<p>ಕರಾಚಿ (ಪಿಟಿಐ): ಅಂಪೈರ್ ತೀರ್ಪಿನ ಪುನರ್ಪರಿಶೀಲನಾ ಪದ್ಧತಿ (ಯುಡಿಆರ್ಎಸ್) ಅಡಿಯಲ್ಲಿ ತೀರ್ಪು ಪರಿಶೀಲನೆಗೆ ಮನವಿ ಮಾಡಿಕೊಳ್ಳಲು ಇನ್ನಷ್ಟು ಹೆಚ್ಚಿನ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಅಫ್ರಿದಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯನ್ನು ಕೇಳಿಕೊಂಡಿದ್ದಾರೆ.<br /> <br /> ಯುಡಿಆರ್ಎಸ್ನಿಂದ ಹಲವು ತಂಡಗಳು ಲಾಭ ಪಡೆದಿದ್ದು, ನೈಜ ತೀರ್ಪು ಪಡೆಯಲು ಇದೊಂದು ಉತ್ತಮ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದ್ದಾರೆ. <br /> <br /> ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.<br /> ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಯುಡಿಆರ್ಎಸ್ ಒಂದು ಧನಾತ್ಮಕ ವ್ಯವಸ್ಥೆಯಾಗಿದ್ದು, ಟೂರ್ನಿ ಮುಗಿದ ನಂತರವೂ ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ. <br /> <br /> ಕ್ರೀಡಾಂಗಣದ ದೋಷಗಳನ್ನು ಈ ವ್ಯವಸ್ಥೆ ಹೋಗಲಾಡಿಸಲಿದ್ದು, ಬಹುತೇಕ ತಂಡಗಳು ಇದರಿಂದ ತೃಪ್ತವಾಗಿವೆ ಎಂದು ಅವರು ತಿಳಿಸಿದ್ದಾರೆ. <br /> <br /> ಆದರೆ, ಭಾರತ ತಂಡದ ನಾಐಕ ಮಹೇಂದ್ರ ಸಿಂಗ್ ದೋನಿ ಈ ವ್ಯವಸ್ಥೆ ಕುರಿತಾಗಿ ಅಸಮಾಧಾನ ಹೊಂದಿದ್ದಾರೆ. ಯುಡಿಆರ್ಎಸ್ನಿಂದ ಅಷ್ಟಾಗಿ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಕೆನಡಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಯುಡಿಆರ್ಎಸ್ನಿಂದ ಸಾಕಷ್ಟು ಪ್ರಯೋಜನ ಪಡೆದಿದೆ. ಅಂಪೈರ್ಗಳಾದ ಡೆರೆಲ್ ಹಾರ್ಪರ್ ಹಾಗೂ ನಿಗೆಲ್ ಲಾಂಗ್ ಅವರು ನೀಡಿದ್ದ ತೀರ್ಪುಗಳನ್ನು ಪುನರ್ ಪರಿಶೀಲನೆ ಸಂದರ್ಭದಲ್ಲಿ ರದ್ದುಗೊಳಿಸಲಾಗಿತ್ತು. ಮೂರು ಪಂದ್ಯಗಳಿಂದ 14 ವಿಕೆಟ್ ಕಬಳಿಸಿರುವ ಈ ಆಲ್ ರೌಂಡರ್, ತಾವು ಬೌಲರ್ ಆಗಿ ನಿರ್ವಹಿಸಿದ ಪಾತ್ರದ ಬಗೆಗೆ ತೃಪ್ತರಾಗಿದ್ದಾರೆ.