<p>ಬೆಂಗಳೂರು: ಬೆಂಗಳೂರು ಮಹಾನಗರದ 2015ರ `ಮಾಸ್ಟರ್ ಪ್ಲಾನ್~ ಪರಿಷ್ಕರಿಸುವ ಸಂಬಂಧ ಸಲಹೆ ಪಡೆಯಲು ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ 2012ರ ಮೇ 7ರಂದು ಹೊರಡಿಸಿರುವ ಅಧಿಸೂಚನೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.<br /> <br /> `ಅಧಿಸೂಚನೆ ಹೊರ ಬಿದ್ದು ಎರಡು ತಿಂಗಳಾಗುತ್ತಾ ಬಂದರೂ ಸಾರ್ವಜನಿಕರಿಂದ ಇದುವರೆಗೆ ಕೇವಲ 15ರಿಂದ 20 ಸಲಹೆಗಳಷ್ಟೇ ಬಂದಿವೆ~ ಎಂದು ಬಿಡಿಎ ನಗರ ಯೋಜನಾ ಸದಸ್ಯ ತಿರುಕನಗೌಡ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ನಗರದ ಭವಿಷ್ಯದ ಯೋಜನೆ ಎಂದೇ ಬಿಂಬಿಸಲಾಗುವ ಈ `ಮಾಸ್ಟರ್ ಪ್ಲಾನ್~ಗೆ ಸಾರ್ವಜನಿಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಲು ಜುಲೈ 7 ಕಡೇ ದಿನ. `ಮಾಸ್ಟರ್ ಪ್ಲಾನ್~ ಪರಿಷ್ಕರಣೆಗೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ಸಿದ್ಧಪಡಿಸಲು ಬಿಡಿಎ ಒಂಬತ್ತು ಕಂಪೆನಿಗಳನ್ನು ಆಯ್ಕೆ ಮಾಡಿದ್ದು, ಪೂರ್ವ ಬಿಡ್ ಸಭೆ ಮುಕ್ತಾಯಗೊಂಡಿದೆ ಎಂದು ಅವರು ತಿಳಿಸಿದರು. <br /> <br /> `ಮಾಸ್ಟರ್ ಪ್ಲಾನ್~ನ ಕರಡು ವರದಿ ಸಿದ್ಧಗೊಂಡ ನಂತರ ನಾವು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರುತ್ತೇವೆ. ಆಗ ಸಾರ್ವಜನಿಕರಿಂದ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ದೊರೆಯಬಹುದು ಎಂದು ನಾವು ನಿರೀಕ್ಷಿಸಿದ್ದೇವೆ~ ಎಂದು ಗೌಡ ವಿಶ್ವಾಸ ವ್ಯಕ್ತಪಡಿಸಿದರು.<br /> <br /> 2015ರ ಸಿಡಿಪಿ ಎಂದೇ ಕರೆಯಲಾಗುವ ಈ `ಮಾಸ್ಟರ್ ಪ್ಲಾನ್~ ಅನ್ನು ನಗರದ ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಷ್ಕರಿಸಲಾಗುತ್ತದೆ. ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ನು `ಸಿಡಿಪಿ-2035~ ಎಂದು ಕರೆಯಲಾಗುತ್ತದೆ.<br /> <br /> ಸಾರ್ವಜನಿಕರು ಜುಲೈ 7ರವರೆಗೆ ತಮ್ಮ ಸಲಹೆ-ಸೂಚನೆಗಳನ್ನು ಸಲ್ಲಿಸಬಹುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಬೆಂಗಳೂರು ಮಹಾನಗರದ 2015ರ `ಮಾಸ್ಟರ್ ಪ್ಲಾನ್~ ಪರಿಷ್ಕರಿಸುವ ಸಂಬಂಧ ಸಲಹೆ ಪಡೆಯಲು ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ 2012ರ ಮೇ 7ರಂದು ಹೊರಡಿಸಿರುವ ಅಧಿಸೂಚನೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.<br /> <br /> `ಅಧಿಸೂಚನೆ ಹೊರ ಬಿದ್ದು ಎರಡು ತಿಂಗಳಾಗುತ್ತಾ ಬಂದರೂ ಸಾರ್ವಜನಿಕರಿಂದ ಇದುವರೆಗೆ ಕೇವಲ 15ರಿಂದ 20 ಸಲಹೆಗಳಷ್ಟೇ ಬಂದಿವೆ~ ಎಂದು ಬಿಡಿಎ ನಗರ ಯೋಜನಾ ಸದಸ್ಯ ತಿರುಕನಗೌಡ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ನಗರದ ಭವಿಷ್ಯದ ಯೋಜನೆ ಎಂದೇ ಬಿಂಬಿಸಲಾಗುವ ಈ `ಮಾಸ್ಟರ್ ಪ್ಲಾನ್~ಗೆ ಸಾರ್ವಜನಿಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಲು ಜುಲೈ 7 ಕಡೇ ದಿನ. `ಮಾಸ್ಟರ್ ಪ್ಲಾನ್~ ಪರಿಷ್ಕರಣೆಗೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ಸಿದ್ಧಪಡಿಸಲು ಬಿಡಿಎ ಒಂಬತ್ತು ಕಂಪೆನಿಗಳನ್ನು ಆಯ್ಕೆ ಮಾಡಿದ್ದು, ಪೂರ್ವ ಬಿಡ್ ಸಭೆ ಮುಕ್ತಾಯಗೊಂಡಿದೆ ಎಂದು ಅವರು ತಿಳಿಸಿದರು. <br /> <br /> `ಮಾಸ್ಟರ್ ಪ್ಲಾನ್~ನ ಕರಡು ವರದಿ ಸಿದ್ಧಗೊಂಡ ನಂತರ ನಾವು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರುತ್ತೇವೆ. ಆಗ ಸಾರ್ವಜನಿಕರಿಂದ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ದೊರೆಯಬಹುದು ಎಂದು ನಾವು ನಿರೀಕ್ಷಿಸಿದ್ದೇವೆ~ ಎಂದು ಗೌಡ ವಿಶ್ವಾಸ ವ್ಯಕ್ತಪಡಿಸಿದರು.<br /> <br /> 2015ರ ಸಿಡಿಪಿ ಎಂದೇ ಕರೆಯಲಾಗುವ ಈ `ಮಾಸ್ಟರ್ ಪ್ಲಾನ್~ ಅನ್ನು ನಗರದ ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಷ್ಕರಿಸಲಾಗುತ್ತದೆ. ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ನು `ಸಿಡಿಪಿ-2035~ ಎಂದು ಕರೆಯಲಾಗುತ್ತದೆ.<br /> <br /> ಸಾರ್ವಜನಿಕರು ಜುಲೈ 7ರವರೆಗೆ ತಮ್ಮ ಸಲಹೆ-ಸೂಚನೆಗಳನ್ನು ಸಲ್ಲಿಸಬಹುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>