<p>ಬೀದರ್: ಹವಾಮಾನ ಬದಲಾವಣೆಯಿಂದಾಗಿ ಜಿಲ್ಲೆಯ ವಿವಿಧೆಡೆ ತೋಟಗಾರಿಕೆ ಬೆಳೆಗಳಲ್ಲಿ ಕೀಟ ಹಾಗೂ ರೋಗ ಬಾಧೆ ಕಂಡು ಬಂದಿದ್ದು, ರೈತರು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಪಿ.ಎಸ್. ಕುಲಕರ್ಣಿ ತಿಳಿಸಿದ್ದಾರೆ.<br /> <br /> ಮಾವಿನ ಹೂಗಳಲ್ಲಿ ಬೂದಿ ರೋಗ, ರಸ ಹೀರುವ ಕೀಟಗಳ ಬಾಧೆ ಕಾಣಿಸಿದೆ. ಹೂ, ಕಾಯಿ ದೇಟುಗಳ ಮೇಲೆ ಮೊಸರಿನಂತೆ ಬಿಳಿ ಬಣ್ಣ ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ. ರಸ ಹೀರುವ ಕೀಟಗಳ ಬಾಧೆಯಿಂದ ಹೂಗಳು, ಮಿಡಿಗಳು ಕಂದು ಬಣ್ಣಕ್ಕೆ ತಿರುಗಿ ಉದುರುತ್ತವೆ ಎಂದು ಹೇಳಿದ್ದಾರೆ.<br /> <br /> ಬೂದಿ ರೋಗ ಹಾಗೂ ರಸ ಹೀರುವ ಕೀಟಗಳ ಬಾಧೆ ಕಂಡು ಬಂದಲ್ಲಿ ಲ್ಯಾಮಡಾ ಸೈಲೋಥ್ರಿನ್ 0.5 ಮಿ.ಲೀ. ಅಥವಾ ಕ್ವಿನಾಲ್ಫಾಸ್ 2 ಮಿ.ಲೀ., 1 ಗ್ರಾಂ. ಕಾರ್ಬನ್ ಡೆಜಿಮ್ ಪುಡಿ, ಅರ್ಧ ಮಿ.ಲೀ. ಅಚಿಟಿನ್ ದ್ರಾವಣವನ್ನು ಲೀಟರ್ ನೀರಿಗೆ ಬೆರೆಸಿ ಎಲೆ, ಹೂ, ಕಾಯಿ, ರೆಂಬೆ, ಕೊಂಬೆ, ಬುಡಕ್ಕೆ ಸಿಂಪಡಿಸಬೇಕು.<br /> <br /> ಕಾಯಿಗಳು ಲಿಂಬೆಹಣ್ಣಿನಷ್ಟು ಗಾತ್ರವಾದಾಗ 1 ಗ್ರಾಂ. ಅಸಿಫೇಟ್ ಅಥವಾ 1 ಮಿ.ಲೀ. ಡೆಕಾಮೈಥಿನ್ ಔಷಧಿ, ಅರ್ಧ ಮಿ.ಲೀ. ಮಾಕ್ಸವೆಟ್ ಅಚಿಟ್ನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಣ್ಣು ಕೊಯ್ಯುವ 1 ತಿಂಗಳ ಮೊದಲು ಕಾರ್ಬನ್ಡೆಜಿಮ್ 1 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.<br /> <br /> ಪೇರಲ ಗಿಡಗಳಲ್ಲಿ ಬಿಳಿ ಬಿಳಿ ಉಣ್ಣೆ ಹುಳುಗಳು ಕಂಡು ಬಂದಿದ್ದು, ಇವುಗಳನ್ನು ನಿಯಂತ್ರಿಸಲು 3 ಮಿ.ಲೀ. ಬೇವಿನ ಎಣ್ಣೆ ಅಥವಾ 10 ಗ್ರಾಂ. ಬೇವಿನ ಸಾಬೂನು ಪುಡಿ ಅಥವಾ 250 ಮಿ.ಲೀ. ಹಸುವಿನ ಗಂಜಲ 15 ದಿನಗಳಿಗೊಮ್ಮೆ ಎರಡು- ಮೂರು ಬಾರಿ ಎಲೆಗಳ ಮೇಲೆ ಮತ್ತು ಕೆಳಗೆ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.<br /> <br /> ಹೆಚ್ಚಿನ ಮಾಹಿತಿಗೆ ಜಿಲ್ಲಾ ಹಾರ್ಟಿ ಕ್ಲಿನಿಕ್ನ ತೋಟಗಾರಿಕೆ ವಿಷಯ ತಜ್ಞ ಡಾ. ವಿಜಯಕುಮಾರ್ ರೇವಣ್ಣ (9482053985) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಹವಾಮಾನ ಬದಲಾವಣೆಯಿಂದಾಗಿ ಜಿಲ್ಲೆಯ ವಿವಿಧೆಡೆ ತೋಟಗಾರಿಕೆ ಬೆಳೆಗಳಲ್ಲಿ ಕೀಟ ಹಾಗೂ ರೋಗ ಬಾಧೆ ಕಂಡು ಬಂದಿದ್ದು, ರೈತರು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಪಿ.