<p><strong>ಚಿತ್ರದುರ್ಗ: </strong>ನಗರದಲ್ಲಿನ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಣೆಯಾಗಿದೆ. ಆಟೋ ಮಾಲೀಕರು ಮತ್ತು ಚಾಲಕರ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿ ಜುಲೈ 5ರವರೆಗೆ ಮೀಟರ್ ಅಳವಡಿಸಲು ಕಾಲಾವಕಾಶ ನೀಡಿದರು.<br /> <br /> ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.<br /> <br /> ಸಭೆಯಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಆಟೋ ಚಾಲಕರು ಇದುವರೆಗೆ ಆದೇಶ ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಯದಾಗಿ ಜುಲೈ 5ರವರೆಗೆ ಕಾಲಾವಕಾಶ ನೀಡಿದ್ದು, ಅದರ ನಂತರವೂ ಮೀಟರ್ ಅಳವಡಿಸಿ ಕಾನೂನು ಮತ್ತು ಮಾಪನ ಇಲಾಖೆ ವತಿಯಿಂದ `ಸೀಲ್~ ಹಾಕಿಸಿಕೊಳ್ಳದ ಆಟೋರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅಂತಿಮ ಗಡುವು ನೀಡಿದರು.<br /> <br /> ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ಮಾಡಿ ಮೀಟರ್ ಅಳವಡಿಸುವಂತೆ ಸೂಚಿಸಲಾಗಿತ್ತು. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಆಟೋರಿಕ್ಷಾ ಚಾಲಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.<br /> <br /> ನ್ಯಾಯಾಲಯವೇ ಮೀಟರ್ ಅಳವಡಿಕೆ ಬಗ್ಗೆ ಆದೇಶ ನೀಡಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದರೂ ಮತ್ತೊಮ್ಮೆ ಕಾಲಾವಕಾಶ ನೀಡಲಾಗುತ್ತಿದೆ. ಜುಲೈ 6ರಿಂದ ಮೀಟರ್ ಇಲ್ಲದ ಆಟೋಗಳನ್ನು ಕಟ್ಟುನಿಟ್ಟಾಗಿ ವಶಪಡಿಸಿಕೊಳ್ಳಲಾಗುವುದು. ಇದಕ್ಕಾಗಿ 5 ಸ್ಥಳಗಳಲ್ಲಿ ತಪಾಸಣಾ ಠಾಣೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.<br /> <br /> ಪ್ರಸ್ತುತ ಕನಿಷ್ಠ ಆಟೋ ದರವನ್ನು ್ಙ 18 ನಿಗದಿ ಮಾಡಿದ್ದರೂ ಚಾಲಕರು ್ಙ 20-25 ವಸೂಲಿ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.<br /> ಪ್ರಾದೇಶಿಕ ಸಾರಿಗೆ ಅಧಿಕಾರಿ ತೆಂಬದ್ ಮಾತನಾಡಿ, ಮೇ 9ರಂದು ಸಭೆ ನಡೆಸಿ ಕನಿಷ್ಠ ದರ ನಿಗದಿ ಮಾಡಲಾಯಿತು. ಈ ದರ ಜೂನ್ 1ರಿಂದ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿತ್ತು.<br /> <br /> ಅಲ್ಲದೇ, ಈ ಅವಧಿಯೊಳಗಾಗಿ ಎಲ್ಲ ಆಟೋರಿಕ್ಷಾಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಸೂಚಿಸಲಾಗಿತ್ತು. ಆದರೆ, ಒಟ್ಟು 2,500 ಆಟೋರಿಕ್ಷಾಗಳಲ್ಲಿ ಇದುವರೆಗೆ ಕೇವಲ 379 ಆಟೋರಿಕ್ಷಾಗಳಿಗೆ ಮಾತ್ರ ಮೀಟರ್ ಅಳವಡಿಸಲಾಗಿದ್ದು, ಇವುಗಳಲ್ಲಿ ಕೇವಲ 116ಕ್ಕೆ ಮಾತ್ರ ಕಾನೂನು ಮತ್ತು ಮಾಪನ ಇಲಾಖೆಯಿಂದ `ಸೀಲ್~ ಹಾಕಲಾಗಿದೆ ಎಂದು ವಿವರಿಸಿದರು.