<p><strong>ನವದೆಹಲಿ:</strong> ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿರುವ ಮನವಿಯನ್ನು ತಾನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಸೋಮವಾರ ಸುಳಿವು ನೀಡಿದೆ.</p>.<p>ಭಾರತದಲ್ಲಿ ತನ್ನ ತಂಡ ಆಡುವುದಕ್ಕೆ ಸಂಬಂಧಿಸಿ ಭದ್ರತೆ ವ್ಯವಸ್ಥೆಯ ಬಗ್ಗೆ ಅಲ್ಲಿನ ಮಂಡಳಿ ವ್ಯಕ್ತಪಡಿಸಿರುವ ಕಳವಳವು ಪರಿಣಾಮಕಾರಿ ಮಟ್ಟದಲ್ಲಿಲ್ಲ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.</p>.<p>ಫೆಬ್ರುವರಿ 7ರಂದು ಆರಂಭವಾಗುವ ಟೂರ್ನಿಯಲ್ಲಿ ಪಾಲ್ಗೊಂಡಲ್ಲಿ ಬಾಂಗ್ಲಾದೇಶ ತಂಡಕ್ಕೆ ನಿರ್ದಿಷ್ಟ ಅಥವಾ ನೇರ ಬೆದರಿಕೆಯಂಥ ಅಪಾಯ ಕಾಣಿಸುತ್ತಿಲ್ಲ ಎಂಬ ಅಂಶವು ಸುರಕ್ಷತೆಗೆ ಸಂಬಂಧಿಸಿ ಐಸಿಸಿಯು ಸಿದ್ಧಪಡಿಸಿದ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.</p>.<p>ಭದ್ರತೆಗೆ ಸಂಬಂಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿರುವ ತಜ್ಞರಿಂದ ಐಸಿಸಿಯು ಸ್ವತಂತ್ರ್ಯವಾಗಿ ಮೌಲ್ಯಮಾಪನ ನಡೆಸಿದೆ. ಬಾಂಗ್ಲಾದೇಶ ತಂಡವು ಭಾರತದಲ್ಲಿ ಆಡುವುದಕ್ಕೆ ಯಾವುದೇ ಭದ್ರತಾ ಸಮಸ್ಯೆ ಎದುರಾಗದು ಎಂದು ತಜ್ಞರ ತಂಡ ತೀರ್ಮಾನಕ್ಕೆ ಬಂದಿದೆ’ ಎಂದು ಐಸಿಸಿಯ ಮೂಲವು ಹೇಳಿದೆ.</p>.<p>ಸಂಪೂರ್ಣ ಸುಳ್ಳು: ಭಾರತದಲ್ಲಿ ಆಡುವ ಕುರಿತಂತದೆ ಬಿಸಿಸಿ ವ್ಯಕ್ತಪಡಿಸಿರುವ ನಿರ್ದಿಷ್ಟ ಭದ್ರತಾ ಕಳವಳವನ್ನು ಐಸಿಸಿ ಒಪ್ಪಿಕೊಂಡಿದೆ ಎಂದು ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಹೇಳಿದ್ದರು. ಆದರೆ ಅವರ ಹೇಳಿಕೆಯ ಸಂಪೂರ್ಣ ಸುಳ್ಳು ಎಂದು ಐಸಿಸಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮಾಡಿರುವ ಮನವಿಯನ್ನು ತಾನು ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಸೋಮವಾರ ಸುಳಿವು ನೀಡಿದೆ.</p>.<p>ಭಾರತದಲ್ಲಿ ತನ್ನ ತಂಡ ಆಡುವುದಕ್ಕೆ ಸಂಬಂಧಿಸಿ ಭದ್ರತೆ ವ್ಯವಸ್ಥೆಯ ಬಗ್ಗೆ ಅಲ್ಲಿನ ಮಂಡಳಿ ವ್ಯಕ್ತಪಡಿಸಿರುವ ಕಳವಳವು ಪರಿಣಾಮಕಾರಿ ಮಟ್ಟದಲ್ಲಿಲ್ಲ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.</p>.<p>ಫೆಬ್ರುವರಿ 7ರಂದು ಆರಂಭವಾಗುವ ಟೂರ್ನಿಯಲ್ಲಿ ಪಾಲ್ಗೊಂಡಲ್ಲಿ ಬಾಂಗ್ಲಾದೇಶ ತಂಡಕ್ಕೆ ನಿರ್ದಿಷ್ಟ ಅಥವಾ ನೇರ ಬೆದರಿಕೆಯಂಥ ಅಪಾಯ ಕಾಣಿಸುತ್ತಿಲ್ಲ ಎಂಬ ಅಂಶವು ಸುರಕ್ಷತೆಗೆ ಸಂಬಂಧಿಸಿ ಐಸಿಸಿಯು ಸಿದ್ಧಪಡಿಸಿದ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.</p>.<p>ಭದ್ರತೆಗೆ ಸಂಬಂಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿರುವ ತಜ್ಞರಿಂದ ಐಸಿಸಿಯು ಸ್ವತಂತ್ರ್ಯವಾಗಿ ಮೌಲ್ಯಮಾಪನ ನಡೆಸಿದೆ. ಬಾಂಗ್ಲಾದೇಶ ತಂಡವು ಭಾರತದಲ್ಲಿ ಆಡುವುದಕ್ಕೆ ಯಾವುದೇ ಭದ್ರತಾ ಸಮಸ್ಯೆ ಎದುರಾಗದು ಎಂದು ತಜ್ಞರ ತಂಡ ತೀರ್ಮಾನಕ್ಕೆ ಬಂದಿದೆ’ ಎಂದು ಐಸಿಸಿಯ ಮೂಲವು ಹೇಳಿದೆ.</p>.<p>ಸಂಪೂರ್ಣ ಸುಳ್ಳು: ಭಾರತದಲ್ಲಿ ಆಡುವ ಕುರಿತಂತದೆ ಬಿಸಿಸಿ ವ್ಯಕ್ತಪಡಿಸಿರುವ ನಿರ್ದಿಷ್ಟ ಭದ್ರತಾ ಕಳವಳವನ್ನು ಐಸಿಸಿ ಒಪ್ಪಿಕೊಂಡಿದೆ ಎಂದು ಬಾಂಗ್ಲಾದೇಶ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಹೇಳಿದ್ದರು. ಆದರೆ ಅವರ ಹೇಳಿಕೆಯ ಸಂಪೂರ್ಣ ಸುಳ್ಳು ಎಂದು ಐಸಿಸಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>