<p><strong>ಸುರತ್ಕಲ್: </strong>ಮುಂಗಾರು ಆರಂಭಗೊಂಡು ಕೃತಕ ನೆರೆಯ ಭೀತಿ ಎದುರಾಗಿದ್ದರೂ ಮಳೆಗಾಲವನ್ನು ಎದುರಿಸಲು ಮಹಾನಗರ ಪಾಲಿಕೆ ಇನ್ನೂ ಸಜ್ಜಾಗಿಲ್ಲ. ಸುರತ್ಕಲ್ ಪ್ರದೇಶ ಇನ್ನೂ ಸಮಸ್ಯೆಯ ಆಗರವಾಗಿಯೇ ಉಳಿದಿದೆ.<br /> <br /> ನಗರ ಪ್ರದೇಶದಲ್ಲಿ ಚರಂಡಿ, ತೋಡುಗಳ ಹೂಳೆತ್ತುವ ಕಾಮಗಾರಿ ಕೆಲವಡೆ ನಡೆದರೆ ಇನ್ನೂ ಕೆಲವೆಡೆ ಹಿಂದಿನ ಸ್ಥಿತಿಯೇ ಇದೆ. ಇತ್ತ ಮಂಗಳೂರು ಉಡುಪಿ ಚತುಷ್ಪಥ ಹೆದ್ದಾರಿ ಸಂಚಾರ ದ್ವಿಚಕ್ರ ಸವಾರರಿಗೆ ಪಾದಚಾರಿಗಳಿಗೆ ಕಂಟಕ ತರುವ ಎಲ್ಲಾ ಸಾಧ್ಯತೆಯಿದೆ.<br /> <br /> ಮಂಗಳೂರಿನಿಂದ ಸುರತ್ಕಲ್ ಎನ್ಐಟಿಕೆ ವರೆಗೆ ರಸ್ತೆಯೇನೋ ಪೂರ್ಣಗೊಳಿಸಲಾಗಿದೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರ ಪರಿಸ್ಥಿತಿ ಇನ್ನೂ ಹದೆಗೆಟ್ಟ ಸ್ಥಿತಿಯಲ್ಲೇ ಇದೆ ಎಂಬ ಅಳಲು ನಾಗರಿಕರದು.<br /> <br /> ಪ್ರಮುಖವಾಗಿ ಬೈಕಂಪಾಡಿಯಿಂದ ಸುರತ್ಕಲ್ ವರೆಗೆ ಹೆಚ್ಚಿನ ಭಾಗದಲ್ಲಿ ಚರಂಡಿಯೇ ಇಲ್ಲ. ಪರಿಣಾಮ ಮಳೆ, ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಪಾದಚಾರಿಗಳು ನಡೆದಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.<br /> <br /> ಗುಡ್ಡಗಳಿಂದ ಹರಿದು ಬಂದ ಕೆಸರು ಮಣ್ಣು ರಸ್ತೆ ಬದಿ ಶೇಖರಣೆಗೊಂಡು ಜಾರಿ ಬೀಳುವ ಸ್ಥಿತಿಯಿದೆ. ಹಲವೆಡೆ ಚರಂಡಿ ಇದ್ದರೂ ಹೂಳೆತ್ತದ ಕಾರಣ ನೀರು ಹರಿಯುತ್ತಿಲ್ಲ. ಹೀಗಾಗಿ ಮಳೆ ನೀರು ನಿಂತು ಫುಟ್ಪಾತ್ ಕಣ್ಮರೆಯಾಗಿದೆ. ಇದರಿಂದ ಜನರ ಓಡಾಟಕ್ಕೆ ತೊಡಕುಂಟಾಗಿದೆ.