<p><strong>ಮೈಸೂರು:</strong> ಚಾಮರಾಜೇಂದ್ರ ಮೃಗಾಲಯವು ದೇಶದ ಮೃಗಾಲಯಗಳ ಪೈಕಿ ಪ್ರಥಮವಾಗಿ ಅನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವ ಸೇವೆಯನ್ನು ಸೋಮವಾರ ಆರಂಭಿಸಿತು.ಮೈಸೂರಿನವರೇ ಆದ ಪ್ರಮೋದ್ ರಾವ್ ಆನ್ಲೈನ್ ಸಾಫ್ಟ್ವೇರ್ ಅನ್ನು ಸಿದ್ಧಪಡಿಸಿದ್ದಾರೆ.<br /> <br /> ಈ ಸೇವೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದೀಪಕ್ ಶರ್ಮಾ ಚಾಲನೆ ನೀಡಿದರು. `ಆನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ರೀತಿಯ ವ್ಯವಸ್ಥೆಯನ್ನು ಪ್ರವಾಸಿಗರು ಬಯಸಿದ್ದರು~ ಎಂದರು. <br /> <br /> ಪ್ರವಾಸಿಗರು <a href="http://www.mysorezoo.info">www.mysorezoo.info</a> ತಾಣಕ್ಕೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬೇಕು.<br /> `ಬೆಂಗಳೂರು ಸಮೀಪವಿರುವ ಬನ್ನೇರುಘಟ್ಟ ಉದ್ಯಾನದಲ್ಲೂ ಮೈಸೂರು ಮೃಗಾಲಯ ಮಾದರಿಯಲ್ಲಿ ಆನ್ಲೈನ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಮುಂದಿನ ತಿಂಗಳು ಜಾರಿಗೆ ತರಲಾಗುವುದು. ಇಷ್ಟೇ ಅಲ್ಲದೆ ಬಂಡೀಪುರದ ಅತಿಥಿಗೃಹ ಮತ್ತು ಸಫಾರಿಯನ್ನು ಕಾಯ್ದಿರಿಸಲು ಆನ್ಲೈನ್ ವ್ಯವಸ್ಥೆ ಮಾಡಲಾಗುವುದು~ ಎಂದು ತಿಳಿಸಿದರು.<br /> <br /> `ಕೇಂದ್ರ ಸರ್ಕಾರ ಪರಿಸರ ಪ್ರವಾಸೋದ್ಯಮ ನೀತಿ ಜಾರಿಗೆ ತಂದಿದ್ದು, ಹೆಚ್ಚು ಪ್ರವಾಸಿಗರು ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳತ್ತ ಬರುತ್ತಿದ್ದಾರೆ. ಇಲ್ಲಿ ಖಾಸಗಿ ವಾಹನಗಳ ಸಫಾರಿಗೆ ಅವಕಾಶ ಇಲ್ಲ. ಪ್ರವಾಸಿಗರು ಅರಣ್ಯ ಇಲಾಖೆ ಇಲ್ಲವೇ ಜಂಗಲ್ ಲಾಡ್ಜ್ನಿಂದ ವಾಹನಗಳನ್ನುಪಡೆಯಬೇಕು. `ಹುಲಿ ಯೋಜನೆ ಪ್ರದೇಶದಲ್ಲಿ ಪ್ರತಿ ನಾಲ್ಕು ವಾಹನಗಳಿಗೆ ಮಾರ್ಗ ನಿಗದಿಗೊಳಿಸಲಾಗಿದೆ. ಅಲ್ಲದೇ ಪ್ರವಾಸಿಗರು ತಮ್ಮಂದಿಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಇಂತಹ ಕ್ರಮದಿಂದ ಪ್ರವಾಸಿಗರಲ್ಲಿ ಶಿಸ್ತು ರೂಢಿಸಲಾಗುತ್ತಿದೆ~ ಎಂದು ಹೇಳಿದರು.<br /> <br /> <strong>ಆನೆ ಗಣತಿ: </strong>`ರಾಜ್ಯದಲ್ಲಿ ಆನೆಗಳ ಗಣತಿ ಕಾರ್ಯ ಮುಕ್ತಾಯಗೊಂಡಿದೆ. ಅಂಕಿ ಅಂಶಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಿಕೊಡಲಾಗಿದ್ದು, ವಿಶ್ಲೇಷಣೆ ಕಾರ್ಯ ನಡೆಯುತ್ತಿದೆ. ಜುಲೈ ಅಂತ್ಯಕ್ಕೆ ನಿಖರ ಮಾಹಿತಿ ಲಭ್ಯವಾಗಿದೆ. ಈಗ ಆನೆಗಳ ಸಂಖ್ಯೆ ತೃಪ್ತಿಕರವಾಗಿದೆ~ ಎಂದರು.<br /> <br /> ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, `ಬನ್ನೇರುಘಟ್ಟ ಉದ್ಯಾನದಲ್ಲಿ ಪ್ರವಾಸಿಗರ ಸಫಾರಿಗಾಗಿ ಅತ್ಯಾಧುನಿಕ ಮಿನಿ ಬಸ್ ಬಿಡಲಾಗಿದ್ದು, ಪ್ರವಾಸಿಗರು ಹೆಚ್ಚು ಬಳಕೆ ಮಾಡಿಕೊಂಡಿದ್ದಾರೆ. ಈಗ ಮತ್ತೊಂದು ಬಸ್ಗಾಗಿ ಬೇಡಿಕೆ ಬಂದಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಕೊಡಲಾಗುವುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಚಾಮರಾಜೇಂದ್ರ ಮೃಗಾಲಯವು ದೇಶದ ಮೃಗಾಲಯಗಳ ಪೈಕಿ ಪ್ರಥಮವಾಗಿ ಅನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವ ಸೇವೆಯನ್ನು ಸೋಮವಾರ ಆರಂಭಿಸಿತು.