<p>ಐಜ್್ವಾಲ್ (ಪಿಟಿಐ): ಮಿಜೋರಾಂನ ಬ್ರು ವಲಸಿಗರಿಗೆ ರಾಜ್ಯದ ಏಕೈಕ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ನಡೆಯುವ ಮತದಾನದಲ್ಲಿ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರನ್ನು ಮಿಜೋರಾಂ ಮುಖ್ಯಮಂತ್ರಿ ಲಾಲ್ ಥನ್ಹವ್ಲಾ ಅವರು ಕೋರಿದ್ದಾರೆ.<br /> <br /> ಬ್ರು ಸಮುದಾಯದ ಜನರು ಮತ ಚಲಾಯಿಸಲು ಬಯಸಿದರೆ ರಾಜ್ಯದೊಳಕ್ಕೆ ಬಂದು ಮತ ಚಲಾಯಿಸಬೇಕೇ ಹೊರತು ಅಂಚೆ ಮೂಲಕ ಅಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮಿಜೋರಾಂ ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ. ಈ ಮೊದಲು ವಲಸಿಗರ ಶಿಬಿರದಲ್ಲಿಯೇ ಮತ ಚಲಾಯಿಸಲು ಅವಕಾಶ ಕೊಡಬೇಕು ಎಂದು ಕೋರಲಾಗಿತ್ತು.<br /> <br /> ಆಯೋಗ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದು ಹೇಳಲಾಗಿದೆ. 1997 ಮತ್ತು 2009ರಲ್ಲಿ ಮಿಜೋರಾಂನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ತ್ರಿಪುರಾಕ್ಕೆ ವಲಸೆ ಬಂದ ಬ್ರು ಸಮುದಾಯದ ಕೆಲವು ಕುಟುಂಬಗಳಷ್ಟೇ ಹಿಂದಿರುಗಿವೆ. ಉಳಿದವರು ಶಿಬಿರಗಳಲ್ಲಿಯೇ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಐಜ್್ವಾಲ್ (ಪಿಟಿಐ): ಮಿಜೋರಾಂನ ಬ್ರು ವಲಸಿಗರಿಗೆ ರಾಜ್ಯದ ಏಕೈಕ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ನಡೆಯುವ ಮತದಾನದಲ್ಲಿ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರನ್ನು ಮಿಜೋರಾಂ ಮುಖ್ಯಮಂತ್ರಿ ಲಾಲ್ ಥನ್ಹವ್ಲಾ ಅವರು ಕೋರಿದ್ದಾರೆ.<br /> <br /> ಬ್ರು ಸಮುದಾಯದ ಜನರು ಮತ ಚಲಾಯಿಸಲು ಬಯಸಿದರೆ ರಾಜ್ಯದೊಳಕ್ಕೆ ಬಂದು ಮತ ಚಲಾಯಿಸಬೇಕೇ ಹೊರತು ಅಂಚೆ ಮೂಲಕ ಅಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮಿಜೋರಾಂ ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ. ಈ ಮೊದಲು ವಲಸಿಗರ ಶಿಬಿರದಲ್ಲಿಯೇ ಮತ ಚಲಾಯಿಸಲು ಅವಕಾಶ ಕೊಡಬೇಕು ಎಂದು ಕೋರಲಾಗಿತ್ತು.<br /> <br /> ಆಯೋಗ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದು ಹೇಳಲಾಗಿದೆ. 1997 ಮತ್ತು 2009ರಲ್ಲಿ ಮಿಜೋರಾಂನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ತ್ರಿಪುರಾಕ್ಕೆ ವಲಸೆ ಬಂದ ಬ್ರು ಸಮುದಾಯದ ಕೆಲವು ಕುಟುಂಬಗಳಷ್ಟೇ ಹಿಂದಿರುಗಿವೆ. ಉಳಿದವರು ಶಿಬಿರಗಳಲ್ಲಿಯೇ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>