<br /> <br /> ಕಳೆದ ಬಾರಿಯೂ ಇದೇ ಪರಿಸ್ಥಿತಿ ಉಂಟಾಗಿದ್ದು ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರತ್ಕಲ್: </strong>ಮುಂಗಾರು ಆರಂಭಗೊಂಡು ಕೃತಕ ನೆರೆಯ ಭೀತಿ ಎದುರಾಗಿದ್ದರೂ ಮಳೆಗಾಲವನ್ನು ಎದುರಿಸಲು ಮಹಾನಗರ ಪಾಲಿಕೆ ಇನ್ನೂ ಸಜ್ಜಾಗಿಲ್ಲ. ಸುರತ್ಕಲ್ ಪ್ರದೇಶ ಇನ್ನೂ ಸಮಸ್ಯೆಯ ಆಗರವಾಗಿಯೇ ಉಳಿದಿದೆ.<br /> <br /> ನಗರ ಪ್ರದೇಶದಲ್ಲಿ ಚರಂಡಿ, ತೋಡುಗಳ ಹೂಳೆತ್ತುವ ಕಾಮಗಾರಿ ಕೆಲವಡೆ ನಡೆದರೆ ಇನ್ನೂ ಕೆಲವೆಡೆ ಹಿಂದಿನ ಸ್ಥಿತಿಯೇ ಇದೆ. ಇತ್ತ ಮಂಗಳೂರು ಉಡುಪಿ ಚತುಷ್ಪಥ ಹೆದ್ದಾರಿ ಸಂಚಾರ ದ್ವಿಚಕ್ರ ಸವಾರರಿಗೆ ಪಾದಚಾರಿಗಳಿಗೆ ಕಂಟಕ ತರುವ ಎಲ್ಲಾ ಸಾಧ್ಯತೆಯಿದೆ.<br /> <br /> ಮಂಗಳೂರಿನಿಂದ ಸುರತ್ಕಲ್ ಎನ್ಐಟಿಕೆ ವರೆಗೆ ರಸ್ತೆಯೇನೋ ಪೂರ್ಣಗೊಳಿಸಲಾಗಿದೆ. ಆದರೆ ರಸ್ತೆಯ ಇಕ್ಕೆಲಗಳಲ್ಲಿ ಮಾತ್ರ ಪರಿಸ್ಥಿತಿ ಇನ್ನೂ ಹದೆಗೆಟ್ಟ ಸ್ಥಿತಿಯಲ್ಲೇ ಇದೆ ಎಂಬ ಅಳಲು ನಾಗರಿಕರದು.<br /> <br /> ಪ್ರಮುಖವಾಗಿ ಬೈಕಂಪಾಡಿಯಿಂದ ಸುರತ್ಕಲ್ ವರೆಗೆ ಹೆಚ್ಚಿನ ಭಾಗದಲ್ಲಿ ಚರಂಡಿಯೇ ಇಲ್ಲ. ಪರಿಣಾಮ ಮಳೆ, ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದ್ದು ಪಾದಚಾರಿಗಳು ನಡೆದಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.<br /> <br /> ಗುಡ್ಡಗಳಿಂದ ಹರಿದು ಬಂದ ಕೆಸರು ಮಣ್ಣು ರಸ್ತೆ ಬದಿ ಶೇಖರಣೆಗೊಂಡು ಜಾರಿ ಬೀಳುವ ಸ್ಥಿತಿಯಿದೆ. ಹಲವೆಡೆ ಚರಂಡಿ ಇದ್ದರೂ ಹೂಳೆತ್ತದ ಕಾರಣ ನೀರು ಹರಿಯುತ್ತಿಲ್ಲ. ಹೀಗಾಗಿ ಮಳೆ ನೀರು ನಿಂತು ಫುಟ್ಪಾತ್ ಕಣ್ಮರೆಯಾಗಿದೆ. ಇದರಿಂದ ಜನರ ಓಡಾಟಕ್ಕೆ ತೊಡಕುಂಟಾಗಿದೆ.<br /> <br /> ಕಳೆದ ಬಾರಿಯೂ ಇದೇ ಪರಿಸ್ಥಿತಿ ಉಂಟಾಗಿದ್ದು ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>