ಮಂಗಳವಾರ, ಮಾರ್ಚ್ 28, 2023
33 °C

ಮೊದಲ ಓದಿನಲ್ಲಿ ದೇವ್ ಪ್ರಸಾದ್ ರವರ ಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |



ಬೆಂಗಳೂರಿನ ಎಂ.ಆರ್.ದೇವ್ ಪ್ರಸಾದ್ ವೃತ್ತಿಯಿಂದ ಎಂಜಿನಿಯರ್. ಪ್ರವಾಸ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ಇವರು ಪುರಾಣ ಪ್ರಸಂಗಗಳ ಅಧ್ಯಯನದಲ್ಲೂ ಕುತೂಹಲಿ. ಈ ಆಸಕ್ತಿಗಳ ಅಭಿವ್ಯಕ್ತಿ ‘ಕೃಷ್ಣ’ ಹೆಸರಿನ ಪುಸ್ತಕವಾಗಿ ಪ್ರಕಟಗೊಂಡಿದೆ. ಕೃಷ್ಣ ಜಾಗತಿಕ ಪ್ರಸಿದ್ಧನಾದುದರಿಂದಲೋ ಏನೋ, ಕನ್ನಡ ಬಲ್ಲ ದೇವ್ ಇಂಗ್ಲಿಷ್‌ನಲ್ಲೇ ಬರೆದಿದ್ದಾರೆ.



ಮಹಾಭಾರತದ ಕಾರಣಿಕ ಪುರುಷ ಕೃಷ್ಣನ ಕುರಿತಂತೆ ಅನೇಕ ಕಥೆಗಳಿವೆ. ಗೋವರ್ಧನ, ಮಥುರಾ, ವೃಂದಾವನ ಸೇರಿದಂತೆ ಅನೇಕ ಸ್ಥಳಗಳು ಕೃಷ್ಣನೊಂದಿಗೆ ತಳುಕು ಹಾಕಿಕೊಂಡಿವೆ. ಇಂಥ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ, ಅವುಗಳನ್ನು ಲೇಖಕರು ಪರಿಚಯಿಸಿದ್ದಾರೆ.

 

ಮಥುರಾ, ದ್ವಾರಕ, ಕುರುಕ್ಷೇತ್ರ, ಮಧುವನ, ಗೋಕುಲ, ಮಹಾವನ- ಹೀಗೆ ಅನೇಕ ಪುರಾಣ ಪ್ರಸಿದ್ಧ ಸ್ಥಳಗಳಿಗೆ ಸಂಬಂಧಿಸಿದ ವಿವರಗಳು ಇಲ್ಲಿವೆ. ಪ್ರವಾಸ ಕಥನ ಸ್ವರೂಪದ ಈ ಕೃತಿ, ಕೃಷ್ಣನಿಗೆ ಸಂಬಂಧಿಸಿದ ದಂತಕಥೆಗಳನ್ನೂ ಪ್ರಸ್ತಾಪಿಸುತ್ತದೆ. ಲೇಖಕರ ಅಧ್ಯಯನದ ಶಿಸ್ತಿಗೆ ಈ ಕೃತಿ ಉದಾಹರಣೆಯಂತಿದೆ. ಪೂರಕ ಚಿತ್ರಗಳು ಬರಹದ ಸೊಗಸನ್ನು ಹೆಚ್ಚಿಸಿದೆ. ಆಸ್ತಕರಿಗೆ ಇಷ್ಟವಾಗುವ ಈ ಕೃತಿ, ಪ್ರವಾಸಪ್ರಿಯರಿಗೂ ಉಪಯುಕ್ತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.