<p>ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸೂಪರ್ ಮಾರ್ಕೆಟ್ವರೆಗಿನ ರಸ್ತೆ ವಿಸ್ತರಣೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. <br /> <br /> ಕೇಂದ್ರ ಬಸ್ ನಿಲ್ದಾಣದ ಹತ್ತಿರ ಕೆಲ ಕಟ್ಟಡ, ಅಂಗಡಿ ಮುಂಗಟ್ಟುಗಳ ಎದುರಿನ ಕಟ್ಟೆ ತೆರವುಗೊಳಿಸಲಾಗಿದೆ. ನಗರಸಭೆ, ತಹಸೀಲ್ದಾರ ಕಚೇರಿ ಕಂಪೌಂಡ್ ಕಟ್ಟಡ, ಡಿಡಿಪಿಐ ಕಚೇರಿ ಕಂಪೌಂಡ್ ಕಟ್ಟಡಗಳೂ ತೆರವುಗೊಂಡಿವೆ.<br /> <br /> ಈ ತೆರವುಗೊಂಡ ಸ್ಥಳದಲ್ಲಿ ರಸ್ತೆ ವಿಸ್ತರಣೆ ಕಾರ್ಯವನ್ನು 2-3 ದಿನಗಳಿಂದ ಜೆಸಿಬಿ ನಡೆಸಿದ್ದವು. ಸೋಮವಾರ ಮುಂಜಾನೆಯಿಂದ ಈ ರಸ್ತೆಗೆ ಡಾಂಬರೀಕರಣ ಕಾರ್ಯ ಶುರುವಾಗಿದೆ. ಸದರ ಬಜಾರ ಪೊಲೀಸ್ ಠಾಣೆ ಸಿಪಿಐ ಪಾಷಾ, ಇನ್ಸ್ಪೆಕ್ಟರ್ ದಯಾನಂದ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.<br /> <br /> ಇಕ್ಕಟ್ಟಾದ ಮತ್ತು ಹದಗೆಟ್ಟ ರಸ್ತೆಯಲ್ಲಿಯೇ ಸಂಚರಿಸಿ ಸುಸ್ತಾದ ಜನತೆ ರಸ್ತೆ ಡಾಂಬರೀಕರಣ ಕಾಮಗಾರಿ ಕಂಡು ಅಬ್ಬಾ ಕೊನೆಗೂ ರಸ್ತೆ ಕೆಲ್ಸಾ ನಡೆದಿದೆಯಲ್ಲ ಎಂದು ವೀಕ್ಷಿಸಿದರು.<br /> <br /> ಮಾರ್ಕಿಂಗ್: ಒಂದೆರೆಡು ದಿನದ ಹಿಂದೆ ಜೈಲ್ ಎದುರಿನ ರಸ್ತೆ ವಿಸ್ತರಣೆ ಕುರಿತು ಜಾಗ ಗುರುತಿಸುವ (ಮಾರ್ಕಿಂಗ್) ಕಾರ್ಯವನ್ನು ನಗರಸಭೆ ಅಧಿಕಾರಿಗಳು ಕೈಗೊಂಡಿದ್ದರು. ಸೋಮವಾರ ಅದರ ಮುಂದಿನ ಭಾಗವಾಗಿ ಏಕ ಮಿನಾರ್ ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ ಮಾರ್ಕಿಂಗ್ ಕಾರ್ಯ ನಡೆಸಿದರು.<br /> <br /> ನಗರಸಭೆಯವರು ಏಕಾಏಕಿಯಾಗಿ ಬಂದು ಟೇಪ್ ಹಿಡಿದು ಅಳತೆ ಮಾಡುವುದು, ಮಾರ್ಕ್ ಹಾಕುತ್ತಿದ್ದುದನ್ನು ಕಂಡ ರಸ್ತೆ ಅಕ್ಕಪಕ್ಕದ ಅಂಗಡಿಗಳ ಮಾಲೀಕರು, ಕಟ್ಟಡ ಮಾಲೀಕರು ಈ ಬಗ್ಗೆ ಚರ್ಚಿಸಿದರು.