<p><strong>ಬೆಂಗಳೂರು: </strong>ಎರಡು ತಿಂಗಳ ಅವಧಿಯಲ್ಲಿ 256 ಪ್ರಕರಣಗಳನ್ನು ಭೇದಿಸಿರುವ ನಗರ ಪಶ್ಚಿಮ ವಿಭಾಗದ ಪೊಲೀಸರು 185 ಆರೋಪಿಗಳನ್ನು ಬಂಧಿಸಿ, ಮೂರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಈ ವಿಷಯ ತಿಳಿಸಿದರು.ಬಂಧಿತರಿಂದ 6 ಕೆ.ಜಿ ಚಿನ್ನ ಹಾಗೂ 4 ಕೆ.ಜಿ ಬೆಳ್ಳಿಯ ಆಭರಣಗಳು, 102 ಬೈಕ್ಗಳು, 5 ಆಟೊಗಳು, 16 ಕಾರುಗಳು 22 ಲ್ಯಾಪ್ಟಾಪ್ ಮತ್ತು 1.29 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ತಿಂಗಳ ಕಾರ್ಯಾಚರಣೆಯಲ್ಲಿ ಪಶ್ಚಿಮ ವಿಭಾಗದ ಬಹುತೇಕ ಕಳವು ಪ್ರಕರಣಗಳನ್ನು ಭೇದಿಸಲಾಗಿದೆ~ ಎಂದು ಅವರು ತಿಳಿಸಿದರು.<br /> <br /> `ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ನಗರದ ಸುರಕ್ಷತೆ ಬಗ್ಗೆ ಪೊಲೀಸರು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.<br /> <br /> <strong>ವಂಚಕಿ ಬಂಧನ: </strong>ಮದುವೆಗೆ ಹೋಗಲು ಆಭರಣಗಳ ಅಗತ್ಯವಿದೆ ಎಂದು ಹೇಳಿ ಅಕ್ಕಪಕ್ಕದ ಮನೆಯವರಿಂದ ಚಿನ್ನಾಭರಣಗಳನ್ನು ಪಡೆದು ವಂಚಿಸುತ್ತಿದ್ದ ರೇಷ್ಮಾಭಾನು (32) ಎಂಬಾಕೆಯನ್ನು ಜಗಜೀವನರಾಂನಗರ ಪೊಲೀಸರು ಬಂಧಿಸಿ 30 ಲಕ್ಷ ರೂಪಾಯಿ ಮೌಲ್ಯದ ಒಂದು ಕೆ.ಜಿ. 383 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ತಮಿಳುನಾಡಿನ ಡೆಂಕನಕೋಟೈ ಮೂಲದ ರೇಷ್ಮಾ ವಿಧವೆಯಾಗಿದ್ದು, ಪಾದರಾಯನಪುರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ಮದುವೆಗೆ ಹೋಗಲು ಚಿನ್ನಾಭರಣಗಳ ಅಗತ್ಯವಿದೆ ಎಂದು ಅಕ್ಕಪಕ್ಕದ ಮನೆಯ ಪರಿಚಿತರಿಂದ ಆಭರಣಗಳನ್ನು ಪಡೆದುಕೊಳ್ಳುತ್ತಿದ್ದ ಈಕೆ ನಂತರ ಅವುಗಳನ್ನು ಹಿಂತಿರುಗಿಸುತ್ತಿರಲಿಲ್ಲ. <br /> <br /> ಒಂದು ಕೆ.ಜಿ.ಗೂ ಹೆಚ್ಚು ಚಿನ್ನಾಭರಣಗಳನ್ನು ಮಾರಿಕೊಂಡು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಳು. ಇತ್ತೀಚೆಗೆ ನಗರಕ್ಕೆ ಬಂದಿದ್ದ ಆಕೆಯನ್ನು ಬಂಧಿಸಲಾಗಿದೆ. ಈಕೆಯ ವಿರುದ್ಧ ಜಗಜೀವನರಾಂನಗರ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.<br /> <br /> <strong>ದರೋಡೆಕೋರರ ಬಂಧನ:</strong> ಚಂದ್ರಾಲೇಔಟ್ನ ಕೆನರಾ ಬ್ಯಾಂಕ್ ಕಾಲೊನಿಯಲ್ಲಿ ಇದೇ 10ರಂದು ನಡೆದಿದ್ದ ದರೋಡೆ ಪ್ರಕರಣದ ಸಂಬಂಧ ಅಭಿಷೇಕ್ (20), ಶಶಿಕುಮಾರ್ (21), ರಂಜಿತ್ (20), ಬಲರಾಮ (20) ಮತ್ತು ಗಿರೀಶ (27) ಎಂಬ ಆರೋಪಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.