<br /> <br /> ಇದರಿಂದ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ಈ ಹಿಂದೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಆಟೋರಿಕ್ಷಾ ಚಾಲಕರು, ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ನ್ಯಾಯಾಲಯದ ಆದೇಶವಿದ್ದು ಎಲ್ಲರೂ ಅದನ್ನು ಪಾಲಿಸಬೇಕು. ಆಟೋಗಳಿಗೆ ಮೀಟರ್ ಅಳವಡಿಸುವ ಇಚ್ಛೆ ಇಲ್ಲದಿದ್ದಲ್ಲಿ ಅಂತಹ ಆಟೋಗಳ ಸೇವೆ ನಮಗೆ ಅಗತ್ಯವಿಲ್ಲ. ಮಾಲೀಕರು ತಮ್ಮ ವಾಹನಗಳನ್ನು ಮನೆಗಳಲ್ಲಿ ನಿಲ್ಲಿಸಿಕೊಳ್ಳಬಹುದು. ಜನರ ಸಂಚಾರಕ್ಕೆ ನಗರ ಸಾರಿಗೆ ಆರಂಭಿಸಲಾಗುವುದು ಎಂದರು.<br /> <br /> ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ. ಜಯಣ್ಣ ಮಾತನಾಡಿ, ಮೀಟರ್ ಅಳವಡಿಕೆಯಲ್ಲಿನ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇನ್ನೂ ಒಂದು ವಾರ ಕಾಲಾವಕಾಶ ನೀಡಬೇಕು. ಈ ಅವಧಿ ಒಳಗೆ ಎಲ್ಲ ಆಟೋಗಳಿಗೂ ಮೀಟರ್ ಅಳವಡಿಸಲಾಗುವುದು ಎಂದು ಕೋರಿದರು.<br /> ಇದನ್ನು ಮನ್ನಿಸಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಜುಲೈ 5ರವರೆಗೆ ಅಂತಿಮ ಗಡುವು ನೀಡಿದ್ದು, ಮರುದಿನದಿಂದಲೇ ಮೀಟರ್ ಇಲ್ಲದ ಆಟೋಗಳನ್ನು ವಶಪಡಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.<br /> <br /> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಜುಲೈ 5ರ ನಂತರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಒಳಗೊಂಡಂತೆ `ವಿಚಕ್ಷಣ ದಳ~ ರಚಿಸಿ ಮೀಟರ್ ಇಲ್ಲದ ಆಟೋರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.<br /> <strong><br /> 6 ಮಕ್ಕಳಿಗೆ ಮಾತ್ರ ಅವಕಾಶ: </strong>ಆಟೋಗಳಲ್ಲಿ ಶಾಲಾ ಮಕ್ಕಳನ್ನು ಮಿತಿಮೀರಿ ತುಂಬಿಕೊಂಡು ಹೋಗಲಾಗುತ್ತಿದೆ. 6 ಮಕ್ಕಳನ್ನು ಮಾತ್ರ ಆಟೋದಲ್ಲಿ ಕರೆದೊಯ್ಯಬೇಕು. ಚಾಲಕರು ಸಮವಸ್ತ್ರದಲ್ಲಿ ಆಟೋರಿಕ್ಷಾ ಚಲಾಯಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಾಗರಾಜ್ ಎಚ್ಚರಿಕೆ ನೀಡಿದರು.