<p><strong>ಅಹಮದಾಬಾದ್, (ಪಿಟಿಐ):</strong> ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆಸಿದ `ಸದ್ಭಾವನಾ ಉಪವಾಸ~ಕ್ಕೆ ಪ್ರತಿಯಾಗಿ ಸಬರಮತಿ ಆಶ್ರಮದ ಬಳಿ ಕೈಗೊಂಡಿದ್ದ ಉಪವಾಸವನ್ನು ಕಾಂಗ್ರೆಸ್ ಮುಖಂಡರಾದ ಶಂಕರ್ ಸಿಂಗ್ ವಘೇಲ ಮತ್ತು ಅರ್ಜುನ್ ಮೋದಾವಾಡಿಯಾ ಮಂಗಳವಾರ ಅಂತ್ಯಗೊಳಿಸಿದರು. <br /> <br /> ನೂರಾರು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ದಲಿತ ಬಾಲಕಿಯರು ನೀಡಿದ ಹಣ್ಣಿನ ರಸವನ್ನು ಕುಡಿದ ಬಳಿಕ ಮಾತನಾಡಿದ ಅವರು, ತಮ್ಮ ಉಪವಾಸವು ಮೋದಿ ಅವರ ಉಪವಾಸದ ಕಪಟತನವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.<br /> <br /> ತಮ್ಮ ಉಪವಾಸವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ ವಘೇಲ, ತಾವು ಅದಕ್ಕೆ ಪಕ್ಷದ ಹೈಕಮಾಂಡ್ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಒತ್ತಿ ಹೇಳಿದರು. <br /> <br /> ಮೋದಿ ಅವರ ಉಪವಾಸ ವೇದಿಕೆಯಲ್ಲಿ ಬಿಜೆಪಿ ನಾಯಕರು ಕಾಣಿಸಿಕೊಂಡು ನಾಟಕವಾಡಿದಂತೆ ನಮ್ಮದು ನಾಟಕದ ವೇದಿಕೆಯಾಗಿರಲಿಲ್ಲ ಎಂದ ಅವರು, ಮೋದಿ ಸರ್ಕಾರದ `ದುರ್ಭಾವನೆ~ಯನ್ನು ಹೊರಗೆಳೆಯುವುದಾಗಿ ಹೇಳಿದರು. ಮೋದಿ ಅವರು ಮಾಡಿದಷ್ಟು ಪಾಪವನ್ನು ದೇಶದ ಇತರ ಯಾವುದೇ ಮುಖ್ಯಮಂತ್ರಿ ಮಾಡಿರಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೋದಾವಾಡಿಯಾ ಹೇಳಿದರು.<br /> <br /> ಹಿಂದಿನ ಹಿರಿಯ ಬಿಜೆಪಿ ಮುಖಂಡರ ಈಗಿನ ಪರಿಸ್ಥಿತಿಯನ್ನು ನೋಡಿ. ಬಿಜೆಪಿ ನಾಯಕ ಹರೇನ್ ಪಾಂಡ್ಯ ಅವರ ಹತ್ಯೆ ನಡೆಸಲಾಯಿತು. ಅಲ್ಲದೆ ಅವರ ವಿಧವೆ ಪತ್ನಿಗೆ ತಮ್ಮ ಅಳಲು ತೋಡಿಕೊಳ್ಳಲು ಮೋದಿ ಉಪವಾಸದ ಸಂದರ್ಭದಲ್ಲಿ ಅನುಮತಿ ನೀಡಲಿಲ್ಲ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್, (ಪಿಟಿಐ):</strong> ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆಸಿದ `ಸದ್ಭಾವನಾ ಉಪವಾಸ~ಕ್ಕೆ ಪ್ರತಿಯಾಗಿ ಸಬರಮತಿ ಆಶ್ರಮದ ಬಳಿ ಕೈಗೊಂಡಿದ್ದ ಉಪವಾಸವನ್ನು ಕಾಂಗ್ರೆಸ್ ಮುಖಂಡರಾದ ಶಂಕರ್ ಸಿಂಗ್ ವಘೇಲ ಮತ್ತು ಅರ್ಜುನ್ ಮೋದಾವಾಡಿಯಾ ಮಂಗಳವಾರ ಅಂತ್ಯಗೊಳಿಸಿದರು. <br /> <br /> ನೂರಾರು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ದಲಿತ ಬಾಲಕಿಯರು ನೀಡಿದ ಹಣ್ಣಿನ ರಸವನ್ನು ಕುಡಿದ ಬಳಿಕ ಮಾತನಾಡಿದ ಅವರು, ತಮ್ಮ ಉಪವಾಸವು ಮೋದಿ ಅವರ ಉಪವಾಸದ ಕಪಟತನವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.<br /> <br /> ತಮ್ಮ ಉಪವಾಸವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ ವಘೇಲ, ತಾವು ಅದಕ್ಕೆ ಪಕ್ಷದ ಹೈಕಮಾಂಡ್ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಒತ್ತಿ ಹೇಳಿದರು. <br /> <br /> ಮೋದಿ ಅವರ ಉಪವಾಸ ವೇದಿಕೆಯಲ್ಲಿ ಬಿಜೆಪಿ ನಾಯಕರು ಕಾಣಿಸಿಕೊಂಡು ನಾಟಕವಾಡಿದಂತೆ ನಮ್ಮದು ನಾಟಕದ ವೇದಿಕೆಯಾಗಿರಲಿಲ್ಲ ಎಂದ ಅವರು, ಮೋದಿ ಸರ್ಕಾರದ `ದುರ್ಭಾವನೆ~ಯನ್ನು ಹೊರಗೆಳೆಯುವುದಾಗಿ ಹೇಳಿದರು. ಮೋದಿ ಅವರು ಮಾಡಿದಷ್ಟು ಪಾಪವನ್ನು ದೇಶದ ಇತರ ಯಾವುದೇ ಮುಖ್ಯಮಂತ್ರಿ ಮಾಡಿರಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೋದಾವಾಡಿಯಾ ಹೇಳಿದರು.<br /> <br /> ಹಿಂದಿನ ಹಿರಿಯ ಬಿಜೆಪಿ ಮುಖಂಡರ ಈಗಿನ ಪರಿಸ್ಥಿತಿಯನ್ನು ನೋಡಿ. ಬಿಜೆಪಿ ನಾಯಕ ಹರೇನ್ ಪಾಂಡ್ಯ ಅವರ ಹತ್ಯೆ ನಡೆಸಲಾಯಿತು. ಅಲ್ಲದೆ ಅವರ ವಿಧವೆ ಪತ್ನಿಗೆ ತಮ್ಮ ಅಳಲು ತೋಡಿಕೊಳ್ಳಲು ಮೋದಿ ಉಪವಾಸದ ಸಂದರ್ಭದಲ್ಲಿ ಅನುಮತಿ ನೀಡಲಿಲ್ಲ ಎಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>