<br /> <br /> ‘ಉಳಿದ ಬೌಲರ್ಗಳೂ ಚೆನ್ನಾಗಿಯೇ ಬೌಲ್ ಮಾಡಿದ್ದಾರೆ. ಅವರಿಗೆ ಅದೃಷ್ಟ ಕೈಕೊಟ್ಟರೆ, ನನ್ನ ಕೈ ಹಿಡಿಯಿತು. ಆದ್ದರಿಂದಲೇ ಅಧಿಕ ವಿಕೆಟ್ ಪಡೆಯಲು ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರಾಚಿ (ಪಿಟಿಐ): ಅಂಪೈರ್ ತೀರ್ಪಿನ ಪುನರ್ಪರಿಶೀಲನಾ ಪದ್ಧತಿ (ಯುಡಿಆರ್ಎಸ್) ಅಡಿಯಲ್ಲಿ ತೀರ್ಪು ಪರಿಶೀಲನೆಗೆ ಮನವಿ ಮಾಡಿಕೊಳ್ಳಲು ಇನ್ನಷ್ಟು ಹೆಚ್ಚಿನ ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಅಫ್ರಿದಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯನ್ನು ಕೇಳಿಕೊಂಡಿದ್ದಾರೆ.<br /> <br /> ಯುಡಿಆರ್ಎಸ್ನಿಂದ ಹಲವು ತಂಡಗಳು ಲಾಭ ಪಡೆದಿದ್ದು, ನೈಜ ತೀರ್ಪು ಪಡೆಯಲು ಇದೊಂದು ಉತ್ತಮ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದ್ದಾರೆ. <br /> <br /> ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.<br /> ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಯುಡಿಆರ್ಎಸ್ ಒಂದು ಧನಾತ್ಮಕ ವ್ಯವಸ್ಥೆಯಾಗಿದ್ದು, ಟೂರ್ನಿ ಮುಗಿದ ನಂತರವೂ ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ. <br /> <br /> ಕ್ರೀಡಾಂಗಣದ ದೋಷಗಳನ್ನು ಈ ವ್ಯವಸ್ಥೆ ಹೋಗಲಾಡಿಸಲಿದ್ದು, ಬಹುತೇಕ ತಂಡಗಳು ಇದರಿಂದ ತೃಪ್ತವಾಗಿವೆ ಎಂದು ಅವರು ತಿಳಿಸಿದ್ದಾರೆ. <br /> <br /> ಆದರೆ, ಭಾರತ ತಂಡದ ನಾಐಕ ಮಹೇಂದ್ರ ಸಿಂಗ್ ದೋನಿ ಈ ವ್ಯವಸ್ಥೆ ಕುರಿತಾಗಿ ಅಸಮಾಧಾನ ಹೊಂದಿದ್ದಾರೆ. ಯುಡಿಆರ್ಎಸ್ನಿಂದ ಅಷ್ಟಾಗಿ ಪ್ರಯೋಜನವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಕೆನಡಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಯುಡಿಆರ್ಎಸ್ನಿಂದ ಸಾಕಷ್ಟು ಪ್ರಯೋಜನ ಪಡೆದಿದೆ. ಅಂಪೈರ್ಗಳಾದ ಡೆರೆಲ್ ಹಾರ್ಪರ್ ಹಾಗೂ ನಿಗೆಲ್ ಲಾಂಗ್ ಅವರು ನೀಡಿದ್ದ ತೀರ್ಪುಗಳನ್ನು ಪುನರ್ ಪರಿಶೀಲನೆ ಸಂದರ್ಭದಲ್ಲಿ ರದ್ದುಗೊಳಿಸಲಾಗಿತ್ತು. ಮೂರು ಪಂದ್ಯಗಳಿಂದ 14 ವಿಕೆಟ್ ಕಬಳಿಸಿರುವ ಈ ಆಲ್ ರೌಂಡರ್, ತಾವು ಬೌಲರ್ ಆಗಿ ನಿರ್ವಹಿಸಿದ ಪಾತ್ರದ ಬಗೆಗೆ ತೃಪ್ತರಾಗಿದ್ದಾರೆ.<br /> <br /> ‘ಉಳಿದ ಬೌಲರ್ಗಳೂ ಚೆನ್ನಾಗಿಯೇ ಬೌಲ್ ಮಾಡಿದ್ದಾರೆ. ಅವರಿಗೆ ಅದೃಷ್ಟ ಕೈಕೊಟ್ಟರೆ, ನನ್ನ ಕೈ ಹಿಡಿಯಿತು. ಆದ್ದರಿಂದಲೇ ಅಧಿಕ ವಿಕೆಟ್ ಪಡೆಯಲು ಸಾಧ್ಯವಾಯಿತು’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>