<p><strong>ತುಮಕೂರು:</strong> ಐವತ್ತು ಕುಟುಂಬಗಳ ಕುಗ್ರಾಮ ಮುದ್ದಪುರ. ಇಲ್ಲಿಗೆ ಶನಿವಾರ ಜರ್ಮನಿ ಅಧ್ಯಕ್ಷರು ಭೇಟಿ ನೀಡುತ್ತಾರೆ ಎಂಬುದೇ ವಿಶೇಷವಾಗಿತ್ತು. ಗ್ರಾಮದಲ್ಲಿ ತಳಿರು ತೋರಣ ಕಟ್ಟಿ ಅಧ್ಯಕ್ಷರನ್ನು ಸ್ವಾಗತಿಸಲು ಸಿಂಗಾರ ಮಾಡಲಾಗಿತ್ತು.<br /> <br /> ಜರ್ಮನಿ ಅಧ್ಯಕ್ಷ ಜೋಕಿಮ್ಗೌಕ್ ಅವರಿಗೆ ಹಾಲು ಕರೆಯುವುದನ್ನು ತೋರಿಸಲು ಗ್ರಾಮದ ಶಿವಮ್ಮ, ಮಂಜುಳಾ ಸಿದ್ಧರಾಗಿದ್ದರು. ಹಾರೆಯಲ್ಲಿ ಕಾಯಿ ಸುಲಿಯುವುದನ್ನು ತೋರಿಸಲು ಕಲ್ಲೇಶ್ ಹಾಜರಿದ್ದರು. ನಮ್ಮ ಸಾಮಾನ್ಯ ಕೃಷಿ ಬದುಕನ್ನು ನೋಡಲು ಜರ್ಮನಿ ಅಧ್ಯಕ್ಷರು ಬರುತ್ತಿರುವುದಕ್ಕೆ ಖುಷಿಯಾಗಿದೆ ಎಂದರು ಕಲ್ಲೇಶ್.<br /> <br /> ಚುನಾವಣೆ ಸಂದರ್ಭ ಹೊರತುಪಡಿಸಿದರೆ ನಮ್ಮ ರಾಜಕಾರಣಿಗಳು ಯಾರೂ ಗ್ರಾಮಕ್ಕೆ ಬಂದಿರಲಿಲ್ಲ. ಈಗ ಜರ್ಮಿನಿ ಅಧ್ಯಕ್ಷರು ಭೇಟಿ ನೀಡುತ್ತಿದ್ದು, ನಮ್ಮ ಗ್ರಾಮದ ಹೆಸರು ವಿಶ್ವಕ್ಕೆ ತಿಳಿಯುತ್ತಿರುವುದು ಸಂತೋಷದ ವಿಷಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಸಿದ್ದರಾಮೇಶ್ ಹೇಳಿದರು.<br /> <br /> ಜರ್ಮನಿ ಅಧ್ಯಕ್ಷರು ಗ್ರಾಮಕ್ಕೆ ಬಂದು ಸಹಜವಾಗಿ ಎಲ್ಲರೊಡನೆ ಮಾತನಾಡಿದಾಗ ಗ್ರಾಮಸ್ಥರು ಮತ್ತಷ್ಟು ಖುಷಿಯಾದರು.</p>.<p><strong>ಪತ್ರಕರ್ತರು ಹೊರಗೆ</strong><br /> ಜರ್ಮನಿ ಅಧ್ಯಕ್ಷ ಜೋಕಿಮ್ಗೌಕ್ ಮುದ್ದಪುರ ಮತ್ತು ತ್ಯಾಗಟೂರಿಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಪತ್ರಕರ್ತರು ಬರುವುದು ಬೇಡವೆಂದು ಜಿಲ್ಲಾಡಳಿತ ಹೊರಗಿಟ್ಟಿತ್ತು. ವಾರ್ತಾ ಇಲಾಖೆಯಿಂದ ಸುದ್ದಿ ಕೊಡುತ್ತೇವೆ, ಪತ್ರಕರ್ತರು ಬರುವುದು ಬೇಡ ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮತ್ತು ಎಸ್ಪಿ ರಮಣ್ಗುಪ್ತ ತೀರ್ಮಾನಿಸಿದ್ದರು.</p>.<p>ತ್ಯಾಗಟೂರಿಗೆ ತೆರಳಿದ್ದ ಪತ್ರಕರ್ತರನ್ನು ಪೊಲೀಸರು ಒಳಗೆ ಬಿಡಲಿಲ್ಲ. ಆದರೆ ಜರ್ಮನಿ ಅಧ್ಯಕ್ಷರು ಇಲ್ಲಿನ ಜನರೊಂದಿಗೆ ಸಹಜವಾಗಿ ಬೆರೆತು ಮಾತನಾಡಿದರು. ಮುದ್ದಪುರದಲ್ಲಿ ಸಾಮಾನ್ಯ ಜನತೆ ಓಡಾಡುತ್ತಿದ್ದರೂ ಪತ್ರಿಕಾ ಛಾಯಾಗ್ರಹಕರನ್ನು ಪೊಲೀಸರು ತಡೆದು ಕಿರಿಕಿರಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಐವತ್ತು ಕುಟುಂಬಗಳ ಕುಗ್ರಾಮ ಮುದ್ದಪುರ. ಇಲ್ಲಿಗೆ ಶನಿವಾರ ಜರ್ಮನಿ ಅಧ್ಯಕ್ಷರು ಭೇಟಿ ನೀಡುತ್ತಾರೆ ಎಂಬುದೇ ವಿಶೇಷವಾಗಿತ್ತು. ಗ್ರಾಮದಲ್ಲಿ ತಳಿರು ತೋರಣ ಕಟ್ಟಿ ಅಧ್ಯಕ್ಷರನ್ನು ಸ್ವಾಗತಿಸಲು ಸಿಂಗಾರ ಮಾಡಲಾಗಿತ್ತು.