<p><strong>ಮೂಡಿಗೆರೆ:</strong> ರಾಜ್ಯದ ಕರಾವಳಿ ಪ್ರದೇಶ ಹಾಗು ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳಕ್ಕೆ ಸಂಪರ್ಕಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಕಡೂರು-ಮಂಗಳೂರು ರಸ್ತೆಯು ಒಂದು. ಆದರೆ ಈ ರಸ್ತೆಯಲ್ಲಿ ಬಿದ್ದಿರುವ ಹೊಂಡ-ಗುಂಡಿಗಳನ್ನು ತಪ್ಪಿಸಲು ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ಇದೆ. <br /> <br /> ಪಟ್ಟಣದ ಲಯನ್ಸ್ ವೃತ್ತದಿಂದ ಹ್ಯಾಂಡ್ಪೋಸ್ಟ್ವರೆಗೆ ಸಾಗುವುದೇ ಸಾಹಸ. ಪಟ್ಟಣದ ಗಂಗನಮಕ್ಕಿ, ರೈತಭವನ, ಮಟನ್ ಮಾರ್ಕೆಟ್ ಬಳಿ ರಸ್ತೆ ಗುಂಡಿ ಬಿದ್ದಿದ್ದು, ಈ ಜಾಗದಲ್ಲಿ ನಿತ್ಯ ಅಪಘಾತವಾಗುತ್ತಿದೆ. ಎರಡು ಕಿ.ಮಿ ವ್ಯಾಪ್ತಿಯ ಈ ರಸ್ತೆಯಲ್ಲಿ ಒಂದು ವರ್ಷದಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ನಾಲ್ಕು ದಾಟಿದೆ. <br /> <br /> ಆದರೆ ಇದುವರೆಗೂ ಈ ಜಾಗದಲ್ಲಿ ಅಪಘಾತ ವಲಯ ಎಂಬ ಮಾಹಿತಿ ನಾಮಫಲಕಗಳಿಲ್ಲ. ರಸ್ತೆ ಗುಂಡಿಗಳ ಬಗ್ಗೆ ಜನಪ್ರತಿನಿಧಿಗಳಿಗೆ ಪ್ರಶ್ನಿಸಿದರೆ `ರಸ್ತೆ ದುರಸ್ತಿಗೆ ಯೊಜನೆ ಸಿದ್ಧವಾಗುತ್ತಿದೆ~ ಎಂಬ ಸಿದ್ಧ ಉತ್ತರ ನೀಡಿ ನುಣಿಚಿ ಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಲೋಕಸಭಾ ಉಪ ಚುಣಾವಣೆ ನಡೆದಿದ್ದು, ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಪಕ್ಷಗಳ ಹಿರಿಯ ನಾಯಕರು ಈ ಗುಂಡಿ ರಸ್ತೆಯಲ್ಲೇ ಸಂಚರಿಸಿದರೂ ಜಾಣ ಕುರುಡನ್ನು ಪ್ರದರ್ಶಿಸ್ದ್ದಿದಾರೆ ಎನ್ನುತ್ತಾರೆ ಸಾರ್ವಜನಿಕರು.<br /> <br /> ಗ್ರಾಮೀಣ ಪ್ರದೇಶ ಗಳಾದ ಕನ್ನೆಹಳ್ಳಿ- ಕೈಮರ, ಮಣ್ಣಿಕೆರೆ-ಜನ್ನಾಪುರ, ಮತ್ತಿ ಕಟ್ಟೆ- ಹೆಗ್ಗುಡ್ಲು, ಮೂಡಸಸಿ- ಕಾರ ಬೈಲು, ಕೆಂಜಿಗೆ-ಬಾನಳ್ಳಿ ರಸ್ತೆಗಳು ಡಾಂಬರು ಕಾಣದೆ ಹತ್ತಾರು ವರ್ಷ ಕಳೆದಿವೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ:</strong> ರಾಜ್ಯದ ಕರಾವಳಿ ಪ್ರದೇಶ ಹಾಗು ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳಕ್ಕೆ ಸಂಪರ್ಕಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಗಳಲ್ಲಿ ಕಡೂರು-ಮಂಗಳೂರು ರಸ್ತೆಯು ಒಂದು. ಆದರೆ ಈ ರಸ್ತೆಯಲ್ಲಿ ಬಿದ್ದಿರುವ ಹೊಂಡ-ಗುಂಡಿಗಳನ್ನು ತಪ್ಪಿಸಲು ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ಇದೆ. <br /> <br /> ಪಟ್ಟಣದ ಲಯನ್ಸ್ ವೃತ್ತದಿಂದ ಹ್ಯಾಂಡ್ಪೋಸ್ಟ್ವರೆಗೆ ಸಾಗುವುದೇ ಸಾಹಸ. ಪಟ್ಟಣದ ಗಂಗನಮಕ್ಕಿ, ರೈತಭವನ, ಮಟನ್ ಮಾರ್ಕೆಟ್ ಬಳಿ ರಸ್ತೆ ಗುಂಡಿ ಬಿದ್ದಿದ್ದು, ಈ ಜಾಗದಲ್ಲಿ ನಿತ್ಯ ಅಪಘಾತವಾಗುತ್ತಿದೆ. ಎರಡು ಕಿ.ಮಿ ವ್ಯಾಪ್ತಿಯ ಈ ರಸ್ತೆಯಲ್ಲಿ ಒಂದು ವರ್ಷದಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ನಾಲ್ಕು ದಾಟಿದೆ. <br /> <br /> ಆದರೆ ಇದುವರೆಗೂ ಈ ಜಾಗದಲ್ಲಿ ಅಪಘಾತ ವಲಯ ಎಂಬ ಮಾಹಿತಿ ನಾಮಫಲಕಗಳಿಲ್ಲ. ರಸ್ತೆ ಗುಂಡಿಗಳ ಬಗ್ಗೆ ಜನಪ್ರತಿನಿಧಿಗಳಿಗೆ ಪ್ರಶ್ನಿಸಿದರೆ `ರಸ್ತೆ ದುರಸ್ತಿಗೆ ಯೊಜನೆ ಸಿದ್ಧವಾಗುತ್ತಿದೆ~ ಎಂಬ ಸಿದ್ಧ ಉತ್ತರ ನೀಡಿ ನುಣಿಚಿ ಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಲೋಕಸಭಾ ಉಪ ಚುಣಾವಣೆ ನಡೆದಿದ್ದು, ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಪಕ್ಷಗಳ ಹಿರಿಯ ನಾಯಕರು ಈ ಗುಂಡಿ ರಸ್ತೆಯಲ್ಲೇ ಸಂಚರಿಸಿದರೂ ಜಾಣ ಕುರುಡನ್ನು ಪ್ರದರ್ಶಿಸ್ದ್ದಿದಾರೆ ಎನ್ನುತ್ತಾರೆ ಸಾರ್ವಜನಿಕರು.<br /> <br /> ಗ್ರಾಮೀಣ ಪ್ರದೇಶ ಗಳಾದ ಕನ್ನೆಹಳ್ಳಿ- ಕೈಮರ, ಮಣ್ಣಿಕೆರೆ-ಜನ್ನಾಪುರ, ಮತ್ತಿ ಕಟ್ಟೆ- ಹೆಗ್ಗುಡ್ಲು, ಮೂಡಸಸಿ- ಕಾರ ಬೈಲು, ಕೆಂಜಿಗೆ-ಬಾನಳ್ಳಿ ರಸ್ತೆಗಳು ಡಾಂಬರು ಕಾಣದೆ ಹತ್ತಾರು ವರ್ಷ ಕಳೆದಿವೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>