<p><strong>ಮುಂಬೈ</strong>: ಹಿರಿಯ ಲೇಖಕಿ ಎ.ಪಿ. ಮಾಲತಿ ಅವರಿಗೆ ಇತ್ತೀಚೆಗೆ ಹವ್ಯಕ ವೆಲ್ಫೆರ್ ಟ್ರಸ್ಟ್ ವತಿಯಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ'ಯನ್ನು ನೀಡಿ ಸನ್ಮಾನಿಸಲಾಯಿತು.<br /> <br /> ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಅವರು ತಮ್ಮ ಬದುಕಿನ ವಿಲಕ್ಷಣ ಅನುಭವಗಳನ್ನು ವಿವರಿಸಿದರು. ಹಳ್ಳಿ, ಪಟ್ಟಣಗಳ ಅಪಾರ ಅನುಭವ ತಮ್ಮ ಸಾಹಿತ್ಯದ ಕೃಷಿಗೆ ಕಾರಣವಾಯಿತು ಎಂದು ಹೇಳಿದರು.<br /> <br /> `ಮುಂಡಿಗೆ ಉಗಾಭೋಗ' ಪ್ರಾತ್ಯಕ್ಷಿಕೆಯನ್ನು ಶ್ಯಾಮಲಾ ಪ್ರಕಾಶ್ ನಡೆಸಿಕೊಟ್ಟು ದಾಸರ ಪದಗಳ ಮಾಧುರ್ಯ ಅನುಭವಿಸುವಂತೆ ಮಾಡಿದರು.<br /> <br /> ಸಮಾರಂಭದಲ್ಲಿ ಟ್ರಸ್ಟಿನ ಅಧ್ಯಕ್ಷ ಎನ್.ಆರ್. ಹೆಗಡೆ, ಉಪಾಧ್ಯಕ್ಷ ದತ್ತಗುರು, `ಹವ್ಯಕ ಸಂದೇಶ'ದ ಸಂಪಾದಕಿ ಅಮಿತಾ ಭಾಗವತ್, ಚಂದ್ರಶೇಖರ ಪಾಲೆತ್ತಾಡಿ, ಡಾ.ಜಿ.ಡಿ. ಜೋಶಿ ಈ ಮುಂತಾದವರು ಉಪಸ್ಥಿತರಿದ್ದರು. ಬಳಿಕ ಸುಬ್ರಾಯ ಭಟ್ಟರು ರಚಿಸಿ ನಿರ್ದೇಶಿಸಿದ ಬೆಂಗಳೂರಿನ ವಿಜಯರಂಗದ ಕಲಾವಿದರು ಅಭಿನಯಿಸಿದ `ಸಾಂಖ್ಯರ ಸಂಸಾರ' ನಾಟಕ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಹಿರಿಯ ಲೇಖಕಿ ಎ.ಪಿ. ಮಾಲತಿ ಅವರಿಗೆ ಇತ್ತೀಚೆಗೆ ಹವ್ಯಕ ವೆಲ್ಫೆರ್ ಟ್ರಸ್ಟ್ ವತಿಯಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ'ಯನ್ನು ನೀಡಿ ಸನ್ಮಾನಿಸಲಾಯಿತು.<br /> <br /> ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಅವರು ತಮ್ಮ ಬದುಕಿನ ವಿಲಕ್ಷಣ ಅನುಭವಗಳನ್ನು ವಿವರಿಸಿದರು. ಹಳ್ಳಿ, ಪಟ್ಟಣಗಳ ಅಪಾರ ಅನುಭವ ತಮ್ಮ ಸಾಹಿತ್ಯದ ಕೃಷಿಗೆ ಕಾರಣವಾಯಿತು ಎಂದು ಹೇಳಿದರು.<br /> <br /> `ಮುಂಡಿಗೆ ಉಗಾಭೋಗ' ಪ್ರಾತ್ಯಕ್ಷಿಕೆಯನ್ನು ಶ್ಯಾಮಲಾ ಪ್ರಕಾಶ್ ನಡೆಸಿಕೊಟ್ಟು ದಾಸರ ಪದಗಳ ಮಾಧುರ್ಯ ಅನುಭವಿಸುವಂತೆ ಮಾಡಿದರು.<br /> <br /> ಸಮಾರಂಭದಲ್ಲಿ ಟ್ರಸ್ಟಿನ ಅಧ್ಯಕ್ಷ ಎನ್.ಆರ್. ಹೆಗಡೆ, ಉಪಾಧ್ಯಕ್ಷ ದತ್ತಗುರು, `ಹವ್ಯಕ ಸಂದೇಶ'ದ ಸಂಪಾದಕಿ ಅಮಿತಾ ಭಾಗವತ್, ಚಂದ್ರಶೇಖರ ಪಾಲೆತ್ತಾಡಿ, ಡಾ.ಜಿ.ಡಿ. ಜೋಶಿ ಈ ಮುಂತಾದವರು ಉಪಸ್ಥಿತರಿದ್ದರು. ಬಳಿಕ ಸುಬ್ರಾಯ ಭಟ್ಟರು ರಚಿಸಿ ನಿರ್ದೇಶಿಸಿದ ಬೆಂಗಳೂರಿನ ವಿಜಯರಂಗದ ಕಲಾವಿದರು ಅಭಿನಯಿಸಿದ `ಸಾಂಖ್ಯರ ಸಂಸಾರ' ನಾಟಕ ಪ್ರದರ್ಶನ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>