<br /> <br /> ಈ ರಸ್ತೆ `50~ ಅಡಿ ಅಗಲ ಆಗಬೇಕು. ಹೀಗಾಗಿ ಮಾರ್ಕಿಂಗ್ ಮಾಡಲಾಗುತ್ತಿದೆ. ರಸ್ತೆಯ ಮಧ್ಯೆ ಭಾಗದಿಂದ ಎಡಕ್ಕೆ 25 ಅಡಿ ಮತ್ತು ಬಲಕ್ಕೆ 25 ಅಡಿ ವಿಸ್ತರಣೆ ನಡೆಯಲಿದೆ ಎಂದು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ವಿವರಣೆ ನೀಡಿ ಮಾರ್ಕಿಂಗ್ ಕಾರ್ಯ ಮುಂದುವರಿಸಿದರು. ಈ ಮಾರ್ಕಿಂಗ್ ಕಾರ್ಯ ಸೂಪರ್ ಮಾರ್ಕೆಟ್ವರೆಗೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.<br /> <br /> ಶೆಡ್ ತೆರವಿಗೆ ಆಕ್ರೋಶ: ತಹಸೀಲ್ದಾರ್ ಕಚೇರಿ ಪಕ್ಕ ಇರುವ ಬೆರಳಚ್ಚುಗಾರರ ಶೆಡ್ ತೆರವುಗೊಳಿಸುವ ನಗರಸಭೆ ಮತ್ತು ಜಿಲ್ಲಾಡಳಿದ ಕ್ರಮವನ್ನು ಬೆರಳಚ್ಚುಗಾರರು ಖಂಡಿಸಿದರು.<br /> <br /> ರಸ್ತೆ ವಿಸ್ತರಣೆಗೆ ಈಗಾಗಲೇ 7-8 ಶೆಡ್ ತೆರವುಗೊಳಿಸಲಾಗಿದೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಈಗ ಇನ್ನುಳಿದ ಶೆಡ್ಗಳನ್ನು ತೆರವುಗೊಳಿಸಿದರೆ ಕಷ್ಟ ಎಂದು ಸಮಸ್ಯೆ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಸೂಪರ್ ಮಾರ್ಕೆಟ್ವರೆಗಿನ ರಸ್ತೆ ವಿಸ್ತರಣೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. <br /> <br /> ಕೇಂದ್ರ ಬಸ್ ನಿಲ್ದಾಣದ ಹತ್ತಿರ ಕೆಲ ಕಟ್ಟಡ, ಅಂಗಡಿ ಮುಂಗಟ್ಟುಗಳ ಎದುರಿನ ಕಟ್ಟೆ ತೆರವುಗೊಳಿಸಲಾಗಿದೆ. ನಗರಸಭೆ, ತಹಸೀಲ್ದಾರ ಕಚೇರಿ ಕಂಪೌಂಡ್ ಕಟ್ಟಡ, ಡಿಡಿಪಿಐ ಕಚೇರಿ ಕಂಪೌಂಡ್ ಕಟ್ಟಡಗಳೂ ತೆರವುಗೊಂಡಿವೆ.<br /> <br /> ಈ ತೆರವುಗೊಂಡ ಸ್ಥಳದಲ್ಲಿ ರಸ್ತೆ ವಿಸ್ತರಣೆ ಕಾರ್ಯವನ್ನು 2-3 ದಿನಗಳಿಂದ ಜೆಸಿಬಿ ನಡೆಸಿದ್ದವು. ಸೋಮವಾರ ಮುಂಜಾನೆಯಿಂದ ಈ ರಸ್ತೆಗೆ ಡಾಂಬರೀಕರಣ ಕಾರ್ಯ ಶುರುವಾಗಿದೆ. ಸದರ ಬಜಾರ ಪೊಲೀಸ್ ಠಾಣೆ ಸಿಪಿಐ ಪಾಷಾ, ಇನ್ಸ್ಪೆಕ್ಟರ್ ದಯಾನಂದ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.