<p>ನವದೆಹಲಿ (ಪಿಟಿಐ): ತಮ್ಮ 58 ದಿನಗಳ ಮುಷ್ಕರವನ್ನು ತತ್ ಕ್ಷಣದಿಂದಲೇ ಹಿಂತೆಗೆದುಕೊಳ್ಳಲಾಗುವುದು ಎಂದು ಚಳವಳಿ ನಡೆಸುತ್ತಿರುವ ಏರ್ ಇಂಡಿಯಾ ಪೈಲಟ್ ಗಳು ದೆಹಲಿ ಹೈಕೋರ್ಟಿಗೆ ಮಂಗಳವಾರ ತಿಳಿಸಿದ್ದಾರೆ.<br /> <br /> ಸೇವೆಗೆ ಹಾಜರಾತಿ ವರದಿ ಸಲ್ಲಿಸುವ ಮೂಲಕ 48 ಗಂಟೆಗಳ ಒಳಗಾಗಿ ಸೇವೆಗೆ ಮರಳುವುದಾಗಿಯೂ, ಮುಷ್ಕರದ ಅವಧಿಯಲ್ಲಿ ಸೇವೆಯಿಂದ ವಜಾ ಗೊಂಡಿರುವ ಪೈಲಟ್ ಗಳು ಸೇವೆಗೆ ಹಾಜರಾಗಲು ಇಚ್ಛೆ ಇರುವುದಾಗಿ ಮನವಿ ಸಲ್ಲಿಸಿ ಈ ಸಂಬಂಧ ವರದಿ ನೀಡುವುದಾಗಿಯೂ ಪೈಲಟ್ ಗಳು ತಮ್ಮ ವಕೀಲರಾದ ಗೀತಾ ಲೂಥ್ರ ಅವರ ಮೂಲಕ ನ್ಯಾಯಮೂರ್ತಿ ರೇವಾ ಖೇತ್ರಪಾಲ ಅವರಿಗೆ ತಿಳಿಸಿದರು.<br /> <br /> ಪೈಲಟ್ ಗಳ ಸಮಸ್ಯೆಗಳನ್ನು ಅನುಕಂಪದಿಂದ ಪರಿಗಣಿಸುವುದಾಗಿ ಏರ್ ಇಂಡಿಯಾ ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ಭರವಸೆ ನೀಡಿದ್ದನ್ನು ಅನುಸರಿಸಿ ಮುಷ್ಕರ ಹಿಂತೆಗೆದುಕೊಳ್ಳಲು ಪೈಲಟ್ ಗಳು ನಿರ್ಧರಿಸಿದರು.<br /> <br /> ವಿವಾದ ಇತ್ಯರ್ಥ ಪಡಿಸಲು ವಕೀಲರ ಮೂಲಕ ತೀವ್ರ ಪ್ರಯತ್ನ ನಡೆಸಲಾಯಿತು. ನಂತರ ಉಭಯ ಕಡೆಗಳ ವಕೀಲರೂ ತಮ್ಮ ಕಕ್ಷಿದಾರರು ಈ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ತಮ್ಮ 58 ದಿನಗಳ ಮುಷ್ಕರವನ್ನು ತತ್ ಕ್ಷಣದಿಂದಲೇ ಹಿಂತೆಗೆದುಕೊಳ್ಳಲಾಗುವುದು ಎಂದು ಚಳವಳಿ ನಡೆಸುತ್ತಿರುವ ಏರ್ ಇಂಡಿಯಾ ಪೈಲಟ್ ಗಳು ದೆಹಲಿ ಹೈಕೋರ್ಟಿಗೆ ಮಂಗಳವಾರ ತಿಳಿಸಿದ್ದಾರೆ.<br /> <br /> ಸೇವೆಗೆ ಹಾಜರಾತಿ ವರದಿ ಸಲ್ಲಿಸುವ ಮೂಲಕ 48 ಗಂಟೆಗಳ ಒಳಗಾಗಿ ಸೇವೆಗೆ ಮರಳುವುದಾಗಿಯೂ, ಮುಷ್ಕರದ ಅವಧಿಯಲ್ಲಿ ಸೇವೆಯಿಂದ ವಜಾ ಗೊಂಡಿರುವ ಪೈಲಟ್ ಗಳು ಸೇವೆಗೆ ಹಾಜರಾಗಲು ಇಚ್ಛೆ ಇರುವುದಾಗಿ ಮನವಿ ಸಲ್ಲಿಸಿ ಈ ಸಂಬಂಧ ವರದಿ ನೀಡುವುದಾಗಿಯೂ ಪೈಲಟ್ ಗಳು ತಮ್ಮ ವಕೀಲರಾದ ಗೀತಾ ಲೂಥ್ರ ಅವರ ಮೂಲಕ ನ್ಯಾಯಮೂರ್ತಿ ರೇವಾ ಖೇತ್ರಪಾಲ ಅವರಿಗೆ ತಿಳಿಸಿದರು.<br /> <br /> ಪೈಲಟ್ ಗಳ ಸಮಸ್ಯೆಗಳನ್ನು ಅನುಕಂಪದಿಂದ ಪರಿಗಣಿಸುವುದಾಗಿ ಏರ್ ಇಂಡಿಯಾ ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ಭರವಸೆ ನೀಡಿದ್ದನ್ನು ಅನುಸರಿಸಿ ಮುಷ್ಕರ ಹಿಂತೆಗೆದುಕೊಳ್ಳಲು ಪೈಲಟ್ ಗಳು ನಿರ್ಧರಿಸಿದರು.<br /> <br /> ವಿವಾದ ಇತ್ಯರ್ಥ ಪಡಿಸಲು ವಕೀಲರ ಮೂಲಕ ತೀವ್ರ ಪ್ರಯತ್ನ ನಡೆಸಲಾಯಿತು. ನಂತರ ಉಭಯ ಕಡೆಗಳ ವಕೀಲರೂ ತಮ್ಮ ಕಕ್ಷಿದಾರರು ಈ ನಿಟ್ಟಿನಲ್ಲಿ ಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>