<br /> <br /> ಕಾನೂನು ಮತ್ತು ಮಾಪನ ಇಲಾಖೆಯ ಅಧಿಕಾರಿ ಕುಮಾರ್, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಮಾಲೀಕರು, ಚಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: </strong>ನಗರದಲ್ಲಿನ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಣೆಯಾಗಿದೆ. ಆಟೋ ಮಾಲೀಕರು ಮತ್ತು ಚಾಲಕರ ಒತ್ತಡಕ್ಕೆ ಮಣಿದ ಜಿಲ್ಲಾಧಿಕಾರಿ ಜುಲೈ 5ರವರೆಗೆ ಮೀಟರ್ ಅಳವಡಿಸಲು ಕಾಲಾವಕಾಶ ನೀಡಿದರು.<br /> <br /> ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.<br /> <br /> ಸಭೆಯಲ್ಲಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಆಟೋ ಚಾಲಕರು ಇದುವರೆಗೆ ಆದೇಶ ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಯದಾಗಿ ಜುಲೈ 5ರವರೆಗೆ ಕಾಲಾವಕಾಶ ನೀಡಿದ್ದು, ಅದರ ನಂತರವೂ ಮೀಟರ್ ಅಳವಡಿಸಿ ಕಾನೂನು ಮತ್ತು ಮಾಪನ ಇಲಾಖೆ ವತಿಯಿಂದ `ಸೀಲ್~ ಹಾಕಿಸಿಕೊಳ್ಳದ ಆಟೋರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅಂತಿಮ ಗಡುವು ನೀಡಿದರು.<br /> <br /> ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ಮಾಡಿ ಮೀಟರ್ ಅಳವಡಿಸುವಂತೆ ಸೂಚಿಸಲಾಗಿತ್ತು. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಆಟೋರಿಕ್ಷಾ ಚಾಲಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.<br /> <br /> ನ್ಯಾಯಾಲಯವೇ ಮೀಟರ್ ಅಳವಡಿಕೆ ಬಗ್ಗೆ ಆದೇಶ ನೀಡಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದರೂ ಮತ್ತೊಮ್ಮೆ ಕಾಲಾವಕಾಶ ನೀಡಲಾಗುತ್ತಿದೆ. ಜುಲೈ 6ರಿಂದ ಮೀಟರ್ ಇಲ್ಲದ ಆಟೋಗಳನ್ನು ಕಟ್ಟುನಿಟ್ಟಾಗಿ ವಶಪಡಿಸಿಕೊಳ್ಳಲಾಗುವುದು. ಇದಕ್ಕಾಗಿ 5 ಸ್ಥಳಗಳಲ್ಲಿ ತಪಾಸಣಾ ಠಾಣೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.<br /> <br /> ಪ್ರಸ್ತುತ ಕನಿಷ್ಠ ಆಟೋ ದರವನ್ನು ್ಙ 18 ನಿಗದಿ ಮಾಡಿದ್ದರೂ ಚಾಲಕರು ್ಙ 20-25 ವಸೂಲಿ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.<br /> ಪ್ರಾದೇಶಿಕ ಸಾರಿಗೆ ಅಧಿಕಾರಿ ತೆಂಬದ್ ಮಾತನಾಡಿ, ಮೇ 9ರಂದು ಸಭೆ ನಡೆಸಿ ಕನಿಷ್ಠ ದರ ನಿಗದಿ ಮಾಡಲಾಯಿತು. ಈ ದರ ಜೂನ್ 1ರಿಂದ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿತ್ತು.<br /> <br /> ಅಲ್ಲದೇ, ಈ ಅವಧಿಯೊಳಗಾಗಿ ಎಲ್ಲ ಆಟೋರಿಕ್ಷಾಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಸೂಚಿಸಲಾಗಿತ್ತು. ಆದರೆ, ಒಟ್ಟು 2,500 ಆಟೋರಿಕ್ಷಾಗಳಲ್ಲಿ ಇದುವರೆಗೆ ಕೇವಲ 379 ಆಟೋರಿಕ್ಷಾಗಳಿಗೆ ಮಾತ್ರ ಮೀಟರ್ ಅಳವಡಿಸಲಾಗಿದ್ದು, ಇವುಗಳಲ್ಲಿ ಕೇವಲ 116ಕ್ಕೆ ಮಾತ್ರ ಕಾನೂನು ಮತ್ತು ಮಾಪನ ಇಲಾಖೆಯಿಂದ `ಸೀಲ್~ ಹಾಕಲಾಗಿದೆ ಎಂದು ವಿವರಿಸಿದರು.