<p><strong>ಮೊಳಕಾಲ್ಮುರು: </strong>ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಪಟ್ಣಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಬಿಎಸ್ಆರ್ ಕಾಂಗ್ರೆಸ್ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.<br /> <br /> ಒಟ್ಟು 15 ಸದಸ್ಯರನ್ನು ಹೊಂದಿರುವ ಈ ಪಟ್ಟಣ ಪಂಚಾಯ್ತಿಗೆ 6 ಕಾಂಗ್ರೆಸ್, 5 ಬಿಎಸ್ಆರ್ ಕಾಂಗ್ರೆಸ್, ಇಬ್ಬರು ಪಕ್ಷೇತರರು ಹಾಗೂ ತಲಾ ಒಂದು ಜೆಡಿಎಸ್, ಒಂದು ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಯಾವ ಪಕ್ಷಕ್ಕೂ ಅಧಿಕಾರ ಪಡೆಯಲು ಬಹುಮತ ಇಲ್ಲದ ಕಾರಣ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.<br /> <br /> ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಎಸ್ಆರ್<br /> ಕಾಂಗ್ರೆಸ್ ಪರವಾಗಿ ಅನಿತಾ ಪುರುಷೋತ್ತಮ, ಕಾಂಗ್ರೆಸ್ನಿಂದ ಕೌಸರ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಎಸ್ಆರ್ನಿಂದ ಶಿವಮೂರ್ತಿ, ಕಾಂಗ್ರೆಸ್ನಿಂದ ಎಂ.ಎಸ್.ರಘು ನಾಮಪತ್ರ ಸಲ್ಲಿಸಿದ್ದರು. ಆಯ್ಕೆಯಲ್ಲಿ ಅನಿತಾ ಮತ್ತು ಶಿವಮೂರ್ತಿ ತಲಾ 10 ಮತಗಳನ್ನು, ಕೌಸರ್ ಮತ್ತು ಎಂ.ಎಸ್.ರಘು ಏಳು ಮತ ಪಡೆದರು ಎಂದು ಮೂಲಗಳು ತಿಳಿಸಿವೆ.<br /> <br /> ಬಿಎಸ್ಆರ್ ಪರವಾಗಿ ಸಂಸತ್ ಸದಸ್ಯ ಜನಾರ್ದನಸ್ವಾಮಿ, ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ಬಿಜೆಪಿ ಸದಸ್ಯ ರಾಜಶೇಖರ ಗಾಯಕವಾಡ್ ಮತ್ತು ಜೆಡಿಎಸ್ ಸದಸ್ಯೆ ಉಲ್ಫತ್ ಉನ್ನೀಸಾ, ಪಕ್ಷೇತರ ಸದಸ್ಯೆ ವದ್ದಿ ಸರೋಜಮ್ಮ ಮತ ಹಾಕಿದರು. ತಹಶೀಲ್ದಾರ್ ನಿಸ್ಸಾರ್ ಅಹಮದ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.<br /> <br /> ನಂತರ ನಡೆದ ವಿಜಯೋತ್ಸವದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಟಿ.ನಾಗರೆಡ್ಡಿ, ತಾ.ಪಂ. ಅಧ್ಯಕ್ಷ ಶ್ರೀಕಾಂತರೆಡ್ಡಿ, ಎಂ.ವೈ.ಟಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ನರೇಂದ್ರನಾಥ್, ಕ್ಷೇತ್ರಾಧ್ಯಕ್ಷ ಆರ್.ಜಿ. ಗಂಗಾಧರಪ್ಪ, ಜಿಂಕಲು ಬಸವರಾಜು, ಜಗಳೂರಯ್ಯ, ಅಬ್ದುಲ್ ಸುಬಾನ್ಸಾಬ್, ಮಾರನಾಯಕ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು: </strong>ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಪಟ್ಣಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಬಿಎಸ್ಆರ್ ಕಾಂಗ್ರೆಸ್ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.<br /> <br /> ಒಟ್ಟು 15 ಸದಸ್ಯರನ್ನು ಹೊಂದಿರುವ ಈ ಪಟ್ಟಣ ಪಂಚಾಯ್ತಿಗೆ 6 ಕಾಂಗ್ರೆಸ್, 5 ಬಿಎಸ್ಆರ್ ಕಾಂಗ್ರೆಸ್, ಇಬ್ಬರು ಪಕ್ಷೇತರರು ಹಾಗೂ ತಲಾ ಒಂದು ಜೆಡಿಎಸ್, ಒಂದು ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಯಾವ ಪಕ್ಷಕ್ಕೂ ಅಧಿಕಾರ ಪಡೆಯಲು ಬಹುಮತ ಇಲ್ಲದ ಕಾರಣ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.<br /> <br /> ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಎಸ್ಆರ್<br /> ಕಾಂಗ್ರೆಸ್ ಪರವಾಗಿ ಅನಿತಾ ಪುರುಷೋತ್ತಮ, ಕಾಂಗ್ರೆಸ್ನಿಂದ ಕೌಸರ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಎಸ್ಆರ್ನಿಂದ ಶಿವಮೂರ್ತಿ, ಕಾಂಗ್ರೆಸ್ನಿಂದ ಎಂ.ಎಸ್.ರಘು ನಾಮಪತ್ರ ಸಲ್ಲಿಸಿದ್ದರು. ಆಯ್ಕೆಯಲ್ಲಿ ಅನಿತಾ ಮತ್ತು ಶಿವಮೂರ್ತಿ ತಲಾ 10 ಮತಗಳನ್ನು, ಕೌಸರ್ ಮತ್ತು ಎಂ.ಎಸ್.ರಘು ಏಳು ಮತ ಪಡೆದರು ಎಂದು ಮೂಲಗಳು ತಿಳಿಸಿವೆ.<br /> <br /> ಬಿಎಸ್ಆರ್ ಪರವಾಗಿ ಸಂಸತ್ ಸದಸ್ಯ ಜನಾರ್ದನಸ್ವಾಮಿ, ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ಬಿಜೆಪಿ ಸದಸ್ಯ ರಾಜಶೇಖರ ಗಾಯಕವಾಡ್ ಮತ್ತು ಜೆಡಿಎಸ್ ಸದಸ್ಯೆ ಉಲ್ಫತ್ ಉನ್ನೀಸಾ, ಪಕ್ಷೇತರ ಸದಸ್ಯೆ ವದ್ದಿ ಸರೋಜಮ್ಮ ಮತ ಹಾಕಿದರು. ತಹಶೀಲ್ದಾರ್ ನಿಸ್ಸಾರ್ ಅಹಮದ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.<br /> <br /> ನಂತರ ನಡೆದ ವಿಜಯೋತ್ಸವದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಟಿ.ನಾಗರೆಡ್ಡಿ, ತಾ.ಪಂ. ಅಧ್ಯಕ್ಷ ಶ್ರೀಕಾಂತರೆಡ್ಡಿ, ಎಂ.ವೈ.ಟಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ನರೇಂದ್ರನಾಥ್, ಕ್ಷೇತ್ರಾಧ್ಯಕ್ಷ ಆರ್.ಜಿ. ಗಂಗಾಧರಪ್ಪ, ಜಿಂಕಲು ಬಸವರಾಜು, ಜಗಳೂರಯ್ಯ, ಅಬ್ದುಲ್ ಸುಬಾನ್ಸಾಬ್, ಮಾರನಾಯಕ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>