<p><strong>ಬೆಂಗಳೂರು</strong>: ‘ಮಾನಸಿಕ ರೋಗಗಳ ಕುರಿತು ಸಮಾಜದಲ್ಲಿ ಆಳವಾಗಿ ಬೇರೂರಿರುವ ಕಳಂಕ ಭಾವನೆಯನ್ನು ತೊಡೆದು ಹಾಕಲು ಪ್ರಜ್ಞಾವಂತರು ಶ್ರಮಿಸಬೇಕಿದೆ’ ಎಂದು ಇನ್ಫೋಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಕರೆ ನೀಡಿದರು.<br /> <br /> ನಿಮ್ಹಾನ್ಸ್ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸಂಸ್ಥಾ ದಿನ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> ‘ಸಮಾಜದಲ್ಲಿ ಅವಜ್ಞೆಯಿಂದ ಕಾಣುತ್ತಿರುವ ಮಾನಸಿಕ ರೋಗಿಗಳಿಗೆ ಚಿಕಿತ್ಸೆಯ ನಂತರ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ. ಮಾನಸಿಕ ರೋಗಿಗಳ ಕುಟುಂಬ ವರ್ಗಕ್ಕೆ ರೋಗಿಗಳ ಪರಿಸ್ಥಿತಿ ಮತ್ತು ಅವರ ಜತೆ ವರ್ತಿಸುವ ಬಗೆಯನ್ನು ಆಸ್ಪತ್ರೆಗಳೇ ಕಲಿಸಬೇಕಿದೆ’ ಎಂದು ತಿಳಿಸಿದರು.<br /> <br /> ‘ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದ್ರೋಗವಿದ್ದಂತೆ ಮಾನಸಿಕ ಅಸ್ವಸ್ಥತೆ ಕೂಡ ಒಂದು ಸಾಮಾನ್ಯ ರೋಗ ಎಂಬ ಅರಿವನ್ನು ಮೂಡಿಸಬೇಕಿದೆ. ಮಾನಸಿಕ ರೋಗವನ್ನು ಕೂಡ ಗುಣಪಡಿಸಲು ಸಾಧ್ಯ ಎಂಬ ಭಾವನೆಯನ್ನು ಜನರಲ್ಲಿ ಬಿತ್ತಬೇಕಿದೆ’ ಎಂದರು. <br /> <br /> ‘ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ರೋಗಿಗಳ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಮನೋವಿಜ್ಞಾನ ಕುರಿತು ಆಸಕ್ತಿ ತಾಳಬಲ್ಲ ಯುವಪಡೆ ಸೃಷ್ಟಿಯಾಗಬೇಕಿದೆ’ ಎಂದು ಹೇಳಿದರು. <br /> <br /> ‘ಆಧುನಿಕ ಕಾಲದ ಮಾನಸಿಕ ಒತ್ತಡಗಳ ಕುರಿತು ಪರಿಣಾಮಕಾರಿ ಚಿಕಿತ್ಸೆ ನೀಡುವಂತೆ ಹಾಗೂ ಹೊಸ ರೋಗಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಗುಣಪಡಿಸಲು ಸಾಧ್ಯವಾಗುವಂತೆ ಮಾನಸಿಕ ಆರೋಗ್ಯ ಕ್ಷೇತ್ರ ರೂಪುಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು. <br /> <br /> ‘ನಿಮ್ಹಾನ್ಸ್ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಭಾರತೀಯ ಮಾನಸಿಕ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ’ ಎಂದರು.<br /> <br /> ಕುಲಪತಿ ಪ್ರೊ. ಪಿ. ಸತೀಶ್ ಚಂದ್ರ ಮಾತನಾಡಿ ‘ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಸೇವೆ ನೀಡಲು ಸಂಸ್ಥೆ ಸದಾ ಸಿದ್ಧವಿದೆ. ಕಾರ್ಪೊರೇಟ್ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಸಂಸ್ಥೆಯ ಜತೆ ಕೈ ಜೋಡಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.<br /> <br /> ‘ಸರ್ ಮಿರ್ಜಾ ಇಸ್ಮಾಯಿಲ್ ಕಟ್ಟಿದ ಸಂಸ್ಥೆಯಲ್ಲಿ ಹಿಂದಿನ ಪರಂಪರೆ ಉಳಿಯಬೇಕೆಂಬ ಆಶಯವಿದೆ. ಆವರಣದಲ್ಲಿರುವ ಉದ್ಯಾನ ಹಾಗೂ ಕಟ್ಟಡಗಳನ್ನು ಸಂರಕ್ಷಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.<br /> <br /> ವೈದ್ಯಕೀಯೋತ್ತರ ಮತ್ತು ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಪ್ರಾಧ್ಯಾಪಕರಾದ ಪ್ರೊ. ವಿ. ರವಿ, ಪ್ರೊ. ಜಿ.