<br /> <br /> ಆ.10ರಂದು ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ವಿಜಯೇಂದ್ರಶೆಟ್ಟಿ ಎಂಬುವರನ್ನು ಕೆನರಾ ಬ್ಯಾಂಕ್ ಕಾಲೊನಿಯ ಎರಡನೇ ಅಡ್ಡರಸ್ತೆಯಲ್ಲಿ ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ 60 ಗ್ರಾಂ ಚಿನ್ನಾಭರಣ ಹಾಗೂ ಡೆಬಿಟ್ ಕಾರ್ಡ್ಗಳನ್ನು ದೋಚಿದ್ದರು. ಆರೋಪಿಗಳ ವಿರುದ್ಧ ಈ ಹಿಂದೆ ಎರಡು ಸುಲಿಗೆ ಪ್ರಕರಣಗಳು ದಾಖಲಾಗಿವೆ.<br /> <br /> <strong>`ಈಶಾನ್ಯ ಜನರ ಸುರಕ್ಷತೆಗೆ ಬದ್ಧ~<br /> </strong>`ಈಶಾನ್ಯ ರಾಜ್ಯಗಳ ಸಾಕಷ್ಟು ಜನರು ಈಗಾಗಲೇ ಬೆಂಗಳೂರು ತೊರೆದಿದ್ದಾರೆ. ನಗರದಲ್ಲಿ ಉಳಿದಿರುವ ಈಶಾನ್ಯ ಭಾಗದ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಶಾನ್ಯ ರಾಜ್ಯಗಳ ಜನರ ಸುರಕ್ಷತೆಗೆ ಪೊಲೀಸ್ ಇಲಾಖೆ ಬದ್ಧವಿದೆ~<br /> -<strong> ಜ್ಯೋತಿಪ್ರಕಾಶ್ ಮಿರ್ಜಿ ನಗರ ಪೊಲೀಸ್ ಕಮಿಷನರ್<br /> <br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎರಡು ತಿಂಗಳ ಅವಧಿಯಲ್ಲಿ 256 ಪ್ರಕರಣಗಳನ್ನು ಭೇದಿಸಿರುವ ನಗರ ಪಶ್ಚಿಮ ವಿಭಾಗದ ಪೊಲೀಸರು 185 ಆರೋಪಿಗಳನ್ನು ಬಂಧಿಸಿ, ಮೂರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಈ ವಿಷಯ ತಿಳಿಸಿದರು.ಬಂಧಿತರಿಂದ 6 ಕೆ.ಜಿ ಚಿನ್ನ ಹಾಗೂ 4 ಕೆ.ಜಿ ಬೆಳ್ಳಿಯ ಆಭರಣಗಳು, 102 ಬೈಕ್ಗಳು, 5 ಆಟೊಗಳು, 16 ಕಾರುಗಳು 22 ಲ್ಯಾಪ್ಟಾಪ್ ಮತ್ತು 1.29 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ತಿಂಗಳ ಕಾರ್ಯಾಚರಣೆಯಲ್ಲಿ ಪಶ್ಚಿಮ ವಿಭಾಗದ ಬಹುತೇಕ ಕಳವು ಪ್ರಕರಣಗಳನ್ನು ಭೇದಿಸಲಾಗಿದೆ~ ಎಂದು ಅವರು ತಿಳಿಸಿದರು.<br /> <br /> `ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ನಗರದ ಸುರಕ್ಷತೆ ಬಗ್ಗೆ ಪೊಲೀಸರು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.<br /> <br /> <strong>ವಂಚಕಿ ಬಂಧನ: </strong>ಮದುವೆಗೆ ಹೋಗಲು ಆಭರಣಗಳ ಅಗತ್ಯವಿದೆ ಎಂದು ಹೇಳಿ ಅಕ್ಕಪಕ್ಕದ ಮನೆಯವರಿಂದ ಚಿನ್ನಾಭರಣಗಳನ್ನು ಪಡೆದು ವಂಚಿಸುತ್ತಿದ್ದ ರೇಷ್ಮಾಭಾನು (32) ಎಂಬಾಕೆಯನ್ನು ಜಗಜೀವನರಾಂನಗರ ಪೊಲೀಸರು ಬಂಧಿಸಿ 30 ಲಕ್ಷ ರೂಪಾಯಿ ಮೌಲ್ಯದ ಒಂದು ಕೆ.ಜಿ. 