<p><strong>ಮುಂಬೈ (ಪಿಟಿಐ):</strong> ಬಾಲಿವುಡ್ ನಟ ವಿಂದು ರಾಂಧವ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಸಿಇಒ' ಗುರುನಾಥ್ ಮೇಯಪ್ಪನ್ಗೆ ಇಲ್ಲಿನ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.<br /> <br /> ಇವರಿಬ್ಬರಲ್ಲದೆ, ಐಪಿಎಲ್ ಬೆಟ್ಟಿಂಗ್ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇತರ ಆರು ಬುಕ್ಕಿಗಳಿಗೂ ಜಾಮೀನು ದೊರೆತಿದೆ.<br /> <br /> ತಲಾ ರೂ. 25 ಸಾವಿರ ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ನೀಡಲಾಗಿದೆ. ದೇಶ ಬಿಟ್ಟು ಹೋಗಬಾರದೆಂದು ನ್ಯಾಯಾಲಯ ಇವರಿಗೆ ಸೂಚಿಸಿದ್ದು, ಎರಡು ದಿನಗಳಿಗೊಮ್ಮೆ ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹಾಜರಾಗುವಂತೆಯೂ ತಿಳಿಸಿದೆ.<br /> <br /> ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಮೇಯಪ್ಪನ್ ಹಾಗೂ ವಿಂದು ಅವರನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೂನ್ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಇಬ್ಬರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.<br /> <br /> ಮೇಯಪ್ಪನ್ ಮತ್ತು ವಿಂದು ಇನ್ನೂ ಕಸ್ಟಡಿಯಲ್ಲಿದ್ದುಕೊಂಡು ವಿಚಾರಣೆ ಎದುರಿಸುವ ಅಗತ್ಯವಿಲ್ಲ ಎಂದು ಹೇಳಿ ಇವರ ವಕೀಲರು ಜಾಮೀನು ಕೋರಿದ್ದರು. ವಿಂದು ಮೇ 22 ರಿಂದ, ಮೇಯಪ್ಪನ್ ಮೇ 25 ರಿಂದಲೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.<br /> <br /> <strong>ಕಳ್ಳಾಟದಲ್ಲಿ ಎಂದಿಗೂ ಭಾಗಿಯಾಗಿಲ್ಲ: ವಿಂದೂ</strong><br /> <strong>ನವದೆಹಲಿ:</strong> ಐಪಿಎಲ್ ವೇಳೆ ಕಳ್ಳಾಟದಲ್ಲಿ ಪಾಲ್ಗೊಂಡಿದ್ದನ್ನು ಬಾಲಿವುಡ ನಟ ವಿಂದು ದಾರಾ ಸಿಂಗ್ ಅಲ್ಲಗಳೆದಿದ್ದಾರೆ. `ನಾನು ಪೊಲೀಸ್ ವಶ ದಲ್ಲಿದ್ದೆ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ' ಎಂದು ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.<br /> <br /> `ನಾನು ಎಂದಿಗೂ ಸುಳ್ಳು ಹೇಳಿಲ್ಲ. ಪೊಲೀಸರಿಗೆ ಸಹಕರಿಸಿದ್ದೇನೆ. ಪೊಲೀಸ್ ವಶದಲ್ಲಿ ಯಾಕಿದ್ದೆ ಎಂಬುದು ನನಗೆ ಗೊತ್ತಿಲ್ಲ' ಎಂದು ವಿಂದೂ ನುಡಿದಿದ್ದಾರೆ.<br /> <br /> ಪ್ರಕರಣದ ಮತ್ತೊಬ್ಬ ಶಂಕಿತ ಹಾಗೂ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಅಳಿಯನೂ ಆಗಿರುವ ಗುರುನಾಥ್ ಮೇಯಪ್ಪನ್ ಅವರು ತಮ್ಮ ಗೆಳೆಯರಾಗಿದ್ದರು ಎಂದು ಅವರು ಹೇಳಿದ್ದಾರೆ.