ಮೈಸೂರಿನವರೇ ಆದ ಪ್ರಮೋದ್ ರಾವ್ ಆನ್ಲೈನ್ ಸಾಫ್ಟ್ವೇರ್ ಅನ್ನು ಸಿದ್ಧಪಡಿಸಿದ್ದಾರೆ.<br /> <br /> ಈ ಸೇವೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ದೀಪಕ್ ಶರ್ಮಾ ಚಾಲನೆ ನೀಡಿದರು. `ಆನ್ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ರೀತಿಯ ವ್ಯವಸ್ಥೆಯನ್ನು ಪ್ರವಾಸಿಗರು ಬಯಸಿದ್ದರು~ ಎಂದರು. <br /> <br /> ಪ್ರವಾಸಿಗರು <a href="http://www.mysorezoo.info">www.mysorezoo.info</a> ತಾಣಕ್ಕೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಬೇಕು.<br /> `ಬೆಂಗಳೂರು ಸಮೀಪವಿರುವ ಬನ್ನೇರುಘಟ್ಟ ಉದ್ಯಾನದಲ್ಲೂ ಮೈಸೂರು ಮೃಗಾಲಯ ಮಾದರಿಯಲ್ಲಿ ಆನ್ಲೈನ್ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಮುಂದಿನ ತಿಂಗಳು ಜಾರಿಗೆ ತರಲಾಗುವುದು. ಇಷ್ಟೇ ಅಲ್ಲದೆ ಬಂಡೀಪುರದ ಅತಿಥಿಗೃಹ ಮತ್ತು ಸಫಾರಿಯನ್ನು ಕಾಯ್ದಿರಿಸಲು ಆನ್ಲೈನ್ ವ್ಯವಸ್ಥೆ ಮಾಡಲಾಗುವುದು~ ಎಂದು ತಿಳಿಸಿದರು.<br /> <br /> `ಕೇಂದ್ರ ಸರ್ಕಾರ ಪರಿಸರ ಪ್ರವಾಸೋದ್ಯಮ ನೀತಿ ಜಾರಿಗೆ ತಂದಿದ್ದು, ಹೆಚ್ಚು ಪ್ರವಾಸಿಗರು ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳತ್ತ ಬರುತ್ತಿದ್ದಾರೆ. ಇಲ್ಲಿ ಖಾಸಗಿ ವಾಹನಗಳ ಸಫಾರಿಗೆ ಅವಕಾಶ ಇಲ್ಲ. ಪ್ರವಾಸಿಗರು ಅರಣ್ಯ ಇಲಾಖೆ ಇಲ್ಲವೇ ಜಂಗಲ್ ಲಾಡ್ಜ್ನಿಂದ ವಾಹನಗಳನ್ನುಪಡೆಯಬೇಕು. `ಹುಲಿ ಯೋಜನೆ ಪ್ರದೇಶದಲ್ಲಿ ಪ್ರತಿ ನಾಲ್ಕು ವಾಹನಗಳಿಗೆ ಮಾರ್ಗ ನಿಗದಿಗೊಳಿಸಲಾಗಿದೆ. ಅಲ್ಲದೇ ಪ್ರವಾಸಿಗರು ತಮ್ಮಂದಿಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಇಂತಹ ಕ್ರಮದಿಂದ ಪ್ರವಾಸಿಗರಲ್ಲಿ ಶಿಸ್ತು ರೂಢಿಸಲಾಗುತ್ತಿದೆ~ ಎಂದು ಹೇಳಿದರು.<br /> <br /> <strong>ಆನೆ ಗಣತಿ: </strong>`ರಾಜ್ಯದಲ್ಲಿ ಆನೆಗಳ ಗಣತಿ ಕಾರ್ಯ ಮುಕ್ತಾಯಗೊಂಡಿದೆ. ಅಂಕಿ ಅಂಶಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಕಳುಹಿಸಿಕೊಡಲಾಗಿದ್ದು, ವಿಶ್ಲೇಷಣೆ ಕಾರ್ಯ ನಡೆಯುತ್ತಿದೆ. ಜುಲೈ ಅಂತ್ಯಕ್ಕೆ ನಿಖರ ಮಾಹಿತಿ ಲಭ್ಯವಾಗಿದೆ. ಈಗ ಆನೆಗಳ ಸಂಖ್ಯೆ ತೃಪ್ತಿಕರವಾಗಿದೆ~ ಎಂದರು.<br /> <br /> ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, `ಬನ್ನೇರುಘಟ್ಟ ಉದ್ಯಾನದಲ್ಲಿ ಪ್ರವಾಸಿಗರ ಸಫಾರಿಗಾಗಿ ಅತ್ಯಾಧುನಿಕ ಮಿನಿ ಬಸ್ ಬಿಡಲಾಗಿದ್ದು, ಪ್ರವಾಸಿಗರು ಹೆಚ್ಚು ಬಳಕೆ ಮಾಡಿಕೊಂಡಿದ್ದಾರೆ. ಈಗ ಮತ್ತೊಂದು ಬಸ್ಗಾಗಿ ಬೇಡಿಕೆ ಬಂದಿದೆ. ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಕೊಡಲಾಗುವುದು~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>