<br /> <br /> ಇದರಿಂದ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ಈ ಹಿಂದೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಆಟೋರಿಕ್ಷಾ ಚಾಲಕರು, ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಕುರಿತು ನ್ಯಾಯಾಲಯದ ಆದೇಶವಿದ್ದು ಎಲ್ಲರೂ ಅದನ್ನು ಪಾಲಿಸಬೇಕು. ಆಟೋಗಳಿಗೆ ಮೀಟರ್ ಅಳವಡಿಸುವ ಇಚ್ಛೆ ಇಲ್ಲದಿದ್ದಲ್ಲಿ ಅಂತಹ ಆಟೋಗಳ ಸೇವೆ ನಮಗೆ ಅಗತ್ಯವಿಲ್ಲ. ಮಾಲೀಕರು ತಮ್ಮ ವಾಹನಗಳನ್ನು ಮನೆಗಳಲ್ಲಿ ನಿಲ್ಲಿಸಿಕೊಳ್ಳಬಹುದು. ಜನರ ಸಂಚಾರಕ್ಕೆ ನಗರ ಸಾರಿಗೆ ಆರಂಭಿಸಲಾಗುವುದು ಎಂದರು.<br /> <br /> ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ. ಜಯಣ್ಣ ಮಾತನಾಡಿ, ಮೀಟರ್ ಅಳವಡಿಕೆಯಲ್ಲಿನ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇನ್ನೂ ಒಂದು ವಾರ ಕಾಲಾವಕಾಶ ನೀಡಬೇಕು. ಈ ಅವಧಿ ಒಳಗೆ ಎಲ್ಲ ಆಟೋಗಳಿಗೂ ಮೀಟರ್ ಅಳವಡಿಸಲಾಗುವುದು ಎಂದು ಕೋರಿದರು.<br /> ಇದನ್ನು ಮನ್ನಿಸಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಜುಲೈ 5ರವರೆಗೆ ಅಂತಿಮ ಗಡುವು ನೀಡಿದ್ದು, ಮರುದಿನದಿಂದಲೇ ಮೀಟರ್ ಇಲ್ಲದ ಆಟೋಗಳನ್ನು ವಶಪಡಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.<br /> <br /> ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಜುಲೈ 5ರ ನಂತರ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳನ್ನು ಒಳಗೊಂಡಂತೆ `ವಿಚಕ್ಷಣ ದಳ~ ರಚಿಸಿ ಮೀಟರ್ ಇಲ್ಲದ ಆಟೋರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.<br /> <strong><br /> 6 ಮಕ್ಕಳಿಗೆ ಮಾತ್ರ ಅವಕಾಶ: </strong>ಆಟೋಗಳಲ್ಲಿ ಶಾಲಾ ಮಕ್ಕಳನ್ನು ಮಿತಿಮೀರಿ ತುಂಬಿಕೊಂಡು ಹೋಗಲಾಗುತ್ತಿದೆ. 6 ಮಕ್ಕಳನ್ನು ಮಾತ್ರ ಆಟೋದಲ್ಲಿ ಕರೆದೊಯ್ಯಬೇಕು. ಚಾಲಕರು ಸಮವಸ್ತ್ರದಲ್ಲಿ ಆಟೋರಿಕ್ಷಾ ಚಲಾಯಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಾಗರಾಜ್ ಎಚ್ಚರಿಕೆ ನೀಡಿದರು.<br /> <br /> ಕಾನೂನು ಮತ್ತು ಮಾಪನ ಇಲಾಖೆಯ ಅಧಿಕಾರಿ ಕುಮಾರ್, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಮಾಲೀಕರು, ಚಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>