<p>ತುಮಕೂರು: ಸರ್ಕಾರಗಳು ಯೋಜನೆ ರೂಪಿಸಿ ಹಣಕಾಸು ಬಿಡುಗಡೆ ಮಾಡಬಹುದು. ಆದರೆ ಅವು ಕಾರ್ಯರೂಪಕ್ಕೆ ಬರಬೇಕಾದರೆ ಜನರು ಮನಸು ಮಾಡಬೇಕು. ಅಭಿವೃದ್ಧಿಗೆ ಜನರ ಮನಸ್ಸನ್ನು ಪ್ರೇರೇಪಿಸುವ ಕೆಲಸವನ್ನು ಅಪ್ನಾದೇಶ್ ಮಾಡಲಿದೆ ಎಂದು ರಾಜ್ಯ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಹೇಳಿದರು.<br /> <br /> ಮಂಗಳವಾರ ನಗರದಲ್ಲಿ ರಾಜ್ಯ ಕೃಷಿ ಇಲಾಖೆ ಮತ್ತು ಸರ್ಕಾರಿ ನೌಕರರ ಸಂಘ, `ಅಪ್ನಾದೇಶ್~ ಆಯೋಜಿಸಿದ ಕೃಷಿ ಕ್ಷೇತ್ರ- ಹೊಸ ಚಿಂತನೆ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದರು.<br /> <br /> ಕಟ್ಟಡ ನಿರ್ಮಾಣ, ಯೋಜನೆ ರೂಪಿಸುವುದು ಸರ್ಕಾರಗಳ ಕೆಲಸವಾಗಿದೆ. ಇದನ್ನು ಹೊರತು ಪಡಿಸಿ ಸರ್ಕಾರ ಮಾಡಲು ಆಗದ ಜನರ ಮನ ಪರಿವರ್ತನಾ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.<br /> <br /> ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಮಾತಾನಾಡಿ, ಸರ್ಕಾರಿ ಅಧಿಕಾರಿಗಳು ಕೇವಲ ಲೆಕ್ಕಪತ್ರ, ಇಲಾಖೆ ನಿಗದಿಪಡಿಸಿದ ಗುರಿ ಬಗ್ಗೆ ಅಷ್ಟೇ ಯೋಚಿಸುವುದನ್ನು ಬಿಟ್ಟು ಸಾಮಾನ್ಯ ಜನರಂತೆ ಹಳ್ಳಿಗಳ ಉದ್ದಾರಕ್ಕೆ ತೊಡಗಬೇಕು ಎಂದರು. <br /> <br /> ಜಿಲ್ಲಾಧಿಕಾರಿ ಆರ್.ಕೆ.ರಾಜು, ಅಪ್ನಾದೇಶ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ರಾಜನಾಯ್ಕ ಇದ್ದರು.<br /> <br /> <strong>ಜಿಲ್ಲೆಗೆ ಕಾಲಿಟ್ಟ `ಅಪ್ನಾದೇಶ್~</strong><br /> ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಿರುವ `ಅಪ್ನಾದೇಶ್~ ಸ್ವಯಂ ಸೇವಾ ಸಂಘಟನೆ ಜಿಲ್ಲೆಗೆ ಕಾಲಿಟ್ಟಿದೆ. ಐಎಎಸ್ ಅಧಿಕಾರಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ಲಾಲ್ ಮೀನಾ ಸ್ಥಾಪಕರು. <br /> <br /> ಜಿಲ್ಲೆಯಲ್ಲಿ 800 ಮಂದಿ ಸ್ವಯಂ ಸೇವಕರನ್ನು ಅಪ್ನಾದೇಶ್ ನೇಮಕ ಮಾಡಿದ್ದು, ಹಳ್ಳಿಗಳಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಲಿದೆ.<br /> <br /> ಸ್ವಯಂ ಸೇವಕರು ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಪಡೆಯುವರು. ಈ ಯೋಜನೆಗಳ ನೆರವು ಪಡೆಯುವಲ್ಲಿ ತಮ್ಮ ಗ್ರಾಮದ ಜನರಿಗೆ ತಾವೇ ಮಾಹಿತಿ ನೀಡಲಿದ್ದಾರೆ. ಆಯಾ ಗ್ರಾಮದ ಕೆಲಸಗಳನ್ನು ಸಮುದಾಯ ಸಹಭಾಗಿತ್ವದೊಂದಿಗೆ ನಿರ್ವಹಿಸುವ ವಾತಾವರಣ ರೂಪಿಸಿರುವುದು ಅಪ್ನಾದೇಶ್ ಉದ್ದೇಶವಾಗಿದೆ.