ಎಸ್. ಕುಲಕರ್ಣಿ ತಿಳಿಸಿದ್ದಾರೆ.<br /> <br /> ಮಾವಿನ ಹೂಗಳಲ್ಲಿ ಬೂದಿ ರೋಗ, ರಸ ಹೀರುವ ಕೀಟಗಳ ಬಾಧೆ ಕಾಣಿಸಿದೆ. ಹೂ, ಕಾಯಿ ದೇಟುಗಳ ಮೇಲೆ ಮೊಸರಿನಂತೆ ಬಿಳಿ ಬಣ್ಣ ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣ. ರಸ ಹೀರುವ ಕೀಟಗಳ ಬಾಧೆಯಿಂದ ಹೂಗಳು, ಮಿಡಿಗಳು ಕಂದು ಬಣ್ಣಕ್ಕೆ ತಿರುಗಿ ಉದುರುತ್ತವೆ ಎಂದು ಹೇಳಿದ್ದಾರೆ.<br /> <br /> ಬೂದಿ ರೋಗ ಹಾಗೂ ರಸ ಹೀರುವ ಕೀಟಗಳ ಬಾಧೆ ಕಂಡು ಬಂದಲ್ಲಿ ಲ್ಯಾಮಡಾ ಸೈಲೋಥ್ರಿನ್ 0.5 ಮಿ.ಲೀ. ಅಥವಾ ಕ್ವಿನಾಲ್ಫಾಸ್ 2 ಮಿ.ಲೀ., 1 ಗ್ರಾಂ. ಕಾರ್ಬನ್ ಡೆಜಿಮ್ ಪುಡಿ, ಅರ್ಧ ಮಿ.ಲೀ. ಅಚಿಟಿನ್ ದ್ರಾವಣವನ್ನು ಲೀಟರ್ ನೀರಿಗೆ ಬೆರೆಸಿ ಎಲೆ, ಹೂ, ಕಾಯಿ, ರೆಂಬೆ, ಕೊಂಬೆ, ಬುಡಕ್ಕೆ ಸಿಂಪಡಿಸಬೇಕು.<br /> <br /> ಕಾಯಿಗಳು ಲಿಂಬೆಹಣ್ಣಿನಷ್ಟು ಗಾತ್ರವಾದಾಗ 1 ಗ್ರಾಂ. ಅಸಿಫೇಟ್ ಅಥವಾ 1 ಮಿ.ಲೀ. ಡೆಕಾಮೈಥಿನ್ ಔಷಧಿ, ಅರ್ಧ ಮಿ.ಲೀ. ಮಾಕ್ಸವೆಟ್ ಅಚಿಟ್ನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಹಣ್ಣು ಕೊಯ್ಯುವ 1 ತಿಂಗಳ ಮೊದಲು ಕಾರ್ಬನ್ಡೆಜಿಮ್ 1 ಗ್ರಾಂ. 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.<br /> <br /> ಪೇರಲ ಗಿಡಗಳಲ್ಲಿ ಬಿಳಿ ಬಿಳಿ ಉಣ್ಣೆ ಹುಳುಗಳು ಕಂಡು ಬಂದಿದ್ದು, ಇವುಗಳನ್ನು ನಿಯಂತ್ರಿಸಲು 3 ಮಿ.ಲೀ. ಬೇವಿನ ಎಣ್ಣೆ ಅಥವಾ 10 ಗ್ರಾಂ. ಬೇವಿನ ಸಾಬೂನು ಪುಡಿ ಅಥವಾ 250 ಮಿ.ಲೀ. ಹಸುವಿನ ಗಂಜಲ 15 ದಿನಗಳಿಗೊಮ್ಮೆ ಎರಡು- ಮೂರು ಬಾರಿ ಎಲೆಗಳ ಮೇಲೆ ಮತ್ತು ಕೆಳಗೆ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.<br /> <br /> ಹೆಚ್ಚಿನ ಮಾಹಿತಿಗೆ ಜಿಲ್ಲಾ ಹಾರ್ಟಿ ಕ್ಲಿನಿಕ್ನ ತೋಟಗಾರಿಕೆ ವಿಷಯ ತಜ್ಞ ಡಾ. ವಿಜಯಕುಮಾರ್ ರೇವಣ್ಣ (9482053985) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>