ಎಸ್. ಉಮೇಶ್ವರ ರಾವ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಮಾನಸಿಕ ರೋಗಗಳ ಕುರಿತು ಸಮಾಜದಲ್ಲಿ ಆಳವಾಗಿ ಬೇರೂರಿರುವ ಕಳಂಕ ಭಾವನೆಯನ್ನು ತೊಡೆದು ಹಾಕಲು ಪ್ರಜ್ಞಾವಂತರು ಶ್ರಮಿಸಬೇಕಿದೆ’ ಎಂದು ಇನ್ಫೋಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಕರೆ ನೀಡಿದರು.<br /> <br /> ನಿಮ್ಹಾನ್ಸ್ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸಂಸ್ಥಾ ದಿನ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> ‘ಸಮಾಜದಲ್ಲಿ ಅವಜ್ಞೆಯಿಂದ ಕಾಣುತ್ತಿರುವ ಮಾನಸಿಕ ರೋಗಿಗಳಿಗೆ ಚಿಕಿತ್ಸೆಯ ನಂತರ ಆತ್ಮವಿಶ್ವಾಸ ತುಂಬುವ ಅವಶ್ಯಕತೆ ಇದೆ. ಮಾನಸಿಕ ರೋಗಿಗಳ ಕುಟುಂಬ ವರ್ಗಕ್ಕೆ ರೋಗಿಗಳ ಪರಿಸ್ಥಿತಿ ಮತ್ತು ಅವರ ಜತೆ ವರ್ತಿಸುವ ಬಗೆಯನ್ನು ಆಸ್ಪತ್ರೆಗಳೇ ಕಲಿಸಬೇಕಿದೆ’ ಎಂದು ತಿಳಿಸಿದರು.<br /> <br /> ‘ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದ್ರೋಗವಿದ್ದಂತೆ ಮಾನಸಿಕ ಅಸ್ವಸ್ಥತೆ ಕೂಡ ಒಂದು ಸಾಮಾನ್ಯ ರೋಗ ಎಂಬ ಅರಿವನ್ನು ಮೂಡಿಸಬೇಕಿದೆ. ಮಾನಸಿಕ ರೋಗವನ್ನು ಕೂಡ ಗುಣಪಡಿಸಲು ಸಾಧ್ಯ ಎಂಬ ಭಾವನೆಯನ್ನು ಜನರಲ್ಲಿ ಬಿತ್ತಬೇಕಿದೆ’ ಎಂದರು. <br /> <br /> ‘ಗ್ರಾಮೀಣ ಪ್ರದೇಶದಲ್ಲಿ ಮಾನಸಿಕ ರೋಗಿಗಳ ಸ್ಥಿತಿ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ಮನೋವಿಜ್ಞಾನ ಕುರಿತು ಆಸಕ್ತಿ ತಾಳಬಲ್ಲ ಯುವಪಡೆ ಸೃಷ್ಟಿಯಾಗಬೇಕಿದೆ’ ಎಂದು ಹೇಳಿದರು. <br /> <br /> ‘ಆಧುನಿಕ ಕಾಲದ ಮಾನಸಿಕ ಒತ್ತಡಗಳ ಕುರಿತು ಪರಿಣಾಮಕಾರಿ ಚಿಕಿತ್ಸೆ ನೀಡುವಂತೆ ಹಾಗೂ ಹೊಸ ರೋಗಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಗುಣಪಡಿಸಲು ಸಾಧ್ಯವಾಗುವಂತೆ ಮಾನಸಿಕ ಆರೋಗ್ಯ ಕ್ಷೇತ್ರ ರೂಪುಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು. <br /> <br /> ‘ನಿಮ್ಹಾನ್ಸ್ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಭಾರತೀಯ ಮಾನಸಿಕ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ’ ಎಂದರು.<br /> <br /> ಕುಲಪತಿ ಪ್ರೊ. ಪಿ. ಸತೀಶ್ ಚಂದ್ರ ಮಾತನಾಡಿ ‘ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಸೇವೆ ನೀಡಲು ಸಂಸ್ಥೆ ಸದಾ ಸಿದ್ಧವಿದೆ. ಕಾರ್ಪೊರೇಟ್ ಸಂಸ್ಥೆಗಳು, ಖಾಸಗಿ ಕಂಪೆನಿಗಳು ಸಂಸ್ಥೆಯ ಜತೆ ಕೈ ಜೋಡಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.<br /> <br /> ‘ಸರ್ ಮಿರ್ಜಾ ಇಸ್ಮಾಯಿಲ್ ಕಟ್ಟಿದ ಸಂಸ್ಥೆಯಲ್ಲಿ ಹಿಂದಿನ ಪರಂಪರೆ ಉಳಿಯಬೇಕೆಂಬ ಆಶಯವಿದೆ. ಆವರಣದಲ್ಲಿರುವ ಉದ್ಯಾನ ಹಾಗೂ ಕಟ್ಟಡಗಳನ್ನು ಸಂರಕ್ಷಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.<br /> <br /> ವೈದ್ಯಕೀಯೋತ್ತರ ಮತ್ತು ಡಿಪ್ಲೊಮಾ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಪ್ರಾಧ್ಯಾಪಕರಾದ ಪ್ರೊ. ವಿ. ರವಿ, ಪ್ರೊ. ಜಿ.ಎಸ್. ಉಮೇಶ್ವರ ರಾವ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>