<br /> <br /> ಜಿಲ್ಲೆಯ ಎಲ್ಲ ಹಳ್ಳಿಗಳನ್ನು ನಿರ್ಮಲ ಗ್ರಾಮ, ಮದ್ಯಪಾನ ರಹಿತ, ವ್ಯಾಜ್ಯರಹಿತ ಗ್ರಾಮಗಳನ್ನು ರೂಪಿಸುವ ಕನಸನ್ನು ಅಪ್ನಾದೇಶ್ ಹೊತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಅಪ್ನಾದೇಶ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.<br /> <br /> <strong>ಪ್ರವೇಶ ಮಿತಿ ಹೆಚ್ಚಿಸಲು ಆಗ್ರಹ</strong><br /> ತುಮಕೂರು: ಪಿಯುಸಿ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಹೆಚ್ಚಿರುವುದರಿಂದ ಜಿಲ್ಲೆಯ ಪದವಿ ಕಾಲೇಜುಗಳ ಪ್ರವೇಶ ಮಿತಿ ಹೆಚ್ಚಿಸಬೇಕೆಂದು ಎಬಿವಿಪಿ ನಗರ ಕಾರ್ಯದರ್ಶಿ ರೂಪೇಶ್ ಆಗ್ರಹಿಸಿದ್ದಾರೆ.<br /> <br /> ಪದವಿ ಸೇರ ಬಯಸುವರರ ಸಂಖ್ಯೆ ಹೆಚ್ಚಾಗಿದೆ. ಪದವಿ ಕಾಲೇಜುಗಳಿಗೆ ದಾಖಲಾತಿಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರು ವಿಶ್ವವಿದ್ಯಾಲಯ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಮಿತಿ ಹೆಚ್ಚಿಸದೆ ಇರುವುದು ದುರದೃಷ್ಟಕರವಾಗಿದೆ ಎಂದು ಖಂಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಸರ್ಕಾರಗಳು ಯೋಜನೆ ರೂಪಿಸಿ ಹಣಕಾಸು ಬಿಡುಗಡೆ ಮಾಡಬಹುದು. ಆದರೆ ಅವು ಕಾರ್ಯರೂಪಕ್ಕೆ ಬರಬೇಕಾದರೆ ಜನರು ಮನಸು ಮಾಡಬೇಕು. ಅಭಿವೃದ್ಧಿಗೆ ಜನರ ಮನಸ್ಸನ್ನು ಪ್ರೇರೇಪಿಸುವ ಕೆಲಸವನ್ನು ಅಪ್ನಾದೇಶ್ ಮಾಡಲಿದೆ ಎಂದು ರಾಜ್ಯ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಲಾಲ್ ಮೀನಾ ಹೇಳಿದರು.<br /> <br /> ಮಂಗಳವಾರ ನಗರದಲ್ಲಿ ರಾಜ್ಯ ಕೃಷಿ ಇಲಾಖೆ ಮತ್ತು ಸರ್ಕಾರಿ ನೌಕರರ ಸಂಘ, `ಅಪ್ನಾದೇಶ್~ ಆಯೋಜಿಸಿದ ಕೃಷಿ ಕ್ಷೇತ್ರ- ಹೊಸ ಚಿಂತನೆ ಸಂವಾದ ಕಾರ್ಯಕ್ರಮದಲ್ಲಿ ಮಾತಾನಾಡಿದರು.<br /> <br /> ಕಟ್ಟಡ ನಿರ್ಮಾಣ, ಯೋಜನೆ ರೂಪಿಸುವುದು ಸರ್ಕಾರಗಳ ಕೆಲಸವಾಗಿದೆ. ಇದನ್ನು ಹೊರತು ಪಡಿಸಿ ಸರ್ಕಾರ ಮಾಡಲು ಆಗದ ಜನರ ಮನ ಪರಿವರ್ತನಾ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.<br /> <br /> ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಮಾತಾನಾಡಿ, ಸರ್ಕಾರಿ ಅಧಿಕಾರಿಗಳು ಕೇವಲ ಲೆಕ್ಕಪತ್ರ, ಇಲಾಖೆ ನಿಗದಿಪಡಿಸಿದ ಗುರಿ ಬಗ್ಗೆ ಅಷ್ಟೇ ಯೋಚಿಸುವುದನ್ನು ಬಿಟ್ಟು ಸಾಮಾನ್ಯ ಜನರಂತೆ ಹಳ್ಳಿಗಳ ಉದ್ದಾರಕ್ಕೆ ತೊಡಗಬೇಕು ಎಂದರು. <br /> <br /> ಜಿಲ್ಲಾಧಿಕಾರಿ ಆರ್.