<br /> <br /> ಇಕ್ಕಟ್ಟಾದ ಮತ್ತು ಹದಗೆಟ್ಟ ರಸ್ತೆಯಲ್ಲಿಯೇ ಸಂಚರಿಸಿ ಸುಸ್ತಾದ ಜನತೆ ರಸ್ತೆ ಡಾಂಬರೀಕರಣ ಕಾಮಗಾರಿ ಕಂಡು ಅಬ್ಬಾ ಕೊನೆಗೂ ರಸ್ತೆ ಕೆಲ್ಸಾ ನಡೆದಿದೆಯಲ್ಲ ಎಂದು ವೀಕ್ಷಿಸಿದರು.<br /> <br /> ಮಾರ್ಕಿಂಗ್: ಒಂದೆರೆಡು ದಿನದ ಹಿಂದೆ ಜೈಲ್ ಎದುರಿನ ರಸ್ತೆ ವಿಸ್ತರಣೆ ಕುರಿತು ಜಾಗ ಗುರುತಿಸುವ (ಮಾರ್ಕಿಂಗ್) ಕಾರ್ಯವನ್ನು ನಗರಸಭೆ ಅಧಿಕಾರಿಗಳು ಕೈಗೊಂಡಿದ್ದರು. ಸೋಮವಾರ ಅದರ ಮುಂದಿನ ಭಾಗವಾಗಿ ಏಕ ಮಿನಾರ್ ರಸ್ತೆಯ ಅಕ್ಕಪಕ್ಕದ ಕಟ್ಟಡಗಳಿಗೆ ಮಾರ್ಕಿಂಗ್ ಕಾರ್ಯ ನಡೆಸಿದರು.<br /> <br /> ನಗರಸಭೆಯವರು ಏಕಾಏಕಿಯಾಗಿ ಬಂದು ಟೇಪ್ ಹಿಡಿದು ಅಳತೆ ಮಾಡುವುದು, ಮಾರ್ಕ್ ಹಾಕುತ್ತಿದ್ದುದನ್ನು ಕಂಡ ರಸ್ತೆ ಅಕ್ಕಪಕ್ಕದ ಅಂಗಡಿಗಳ ಮಾಲೀಕರು, ಕಟ್ಟಡ ಮಾಲೀಕರು ಈ ಬಗ್ಗೆ ಚರ್ಚಿಸಿದರು.<br /> <br /> ಈ ರಸ್ತೆ `50~ ಅಡಿ ಅಗಲ ಆಗಬೇಕು. ಹೀಗಾಗಿ ಮಾರ್ಕಿಂಗ್ ಮಾಡಲಾಗುತ್ತಿದೆ. ರಸ್ತೆಯ ಮಧ್ಯೆ ಭಾಗದಿಂದ ಎಡಕ್ಕೆ 25 ಅಡಿ ಮತ್ತು ಬಲಕ್ಕೆ 25 ಅಡಿ ವಿಸ್ತರಣೆ ನಡೆಯಲಿದೆ ಎಂದು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳು ವಿವರಣೆ ನೀಡಿ ಮಾರ್ಕಿಂಗ್ ಕಾರ್ಯ ಮುಂದುವರಿಸಿದರು. ಈ ಮಾರ್ಕಿಂಗ್ ಕಾರ್ಯ ಸೂಪರ್ ಮಾರ್ಕೆಟ್ವರೆಗೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.<br /> <br /> ಶೆಡ್ ತೆರವಿಗೆ ಆಕ್ರೋಶ: ತಹಸೀಲ್ದಾರ್ ಕಚೇರಿ ಪಕ್ಕ ಇರುವ ಬೆರಳಚ್ಚುಗಾರರ ಶೆಡ್ ತೆರವುಗೊಳಿಸುವ ನಗರಸಭೆ ಮತ್ತು ಜಿಲ್ಲಾಡಳಿದ ಕ್ರಮವನ್ನು ಬೆರಳಚ್ಚುಗಾರರು ಖಂಡಿಸಿದರು.<br /> <br /> ರಸ್ತೆ ವಿಸ್ತರಣೆಗೆ ಈಗಾಗಲೇ 7-8 ಶೆಡ್ ತೆರವುಗೊಳಿಸಲಾಗಿದೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಈಗ ಇನ್ನುಳಿದ ಶೆಡ್ಗಳನ್ನು ತೆರವುಗೊಳಿಸಿದರೆ ಕಷ್ಟ ಎಂದು ಸಮಸ್ಯೆ ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>