383 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.<br /> <br /> ತಮಿಳುನಾಡಿನ ಡೆಂಕನಕೋಟೈ ಮೂಲದ ರೇಷ್ಮಾ ವಿಧವೆಯಾಗಿದ್ದು, ಪಾದರಾಯನಪುರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ಮದುವೆಗೆ ಹೋಗಲು ಚಿನ್ನಾಭರಣಗಳ ಅಗತ್ಯವಿದೆ ಎಂದು ಅಕ್ಕಪಕ್ಕದ ಮನೆಯ ಪರಿಚಿತರಿಂದ ಆಭರಣಗಳನ್ನು ಪಡೆದುಕೊಳ್ಳುತ್ತಿದ್ದ ಈಕೆ ನಂತರ ಅವುಗಳನ್ನು ಹಿಂತಿರುಗಿಸುತ್ತಿರಲಿಲ್ಲ. <br /> <br /> ಒಂದು ಕೆ.ಜಿ.ಗೂ ಹೆಚ್ಚು ಚಿನ್ನಾಭರಣಗಳನ್ನು ಮಾರಿಕೊಂಡು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಳು. ಇತ್ತೀಚೆಗೆ ನಗರಕ್ಕೆ ಬಂದಿದ್ದ ಆಕೆಯನ್ನು ಬಂಧಿಸಲಾಗಿದೆ. ಈಕೆಯ ವಿರುದ್ಧ ಜಗಜೀವನರಾಂನಗರ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ.<br /> <br /> <strong>ದರೋಡೆಕೋರರ ಬಂಧನ:</strong> ಚಂದ್ರಾಲೇಔಟ್ನ ಕೆನರಾ ಬ್ಯಾಂಕ್ ಕಾಲೊನಿಯಲ್ಲಿ ಇದೇ 10ರಂದು ನಡೆದಿದ್ದ ದರೋಡೆ ಪ್ರಕರಣದ ಸಂಬಂಧ ಅಭಿಷೇಕ್ (20), ಶಶಿಕುಮಾರ್ (21), ರಂಜಿತ್ (20), ಬಲರಾಮ (20) ಮತ್ತು ಗಿರೀಶ (27) ಎಂಬ ಆರೋಪಿಗಳನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಹಾಗೂ ಒಂದು ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.<br /> <br /> ಆ.10ರಂದು ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ವಿಜಯೇಂದ್ರಶೆಟ್ಟಿ ಎಂಬುವರನ್ನು ಕೆನರಾ ಬ್ಯಾಂಕ್ ಕಾಲೊನಿಯ ಎರಡನೇ ಅಡ್ಡರಸ್ತೆಯಲ್ಲಿ ಅಡ್ಡಗಟ್ಟಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ 60 ಗ್ರಾಂ ಚಿನ್ನಾಭರಣ ಹಾಗೂ ಡೆಬಿಟ್ ಕಾರ್ಡ್ಗಳನ್ನು ದೋಚಿದ್ದರು. ಆರೋಪಿಗಳ ವಿರುದ್ಧ ಈ ಹಿಂದೆ ಎರಡು ಸುಲಿಗೆ ಪ್ರಕರಣಗಳು ದಾಖಲಾಗಿವೆ.<br /> <br /> <strong>`ಈಶಾನ್ಯ ಜನರ ಸುರಕ್ಷತೆಗೆ ಬದ್ಧ~<br /> </strong>`ಈಶಾನ್ಯ ರಾಜ್ಯಗಳ ಸಾಕಷ್ಟು ಜನರು ಈಗಾಗಲೇ ಬೆಂಗಳೂರು ತೊರೆದಿದ್ದಾರೆ. ನಗರದಲ್ಲಿ ಉಳಿದಿರುವ ಈಶಾನ್ಯ ಭಾಗದ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಶಾನ್ಯ ರಾಜ್ಯಗಳ ಜನರ ಸುರಕ್ಷತೆಗೆ ಪೊಲೀಸ್ ಇಲಾಖೆ ಬದ್ಧವಿದೆ~<br /> -<strong> ಜ್ಯೋತಿಪ್ರಕಾಶ್ ಮಿರ್ಜಿ ನಗರ ಪೊಲೀಸ್ ಕಮಿಷನರ್<br /> <br /> </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>