ಕೆ.ರಾಜು, ಅಪ್ನಾದೇಶ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ರಾಜನಾಯ್ಕ ಇದ್ದರು.<br /> <br /> <strong>ಜಿಲ್ಲೆಗೆ ಕಾಲಿಟ್ಟ `ಅಪ್ನಾದೇಶ್~</strong><br /> ಗ್ರಾಮಾಭಿವೃದ್ಧಿಯಲ್ಲಿ ಮಹತ್ವದ ಸಾಧನೆ ಮಾಡಿ ತೋರಿಸಿರುವ `ಅಪ್ನಾದೇಶ್~ ಸ್ವಯಂ ಸೇವಾ ಸಂಘಟನೆ ಜಿಲ್ಲೆಗೆ ಕಾಲಿಟ್ಟಿದೆ. ಐಎಎಸ್ ಅಧಿಕಾರಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ಲಾಲ್ ಮೀನಾ ಸ್ಥಾಪಕರು. <br /> <br /> ಜಿಲ್ಲೆಯಲ್ಲಿ 800 ಮಂದಿ ಸ್ವಯಂ ಸೇವಕರನ್ನು ಅಪ್ನಾದೇಶ್ ನೇಮಕ ಮಾಡಿದ್ದು, ಹಳ್ಳಿಗಳಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಲಿದೆ.<br /> <br /> ಸ್ವಯಂ ಸೇವಕರು ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಪಡೆಯುವರು. ಈ ಯೋಜನೆಗಳ ನೆರವು ಪಡೆಯುವಲ್ಲಿ ತಮ್ಮ ಗ್ರಾಮದ ಜನರಿಗೆ ತಾವೇ ಮಾಹಿತಿ ನೀಡಲಿದ್ದಾರೆ. ಆಯಾ ಗ್ರಾಮದ ಕೆಲಸಗಳನ್ನು ಸಮುದಾಯ ಸಹಭಾಗಿತ್ವದೊಂದಿಗೆ ನಿರ್ವಹಿಸುವ ವಾತಾವರಣ ರೂಪಿಸಿರುವುದು ಅಪ್ನಾದೇಶ್ ಉದ್ದೇಶವಾಗಿದೆ.<br /> <br /> ಜಿಲ್ಲೆಯ ಎಲ್ಲ ಹಳ್ಳಿಗಳನ್ನು ನಿರ್ಮಲ ಗ್ರಾಮ, ಮದ್ಯಪಾನ ರಹಿತ, ವ್ಯಾಜ್ಯರಹಿತ ಗ್ರಾಮಗಳನ್ನು ರೂಪಿಸುವ ಕನಸನ್ನು ಅಪ್ನಾದೇಶ್ ಹೊತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಅಪ್ನಾದೇಶ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.<br /> <br /> <strong>ಪ್ರವೇಶ ಮಿತಿ ಹೆಚ್ಚಿಸಲು ಆಗ್ರಹ</strong><br /> ತುಮಕೂರು: ಪಿಯುಸಿ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಹೆಚ್ಚಿರುವುದರಿಂದ ಜಿಲ್ಲೆಯ ಪದವಿ ಕಾಲೇಜುಗಳ ಪ್ರವೇಶ ಮಿತಿ ಹೆಚ್ಚಿಸಬೇಕೆಂದು ಎಬಿವಿಪಿ ನಗರ ಕಾರ್ಯದರ್ಶಿ ರೂಪೇಶ್ ಆಗ್ರಹಿಸಿದ್ದಾರೆ.<br /> <br /> ಪದವಿ ಸೇರ ಬಯಸುವರರ ಸಂಖ್ಯೆ ಹೆಚ್ಚಾಗಿದೆ. ಪದವಿ ಕಾಲೇಜುಗಳಿಗೆ ದಾಖಲಾತಿಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರು ವಿಶ್ವವಿದ್ಯಾಲಯ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಮಿತಿ ಹೆಚ್ಚಿಸದೆ ಇರುವುದು ದುರದೃಷ್ಟಕರವಾಗಿದೆ ಎಂದು ಖಂಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>