<p><strong>ಬೆಂಗಳೂರು</strong>: `ದೈನಂದಿನ ಜೀವನದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ನಂಬಿ ಬಾಳುವವರಿಗೆ ಹಲವಾರು ಸವಾಲುಗಳು ಎದುರಾಗುತ್ತವೆ. ನೈತಿಕ ಮೌಲ್ಯ ಎತ್ತಿ ಹಿಡಿಯುವ ಸಂದರ್ಭದಲ್ಲಿ ಯುವಜನತೆ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು~ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅಭಿಪ್ರಾಯಪಟ್ಟರು. <br /> <br /> ನಗರದ ಬೃಂದಾವನ ಕ್ಯಾಂಪಸ್ನಲ್ಲಿರುವ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ನಲ್ಲಿ ಗುರುವಾರ ನಡೆದ `ಭಾರತೀಯ ಸಂಸ್ಕೃತಿ ಹಾಗೂ ಅಧ್ಯಾತ್ಮ~ ಕುರಿತ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು. <br /> <br /> `ಭಗವದ್ಗೀತೆ ಒಂದು ಸಮುದಾಯಕ್ಕೆ ಸೀಮಿತವಾದ ಕಥನವಲ್ಲ. ಅದು ಇಡೀ ಮಾನವ ಸಮುದಾಯಕ್ಕೆ ಬೆಳಕು ನೀಡುವ ಮಹಾನ್ ಜ್ಯೋತಿ. ಗೀತೆಯ ಪಠಣದಿಂದ ನೆಮ್ಮದಿ ಪಡೆಯಬಹುದು~ ಎಂದು ಸ್ವಾಮಿ ಚಿದ್ರೂಪಾನಂದ ತಿಳಿಸಿದರು. <br /> <br /> `ಆಧ್ಯಾತ್ಮಿಕ ಪ್ರೌಢತೆಯೇ ಪ್ರತಿ ಮನುಷ್ಯನ ಗುರಿಯಾಗಬೇಕು. ಮಾನಸಿಕ ಸಂತೋಷ ಎಲ್ಲೋ ಹೊರಗೆ ಸಿಗುವ ವಸ್ತುವಲ್ಲ. ಅದನ್ನು ಜನ ತಮ್ಮ ಮನಸ್ಸಿನಲ್ಲಿ ಅರಸಬೇಕು~ ಎಂದು ಅವರು ಕಿವಿಮಾತು ಹೇಳಿದರು. <br /> <br /> ವಿಜಯ್ ಮೆನನ್ ಉಪನ್ಯಾಸ ನೀಡಿ, `ಮಾನವ ಜೀವಿಗೆ ಮಾಡುವ ಸೇವೆಯನ್ನು ಭಗವಂತನಿಗೆ ಸಲ್ಲಿಸಿದ ಸೇವೆ ಎಂಬ ತತ್ವವನ್ನು ಪ್ರತಿಪಾದಿಸಿ ಯುವಜನತೆ ದೈನಂದಿನ ಕಾರ್ಯದಲ್ಲಿ ಅಧ್ಯಾತ್ಮವನ್ನು ಕಾಣುವ ಮನೋಭಾವ ರೂಢಿಸಿಕೊಳ್ಳಬೇಕು. ಯುವಜನತೆ ತಂಬಾಕು, ಮದ್ಯಪಾನ, ಮಾಂಸಾಹಾರಗಳಿಂದ ದೂರವಿರಬೇಕು~ ಎಂದು ಕರೆ ನೀಡಿದರು. ಪ್ರಸಿದ್ಧ ಸಂಶೋಧಕ ಅಮೈ ದೇಶಪಾಂಡೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ದೈನಂದಿನ ಜೀವನದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ನಂಬಿ ಬಾಳುವವರಿಗೆ ಹಲವಾರು ಸವಾಲುಗಳು ಎದುರಾಗುತ್ತವೆ. ನೈತಿಕ ಮೌಲ್ಯ ಎತ್ತಿ ಹಿಡಿಯುವ ಸಂದರ್ಭದಲ್ಲಿ ಯುವಜನತೆ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು~ ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅಭಿಪ್ರಾಯಪಟ್ಟರು. <br /> <br /> ನಗರದ ಬೃಂದಾವನ ಕ್ಯಾಂಪಸ್ನಲ್ಲಿರುವ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ನಲ್ಲಿ ಗುರುವಾರ ನಡೆದ `ಭಾರತೀಯ ಸಂಸ್ಕೃತಿ ಹಾಗೂ ಅಧ್ಯಾತ್ಮ~ ಕುರಿತ ಬೇಸಿಗೆ ಶಿಬಿರದಲ್ಲಿ ಅವರು ಮಾತನಾಡಿದರು. <br /> <br /> `ಭಗವದ್ಗೀತೆ ಒಂದು ಸಮುದಾಯಕ್ಕೆ ಸೀಮಿತವಾದ ಕಥನವಲ್ಲ. ಅದು ಇಡೀ ಮಾನವ ಸಮುದಾಯಕ್ಕೆ ಬೆಳಕು ನೀಡುವ ಮಹಾನ್ ಜ್ಯೋತಿ. ಗೀತೆಯ ಪಠಣದಿಂದ ನೆಮ್ಮದಿ ಪಡೆಯಬಹುದು~ ಎಂದು ಸ್ವಾಮಿ ಚಿದ್ರೂಪಾನಂದ ತಿಳಿಸಿದರು. <br /> <br /> `ಆಧ್ಯಾತ್ಮಿಕ ಪ್ರೌಢತೆಯೇ ಪ್ರತಿ ಮನುಷ್ಯನ ಗುರಿಯಾಗಬೇಕು. ಮಾನಸಿಕ ಸಂತೋಷ ಎಲ್ಲೋ ಹೊರಗೆ ಸಿಗುವ ವಸ್ತುವಲ್ಲ. ಅದನ್ನು ಜನ ತಮ್ಮ ಮನಸ್ಸಿನಲ್ಲಿ ಅರಸಬೇಕು~ ಎಂದು ಅವರು ಕಿವಿಮಾತು ಹೇಳಿದರು. <br /> <br /> ವಿಜಯ್ ಮೆನನ್ ಉಪನ್ಯಾಸ ನೀಡಿ, `ಮಾನವ ಜೀವಿಗೆ ಮಾಡುವ ಸೇವೆಯನ್ನು ಭಗವಂತನಿಗೆ ಸಲ್ಲಿಸಿದ ಸೇವೆ ಎಂಬ ತತ್ವವನ್ನು ಪ್ರತಿಪಾದಿಸಿ ಯುವಜನತೆ ದೈನಂದಿನ ಕಾರ್ಯದಲ್ಲಿ ಅಧ್ಯಾತ್ಮವನ್ನು ಕಾಣುವ ಮನೋಭಾವ ರೂಢಿಸಿಕೊಳ್ಳಬೇಕು. ಯುವಜನತೆ ತಂಬಾಕು, ಮದ್ಯಪಾನ, ಮಾಂಸಾಹಾರಗಳಿಂದ ದೂರವಿರಬೇಕು~ ಎಂದು ಕರೆ ನೀಡಿದರು. ಪ್ರಸಿದ್ಧ ಸಂಶೋಧಕ ಅಮೈ ದೇಶಪಾಂಡೆ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>