<p><strong>ಬೆಂಗಳೂರು:</strong> `ಯುನಿಗ್ಲಾಸ್ ಕಂಪೆನಿಯ ಆಡಳತ ವರ್ಗ ಕಾರ್ಮಿಕರನ್ನು ಬೀದಿ ಪಾಲು ಮಾಡಿ ವೇತನ ನೀಡದಿರುವ ಬಗ್ಗೆ ಜುಲೈ 21ರಂದು ನಗರದ ಪುರಭವನ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಯುನಿಗ್ಲಾಸ್ ವರ್ಕರ್ಸ್ ಯುನಿಯನ್ ಅಧ್ಯಕ್ಷ ಜೆ.ಆರ್.ಶಿವಶಂಕರ್ ಹೇಳಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾರ್ಖಾನೆಯಲ್ಲಿ ಸುಮಾರು 140 ಜನ ನೌಕರರು ಇದ್ದು, ವಾರ್ಷಿಕ 12 ಕೋಟಿ ವ್ಯವಹಾರ ನಡೆಸುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕಾರ್ಮಿಕರಿಗೆ ಶೇ 24.41ರಷ್ಟು ವೇತನವನ್ನು ಕಡಿತಗೊಳಿಸಿದ್ದು, ಇತ್ತೀಚೆಗೆ ಕಾರಣವಿಲ್ಲದೇ 10 ಜನ ಕಾರ್ಮಿಕ ಮುಖಂಡರನ್ನು ಅಮಾನತ್ತುಗೊಳಿಸಿದ್ದಾರೆ~ ಎಂದು ಆರೋಪಿಸಿದರು.</p>.<p>`ಆಡಳಿತ ವರ್ಗ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು. ಏಪ್ರಿಲ್ನಿಂದ ಜೂನ್ ತಿಂಗಳಿನ ವೇತನ ಹಾಗೂ ಕಾರ್ಮಿಕರ ಮೇಲೆ ಹಾಗೂ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಿ ಪರಿಸರ ಮಾಲಿನ್ಯಕ್ಕೆ ಧಕ್ಕೆಮಾಡುತ್ತಿರುವ ಕಾರ್ಖಾನೆಯ ವಿರುದ್ಧ ಸರ್ಕಾರ ಸೂಕ್ತ ಕ್ರಮನ್ನು ಕೈಗೊಳ್ಳಬೇಕು~ ಎಂದು ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಯುನಿಗ್ಲಾಸ್ ವರ್ಕರ್ಸ್ ಯುನಿಯನ್ನ ಉಪಾಧ್ಯಕ್ಷ ಜೆ.ಶಶಿಧರ್ ರೈ, ಪ್ರಧಾನ ಕಾರ್ಯದರ್ಶಿ ಆರ್.ಪಿ.ನರೇಂದ್ರಬಾಬು, ಕಾರ್ಯದರ್ಶಿ ಗೋಪಾಲಸಿಂಗ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಯುನಿಗ್ಲಾಸ್ ಕಂಪೆನಿಯ ಆಡಳತ ವರ್ಗ ಕಾರ್ಮಿಕರನ್ನು ಬೀದಿ ಪಾಲು ಮಾಡಿ ವೇತನ ನೀಡದಿರುವ ಬಗ್ಗೆ ಜುಲೈ 21ರಂದು ನಗರದ ಪುರಭವನ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಯುನಿಗ್ಲಾಸ್ ವರ್ಕರ್ಸ್ ಯುನಿಯನ್ ಅಧ್ಯಕ್ಷ ಜೆ.ಆರ್.ಶಿವಶಂಕರ್ ಹೇಳಿದರು.</p>.<p>ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾರ್ಖಾನೆಯಲ್ಲಿ ಸುಮಾರು 140 ಜನ ನೌಕರರು ಇದ್ದು, ವಾರ್ಷಿಕ 12 ಕೋಟಿ ವ್ಯವಹಾರ ನಡೆಸುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕಾರ್ಮಿಕರಿಗೆ ಶೇ 24.41ರಷ್ಟು ವೇತನವನ್ನು ಕಡಿತಗೊಳಿಸಿದ್ದು, ಇತ್ತೀಚೆಗೆ ಕಾರಣವಿಲ್ಲದೇ 10 ಜನ ಕಾರ್ಮಿಕ ಮುಖಂಡರನ್ನು ಅಮಾನತ್ತುಗೊಳಿಸಿದ್ದಾರೆ~ ಎಂದು ಆರೋಪಿಸಿದರು.</p>.<p>`ಆಡಳಿತ ವರ್ಗ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು. ಏಪ್ರಿಲ್ನಿಂದ ಜೂನ್ ತಿಂಗಳಿನ ವೇತನ ಹಾಗೂ ಕಾರ್ಮಿಕರ ಮೇಲೆ ಹಾಗೂ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಿ ಪರಿಸರ ಮಾಲಿನ್ಯಕ್ಕೆ ಧಕ್ಕೆಮಾಡುತ್ತಿರುವ ಕಾರ್ಖಾನೆಯ ವಿರುದ್ಧ ಸರ್ಕಾರ ಸೂಕ್ತ ಕ್ರಮನ್ನು ಕೈಗೊಳ್ಳಬೇಕು~ ಎಂದು ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಯುನಿಗ್ಲಾಸ್ ವರ್ಕರ್ಸ್ ಯುನಿಯನ್ನ ಉಪಾಧ್ಯಕ್ಷ ಜೆ.ಶಶಿಧರ್ ರೈ, ಪ್ರಧಾನ ಕಾರ್ಯದರ್ಶಿ ಆರ್.ಪಿ.ನರೇಂದ್ರಬಾಬು, ಕಾರ್ಯದರ್ಶಿ ಗೋಪಾಲಸಿಂಗ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>