<br /> <br /> ಜರ್ಮನಿ ಅಧ್ಯಕ್ಷ ಜೋಕಿಮ್ಗೌಕ್ ಅವರಿಗೆ ಹಾಲು ಕರೆಯುವುದನ್ನು ತೋರಿಸಲು ಗ್ರಾಮದ ಶಿವಮ್ಮ, ಮಂಜುಳಾ ಸಿದ್ಧರಾಗಿದ್ದರು. ಹಾರೆಯಲ್ಲಿ ಕಾಯಿ ಸುಲಿಯುವುದನ್ನು ತೋರಿಸಲು ಕಲ್ಲೇಶ್ ಹಾಜರಿದ್ದರು. ನಮ್ಮ ಸಾಮಾನ್ಯ ಕೃಷಿ ಬದುಕನ್ನು ನೋಡಲು ಜರ್ಮನಿ ಅಧ್ಯಕ್ಷರು ಬರುತ್ತಿರುವುದಕ್ಕೆ ಖುಷಿಯಾಗಿದೆ ಎಂದರು ಕಲ್ಲೇಶ್.<br /> <br /> ಚುನಾವಣೆ ಸಂದರ್ಭ ಹೊರತುಪಡಿಸಿದರೆ ನಮ್ಮ ರಾಜಕಾರಣಿಗಳು ಯಾರೂ ಗ್ರಾಮಕ್ಕೆ ಬಂದಿರಲಿಲ್ಲ. ಈಗ ಜರ್ಮಿನಿ ಅಧ್ಯಕ್ಷರು ಭೇಟಿ ನೀಡುತ್ತಿದ್ದು, ನಮ್ಮ ಗ್ರಾಮದ ಹೆಸರು ವಿಶ್ವಕ್ಕೆ ತಿಳಿಯುತ್ತಿರುವುದು ಸಂತೋಷದ ವಿಷಯ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಸಿದ್ದರಾಮೇಶ್ ಹೇಳಿದರು.<br /> <br /> ಜರ್ಮನಿ ಅಧ್ಯಕ್ಷರು ಗ್ರಾಮಕ್ಕೆ ಬಂದು ಸಹಜವಾಗಿ ಎಲ್ಲರೊಡನೆ ಮಾತನಾಡಿದಾಗ ಗ್ರಾಮಸ್ಥರು ಮತ್ತಷ್ಟು ಖುಷಿಯಾದರು.</p>.<p><strong>ಪತ್ರಕರ್ತರು ಹೊರಗೆ</strong><br /> ಜರ್ಮನಿ ಅಧ್ಯಕ್ಷ ಜೋಕಿಮ್ಗೌಕ್ ಮುದ್ದಪುರ ಮತ್ತು ತ್ಯಾಗಟೂರಿಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಪತ್ರಕರ್ತರು ಬರುವುದು ಬೇಡವೆಂದು ಜಿಲ್ಲಾಡಳಿತ ಹೊರಗಿಟ್ಟಿತ್ತು. ವಾರ್ತಾ ಇಲಾಖೆಯಿಂದ ಸುದ್ದಿ ಕೊಡುತ್ತೇವೆ, ಪತ್ರಕರ್ತರು ಬರುವುದು ಬೇಡ ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ ಮತ್ತು ಎಸ್ಪಿ ರಮಣ್ಗುಪ್ತ ತೀರ್ಮಾನಿಸಿದ್ದರು.</p>.<p>ತ್ಯಾಗಟೂರಿಗೆ ತೆರಳಿದ್ದ ಪತ್ರಕರ್ತರನ್ನು ಪೊಲೀಸರು ಒಳಗೆ ಬಿಡಲಿಲ್ಲ. ಆದರೆ ಜರ್ಮನಿ ಅಧ್ಯಕ್ಷರು ಇಲ್ಲಿನ ಜನರೊಂದಿಗೆ ಸಹಜವಾಗಿ ಬೆರೆತು ಮಾತನಾಡಿದರು. ಮುದ್ದಪುರದಲ್ಲಿ ಸಾಮಾನ್ಯ ಜನತೆ ಓಡಾಡುತ್ತಿದ್ದರೂ ಪತ್ರಿಕಾ ಛಾಯಾಗ್ರಹಕರನ್ನು ಪೊಲೀಸರು ತಡೆದು ಕಿರಿಕಿರಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>