<p><br /> ಬೆಂಗಳೂರಿನ ಎಂ.ಆರ್.ದೇವ್ ಪ್ರಸಾದ್ ವೃತ್ತಿಯಿಂದ ಎಂಜಿನಿಯರ್. ಪ್ರವಾಸ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ಇವರು ಪುರಾಣ ಪ್ರಸಂಗಗಳ ಅಧ್ಯಯನದಲ್ಲೂ ಕುತೂಹಲಿ. ಈ ಆಸಕ್ತಿಗಳ ಅಭಿವ್ಯಕ್ತಿ ‘ಕೃಷ್ಣ’ ಹೆಸರಿನ ಪುಸ್ತಕವಾಗಿ ಪ್ರಕಟಗೊಂಡಿದೆ. ಕೃಷ್ಣ ಜಾಗತಿಕ ಪ್ರಸಿದ್ಧನಾದುದರಿಂದಲೋ ಏನೋ, ಕನ್ನಡ ಬಲ್ಲ ದೇವ್ ಇಂಗ್ಲಿಷ್ನಲ್ಲೇ ಬರೆದಿದ್ದಾರೆ. <br /> <br /> ಮಹಾಭಾರತದ ಕಾರಣಿಕ ಪುರುಷ ಕೃಷ್ಣನ ಕುರಿತಂತೆ ಅನೇಕ ಕಥೆಗಳಿವೆ. ಗೋವರ್ಧನ, ಮಥುರಾ, ವೃಂದಾವನ ಸೇರಿದಂತೆ ಅನೇಕ ಸ್ಥಳಗಳು ಕೃಷ್ಣನೊಂದಿಗೆ ತಳುಕು ಹಾಕಿಕೊಂಡಿವೆ. ಇಂಥ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ, ಅವುಗಳನ್ನು ಲೇಖಕರು ಪರಿಚಯಿಸಿದ್ದಾರೆ.<br /> <br /> ಮಥುರಾ, ದ್ವಾರಕ, ಕುರುಕ್ಷೇತ್ರ, ಮಧುವನ, ಗೋಕುಲ, ಮಹಾವನ- ಹೀಗೆ ಅನೇಕ ಪುರಾಣ ಪ್ರಸಿದ್ಧ ಸ್ಥಳಗಳಿಗೆ ಸಂಬಂಧಿಸಿದ ವಿವರಗಳು ಇಲ್ಲಿವೆ. ಪ್ರವಾಸ ಕಥನ ಸ್ವರೂಪದ ಈ ಕೃತಿ, ಕೃಷ್ಣನಿಗೆ ಸಂಬಂಧಿಸಿದ ದಂತಕಥೆಗಳನ್ನೂ ಪ್ರಸ್ತಾಪಿಸುತ್ತದೆ. ಲೇಖಕರ ಅಧ್ಯಯನದ ಶಿಸ್ತಿಗೆ ಈ ಕೃತಿ ಉದಾಹರಣೆಯಂತಿದೆ. ಪೂರಕ ಚಿತ್ರಗಳು ಬರಹದ ಸೊಗಸನ್ನು ಹೆಚ್ಚಿಸಿದೆ. ಆಸ್ತಕರಿಗೆ ಇಷ್ಟವಾಗುವ ಈ ಕೃತಿ, ಪ್ರವಾಸಪ್ರಿಯರಿಗೂ ಉಪಯುಕ್ತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಬೆಂಗಳೂರಿನ ಎಂ.ಆರ್.ದೇವ್ ಪ್ರಸಾದ್ ವೃತ್ತಿಯಿಂದ ಎಂಜಿನಿಯರ್. ಪ್ರವಾಸ ಮತ್ತು ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿರುವ ಇವರು ಪುರಾಣ ಪ್ರಸಂಗಗಳ ಅಧ್ಯಯನದಲ್ಲೂ ಕುತೂಹಲಿ. ಈ ಆಸಕ್ತಿಗಳ ಅಭಿವ್ಯಕ್ತಿ ‘ಕೃಷ್ಣ’ ಹೆಸರಿನ ಪುಸ್ತಕವಾಗಿ ಪ್ರಕಟಗೊಂಡಿದೆ. ಕೃಷ್ಣ ಜಾಗತಿಕ ಪ್ರಸಿದ್ಧನಾದುದರಿಂದಲೋ ಏನೋ, ಕನ್ನಡ ಬಲ್ಲ ದೇವ್ ಇಂಗ್ಲಿಷ್ನಲ್ಲೇ ಬರೆದಿದ್ದಾರೆ. <br /> <br /> ಮಹಾಭಾರತದ ಕಾರಣಿಕ ಪುರುಷ ಕೃಷ್ಣನ ಕುರಿತಂತೆ ಅನೇಕ ಕಥೆಗಳಿವೆ. ಗೋವರ್ಧನ, ಮಥುರಾ, ವೃಂದಾವನ ಸೇರಿದಂತೆ ಅನೇಕ ಸ್ಥಳಗಳು ಕೃಷ್ಣನೊಂದಿಗೆ ತಳುಕು ಹಾಕಿಕೊಂಡಿವೆ. ಇಂಥ ಸ್ಥಳಗಳಿಗೆ ಭೇಟಿ ಕೊಡುವ ಮೂಲಕ, ಅವುಗಳನ್ನು ಲೇಖಕರು ಪರಿಚಯಿಸಿದ್ದಾರೆ.<br /> <br /> ಮಥುರಾ, ದ್ವಾರಕ, ಕುರುಕ್ಷೇತ್ರ, ಮಧುವನ, ಗೋಕುಲ, ಮಹಾವನ- ಹೀಗೆ ಅನೇಕ ಪುರಾಣ ಪ್ರಸಿದ್ಧ ಸ್ಥಳಗಳಿಗೆ ಸಂಬಂಧಿಸಿದ ವಿವರಗಳು ಇಲ್ಲಿವೆ. ಪ್ರವಾಸ ಕಥನ ಸ್ವರೂಪದ ಈ ಕೃತಿ, ಕೃಷ್ಣನಿಗೆ ಸಂಬಂಧಿಸಿದ ದಂತಕಥೆಗಳನ್ನೂ ಪ್ರಸ್ತಾಪಿಸುತ್ತದೆ. ಲೇಖಕರ ಅಧ್ಯಯನದ ಶಿಸ್ತಿಗೆ ಈ ಕೃತಿ ಉದಾಹರಣೆಯಂತಿದೆ. ಪೂರಕ ಚಿತ್ರಗಳು ಬರಹದ ಸೊಗಸನ್ನು ಹೆಚ್ಚಿಸಿದೆ. ಆಸ್ತಕರಿಗೆ ಇಷ್ಟವಾಗುವ ಈ ಕೃತಿ, ಪ್ರವಾಸಪ್ರಿಯರಿಗೂ ಉಪಯುಕ್ತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>