<p><strong>ಗುವಾಹಟಿ (ಪಿಟಿಐ): </strong>ಯುವತಿಯ ಮಾನಭಂಗ ಪ್ರಕರಣದ ಪ್ರಮುಖ ಆರೋಪಿಯು ಒಡಿಶಾದ ಭುವನೇಶ್ವರದಲ್ಲಿದ್ದು, ಇನ್ನೂ ಆತನನ್ನು ಬಂಧಿಸಿಲ್ಲ ಎಂದು ಮುಖ್ಯಮಂತ್ರಿ ತರುಣ್ ಗೊಗೊಯ್ ತಿಳಿಸಿದ್ದಾರೆ. <br /> <br /> ಪ್ರಕರಣದ ಮೊದಲ ಮತ್ತು ಪ್ರಮುಖ ಆರೋಪಿ ಅಮರಜ್ಯೋತಿ ಕಲಿತ್ತನ ಮೊಬೈಲ್ ಸಂಭಾಷಣೆಯನ್ನು ಆಲಿಸಿದ್ದು, ಆತ ಭುವನೇಶ್ವರದಲ್ಲಿರುವುದು ತಿಳಿದು ಬಂದಿದೆ. ಈತನನ್ನು ಬಂಧಿಸಲು, ರಾಜ್ಯದ ಪೊಲೀಸರು ಒಡಿಶಾ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. <br /> <br /> ಮೊದಲ ಆರೋಪಿ ಮತ್ತು ಇತರ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.<br /> <br /> <strong>ಮಾಧ್ಯಮಗಳ ವರ್ತನೆಗೆ ಖಂಡನೆ: </strong> ಪ್ರಕರಣದಲ್ಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಅನುಸರಿಸಿದ ಧೋರಣೆಯನ್ನು ಮುಖ್ಯಮಂತ್ರಿ ತರುಣ್ ಗೊಗೊಯ್ ಖಂಡಿಸಿದ್ದು, `ಇದು ನೀತಿಗೆಟ್ಟ ನಡವಳಿಕೆ~ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ (ಪಿಟಿಐ): </strong>ಯುವತಿಯ ಮಾನಭಂಗ ಪ್ರಕರಣದ ಪ್ರಮುಖ ಆರೋಪಿಯು ಒಡಿಶಾದ ಭುವನೇಶ್ವರದಲ್ಲಿದ್ದು, ಇನ್ನೂ ಆತನನ್ನು ಬಂಧಿಸಿಲ್ಲ ಎಂದು ಮುಖ್ಯಮಂತ್ರಿ ತರುಣ್ ಗೊಗೊಯ್ ತಿಳಿಸಿದ್ದಾರೆ. <br /> <br /> ಪ್ರಕರಣದ ಮೊದಲ ಮತ್ತು ಪ್ರಮುಖ ಆರೋಪಿ ಅಮರಜ್ಯೋತಿ ಕಲಿತ್ತನ ಮೊಬೈಲ್ ಸಂಭಾಷಣೆಯನ್ನು ಆಲಿಸಿದ್ದು, ಆತ ಭುವನೇಶ್ವರದಲ್ಲಿರುವುದು ತಿಳಿದು ಬಂದಿದೆ. ಈತನನ್ನು ಬಂಧಿಸಲು, ರಾಜ್ಯದ ಪೊಲೀಸರು ಒಡಿಶಾ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. <br /> <br /> ಮೊದಲ ಆರೋಪಿ ಮತ್ತು ಇತರ ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.<br /> <br /> <strong>ಮಾಧ್ಯಮಗಳ ವರ್ತನೆಗೆ ಖಂಡನೆ: </strong> ಪ್ರಕರಣದಲ್ಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಅನುಸರಿಸಿದ ಧೋರಣೆಯನ್ನು ಮುಖ್ಯಮಂತ್ರಿ ತರುಣ್ ಗೊಗೊಯ್ ಖಂಡಿಸಿದ್ದು, `ಇದು ನೀತಿಗೆಟ್ಟ ನಡವಳಿಕೆ~ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>