<br /> <br /> `ಅವರು ನನ್ನ ಸ್ನೇಹಿತರು. ಸಂಜಯ್ ಜೈಪುರ ಹಾಗೂ ಪವನ್ ಜೈಪುರ ಅವರು ಜೈಪುರದ ಆಭರಣ ವ್ಯಾಪಾರಿಗಳು' ಎಂದು ತಿಳಿಸಿರುವ ವಿಂದೂ, `ನಾವು ಎಂದಿಗೂ ಯಾವುದೇ ಕಳ್ಳಾಟದ ಬಗ್ಗೆ ಮಾತನಾಡಿಲ್ಲ' ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಬಾಲಿವುಡ್ ನಟ ವಿಂದು ರಾಂಧವ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಸಿಇಒ' ಗುರುನಾಥ್ ಮೇಯಪ್ಪನ್ಗೆ ಇಲ್ಲಿನ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.<br /> <br /> ಇವರಿಬ್ಬರಲ್ಲದೆ, ಐಪಿಎಲ್ ಬೆಟ್ಟಿಂಗ್ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಇತರ ಆರು ಬುಕ್ಕಿಗಳಿಗೂ ಜಾಮೀನು ದೊರೆತಿದೆ.<br /> <br /> ತಲಾ ರೂ. 25 ಸಾವಿರ ವೈಯಕ್ತಿಕ ಬಾಂಡ್ ಆಧಾರದಲ್ಲಿ ಜಾಮೀನು ನೀಡಲಾಗಿದೆ. ದೇಶ ಬಿಟ್ಟು ಹೋಗಬಾರದೆಂದು ನ್ಯಾಯಾಲಯ ಇವರಿಗೆ ಸೂಚಿಸಿದ್ದು, ಎರಡು ದಿನಗಳಿಗೊಮ್ಮೆ ಕ್ರೈಂ ಬ್ರಾಂಚ್ ಅಧಿಕಾರಿಗಳ ಮುಂದೆ ಹಾಜರಾಗುವಂತೆಯೂ ತಿಳಿಸಿದೆ.<br /> <br /> ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರ ಅಳಿಯ ಮೇಯಪ್ಪನ್ ಹಾಗೂ ವಿಂದು ಅವರನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜೂನ್ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಇಬ್ಬರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.<br /> <br /> ಮೇಯಪ್ಪನ್ ಮತ್ತು ವಿಂದು ಇನ್ನೂ ಕಸ್ಟಡಿಯಲ್ಲಿದ್ದುಕೊಂಡು ವಿಚಾರಣೆ ಎದುರಿಸುವ ಅಗತ್ಯವಿಲ್ಲ ಎಂದು ಹೇಳಿ ಇವರ ವಕೀಲರು ಜಾಮೀನು ಕೋರಿದ್ದರು. ವಿಂದು ಮೇ 22 ರಿಂದ, ಮೇಯಪ್ಪನ್ ಮೇ 25 ರಿಂದಲೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.<br /> <br /> <strong>ಕಳ್ಳಾಟದಲ್ಲಿ ಎಂದಿಗೂ ಭಾಗಿಯಾಗಿಲ್ಲ: ವಿಂದೂ</strong><br /> <strong>ನವದೆಹಲಿ:</strong> ಐಪಿಎಲ್ ವೇಳೆ ಕಳ್ಳಾಟದಲ್ಲಿ ಪಾಲ್ಗೊಂಡಿದ್ದನ್ನು ಬಾಲಿವುಡ ನಟ ವಿಂದು ದಾರಾ ಸಿಂಗ್ ಅಲ್ಲಗಳೆದಿದ್ದಾರೆ. `ನಾನು ಪೊಲೀಸ್ ವಶ ದಲ್ಲಿದ್ದೆ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ' ಎಂದು ಸುದ್ದಿ ವಾಹಿನಿಗಳಿಗೆ ತಿಳಿಸಿದ್ದಾರೆ.<br /> <br /> `ನಾನು ಎಂದಿಗೂ ಸುಳ್ಳು ಹೇಳಿಲ್ಲ. ಪೊಲೀಸರಿಗೆ ಸಹಕರಿಸಿದ್ದೇನೆ. ಪೊಲೀಸ್ ವಶದಲ್ಲಿ ಯಾಕಿದ್ದೆ ಎಂಬುದು ನನಗೆ ಗೊತ್ತಿಲ್ಲ' ಎಂದು ವಿಂದೂ ನುಡಿದಿದ್ದಾರೆ.<br /> <br /> ಪ್ರಕರಣದ ಮತ್ತೊಬ್ಬ ಶಂಕಿತ ಹಾಗೂ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಅಳಿಯನೂ ಆಗಿರುವ ಗುರುನಾಥ್ ಮೇಯಪ್ಪನ್ ಅವರು ತಮ್ಮ ಗೆಳೆಯರಾಗಿದ್ದರು ಎಂದು ಅವರು ಹೇಳಿದ್ದಾರೆ.<br /> <br /> `ಅವರು ನನ್ನ ಸ್ನೇಹಿತರು. ಸಂಜಯ್ ಜೈಪುರ ಹಾಗೂ ಪವನ್ ಜೈಪುರ ಅವರು ಜೈಪುರದ ಆಭರಣ ವ್ಯಾಪಾರಿಗಳು' ಎಂದು ತಿಳಿಸಿರುವ ವಿಂದೂ, `ನಾವು ಎಂದಿಗೂ ಯಾವುದೇ ಕಳ್ಳಾಟದ ಬಗ್ಗೆ ಮಾತನಾಡಿಲ್ಲ' ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>