<p>ಮಂಡ್ಯ: ನಗರದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನ ದರವನ್ನು ಪರಿಷ್ಕರಿಸಿದ್ದು, ಪರಿಷ್ಕರಣೆಯಂತೆ ಗೃಹ ಬಳಕೆ ಸಂಪರ್ಕಗಳಿಗೆ ಮಾಸಿಕ ಈಗಿನ ರೂ. 70ರ ಬದಲಾಗಿ ರೂ. 120 ಆಗಿದೆ.<br /> <br /> ಅಂತೆಯೇ, ಗೃಹಯೇತರ ಬಳಕೆಗೆ ಮಾಸಿಕ ರೂ. 240, ವಾಣಿಜ್ಯ/ಕೈಗಾರಿಕೆ ಬಳಕೆಗೆ ಮಾಸಿಕ ರೂ. 480 ನಿಗದಿಪಡಿಸಿದ್ದು, ಪರಿಷ್ಕೃತ ದರಗಳು ಜನವರಿ 1ರಿಂದಲೇ ಅನ್ವಯಾಗುವಂತೆ ಜಾರಿಗೆ ಬರಲಿದೆ ಎಂದು ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಅವರ ಹೇಳಿಕೆ ತಿಳಿಸಿದೆ.<br /> <br /> ಹುಲ್ಲಿನ ಮೆದೆ ತೆರವುಗೊಳಿಸಲು ಸೂಚನೆ: ನಗರಸಭಾ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನಗಳಲ್ಲಿ ಇರುವ ಹುಲ್ಲಿನ ಮೆದೆ ಹಾಗೂ ತಿಪ್ಪೆ ಗುಂಡಿಗಳು ನೈರ್ಮಲ್ಯಕ್ಕೆ ಕಾರಣವಾಗಿದ್ದು, ಇವನ್ನು ಜ.20ರೊಳಗೆ ತೆರವು ಗೊಳಿಸಬೇಕು. <br /> <br /> ಇಲ್ಲವಾದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.<br /> <br /> <strong>ಕಾಮಗಾರಿಗೆ ಚಾಲನೆ </strong><br /> ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಬ್ಬನಹಳ್ಳಿ ಗ್ರಾಮ ದಲ್ಲಿ ಎಸ್ಇಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಎ.ಬಿ.ರಮೇಶ್ಬಾಬು ಸೋಮವಾರ ಚಾಲನೆ ನೀಡಿ ದರು. <br /> <br /> ಕೋಲಕಾರನದೊಡ್ಡಿ, ತಗ್ಗಹಳ್ಳಿ ಸೇರುವ ರಸ್ತೆಗೆ ಚಾಲನೆ ನೀಡಿದ್ದು, ಇತರ ರಸ್ತೆಗಳ ದುರಸ್ತಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ತಾಪಂ ಸದಸ್ಯ ಪ್ರಕಾಶ್, ಮಾಜಿ ಸದಸ್ಯ ಜಯರಾಂ, ಜೆಡಿಎಸ್ನ ಶಿವನಂಜು, ಸುರೇಶ್, ರಮೇಶ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ನಗರದಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿನ ದರವನ್ನು ಪರಿಷ್ಕರಿಸಿದ್ದು, ಪರಿಷ್ಕರಣೆಯಂತೆ ಗೃಹ ಬಳಕೆ ಸಂಪರ್ಕಗಳಿಗೆ ಮಾಸಿಕ ಈಗಿನ ರೂ. 70ರ ಬದಲಾಗಿ ರೂ. 120 ಆಗಿದೆ.<br /> <br /> ಅಂತೆಯೇ, ಗೃಹಯೇತರ ಬಳಕೆಗೆ ಮಾಸಿಕ ರೂ. 240, ವಾಣಿಜ್ಯ/ಕೈಗಾರಿಕೆ ಬಳಕೆಗೆ ಮಾಸಿಕ ರೂ. 480 ನಿಗದಿಪಡಿಸಿದ್ದು, ಪರಿಷ್ಕೃತ ದರಗಳು ಜನವರಿ 1ರಿಂದಲೇ ಅನ್ವಯಾಗುವಂತೆ ಜಾರಿಗೆ ಬರಲಿದೆ ಎಂದು ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಅವರ ಹೇಳಿಕೆ ತಿಳಿಸಿದೆ.<br /> <br /> ಹುಲ್ಲಿನ ಮೆದೆ ತೆರವುಗೊಳಿಸಲು ಸೂಚನೆ: ನಗರಸಭಾ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನಗಳಲ್ಲಿ ಇರುವ ಹುಲ್ಲಿನ ಮೆದೆ ಹಾಗೂ ತಿಪ್ಪೆ ಗುಂಡಿಗಳು ನೈರ್ಮಲ್ಯಕ್ಕೆ ಕಾರಣವಾಗಿದ್ದು, ಇವನ್ನು ಜ.20ರೊಳಗೆ ತೆರವು ಗೊಳಿಸಬೇಕು. <br /> <br /> ಇಲ್ಲವಾದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.<br /> <br /> <strong>ಕಾಮಗಾರಿಗೆ ಚಾಲನೆ </strong><br /> ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಬ್ಬನಹಳ್ಳಿ ಗ್ರಾಮ ದಲ್ಲಿ ಎಸ್ಇಪಿ ಯೋಜನೆಯಡಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ಎ.ಬಿ.ರಮೇಶ್ಬಾಬು ಸೋಮವಾರ ಚಾಲನೆ ನೀಡಿ ದರು. <br /> <br /> ಕೋಲಕಾರನದೊಡ್ಡಿ, ತಗ್ಗಹಳ್ಳಿ ಸೇರುವ ರಸ್ತೆಗೆ ಚಾಲನೆ ನೀಡಿದ್ದು, ಇತರ ರಸ್ತೆಗಳ ದುರಸ್ತಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ತಾಪಂ ಸದಸ್ಯ ಪ್ರಕಾಶ್, ಮಾಜಿ ಸದಸ್ಯ ಜಯರಾಂ, ಜೆಡಿಎಸ್ನ ಶಿವನಂಜು, ಸುರೇಶ್, ರಮೇಶ್ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>