<p> ಮೈಸೂರು: ನಗರದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 45 ಅಡಿ ಎತ್ತರದ ಏಕಶಿಲಾ ಆಂಜನೇಯಸ್ವಾಮಿ ಮೂರ್ತಿಯ ಕೆತ್ತನೆಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.<br /> <br /> ರಾಜ್ಯದಲ್ಲೇ ಪ್ರಥಮ ಬಾರಿಗೆ 45 ಅಡಿ ಎತ್ತರದ ಏಕಶಿಲಾ ಅಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಇದಕ್ಕಾಗಿ ಆಶ್ರಮದ ಬಲಭಾಗದಲ್ಲಿ 25 ಅಡಿ ಎತ್ತರದ ಪೀಠವನ್ನು ನಿರ್ಮಿಸಲಾಗುತ್ತಿದ್ದು, ಒಟ್ಟು 75 ಅಡಿ ಎತ್ತರದ ಮೂರ್ತಿ ನಿರ್ಮಾಣಗೊಳ್ಳಲಿದೆ. <br /> <br /> ಆಂಧ್ರಪದೇಶದ ಕಡಪ ಜಿಲ್ಲೆಯ ಪುಲಿವೆಂದಲ ಸಮೀಪದ ಮಲ್ಲೆಲ ಗ್ರಾಮದಿಂದ ಮಾ.11 ರಂದು ಏಕಶಿಲೆಯನ್ನು ತರಲಾಗಿದೆ. ಸುಮಾರು 200 ಟನ್ ತೂಕದ ಶಿಲೆಯನ್ನು 98 ಚಕ್ರಗಳಿರುವ ವಾಹನದಲ್ಲಿ 12 ದಿನಗಳ ಕಾಲ ಸಂಚರ ಮಾಡಿ ನಗರಕ್ಕೆ ತರಲಾಗಿದೆ.<br /> <br /> ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, `ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಂಜನೇಯಸ್ವಾಮಿ ಮೂರ್ತಿಯನ್ನು ಡಿ.26 ರಂದು ಪ್ರತಿಷ್ಠಾಪಿಸಲಾಗುವುದು. ಆಂಧ್ರಪ್ರದೇಶದಿಂದ ಶಿಲೆಯನ್ನು ಮೈಸೂರಿಗೆ ತರಲು ಎರಡು ರಾಜ್ಯ ಸರ್ಕಾರಗಳು ಸಹಕರಿಸಿವೆ. ಎಲ್ಲ ಜಾತಿಯವರು ಆಂಜನೇಯಸ್ವಾಮಿಯನ್ನು ಆರಾಧಿಸುವುದರಿಂದ ಈ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ~ ಎಂದರು.<br /> <br /> ಶಿಲ್ಪಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, `ಏಕಶಿಲೆಯನ್ನು ಮೈಸೂರಿಗೆ ತರುವ ದೃಷ್ಟಿಯಿಂದ 300 ಟನ್ಗಳಷ್ಟಿದ್ದ ಶಿಲೆಯ ತೂಕವನ್ನು 200 ಟನ್ಗಳಿಗೆ ಇಳಿಸಲಾಗಿದೆ. ಸೋಮವಾರದಿಂದ 15 ಶಿಲ್ಪಿಗಳು ಕೆತ್ತನೆ ಕಾರ್ಯ ಆರಂಭಿಸಲಿದ್ದಾರೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> ಮೈಸೂರು: ನಗರದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ 45 ಅಡಿ ಎತ್ತರದ ಏಕಶಿಲಾ ಆಂಜನೇಯಸ್ವಾಮಿ ಮೂರ್ತಿಯ ಕೆತ್ತನೆಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಾನುವಾರ ಚಾಲನೆ ನೀಡಿದರು.<br /> <br /> ರಾಜ್ಯದಲ್ಲೇ ಪ್ರಥಮ ಬಾರಿಗೆ 45 ಅಡಿ ಎತ್ತರದ ಏಕಶಿಲಾ ಅಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಇದಕ್ಕಾಗಿ ಆಶ್ರಮದ ಬಲಭಾಗದಲ್ಲಿ 25 ಅಡಿ ಎತ್ತರದ ಪೀಠವನ್ನು ನಿರ್ಮಿಸಲಾಗುತ್ತಿದ್ದು, ಒಟ್ಟು 75 ಅಡಿ ಎತ್ತರದ ಮೂರ್ತಿ ನಿರ್ಮಾಣಗೊಳ್ಳಲಿದೆ. <br /> <br /> ಆಂಧ್ರಪದೇಶದ ಕಡಪ ಜಿಲ್ಲೆಯ ಪುಲಿವೆಂದಲ ಸಮೀಪದ ಮಲ್ಲೆಲ ಗ್ರಾಮದಿಂದ ಮಾ.11 ರಂದು ಏಕಶಿಲೆಯನ್ನು ತರಲಾಗಿದೆ. ಸುಮಾರು 200 ಟನ್ ತೂಕದ ಶಿಲೆಯನ್ನು 98 ಚಕ್ರಗಳಿರುವ ವಾಹನದಲ್ಲಿ 12 ದಿನಗಳ ಕಾಲ ಸಂಚರ ಮಾಡಿ ನಗರಕ್ಕೆ ತರಲಾಗಿದೆ.<br /> <br /> ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, `ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಂಜನೇಯಸ್ವಾಮಿ ಮೂರ್ತಿಯನ್ನು ಡಿ.26 ರಂದು ಪ್ರತಿಷ್ಠಾಪಿಸಲಾಗುವುದು. ಆಂಧ್ರಪ್ರದೇಶದಿಂದ ಶಿಲೆಯನ್ನು ಮೈಸೂರಿಗೆ ತರಲು ಎರಡು ರಾಜ್ಯ ಸರ್ಕಾರಗಳು ಸಹಕರಿಸಿವೆ. ಎಲ್ಲ ಜಾತಿಯವರು ಆಂಜನೇಯಸ್ವಾಮಿಯನ್ನು ಆರಾಧಿಸುವುದರಿಂದ ಈ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ~ ಎಂದರು.<br /> <br /> ಶಿಲ್ಪಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, `ಏಕಶಿಲೆಯನ್ನು ಮೈಸೂರಿಗೆ ತರುವ ದೃಷ್ಟಿಯಿಂದ 300 ಟನ್ಗಳಷ್ಟಿದ್ದ ಶಿಲೆಯ ತೂಕವನ್ನು 200 ಟನ್ಗಳಿಗೆ ಇಳಿಸಲಾಗಿದೆ. ಸೋಮವಾರದಿಂದ 15 ಶಿಲ್ಪಿಗಳು ಕೆತ್ತನೆ ಕಾರ್ಯ ಆರಂಭಿಸಲಿದ್ದಾರೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>