ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಜಗತ್ತಿನಲ್ಲಿ ಯಾರೊಬ್ಬರೂ ಶಾಶ್ವರವಲ್ಲ. ಆದ್ದರಿಂದ ಆತ್ಮಾವಲೋಕನ ಮಾಡಿಕೊಂಡು ಜೀವನವನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಹೇಳಿದರು. ಮೌಂಟ್ ಅಬುನಿಂದ ಆಗಮಿಸಿದ್ದ ರಾಜ ಯೋಗಿ ಮೃತ್ಯುಂಜಯ ಬಾಯಿಜಿ ಮಾತನಾಡಿ, ಭಯೋತ್ಪಾದನೆಯಿಂದ ಮಾನುಷ್ಯನ ಬದುಕು ಅಸಹನೀಯವಾಗಿದೆ ಎಂದರು.<br /> <br /> ಸಮಾಜದಲ್ಲಿ ಅಪರಾಧ ವೃದ್ಧಿಯಾಗಿತ್ತದೆ ಅಲ್ಲದೇ ಅನಾರೋಗ್ಯವೂ ಹೆಚ್ಚುತ್ತಿದೆ. ಪರಿಸರ ಮಾಲಿನ್ಯವಾಗುತ್ತಿದೆ ಎಂದ ಅವರು, ಸ್ವಾಸ್ಥ್ಯ ಸಮಾಜ ನಿರ್ಮಾಣ ಇಂದಿನ ಅಗತ್ಯ ಎಂದರು.<br /> <br /> ವಿಶ್ವದ 136 ರಾಷ್ಟ್ರಗಳಲ್ಲಿ ಪ್ರಜಾಪಿತಾ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದಲ್ಲಿ ಜ್ಞಾನ, ಯೋಗ, ಸೇವೆ ಮತ್ತು ಶಾಂತಿ ನೆಲೆಸಲು ಶ್ರಮಿಸಲಾಗುತ್ತಿದೆ. ಬ್ರಹ್ಮ ಕುಮಾರ ಮತ್ತು ಕುಮಾರಿಯರಿಗೆ ಯಾವುದೇ ಜಾತಿ, ಧರ್ಮವಿಲ್ಲ ಕೇವಲ ಮನುಷ್ಯ ಜಾತಿ ಮಾತ್ರ ಎಂದರು. <br /> <br /> ಕಾರ್ಯಕ್ರಮದಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಟೀಕನಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಳ ಗಾವಿ ಈಶ್ವರೀಯ ಸೇವಾಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನ ಅಂಬಿಕಾಜಿ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಪದ್ಮಾಜಿ, ವಾಸಿಂಗ್ಟನ್ ಡಿ.ಸಿ.ಯ ಜನ್ನಾ, ಆಸ್ಟ್ರೇಲಿಯಾದ ಪ್ರಾಂಕ್ ಹಬರ್ಡ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಪ್ರತಿಯೊಬ್ಬರು ಮಾನವೀಯ ಮೌಲ್ಯ ಅಳವಡಿಸಿಕೊಂಡು ವಿಶ್ವದಲ್ಲಿ ಶಾಂತಿ ನೆಲಸಲು ಅನುವು ಮಾಡಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು. ವಿದ್ಯಾಗಿರಿಯ ಗೌರಿಶಂಕರ ಮಂಗಳ ಕಾರ್ಯಾಲಯದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಮತ್ತು ವರದಾನಿ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಜಗತ್ತಿನಲ್ಲಿ ಯಾರೊಬ್ಬರೂ ಶಾಶ್ವರವಲ್ಲ. ಆದ್ದರಿಂದ ಆತ್ಮಾವಲೋಕನ ಮಾಡಿಕೊಂಡು ಜೀವನವನ್ನು ಉನ್ನತೀಕರಿಸಿಕೊಳ್ಳಬೇಕು ಎಂದು ಹೇಳಿದರು. ಮೌಂಟ್ ಅಬುನಿಂದ ಆಗಮಿಸಿದ್ದ ರಾಜ ಯೋಗಿ ಮೃತ್ಯುಂಜಯ ಬಾಯಿಜಿ ಮಾತನಾಡಿ, ಭಯೋತ್ಪಾದನೆಯಿಂದ ಮಾನುಷ್ಯನ ಬದುಕು ಅಸಹನೀಯವಾಗಿದೆ ಎಂದರು.<br /> <br /> ಸಮಾಜದಲ್ಲಿ ಅಪರಾಧ ವೃದ್ಧಿಯಾಗಿತ್ತದೆ ಅಲ್ಲದೇ ಅನಾರೋಗ್ಯವೂ ಹೆಚ್ಚುತ್ತಿದೆ. ಪರಿಸರ ಮಾಲಿನ್ಯವಾಗುತ್ತಿದೆ ಎಂದ ಅವರು, ಸ್ವಾಸ್ಥ್ಯ ಸಮಾಜ ನಿರ್ಮಾಣ ಇಂದಿನ ಅಗತ್ಯ ಎಂದರು.<br /> <br /> ವಿಶ್ವದ 136 ರಾಷ್ಟ್ರಗಳಲ್ಲಿ ಪ್ರಜಾಪಿತಾ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದಲ್ಲಿ ಜ್ಞಾನ, ಯೋಗ, ಸೇವೆ ಮತ್ತು ಶಾಂತಿ ನೆಲೆಸಲು ಶ್ರಮಿಸಲಾಗುತ್ತಿದೆ. ಬ್ರಹ್ಮ ಕುಮಾರ ಮತ್ತು ಕುಮಾರಿಯರಿಗೆ ಯಾವುದೇ ಜಾತಿ, ಧರ್ಮವಿಲ್ಲ ಕೇವಲ ಮನುಷ್ಯ ಜಾತಿ ಮಾತ್ರ ಎಂದರು. <br /> <br /> ಕಾರ್ಯಕ್ರಮದಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಟೀಕನಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಬೆಳ ಗಾವಿ ಈಶ್ವರೀಯ ಸೇವಾಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನ ಅಂಬಿಕಾಜಿ, ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಪದ್ಮಾಜಿ, ವಾಸಿಂಗ್ಟನ್ ಡಿ.ಸಿ.ಯ ಜನ್ನಾ, ಆಸ್ಟ್ರೇಲಿಯಾದ ಪ್ರಾಂಕ್ ಹಬರ್ಡ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>